ಬೆಂಗಳೂರು: ರಾಜಕೀಯ ಪ್ರಶ್ನೆಗಳಿಗೆ ಉತ್ತರ ನೀಡಲ್ಲ ಎಂದು ಮಾಧ್ಯಮದವರಿಗೆ ಪರಮೇಶ್ವರ್ ಖಡಕ್ ಉತ್ತರ ಕೊಟ್ಟಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರಿಗೆ ಖರ್ಗೆ ಖಡಕ್ ವಾರ್ನಿಂಗ್ ಬೆನ್ನಲ್ಲೇ ಪರಮೇಶ್ವರ್ ಸೈಲೆಂಟ್ ಆಗಿದ್ದಾರೆ. ರಾಜಕೀಯ ಪ್ರಶ್ನೆಗಳಿಗೆ ಉತ್ತರ ನೀಡಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.
ನೀವು ಎಷ್ಟೇ ಕೇಳಿದರೂ ನಾನು ರಾಜಕೀಯ ವಿಚಾರ ಮಾತಾಡಲ್ಲ. ನಮ್ಮ ಎಐಸಿಸಿ ಅಧ್ಯಕ್ಷರು ಹೇಳಿದ್ದಾರೆ ಎಂದು ಪರಮೇಶ್ವರ್ ತಿಳಿಸಿದ್ದಾರೆ. ಇದೇ ಮುಡಾ ಕೇಸ್ ನಲ್ಲಿ ಇಡಿ ಮುಟ್ಟುಗೋಲು ವಿಚಾರದ ಬಗ್ಗೆ ಮಾತನಾಡಿದ ಅವರು ಇಡಿ ಅವರ ಮುಟ್ಟುಗೋಲು ವಿಚಾರ ನೋಡಿದ್ದೇನೆ. ಅದರಲ್ಲಿ ಸಿದ್ದರಾಮಯ್ಯ ಪಾತ್ರದ ಬಗ್ಗೆ ಹೇಳಿಲ್ಲ. ಸಿದ್ದರಾಮಯ್ಯ ಅವರ ರಾಜೀನಾಮೆಗೆ ಹಿಂದೆಯೂ ಒತ್ತಾಯ ಮಾಡಿದ್ರು.. ಈಗಲೂ ಒತ್ತಾಯ ಮಾಡಿದ್ದಾರೆ…ಅಷ್ಟೇ.. ಇದೇನು ಮೊದಲಲ್ಲ. ದಾಖಲಾತಿ ಇಟ್ಕೊಂಡು ಮಾತಾಡಬೇಕು. ಇಡಿ ಎಲ್ಲಿಯೂ ಸಿದ್ದರಾಮಯ್ಯ ಇನ್ ಫ್ಲೂಯೆನ್ಸ್ ಮಾಡಿ ಸೈಟ್ ಕೊಡಿಸಿದ್ದಾರೆ ಅಂತಾ ಎಲ್ಲೂ ಹೇಳಿಲ್ಲ ಎಂದು ಅವರು ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಕಾನೂನು ಸುವ್ಯವಸ್ಥೆ ಕರ್ನಾಟಕದಲ್ಲಿ ಚೆನ್ನಾಗಿದೆ.ದರೋಡೆ ಇವೆಲ್ಲಾ ಆಗೋದು ಗೊತ್ತಾದರೆ ತಡೀಬಹುದು. ಅಲ್ಲಿ ಆರ್ಮ್ಸ್ ಗಾರ್ಡ್ ಇರಲಿಲ್ಲ.. ಸೆಕ್ಯೂರಿಟಿ ಇರಲಿಲ್ಲ.. ಇದನ್ನೂ ನೋಡಬೇಕಾಗುತ್ತದೆ. ಸಂದರ್ಭ ಬಂದಾಗ ನಾನು ಅಂಕಿಅಂಶ ಕೊಡ್ತೇನೆ..ಅವರ ಆಡಳಿತ ಅವಧಿಯಲ್ಲಿ ಎಷ್ಟು ಮರ್ಡರ್, ರೇಪ್ ಆಗಿವೆ ಅಂತಾ ಎಂದು ವಿರೋಧ ಪಕ್ಷದವರ ಆರೋಪಗಳಿಗೆ ಕೌಂಟರ್ ಕೊಟ್ಟಿದ್ದಾರೆ.
ಸಿಎಂ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ ಮಾಡಿ ಸಭೆ ಮಾಡ್ಬೇಕು; ಬೆಂಗಳೂರಿನಲ್ಲಿ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ
ಬೆಂಗಳೂರು; ಸಿಎಂ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ ಮಾಡಿ ಸಭೆ ಮಾಡ್ಬೇಕು ಎಂದು ಬೆಂಗಳೂರಿನಲ್ಲಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡ್ತಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿದ ಅವರು ಕುಮಾರಸ್ವಾಮಿ ಸಚಿವರಾದ ಬಳಿಕ ಅವರನ್ನ ಭೇಟಿ ಮಾಡಿ ಚರ್ಚಿಸಿ ಬಂದಿದ್ದೇವೆ. ರಾಜ್ಯಕ್ಕೆ ಬೆಂಬಲಿಸಬೇಕು ಅಂತ ಮನವಿ ಮಾಡಿದ್ದೇವೆ. ಕೈಗಾರಿಕಾ ಸಚಿವನಾಗಿ ನಾನು ಭೇಟಿ ಮಾಡಿದ್ದೇನೆ. ಕುದುರೆ ಮುಖ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಆಗಬೇಕು. ಸಿಎಂ ಜೊತೆ ಭೇಟಿ ಸಭೆ ಮಾಡಬೇಕು, ಭೇಟಿಯ ಬಗ್ಗೆ ಗೊತ್ತಿಲ್ಲ. ನಾನು ಕೈಗಾರಿಕಾ ಸಂಬಂಧ ಭೇಟಿ ಮಾಡಿ ಮನವಿ ಮಾಡಿ ಬಂದಿದ್ದೇನೆ. ಕೈಗಾರಿಕೋದ್ಯಮಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನ ಭೇಟಿ ಮಾಡ್ತೀನಿ. ಡಿಫೆನ್ಸ್ ಮಿನಿಸ್ಟರ್ ನ ಭೇಟಿ ಮಾಡಿದ್ದೆ, ಅವರ ಪ್ರತಿಯನ್ನು ಅವರಿಗೆ ಕೊಟ್ಟಿದ್ದೇನೆ. ಸಿಎಂ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ ಮಾಡಿ ಸಭೆ ಮಾಡ್ಬೇಕು. ಮತ್ತೆ ಅವರನ್ನ ಭೇಟಿ ಮಾಡ್ತೀನಿ, ಮನವಿಯ ಬಗ್ಗೆ ತಿಳಿಸುತ್ತೇನೆ ಎಂದರು.
60 ಶಾಸಕರ ಕಾಂಗ್ರೆಸ್ ನಿಂದ ಬಿಜೆಪಿಗೆ ಬರ್ತಾರೆ ಅಂತ ಯತ್ನಾಳ್ ಬಾಲಿಷ ಹೇಳಿಕೆ ಕೊಟ್ಟಿದ್ರು. ಬಿಜೆಪಿ ಶಾಸಕರ ಯಾರು ನಮ್ಮೊಂದಿಗೆ ಇದ್ದಾರೆ ಅಂತ ಎಲ್ಲರಿಗೂ ಗೊತ್ತು. ನಮ್ಮ 6 ಶಾಸಕರು ಕೂಡ ಆ ಕಡೆ ಹೋಗುವುದಿಲ್ಲ. ಮುಂದೆ ಅವರ ಪಕ್ಷದಿಂದ ಯಾರು ಬರ್ತಾರೆ ಅಂತ ನೋಡಿ. 25 ಶಾಸಕರು ಬರುತ್ತಾರೆ ಅಂತ ಹೇಳಿದ್ದೆ, ನೋಡ್ತಾ ಇರಿ. ವಿಜಯೇಂದ್ರರ ಕುರ್ಚಿ ಅಲುಗಾಡ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಾಯಿ ಮುಚ್ಚಿಕೊಂಡು ಇರಬೇಕು ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅವರ ಪಕ್ಷದಲ್ಲಿ ಎಲ್ಲವೂ ಸರಿ ಇದ್ಯಾ? ಪಕ್ಷದ ವಿಚಾರವಾಗಿ ಖರ್ಗೆ ಹಾಗೆ ಹೇಳಿದ್ದಾರೆ. ಹಿರಿಯರಿಗೆ ಆ ಹಕ್ಕು ಇದೆ, ಅವರ ಹೇಳಿಕೆ ತಪ್ಪಿಲ್ಲ. ಪಕ್ಷ ಅಧಿಕಾರಕ್ಕೆ ಬರಬೇಕು ಅಂದರೆ ಕೆಪಿಸಿಸಿ ಅಧ್ಯಕ್ಷ ಶ್ರಮ ವಹಿಸಿದ್ದಾರೆ. ಅಧ್ಯಕ್ಷರ ಆಯ್ಕೆ ಹೈಕಮಾಂಡ್ ನಿರ್ಧಾರ ಅಂತಿಮ. ಪಕ್ಷಕ್ಕೆ ಸಂಬಂಧಿಸಿ ಯಾವುದೇ ಬಹಿರಂಗ ಹೇಳಿಕೆ ನೀಡದಿರಲು ಎಐಸಿಸಿ ಅಧ್ಯಕ್ಷರು ಸೂಚಿಸಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು. ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸೂಕ್ತ ಸಮಯಕ್ಕೆ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೆ. ಹೈಕಮಾಂಡ್ ಎಲ್ಲ ವಿಚಾರವೂ ಗೊತ್ತಿದೆ ಎಂದರು.
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಸ್ಥಾಪನೆ ಬಗ್ಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳ ಜೊತೆಗೆ ಸಭೆ ಇದೆ. ಸಭೆಯಲ್ಲಿ ಅಂತಿಮ ತೀರ್ಮಾನ ಮಾಡ್ತೀವಿ. ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ಮುಂದಿನ ವಾರ ಸಿಎಂ ಜೊತೆ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದರು.