ಬೆಂಗಳೂರು; ಗಲಾಟೆ ಮಾಡಿದವರನನ್ನ ಪತ್ತೆ ಮಾಡಿ ಅರೆಸ್ಟ್ ಮಾಡಲಾಗುತ್ತದೆ ಎಂದು ಮೈಸೂರಿನ ಉದಯಗಿರಿಯ ಗಲಭೆ ಬಗ್ಗೆ ಡಾ. ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಪೋಸ್ಟ್ ಮಾಡಿದ್ದು, ಒಂದು ಸಮುದಾಯವನ್ನ ಕೆರಳಿಸಿದೆ.ಸುಮಾರು 200 ಜನ ಬಂದು ಆತನನ್ನ ನಮಗೆ ಹ್ಯಾಂಡ್ ಒವರ್ ಮಾಡಿ ಅಂತ ಗಲಾಟೆ ಮಾಡಿದ್ದಾರೆ.ಪೊಲೀಸರು ಒಪ್ಪಿಲ್ಲ, ಹೀಗಾಗಿ ಪೊಲೀಸ್ ಠಾಣೆ ಮೇಲೆ ಕಲ್ಲು ಹೊಡೆದು ಗಲಾಟೆ ಮಾಡಿದ್ದಾರೆ.ಬಳಿಕ ಟಿಯರ್ ಗ್ಯಾಸ್ ಮಾಡಿ ಪೊಲೀಸರು ಕಂಟ್ರೊಲ್ ಗೆ ತಂದರು.ಗಲಾಟೆ ಮಾಡಿದವರನನ್ನ ಪತ್ತೆ ಮಾಡಿ ಅರೆಸ್ಟ್ ಮಾಡಲಾಗುತ್ತದೆ.ಸದ್ಯ ಅಲ್ಲಿನ ಪರಿಸ್ಥಿತಿ ಕಂಟ್ರೋಲ್ ನಲ್ಲಿ ಇದೆ .ಈಗಾಗಲೇ ಕಾನೂನು-ಸುವ್ಯವಸ್ಥೆ ಎಡಿಜಿಪಿ ಕಳುಹಿಸಿದ್ದೇವೆ ಎಂದರು.
ಮಂಡ್ಯದಲ್ಲಿ ಕುಂಭಮೇಳ ನಡೆಯುತ್ತಿದೆ.ಅಲ್ಲೂ ಸೂಕ್ತ ಭದ್ರತೆ ನೀಡುವಂತೆ ಸೂಚಿಸಲಾಗಿದೆ.ಬಿಜೆಪಿಯರು ಆರೋಪಿಸುವಂತೆ ಪೊಲೀಸರು ತಪ್ಪು ಮಾಡಿದ್ರೆ ಕ್ರಮ ಆಗುತ್ತೆ.ಈ ಹಿಂದೆ ತಪ್ಪು ಮಾಡಿದ್ದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗಿತ್ತು.ಅಶೋಕ್ ಹೋಗಿ ನೋಡಿಕೊಂಡು ಬಂದು ನಮಗೆ ಸಲಹೆ ನೀಡಲಿ ಎಂದ್ರು. ಇನ್ನು ಸಚಿವ ಕೆ ಎನ್ ರಾಜಣ್ಣ ಹೇಳಿಕೆಯ ಬಗ್ಗೆ ಗೃಹಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ.ಅನೇಕ ಸಂದರ್ಭಗಳಲ್ಲಿ ಪೊಲೀಸರು ತಪ್ಪು ಮಾಡಿದಾಗ ಕ್ರಮ ಆಗಿದೆ.ಯಾರದ್ದು ತಪ್ಪು ಯಾರದ್ದು ಸರಿ ಅನ್ನೋದು ನಾವು ನಿರ್ಧಾರ ಮಾಡೋಕೆ ಆಗಲ್ಲ.ಪೊಲೀಸರನ್ನು ಈ ಹಿಂದೆ ಎಲ್ಲಾ ಸಸ್ಪೆಂಡ್ ಮಾಡಿದ್ದೇವೆ.ಪೊಲೀಸರು ತಪ್ಪು ಮಾಡಿದ್ರೇ ಅವ್ರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಸಬ್ ಇನ್ಸೆಪೆಕ್ಟರ್ ನ್ನು ಈ ಹಿಂದೆ ಎಲ್ಲಾ ಸಸ್ಪೆಂಡ್ ಮಾಡಿದ್ದೇವೆ.ಅನೇಕ ಸಂದರ್ಭಗಳಲ್ಲಿ ಪೊಲೀಸರ ವಿರುದ್ಧ ಕ್ರಮ ಆಗಿದೆ. ಸ್ಥಳಕ್ಕೆ ಎಡಿಜಿಪಿ ಲಾ ಆಂಡ್ ಆರ್ಡರ್ ಹೋಗಿದ್ದಾರೆ. ಇದನ್ನೆಲ್ಲ ಪರಿಶೀಲನೆ ಮಾಡ್ತಾರೆ.ಆರ್ ಆಶೋಕ್ ಹೋಗ್ಲಿ ಸ್ಥಳಕ್ಕೆ .ನೋಡೋಣ.. ಅಲ್ಲಿ ಹೋಗಿ ಏನು ಹೇಳ್ತಾರೆ ಅಂತಾ.ಎಲ್ಲಾ ಸಂಧರ್ಭದಲ್ಲಿ ತುಷ್ಟೀಕರಣ ಅನ್ನೋದು ಸರಿಯಲ್ಲ. ಬೇರೆನಾದ್ರೂ ಅಜೆಂಡಾ ಇದ್ಯಾ ಅವರಿಗೆ ಎಂದು ಪ್ರಶ್ನಿಸಿದ್ದಾರೆ.
ಸಂಗಮೇಶ್ ಪುತ್ರನ ಪ್ರಕರಣದ ಬಗ್ಗೆ ಮಾತನಾಡಿದ ಅವರು ಸರ್ಕಾರದಿಂದ ಏನು ಸೂಚನೆ ಕೊಡಲ್ಲ.ಸ್ಥಳೀಯವಾಗಿ ಕಾನೂನು ವಿರೋಧವಾಗಿ ಮಾತಾನಾಡಿದ್ದಾರೆ ಕ್ರಮ ತಗೋತಾರೆ.ಅವಹೇಳನಕಾರಿ ಹೇಳಿಕೆ ಕೊಟ್ರೇ ಪೊಲೀಸರು ಕ್ರಮ ತಗೋತಾರೆ ಎಂದ್ರು. ಇದೇ ವೇಳೆ ಸಚಿವ ರಾಜಣ್ಣ ದೆಹಲಿಗೆ ಹೋದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರು ರಾಜಣ್ಣ ದೆಹಲಿಗೆ ಹೋದ್ರೆ ನಾನೇನು ಮಾಡ್ಲಿ…..? ನಾನೇನು ಉತ್ತರ ಕೊಡಲಿ?ನಾನು ದೆಹಲಿಗೆ ಹೋಗುವಾಗ ಕೇಳಿ ಹೇಳ್ತೀನಿ.ನಮ್ಮಲ್ಲಿ ಯಾವ ಅಂತರವೂ ಇಲ್ಲ .ಮೊನ್ನೆನೂ ನಾವು ಮೀಟ್ ಮಾಡಿದ್ದೇವೆ.ಮೀಟ್ ಮಾಡೋಕೆ ಯಾವ ಅಭ್ಯಂತರವೂ ಇಲ್ವಲ್ಲ?.ಬಹಿರಂಗವಾಗಿ ಯಾವ ಹೇಳಿಕೆ ಕೊಡಬೇಡಿ ಅಂದಿದ್ದಾರೆ ಅಷ್ಟೇ ಎಂದ ಗೃಹ ಸಚಿವರು ಹೇಳಿದ್ದಾರೆ.
ಮಹಿಳಾ ಅಧಿಕಾರಿಯ ಮೇಲೆ ಶಾಸಕ ಸಂಗಮೇಶ್ ಪುತ್ರನ ದರ್ಪ ಪ್ರಕರಣದ ಬಗ್ಗೆ ಮಾತನಾಡಿದ ಅವರು ಸರ್ಕಾರದಿಂದ ಏನು ಸೂಚನೆ ಕೊಡಲ್ಲ. ಕಾನೂನು ವಿರೋಧವಾಗಿ ಮಾತಾನಾಡಿದ್ರೆ ಕ್ರಮ ತಗೋತಾರೆ.ಅವಹೇಳನಕಾರಿ ಹೇಳಿಕೆ ಕೊಟ್ರೇ ಪೊಲೀಸರು ಕ್ರಮ ತಗೋತಾರೆ ಎಂದಿದ್ದಾರೆ.