ಬೆಂಗಳೂರು: ಓಂ ಪ್ರಕಾಶ್ ನನ್ನ ಜೊತೆ ಕೆಲಸ ಮಾಡಿದ್ರು, ಒಳ್ಳೆಯ ವ್ಯಕ್ತಿ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. DG ಓಂ ಪ್ರಕಾಶ್ ಮರ್ಡರ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರ ಶ್ರೀಮತಿಯವರು ಹತ್ಯೆ ಮಾಡಿದ್ದಾರೆ ಅಂತ ಹೇಳ್ತಿದ್ದಾರೆ. ತನಿಖೆ ಮಾಡ್ತಿದ್ದಾರೆ. ಓಂ ಪ್ರಕಾಶ್ ನನ್ನ ಜೊತೆ ಕೆಲಸ ಮಾಡಿದ್ರು, ಒಳ್ಳೆಯ ವ್ಯಕ್ತಿ. ನಾನು ಗೃಹ ಸಚಿವನಾಗಿದ್ದಾಗ ನನ್ನ ಜೊತೆ ಕೆಲಸ ಮಾಡಿದ್ರು . ಘಟನೆಗೆ ಕಾರಣ ಏನು ಎಂದು ತನಿಖೆ ನಂತರ ನಿರ್ದಿಷ್ಟವಾಗಿ ಹೇಳಬಹುದು.ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ತನಿಖೆ ಆಗೋವರೆಗೂ ಏನೂ ಹೇಳಲಾಗದು. ಸಮಗ್ರ ತನಿಖೆಯ ನಂತರ ಎಲ್ಲಾ ತಿಳಿಯಲಿದೆ.ತನಿಖೆ ಆಗುವವರೆಗೆ ಏನೂ ಹೇಳಲಾಗದು .ಓಂ ಪ್ರಕಾಶ್ ರ ಪತ್ನಿಯನ್ನ ವಿಚಾರಣೆ ಮಾಡ್ತಿದ್ದಾರೆ ಎಂದರು.
ಜಾತಿ ಗಣತಿ ಮೂಲ ಪ್ರತಿ ಇಲ್ಲ ಎಂಬ ಅಶೋಕ್ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ವಿರೋಧ ಪಕ್ಷಗಳು ಎಲ್ಲದಕ್ಕೂ ಆರೋಪ ಮಾಡುತ್ತೇವೆ. ಪಾಸಿಟಿವ್ ಕ್ರಿಟಿಸಮ್ ಮಾಡಿ ಅಂತ ನಾವು ಹೇಳುವುದು. ಅನವಶ್ಯಕ ಆರೋಪ ಮಾಡಿದ್ರೆ ಪ್ರಯೋಜನವಿಲ್ಲ. ಮೂಲ ಪ್ರತಿ ಇಲ್ಲದೆ ಹೇಗೆ ಆಗುತ್ತೆ. ಕಮಿಷನ್ ಹತ್ರ ಮೂಲ ಪ್ರತಿ ಇರಲೇಬೇಕಲ್ಲ. ಮೂಲ ಪ್ರತಿ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹ ವಿಚಾರದ ಬಗ್ಗೆ ಮಾತನಾಡಿ ಕ್ಯಾಬಿನೆಟ್ ನಲ್ಲಿ ಚರ್ಚೆಮಾಡುವಾಗ ಈ ಬಗ್ಗೆ ಗಮನಿಸುತ್ತೇವೆ. ಗಂಭೀರವಾದ ಆರೋಪ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಉಪಸಮಿತಿ ಮಾಡಿಕಾಲ ಹರಣ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಹಿಂದೂಳಿದ ವರ್ಗಕ್ಕೆ ನ್ಯಾಯ ಒದಗಿಸಬೇಕು. ಇದಕ್ಕಾಗಿ ಹತ್ತು ಸಮಿತಿಗಳು ಆಗಿವೆ. ಈ ಬಾರಿ ಗೌಂಡ್ ನಲ್ಲಿ ಹೋಗಿ ಸ್ಯಾಪಂಲ್ ಕಲೆ ಹಾಕಿದ್ದಾರೆ. ಅದಕ್ಕಾಗಿ ಈ ವರದಿಗೆ ಮಹತ್ವವಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಧ್ಯಯನ ಮಾಡಿ ವರದಿ ಕೊಟ್ಟಿದ್ದಾರೆ. ಜನಗಣತಿ ಕೂಡ ಆಗುತ್ತದೆ. ಜಾತಿ ಜನಸಂಖ್ಯೆ ತಿಳಿಯಬೇಕಾಗುತ್ತದೆ. ಇದರ ಮೇಲೆ ವಿಶ್ಲೇಷಣೆ ನಡೆಯುತ್ತಿದೆ. ವಿಶ್ಲೇಷಣೆ ಬಳಿಕ ಒಂದು ನಿರ್ಧಾರಕ್ಕೆ ಬರಬೇಕಾಗುತ್ತೆ. ಆ ಪ್ರಕ್ರಿಯೆ ಆರಂಭವಾಗಿದೆ. ಕ್ಯಾಬಿನೆಟ್ ಮುಂದಕ್ಕೆ ಹಾಕಲಾಗಿದೆ.ಮುಂದೆ ಮತ್ತೆ ಚರ್ಚೆ ಮಾಡಿ ಸರ್ಕಾರ ನಿರ್ಧಾರ ಮಾಡುತ್ತಾರೆ ಎಂದರು.
ರಾಹುಲ್ ಗಾಂಧಿ ಒಪ್ಪಿಗೆ ಪಡೆದು ಜಾತಿಗಣತಿ ಮಂಡನೆ ವಿಚಾರದ ಬಗ್ಗೆ ಮಾತನಾಡಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಚರ್ಚೆ ನಮ್ಮ ಆಂತರಿಕ ವಿಚಾರ. ಸಮುದಾಯಗಳುನ್ನು ಮುಖ್ಯವಾಹಿನಿಗೆ ತರಬೇಕಿದೆ. ಅದಕ್ಕಾಗಿ ಸಾರ್ವಜನಿಕ ಚರ್ಚೆಯಾಗಬೇಕಿದೆ ಎಂದಿದ್ದಾರೆ.