ಮನೆ Latest News ಒಬ್ಬ ಸುಪಾರಿ ಕೊಡುವ ಸಚಿವನನ್ನು ಮಂತ್ರಿ ಮಂಡಲದಲ್ಲಿ ಹೇಗ್ರೀ ಇಟ್ಟುಕೊಳ್ತೀರಿ ಸಿದ್ದರಾಮಯ್ಯನವರೇ?; ಬಿಜೆಪಿ ರಾಜ್ಯ ಪ್ರಧಾನ...

ಒಬ್ಬ ಸುಪಾರಿ ಕೊಡುವ ಸಚಿವನನ್ನು ಮಂತ್ರಿ ಮಂಡಲದಲ್ಲಿ ಹೇಗ್ರೀ ಇಟ್ಟುಕೊಳ್ತೀರಿ ಸಿದ್ದರಾಮಯ್ಯನವರೇ?; ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಪ್ರಶ್ನೆ

0

ಬೆಂಗಳೂರು; ಒಬ್ಬ ಸುಪಾರಿ ಕೊಡುವ ಸಚಿವನನ್ನು ಮಂತ್ರಿ ಮಂಡಲದಲ್ಲಿ ಹೇಗ್ರೀ ಇಟ್ಟುಕೊಳ್ತೀರಿ ಸಿದ್ದರಾಮಯ್ಯನವರೇ?ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ.

ರಾಜೀನಾಮೆ ಕೊಡಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಮಾತನಾಡಿದ ಅವರು ಸರ್ವ ಖಾತೆ ಸಚಿವ, ಎಲ್ಲದಕ್ಕೂ ನಂದೆಲ್ಲೆಡ್ಲಿ ಅಂತಾ ಮಾತಾಡುವ ಸಚಿವ ರಾಜೀನಾಮೆ ಕೊಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.ಒಂದು ನಾಯಿ ಕುಂಟುತ್ತಾ ನಡೆದರೆ ಅದರ ಬಗ್ಗೆ ಮಾತಾಡುವ ಸಚಿವ ವ್ಯಕ್ತಿ ರೈಲು ಹಳಿಗೆ ಬಿದ್ದು ಮೃತಪಟ್ಟ ಬಗ್ಗೆ ಮಾತಾಡದೇ ಇರುವ ಮನುಷ್ಯತ್ವ ಯಾಕೆ ಕಳೆದುಕೊಂಡರು?. ಎಲ್ಲದರಲ್ಲೂ ಮೂಗು ತೂರಿಸುವ ಒತ್ತಡದಿಂದ ಸಚಿನ್ ಪಾಂಚಾಳ್ ಡೆತ್ ನೋಟ್ ಬಗ್ಗೆ ಸಚಿವರಿಗೆ ಗಮನ ಹರಿಸುವ ವ್ಯವಧಾನ ಇಲ್ಲದಾಗಿದೆ ಎಂದರು.

ಡೆತ್ ನೋಟ್ ನಿಂದ ಸುಪಾರಿ ಕೊಡುವವರು ಮಂತ್ರಿ ಮಂಡಲದ ಒಳಗೆ ಇದ್ದಾರೆ ಎನ್ನುವುದು ಸ್ಪಷ್ಟ ಆಗುತ್ತದೆ.ಸ್ವಾಮೀಜಿ, ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷನ ಕೊಲೆ ಮಾಡಲು ಈ ಸರ್ಕಾರದಲ್ಲಿ ಸುಪಾರಿ ಕೊಟ್ಟಿದ್ದಾರಲ್ರೀ?. ಸುಪಾರಿ ಕೊಡಲು ನೀವು ಬೆನ್ನಿಗೆ ನಿಂತಿದ್ದೀರಿ ಅಂದರೆ ನೀವು ಅದರಲ್ಲಿ ಭಾಗಿಯಾಗಿದ್ದೀರಿ ಅಂತಾ.ಒಬ್ಬ ಸುಪಾರಿ ಕೊಡುವ ಸಚಿವನನ್ನು ಮಂತ್ರಿ ಮಂಡಲದಲ್ಲಿ ಹೇಗ್ರೀ ಇಟ್ಟುಕೊಳ್ತೀರಿ ಸಿದ್ದರಾಮಯ್ಯನವರೇ?. ಬಟ್ಟೆ ಹರಿದುಕೊಂಡರೂ ರಾಜೀನಾಮೆ ಕೊಡಲ್ಲ ಎಂದಿದ್ದಾರೆ. ನಿಮಗಾಗಿ ನಾವ್ಯಾಕೆ ಬಟ್ಟೆ ಹರಿದುಕೊಳ್ಳೋಣ. ನಾವು ಇರುವುದೇ ನಿಮ್ಮ ರಾಜೀನಾಮೆ ಕೊಡಿಸಲು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಮಗ ಅವರು. ಎಐಸಿಸಿ ಅಧ್ಯಕ್ಷರೇ ನಿಮ್ಮ ಮಗ ಸುಪಾರಿಯಲ್ಲಿ ಭಾಗವಹಿಸಿದ್ದಾರೋ ಇಲ್ಲವೋ.ನೀವಾದರೂ ನಿಮ್ಮ ಮಗನಿಗೆ ಬುದ್ದಿ ಹೇಳಿ. ರಾಜ್ಯದಲ್ಲಿ ಸಿದ್ದರಾಮಯ್ಯ ಸಿದ್ದಾಂತ ಜಾರಿಯಲ್ಲಿದೆ ಅಂತಾ ಶಾಸಕ ನರೇಂದ್ರಸ್ವಾಮಿ ಹೇಳಿದ್ದಾರೆ. ಇದೇನಾ ನಿಮ್ಮ ಸಿದ್ದರಾಮಯ್ಯ ಸಿದ್ದಾಂತ? ಎಂದು ಪ್ರಶ್ನೆ ಮಾಡಿದ್ದಾರೆ.