ಚಾಮರಾಜನಗರ; ಪಹಲ್ಗಾಮ್ ಭಯೋತ್ಪಾದಕರ ದಾಳಿ ಭದ್ರತಾ ವೈಫಲ್ಯ ದಿಂದ ಆಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು ಪಹಲ್ಗಾಮ್ ಭಯೋತ್ಪಾದಕರ ದಾಳಿ ಭದ್ರತಾ ವೈಫಲ್ಯ ದಿಂದ ಆಗಿದೆ. ಅಲ್ಲಿನ ವಿಶಾಲವಾದ ಪ್ರದೇಶದಲ್ಲಿ ಭದ್ರತೆ ಇರಬೇಕಿತ್ತು. ಅದೇನೇ ಇದ್ದರೂ ನಾವು ಈಗ ಭಯೋತ್ಪಾದಕರನ್ನು ಒಟ್ಟಾಗಿ ಸೇರಿ ಮಟ್ಟ ಹಾಕಬೇಕು ಎಂದಿದ್ದಾರೆ.
ಇನ್ನು ಸಂಪುಟ ಸಭೆ ಚಾಮರಾಜನಗರದಲ್ಲಿ ನಡೆದಿರುವ ಬಗ್ಗೆ ಮಾತನಾಡಿದ ಅವರು ಕ್ಯಾಬಿನೆಟ್ ಸಭೆಗಳು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ನಡೆದಿವೆ. ಹಿಂದೆ ಜೆ ಎಚ್ ಪಟೇಲರ ಕಾಲದಲ್ಲಿ ಹುಬ್ಬಳ್ಳಿಯಲ್ಲಿ ನಡೆದಿತ್ತು. ನಾವು ಎರಡು ತಿಂಗಳ ಹಿಂದೆ ಕಲ್ಬುರ್ಗಿ ಯಲ್ಲಿ ಮಾಡಿದ್ವಿ. ನಾವು ವೆಂಕಟೇಶ್ ನಮ್ಮೆಲ್ಲ ಜಿಲ್ಲೆಯ ಶಾಸಕರು ಕ್ಯಾಬಿನೆಟ್ ನಡೆಸಬೇಕೆಂದು ಸಿಎಂಗೆ ಕೇಳಿದ್ವಿ. ಹಿಂದೆ ಎಸ್ ಎಂ ಕೃಷ್ಣ ಇದ್ದಾಗ ಬಿ ಆರ್ ಹಿಲ್ಸ್ ನಲ್ಲಿ ಕ್ಯಾಬಿನೆಟ್ ಸಬ್ ಕಮಿಟಿ ನಡೆದಿತ್ತು.ಕ್ಯಾಬಿನೆಟ್ ನಡೆಯೋದು ರಾಜ್ಯದ ಎಲ್ಲಾ ಸಮಸ್ಯೆ ಗಳ ಬಗ್ಗೆ ತೀರ್ಮಾನ ಮಾಡೋದು. ಜನರ ಸಮಸ್ಯೆಗಳೇನಿದೆ ಅದೆಲ್ಲವೂ ಗಮನದಲ್ಲಿಟ್ಟುಕೊಂಡು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.