ಮನೆ Latest News ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿಯ ಬಸ್ ಇಲ್ಲಿ ಬರ್ತಿಲ್ಲ ಇಲ್ಲಿಯ ಬಸ್ ಅಲ್ಲಿ ಹೋಗ್ತಿಲ್ಲ; ಗೃಹ ಸಚಿವ...

ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿಯ ಬಸ್ ಇಲ್ಲಿ ಬರ್ತಿಲ್ಲ ಇಲ್ಲಿಯ ಬಸ್ ಅಲ್ಲಿ ಹೋಗ್ತಿಲ್ಲ; ಗೃಹ ಸಚಿವ ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿಯ ಬಸ್ ಇಲ್ಲಿ ಬರ್ತಿಲ್ಲ ಇಲ್ಲಿಯ ಬಸ್ ಅಲ್ಲಿ ಹೋಗ್ತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಬಸ್ ಕಂಡೆಕ್ಟರ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಈ ರೀತಿ ಹೇಳಿದ್ದಾರೆ. ಇನ್ನು ಗ್ಯಾರಂಟಿ ಬಡವರಿಗೆ ಮಾತ್ರ ತಲುಪಬೇಕು ಎಂದಿದ್ದ ವಿಚಾರದ ಬಗ್ಗೆ ಮಾತನಾಡಿದ ಅವರು ತುರುವೇಕೆರೆ ಶಾಸಕರು ನನಗೆ ಸಲಹೆ ಕೊಟ್ಟಿದ್ದರು.ವಿರೋಧ ಪಕ್ಷದವರು ನೀವೆಲ್ಲ ಸಲಹೆ ಕೊಡಿ ಎಂದಿದ್ದೆ.ನೀವು ಸಲಹೆ ಕೊಡಿ ನಾವು ಚರ್ಚೆ ಮಾಡ್ತೇವೆ ಎಂದಿದ್ದೆ.ಚರ್ಚೆಯ ಬಳಿಕೆ ಸಾಧಕ ಬಾಧಕ ಗೊತ್ತಾಗಲಿದೆ ಎಂದಿದ್ದಾರೆ.

ನಾವು ಚುನಾವಣೆ ವೇಳೆ ಎಲ್ಲರಿಗೂ ಕೊಡ್ತೇವೆ ಎಂದಿದ್ದೆವು.ಈಗ ಬದಲಾವಣೆ ಮಾಡಿದ್ರೆ ಏನಾಗಲಿದೆ ಎನ್ನೋದನ್ನ ನೋಡಬೇಕು. ಬಡವರಿಗೆ ಕೊಡೊದರಲ್ಲಿ ಹೊರೆಯಾದರೆ ತಡೆದು ಕೊಳ್ಳಬೇಕು ಎಂದರು. ಇದೇ ವೇಳೆ ಮಾತನಾಡಿದ ಅವರು  ಶಾಂತಿಯುತ ಪ್ರತಿಭಟನೆಗೆ ನಾವು ಅವಕಾಶ ಕೊಟ್ಟಿದ್ದೇವೆ.ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿಯ ಬಸ್ ಇಲ್ಲಿ ಬರ್ತಿಲ್ಲ ಇಲ್ಲಿಯ ಬಸ್ ಅಲ್ಲಿ ಹೋಗ್ತಿಲ್ಲ.ಖಾಸಗಿ ಬಸ್‌ಗಳು ಮಾತ್ರ ಹೋಗ್ತಿದೆ.ಆ ಭಾಗದ ಐಜಿ,ಸೇರಿದಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟೊದ್ದೇನೆ.ಕಂಡಕ್ಟರ್ ಮೇಲಿನ ಪೊಕ್ಸೋ ಕೇಸ್ ವಿಚಾರ ಮಾಹಿತಿ ತರಿಸಿಕೊಳ್ತೇನೆ ಎಂದರು.

ಡಿ ಕೆ ಶಿವಕುಮಾರ್ ಮುಂದಿನ ಚುನಾವಣೆಯಲ್ಲಿ ನನ್ನ ನಾಯಕತ್ವ ಎನ್ನೋ ವಿಚಾರದ ಬಗ್ಗೆ ಮಾತನಾಡಿದ ಅವರು ಅವರ ಹೇಳಿಕೆ ತಪ್ಪಿಲ್ಲ ಎಂದು ನಾನೇ ಹೇಳಿದ್ದೆ. ಅದು ಅವರಿಗೆ ಮತ್ತು ಹೈಕಮಾಂಡ್‌ಗೆ ಬಿಟ್ಟಿದ್ದು. ಅದನ್ನ ಹೈಕಮಾಂಡ್ ನೋಡಿಕೊಳ್ಳುತ್ತೆ. ಜಾತಿಗಣತಿ ವರದಿ ಜಾರಿ ಮಾಡದೇ ಪೂಜೆ ಮಾಡ್ತಿದ್ದಾರ ಎನ್ನೋ ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಜಾತಿಗಣತಿ ವರದಿ ಜಾರಿ ಮಾಡ್ತೇವೆ ಎಂದಿದ್ದಾರೆ.ಸೂಕ್ತ ಸಮಯ ನೋಡಿಕೊಂಡು ನಾವು ವರದಿ‌ ಜಾರಿ ಮಾಡ್ತೇವೆ ಎಂದರು.

ಮೈಸೂರಿನಲ್ಲಿ ಬಿಜೆಪಿ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿ ನಾವು ಹೋರಾಟ ಹತ್ತಿಕ್ಕುವ ಕೆಲಸ ಮಾಡಿಲ್ಲ. ಶಾಂತಿ‌ಕಾಪಾಡಬೇಕು ಎಂದು‌ ನಾವು ಮನವಿ ಮಾಡಿದ್ದೇವೆ.ಅವರು ಅನುಮತಿ ಕೇಳಿದ್ರು, ನಾವು ಕೊಟ್ಟಿರಲಿಲ್ಲ.ಕೋರ್ಟ್ ಆರ್ಡರ್ ಪ್ರಕಾರ ಪ್ರತಿಭಟನೆ ‌ಮಾಡಿದ್ದಾರೆ. 250 ಜನರು ಇದ್ರು ಪ್ರತಿಭಟನೆ ಮಾಡಿ ಹೋಗಿದ್ದಾರೆ.ರಾಜಕೀಯ ‌ಮಾಡುವುದು ಬೇಡ ಅಂತ,ಕಾನೂನು ಕೈಗೆತ್ತಿಕೊಳ್ಳಲು ಬಿಡಲಿಲ್ಲ. ಕ್ರಮ ಖಂಡಿತವಾಗಿ ಆಗುತ್ತೆ ಎಂದು ಗೃಹ ಸಚಿವರು ಹೇಳಿದ್ದಾರೆ.ಬಡವರಿಗೆ ಗ್ಯಾರಂಟಿ ವಿಚಾರದ ಬಗ್ಗೆ ಮಾತನಾಡಿ ವಾಲೆಂಟರ್ ಆಗಿ ಬಹಳ ಜನರು ಗ್ಯಾರಂಟಿ ಬಿಟ್ಟಿದ್ದಾರೆ.ಬಡವರಿಗಾಗಿ ಮಾಡಬೇಕು ಎಂದು ಕೃಷ್ಣಪ್ಪ ಸಲಹೆ ಕೊಟ್ಟಿದ್ದಾರೆ.ಚರ್ಚೆ ಅಗತ್ಯ ನೋಡಿ ಫಲಿತಾಂಶ ನೋಡೋಣ ಎಂದಿದ್ದಾರೆ.ಬಿಪಿಎಲ್ ಕಾರ್ಡ್ ಗೆ ಮಾತ್ರ ನಾವು ಹೇಳಿರಲಿಲ್ಲ.ಈಗ ಬಿಪಿಎಲ್ ಕಾರ್ಡ್ ಗೆ ಮಾತ್ರ ಅಂದಾಗ ಚರ್ಚೆ ಮಾಡಬೇಕು.ಗ್ಯಾರಂಟಿಗಳು ಹೊರೆಯಾಗಿವೆ,ಅದರಲ್ಲಿ ಎರಡು ಮಾತಿಲ್ಲ ಎಂದರು.

 

ಬಡವರಿಗೆ ಕೊಟ್ಟ ಯೋಜನೆಗಳನ್ನು ಹೊರೆ ಅಂತ ಭಾವಿಸಬಾರದು. ನಮಗೂ ಹೊರೆಯಾಗುತ್ತೆ ಅಂತ ಗೊತ್ತಿತ್ತು.ಗೊತ್ತಿದ್ದೆ ನಾವು ಗ್ಯಾರಂಟಿಗಳ ಘೋಷಣೆ ಮಾಡಿದ್ದು.ಬಿಪಿಎಲ್ ಕಾರ್ಡ್ ಪರಿಷ್ಕರಣೆ ಬಗ್ಗೆ ಚರ್ಚೆ ಇದೆ ಎಂದು ಪರಮೇಶ್ವರ್ ಹೇಳಿದ್ದಾರೆ.[3:08 pm, ದಲಿತರ ಹಣ ಗ್ಯಾರಂಟಿಗೆ ಬಳಸಿದ ವಿಚಾರಕ್ಕೆ ಬಿಜೆಪಿಯಿಂದ ಜನಾಂದೋಲನ ವಿಚಾರದ ಬಗ್ಗೆ ಮಾತನಾಡಿ ಬಿಜೆಪಿಯವರಿಗೆ ಈ ಯೋಜನೆಗಳು ಯಶಸ್ವಿಯಾಗಬಾರದು.ಹೇಗಾದರೂ ಮಾಡಿ ಇದನ್ನು ಹತ್ತಿಕ್ಕುವ ಕೆಲಸ ಅವರು ಮಾಡುತ್ತಿದ್ದಾರೆ.ಈ ಗ್ಯಾರಂಟಿಗಳನ್ನ ಕೊಡುತ್ತಿರುವುದು ಬಡವರಿಗೆ.ಬಡವರಿಗೆ ಹಣ ಕೊಡಲು ಇವರಿಗೆ ಮನಸ್ಸಿಲ್ಲ ಅಂದ್ರೆ , ಬಿಜೆಪಿಯ ಸಿದ್ಧಾಂತ ಬಡವರ ಪರ ಇಲ್ಲ ಎಂದಾಯಿತು.ಅದನ್ನು ಅವರು ಪಬ್ಲಿಕ್ ಆಗಿ ಹೇಳಲು ಹೊರಟಿದ್ದಾರೆ.ಜನ ಇದನ್ನೆಲ್ಲಾ ಗಮನಿಸುತ್ತಾರೆ .ಬಡವರಿಗೆ ಕೊಡುವ ಹಣಕ್ಕೂ ನೀವು ಅಡ್ಡ ಬರ್ತೀರಾ ಅನ್ನೋದಾದ್ರೆ ಬಿಜೆಪಿ ಬಗ್ಗೆ ಜನ ಸಮುದಾಯ ಏನು ಯೋಚನೆ ಮಾಡುತ್ತೆ .ದಲಿತರಿಗೆ ಮೀಸಲಿಟ್ಟ ಹಣವನ್ನು ದಲಿತರಿಗೆ ಕೊಡುತ್ತೇವೆ  ಎಂದರು.ಶಕ್ತಿ ಯೋಜನೆಯಲ್ಲಿ ದಲಿತರು ಹೋಗಲ್ವಾ .ನಾನು ಅದನ್ನ ಸಮರ್ಥನೆ ಮಾಡಲು ಹೋಗಲ್ಲ.ಸರ್ಕಾರದಲ್ಲಿ ಇಂಥ ಯೋಜನೆಗಳು ಮಾಡುವಾಗ ಯೋಚನೆ ಮಾಡೇ ಮಾಡ್ತೇವೆ.ಬಡವರಿಗೆ ಕೊಡುವ ಕಾರ್ಯಕ್ರಮದಲ್ಲಿ ಒಂದಿಷ್ಟು ಬದಲಾವಣೆಗಳು ಆಗುತ್ತೆ .ಅದನ್ನೇ ದೊಡ್ಡದು ಮಾಡುತ್ತಿದ್ದಾರೆ ಏನು ಹಣ ಕೊಳ್ಳೆ ಹೊಡೆದಿದ್ದೇವಾ ಎಂದು ಪ್ರಶ್ನಿಸಿದ್ದಾರೆ.