ಬೆಂಗಳೂರು; ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಸಿಕ್ಕಿರುವ ಮಾಹಿತಿ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಹನಿಟ್ರ್ಯಾಪ್ ಪ್ರಕರಣ ಸಿಐಡಿಗೆ ತನಿಖೆಗೆ ಅಧಿಕೃತವಾಗಿ ಆದೇಶ ಹೊರಡಿಸಿದ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಡಿಪಾರ್ಟ್ಮೆಂಟ್ ಅವರೇ ಮಾಡ್ಕೊತ್ತಾರೆ. ಡಿಜಿ ಕಳುಹಿಸಿದ ಮೇಲೆ, ಡಿಪಾರ್ಟ್ಮೆಂಟ್ ಆದೇಶ ಮಾಡಿರುತ್ತಾರೆ. ಅದಕ್ಕೆ ಸರ್ಕಾರದ ಆದೇಶ ಬರಲ್ಲ. ಸಿಐಡಿ ಅವರು ತನಿಖೆ ಮಾಡ್ತಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಸಿಕ್ಕಿರುವ ಮಾಹಿತಿ ಇಲ್ಲ. ತನಿಖೆ ಮಾಡ್ತಿದ್ದಾರೆ, ತನಿಖೆ ಮಾಡುವಾಗ ಏನು ಹೇಳಲ್ಲ. ತನಿಖೆ ಪೂರ್ಣ ಆದ್ಮೇಲೆ ಹೇಳ್ತಾರೆ ಎಂದಿದ್ದಾರೆ.
ಸಂಪುಟ ಪುನರ್ ರಚನೆ ಸಂಬಂಧಿಸಿದಂತೆ, ಸಿಎಂ ಹಾಗೂ ಪರಮೇಶ್ವರ್ ದೆಹಲಿಗೆ ಹೋಗುವ ವಿಚಾರದ ಬಗ್ಗೆ ಮಾತನಾಡಿದ ಅವರು ನನಗೆ ಇದರ ಬಗ್ಗೆ ಗೊತ್ತಿಲ್ಲ. ನಾನು ಎಲ್ಲಿಯೂ ಹೋಗಲ್ಲ. ಏಪ್ರಿಲ್ 2ಕ್ಕೆ ಸಿಎಂ ದೆಹಲಿಗೆ ಹೋಗ್ತಾರೆ, ಅಷ್ಟೇ ನನಗೆ ಗೊತ್ತಿದೆ. ಅದು ಬಿಟ್ಟು ಬೇರೆ ಏನು ನನಗೆ ಗೊತ್ತಿಲ್ಲ. ಕರ್ನಾಟಕ ಭವನದ ಉದ್ಘಾಟನೆ ಇದೆ. ಅದಕ್ಕೆ ಸಿಎಂ ಹಾಗೂ ಡಿಸಿಎಂ ಹೋಗ್ತಾರೆ. ನಮಗೆಲ್ಲ ಕರ್ದಿಲ್ಲ ಎಂದು ತಿಳಿಸಿದ್ರು.
ಮಯನ್ಮಾರ್ ಭೂಕಂಪ ವಿಚಾರದ ಬಗ್ಗೆ ಮಾತನಾಡಿದ ಅವರು ಕೆಲವು ಕನ್ನಡಿಗರು ಸೇಫ್ ಆಗಿದ್ದಾರೆ ಮಾಹಿತಿ ಇದೆ. ಯಾರಿಗೂ ತೊಂದರೆ ಆಗಿರುವ ಮಾಹಿತಿ ಬಂದಿಲ್ಲ ಎಂದಿದ್ದಾರೆ.
ನಾನು ಹಾಗೂ ಮಹದೇವಪ್ಪ 30 ವರ್ಷದಿಂದ ಸ್ನೇಹಿತರು, ಭೇಟಿಗೆ ವಿಶೇಷ ಕಾರಣವಿಲ್ಲ; ಸಚಿವ ಸತೀಶ್ ಜಾರಕಿಹೋಳಿ ಹೇಳಿಕೆ
ಬೆಂಗಳೂರು; ನಮ್ಮದು ಮಹದೇದಪ್ಪ ಅವರದ್ದು 30 ವರ್ಷಗಳ ಸ್ನೇಹ ಭೇಟಿಗೆ ವಿಶೇಷ ಕಾರಣ ಏನಿಲ್ಲ ಹೊಸದೇನು ಇಲ್ಲ ಮಾಮೂಲಿ ನಂತೆ ಸಚಿವರ ಭೇಟಿ ಮಾಡಿದ್ದೇವೆ. ನಮ್ಮ ಭೇಟಿಯಲ್ಲಿ ಅಂತದ್ದೇನು. ಎಲ್ಲ ಸುದ್ದಿ ಆಗುವಂತದ್ದು ಏನೂ ಇಲ್ಲ .ಕೆಪಿಸಿಸಿಗೆ ಅಧ್ಯಕ್ಷರು ಅಂತ ಇದ್ದಾರೆ ಅವರು ನಡೆಸ್ತಾ ಇದ್ದಾರೆ. ಅದನ್ನ ಸಾಕಷ್ಟು ಬಾರಿ ಹೇಳಿದ್ದೇನೆ. ನಮ್ಮ ಹಂತದಲ್ಲಿ ಏನು ಇಲ್ಲ ಚರ್ಚೆ ಅಧ್ಯಕ್ಷರಿದ್ದಾರೆ ಕೆಲಸ ಮಾಡುತ್ತಿದ್ದಾರೆ ಎಂದರು
ರಾಜೇಂದ್ರ ಕ್ಯಾತಸಂದ್ರದಲ್ಲಿ ಎಲ್ಲೊ ದೂರು ಕೊಟ್ಟಿದ್ದಾರೆ. ಪೊಲೀಸರೆ ತನಿಖೆ ಮಾಡಿ ಹೇಳಬೇಕು . ಆ ನಾಯಕ ಯಾರು ಅಂತ ತನಿಖೆ ಮಾಡಲಿ ಅವರೆ ಹೇಳಬೇಕು. ಯಾರ ಮೇಲೂ ಆರೋಪ ಮಾಡೋಕೆ ನಮಗೆ ಅಧಿಕಾರ ಇಲ್ಲ. ಪ್ರಭಾವಿ ನಾಯಕರು ಯಾರು ಅಂತ ಪೊಲೀಸರೆ ಕಂಡು ಹಿಡಿಯಬೇಕು. ನಾವೇನು ಇನ್ವೆಸ್ಟಿಗೇಷನ್ ಏಜೆನ್ಸಿ ಅಲ್ಲ ವೈಟ್ ಮಾಡೋಣ. ಮಹಾನಾಯಕನನ್ನ ನವೆಲ್ಲಿ ಹುಡುಕೋದು ಹುಡುಕೋಕೆ ಟೈಮ್ ಬೇಕಾಗುತ್ತೆ ಪೊಲೀಸರು ಹುಡುಕಲಿ. ಮಹಾನಾಯಕರು ದೇಶದಲ್ಲಿ ಸುಮರು ಇದ್ದಾರೆ. ಆದಂತ ಘಟನೆಗಳು ಸಹಾ ಇದ್ದಾವೆ. ಬೇರೆ ರಾಜ್ಯಗಳಲ್ಲಿ ಆಗಿದೆ ನಮ್ಮ ರಾಜ್ಯದಲ್ಲಿ ಆದ ಉದಾಹರಣೆ ಇದೆ. ಇವರೆ ಅವರೆ ಅಂತ ಹೇಳೋಕೆ ಅಗಲ್ಲ ಪೊಲೀಸರು ಏನು ತನಿಖೆ ಮಡ್ತಾರೆ ಮಾಡಲಿ ಕಾದು ನೋಡೋಣ ಎಂದು ತಿಳಿಸಿದ್ರು.