ಬೆಂಗಳೂರು; ರಾಜ್ಯ ಸರ್ಕಾರದ ವಿರುದ್ಧ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಅವರು ಸೋಮವಾರ ಗ್ರೇಟರ್ ಬೆಂಗಳೂರು ವರದಿ ಸ್ಪೀಕರ್ ಗೆ ಸಲ್ಲಿಕೆ ವಿಚಾರದ ಬಗ್ಗೆ ಮಾತನಾಡಿ ಪ್ರಜಾ ಪ್ರಭುತ್ವಕ್ಕೆ ಚ್ಯುತಿ ತರುವ ಕೆಲಸ ಆಗುತ್ತಿದೆ. ಬ್ರ್ಯಾಂಡ್ ಬೆಂಗಳೂರು ಅಂತಿದ್ರು, ಈಗ ಯಾಕೆ ಗ್ರೇಟರ್ ಬೆಂಗಳೂರು ಅಂತಿದ್ದಾರೆ. ಗ್ರೇಟರ್ ಬೆಂಗಳೂರು ಮಾಡಿ ಕೆಂಪೇಗೌಡರ ಕಟ್ಟಿದ ಬೆಂಗಳೂರನ್ನ ಛಿದ್ರಗೊಳಿಸೋಕೆ ಹೊರಟಿದ್ದೀರಿ. ವಿಚಿತ್ರಕಾರಿ ಜನ ಬೆಂಗಳೂರಿಗೆ ಬಂದು ಹಾಳು ಮಾಡಿದ್ದಾಯ್ತು. 6- 7 ಭಾಗ ಮಾಡ್ತೀವಿ, 7 ಮೇಯರ್ ಆಗ್ತಾರೆ ಅಷ್ಟೆ ಎಂದಿದ್ದಾರೆ.
ಬಿಬಿಎಂಪಿ ಚುನಾವಣೆ ಆಗ್ಬೇಕು. ದೇವರು ಬಂದ್ರೂ ಬೆಂಗಳೂರು ಸ್ಥಿತಿ ಬದಲಿಸಲು ಸಾಧ್ಯವಿಲ್ಲ ಎಂಬ ಡಿಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಕೈಲಾಗದವರು ಮೈ ಪರೆಚಿಕೊಂಡ್ರಂತೆ ಹಾಗಾಯ್ತು. ಗ್ಯಾರೆಂಟಿಗೆ ವಾರೆಂಟಿ ಇಲ್ಲದಂತಾಗಿದೆ. ಟ್ರೋಲ್ ಮಿನಿಷ್ಟರ್ ಎಲ್ಲಿ ಹೋಗಿದ್ರು, ಈಗ ಬನ್ನಿ ಮಾತನಾಡಿ. ಅವರು ಬಗ್ಗೆ ಉತ್ತರ ಕೊಡಲಿ. ಕಂಡಕ್ಟರ್ ನೇಲೆ ಪುಂಡಾಟಿಕೆ ನಡೆದಿದೆ. ನಾವು ಭಾಷೆಯ ವಿರೋಧಿ ಅಲ್ಲ. ಭಾಷೆ ಬರದಿದ್ದರೆ ಹೊಡೆದ್ರೆ ಭಾಷೆ ಬರುತ್ತಾ?. ಕೋರಮಂಗಲದಲ್ಲಿ ನಿನ್ನೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪುಂಡಾಟ ತಡೆಯಲು ಸಾಧ್ಯವಿಲ್ಲದೆ ಬೇರೆ ಆಯಾಮ ಕೊಡುತ್ತಿದ್ದಾರೆ. ಬರೀ ಮುಖ್ಯಮಂತ್ರಿ ಮುಡಾದ ಮೂಡ್ ನಲ್ಲೇ ಇದ್ದಾರೆ ಎಂದರು.ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ಜೈಲಿಗೆ ಬೋಗೋದನ್ನ ತಪ್ಪಿಸಿಕೊಳ್ಳೋಕೆ ಆಗೊಲ್ಲ ಎಂದು ಎಚ್ಚರಿಸಿದ್ರು.
ಮಾರ್ಚ್ ಮೊದಲ ವಾರದಿಂದ ಬಜೆಟ್ ಅಧಿವೇಶನ ಆರಂಭ ಆಗ್ತಿದೆ. SCPTST ಹಣವನ್ನು ಸರ್ಕಾರ ನುಂಗಿದೆ. ಸರ್ವರಿಗೂ ಗ್ಯಾರೆಂಟಿ ಕೊಟ್ಟು ದಲಿತರ ಹಣ ನುಂಗಿದ್ದಾರೆ. ದಲಿತರಿಗೆ ಮೋಸ ಮಾಡಿದ್ರೆ ಕೋರ್ಟ್ ಮೆಟ್ಟಿಲೇರುವವರೆಗೆ ಬಿಡುವುದಿಲ್ಲ.ದಲಿತರ ಹಣ ತೆಗೆದ್ರೆ ಅದನ್ನ ಕಕ್ಕಿಸುವ ಕೆಲಸ ಮಾಡ್ತೀವಿ. 14 ತಂಡಗಳನ್ನ ಮಾಡಿದ್ದೇವೆ, ರಾಜ್ಯಾದ್ಯಂತ ಕೆಲಸ ಮಾಡುತ್ತೆ. ಯತ್ನಾಳ್ ತಂಡ ರಾಜ್ಯಾಧ್ಯಕ್ಷರ ಚುನಾವಣೆಗೆ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿ ಚುನಾವಣೆ ಆದರೆ ಮಾಡಲಿ. ಚುನಾವಣೆ ಆದಾಗ ಮಾಡಲಿ, ನಾನೂ ಮಾಡಬಹುದು. ಚುನಾವಣೆ ಆದಾಗ ಮಾಡಲಿ ಬಿಡಿ. ಯತ್ನಾಳ್ ನ ನೀವೇ ಅವರನ್ನ ಕೇಳಲಿ.ಮಾಡಿದ್ರೆ ಮಾಡಲಿ, ಬೇಡದಿದ್ರೆ ಬೇಡ. 100ಕ್ಕೆ 100 ವಿಜಯೇಂದ್ರ ಬದಲಾವಣೆ ಎಂಬ ಕುಮಾರ ಬಂಗಾರಪ್ಪ ಹೇಳಿಕೆ ವಿಚಾರ ದ ಬಗ್ಗೆ ಪ್ರತಿಕ್ರಿಯಿಸಿ ಇದನ್ನ ಹೈಕಮಾಂಡ್ ಹೇಳ್ಬೇಕು ಎಂದರು.