ಮನೆ Latest News ಸುರ್ಜೇವಾಲ ಬಂದ ಮೇಲೆ ಸಭೆಯ ಬಗ್ಗೆ ಮಾತನಾಡುತ್ತೇವೆ: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆ

ಸುರ್ಜೇವಾಲ ಬಂದ ಮೇಲೆ ಸಭೆಯ ಬಗ್ಗೆ ಮಾತನಾಡುತ್ತೇವೆ: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆ

0

ಬೆಂಗಳೂರು: ದಲಿತ ನಾಯಕರು ಸಭೆ ನಡೆಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಸುರ್ಜೇವಾಲ ಬಂದ ಮೇಲೆ ಸಭೆಯ ಬಗ್ಗೆ ಮಾತನಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಸುರ್ಜೇವಾಲ ಬಂದ ಮೇಲೆ ಸಭೆಯ ಬಗ್ಗೆ ಮಾತನಾಡುತ್ತೇವೆ. ಅಲ್ಲಿ ಸಭೆ ಉದ್ದೇಶದ ಬಗ್ಗೆ ಅವರಿಗೆ ಮನವರಿಕೆ ಮಾಡುತ್ತೇವೆ. ದೂರವಾಣಿ ಮೂಲಕವೂ ಸಭೆಯ ಉದ್ದೇಶ ತಿಳಿಸಿದ್ದೇವೆ. ಬೇಡ ಅಂದ್ಮೇಲೆ ಸಭೆ ಮುಂದೂಡಿಕೆ ಹಾಕಿದ್ದೇವೆ.ಅವರ ಗಮನಕ್ಕೆ ತಂದು ಸಭೆ ಮಾಡುತ್ತೇವೆ.ಸುರ್ಜೇವಾಲ ಅವರನ್ನ ಮೊದಲು ಭೇಟಿ ಮಾಡ್ತೀವಿ.ನಂತರ ನಮ್ಮ ಸಭೆಯ ಸಮಯ ಮತ್ತು ದಿನಾಂಕ ನಂತರ ಯೋಚನೆ ಮಾಡುತ್ತೇವೆ ಎಂದಿದ್ದಾರೆ.

ಇದೇ ವೇಳೆ ಶರಣಾದ ನಕ್ಸಲರಿಂದ ಶಸ್ತಾಸ್ತ್ರ ವಶಕ್ಕೆ ಪಡೆದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು AK 56, ಕಂಟ್ರಿ ಮೇಡ್, ಪಿಸ್ತೂಲು ಸೇರಿ ಹಲವು ವೆಪನ್ಸ್ ಸಿಕ್ಕಿವೆ. ಮಾಹಿತಿಯನ್ನು ಪೊಲೀಸರು ನಂತರ ಪೂರ್ಣ ಮಾಹಿತಿ ನೀಡುತ್ತಾರೆ ಎಂದಿದ್ದಾರೆ.ಗುತ್ತಿಗೆದಾರ‌ ಸಂಘದಿಂದ ಎಲ್ಲ ಪಕ್ಷದ ಶಾಸಕರಿಂದಲೂ ಹಣಕ್ಕೆ ಒತ್ತಡ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಯಾವ ಪಕ್ಷ, ಯಾವ ಶಾಸಕ ಅನ್ನೋದನ್ನ ಬಹಿರಂಗ ಪಡಿಸಬೇಕು ಎಂದರು. ಸಚಿವರ ಸಹಿ ಮಾರಾಟ ಮತ್ತು ರೇಟ್ ಫಿಕ್ಸ್ ಕುರಿತಾಗಿ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಅವರ ಹೇಳಿಕೆಗಳಿಗೆ ಹೆಚ್ಚಾಗೆ ಪ್ರತಿಕ್ರಿಯೆ ಕೊಡಲ್ಲ.ದಾಖಲಾತಿ, ಮಾಹಿತಿ ಹಾಗೂ ವ್ಯಕ್ತಿಯ ಕುರಿತಾಗಿ ಹೇಳಬೇಕು. ಗಾಳಿಯಲ್ಲಿ ಗುಂಡು ಹೊಡೆದ್ರೆ ಹೇಗೆ?. ಸರ್ಕಾರ ಮತ್ತು ಪಕ್ಷಕ್ಕೆ ಡ್ಯಾಮೇಜ್ ಆಗೊಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅವರ ಹೇಳಿಕೆ ನಮಗೆ ಡ್ಯಾಮೇಜ್ ಆಗೊಲ್ಲ, ಅವರಿಗೆ ಡ್ಯಾಮೇಜ್ ಆಗುತ್ತೆ.ಈ ಹಿಂದೆ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆ ಪತ್ರ ಬರೆದಿದ್ದರು. ಅವರೇ ಗಂಬೀರವಾಗಿ ಆರೋಪ ಮಾಡಿದ್ರಲ್ಲ. ಆ ರೀತಿ ಹೇಳಿದ್ರೆ ಗಮನ ಹರಿಸಬಹುದು ಅಲ್ವಾ ಎಂದಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಅನ್ಯಾಯ ವಿಚಾರದ ಬಗ್ಗೆ ಮಾತನಾಡಿದ ಅವರು ಹೌದು, ಆಗಿದೆ ಮೊದಲಿಂದಲೂ‌ ಅದೇ ರೀತಿ ಆಗಿದೆ.GST ಕಟ್ಟುವುದರಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.ಅದಕ್ಕೆ ಪರ್ಯಾಯವಾಗಿ ನಮಗೆ ಕೊಡಿ ಅಂತ ಹೇಳ್ತಿದ್ದೇವೆ. ನಾವೂ ಕೂಡ ಅಭಿವೃದ್ಧಿ ಆಗಬೇಕಲ್ವಾ ?. ರಸ್ತೆ ಆಗಬೇಕು, ಜನರೂ ಕೇಳ್ತಾ ಇದ್ದಾರೆ.ಕೇಂದ್ರ‌ ಸರ್ಕಾರ ನಮ್ಮ‌ ತೆರಿಗೆಯ ದುಡ್ಡನ್ನ ಕೊಟ್ರೆ ಅಭಿವೃದ್ಧಿ ಅದನ್ನ ಬಳಕೆ ಮಾಡಿಕೊಳ್ತೀವಿ. ನಮಗೆ ಕೇಂದ್ರ ಕಂಟಿಷನ್ ಹಾಕಿ‌ ಕೊಡಲಿ.ಈ ಹಣ ಅಭಿವೃದ್ಧಿ ಮಾತ್ರ ಬಳಕೆ ಮಾಡಿ ಅಂತ ಕಂಟಿಷನ್ ಹಾಕಿಲಿ.ದೆಹಲಿಯಲ್ಲಿ ಕೇಂದ್ರದ ವಿರುದ್ಧ ಮತ್ತೆ ಹೋರಾಟ ವಿಚಾರದ ಬಗ್ಗೆ ಮಾತನಾಡಿದ ಅವರು ಆ ಬಗ್ಗೆ ನಾವು ಯಾವುದೇ ತೀರ್ಮಾನ ಮಾಡಿಲ್ಲ.ಸಿಎಂ ಏನು ತೀರ್ಮಾನ ತೆಗೆದುಕೊಳ್ತಾರೊ ನೋಡೋಣ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ತಿಂಗಳಾತ್ಯಂಕ್ಕೆ ಬದಲಾವಣೆ ಆಗ್ತಾರೆ  ಎಂಬ ಬಗ್ಗೆ ಮಾತನಾಡಿದ ಅದರ ಬಗ್ಗೆ ನನಗೆ ಗೊತ್ತಿಲ್ಲ. ಯಾವ ಮಾಹಿತಿಯೂ ಇಲ್ಲ. ದೆಹಲಿ ನಾಯಕರಿಂದಲೂ ಆ ಬಗ್ಗೆ ಮಾಹಿತಿ ಗೊತ್ತಾಗಲಿಲ್ಲ. ಎರಡು ವರ್ಷ ಯಾಕೆ, ಡಿಕೆಶಿ ಐದು ವರ್ಷ ಸಿಎಂ ಆಗಲಿ ಎಂಬ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನನಗೆ ಅದರ ಬಗ್ಗೆ ಗೊತ್ತಿಲ್ಲ. ಅದು ಅವರ ಹೇಳಿಕೆ, ಅವರ ಹೇಳಿಕೆಗೆ ನಾನು ಯಾಕೆ ಪ್ರತಿಕ್ರಿಯೆ ನೀಡಲಿ. ಸಿಎಂ ಬದಲಾವಣೆಯ ಭಾಗವಾಗಿ ಸಚಿವ ಕೆ.ಎನ್. ರಾಜಣ್ಣ ಈ ಹೇಳಿಕೆ ಕೊಟ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಾವ ಭಾಗವೂ ಇಲ್ಲ, ಅದರ ಬಗ್ಗೆ ನಾವು ಅದರ ಬಗ್ಗೆ ಯೋಚನೆ ಮಾಡಿಲ್ಲ.ಹೈಕಮಾಂಡ್ ನಾಯಕರಿಗೆ ತಿಳಿಸಿ ಸಭೆ ಮಾಡುತ್ತೇವೆ.ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ, ಗೌರವ ಕೊಡ್ತೀವಿ. ಹೈಕಮಾಂಡ್ ಹೇಳಿದ್ಮೇಲೆ ನಾವು ಕೇಳಬೇಕು ಅಲ್ವಾ ಎಂದಿದ್ದಾರೆ.