ಮನೆ Latest News ನಮ್ಮ ಪಕ್ಷದ ಕಾರ್ಯಕರ್ತರು ಯಾರೂ ಪ್ರದೀಪ್ ಈಶ್ವರ್ ಅವರನ್ನು ರೊಚ್ಚಿಗೇಳಿಸಿಲ್ಲ;: ಬೆಂಗಳೂರಿನಲ್ಲಿ ಸಂಸದ ಪಿ.ಸಿ. ಮೋಹನ್...

ನಮ್ಮ ಪಕ್ಷದ ಕಾರ್ಯಕರ್ತರು ಯಾರೂ ಪ್ರದೀಪ್ ಈಶ್ವರ್ ಅವರನ್ನು ರೊಚ್ಚಿಗೇಳಿಸಿಲ್ಲ;: ಬೆಂಗಳೂರಿನಲ್ಲಿ ಸಂಸದ ಪಿ.ಸಿ. ಮೋಹನ್ ಹೇಳಿಕೆ

0

ಬೆಂಗಳೂರು; ನಿನ್ನೆ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಜೊತೆ ಜಟಾಪಟಿ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಸಂಸದ ಪಿ.ಸಿ. ಮೋಹನ್ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು ಬಸವರಾಜ ಬೊಮ್ಮಾಯಿ ಸರ್ಕಾರ ಇದ್ದಾಗಲೇ ಈ ಜಯಂತಿ ಘೋಷಣೆ ಮಾಡಲಾಗಿತ್ತು. ನಿನ್ನೆ ಜಯಂತಿ ನಡೆಯುವಾಗ ಪ್ರದೀಪ್ ಈಶ್ವರ್ ನನ್ನ ಸರ್ಕಾರ, ನನ್ನ ಕಾರ್ಯಕ್ರಮ ಅಂತಾ ಮಾತಾಡುತ್ತಿದ್ದರು. ಯಾವಾಗ ಅವರು ಲಕ್ಷ್ಮಣ ರೇಖೆ ದಾಟಿದರೋ ಆಗ ನಾನು ಪ್ರಶ್ನೆ ಮಾಡಿದೆ. ಹಿಂದಿನ ಸರ್ಕಾರದಿಂದ ಜಯಂತಿಯ ಕೊಡುಗೆ ಬಗ್ಗೆ ಮಾತಾಡಿದರೆ ಪ್ರದೀಪ್ ಈಶ್ವರ್ ಗೆ ಏನು ಹೊಟ್ಟೆ ಉರಿ? .ನಮ್ಮ ಪಕ್ಷದ ಕಾರ್ಯಕರ್ತರು ಯಾರೂ ಅವರನ್ನು ರೊಚ್ಚಿಗೇಳಿಸಿಲ್ಲ. ಅಲ್ಲಿನ ಸಭೀಕರು ನನಗೂ ಕೇಳಿದರು. ಆದರೆ ಇದಕ್ಕೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.. ನಾವು ಕಾರ್ಯಕ್ರಮ ಮಾಡಿದಾಗ ಪಕ್ಷಾತೀತವಾಗಿ ಎಲ್ಲರನ್ನೂ ಕರೆದಿದ್ದೆವು.ಆದರೆ ನಿನ್ನೆಯ ಕಾರ್ಯಕ್ರಮಕ್ಕೆ ಸಿಎಂ ಆಗಲಿ, ಒಬ್ಬ ಮಂತ್ರಿಯೂ ಬಂದಿಲ್ಲ ಎಂದಿದ್ದಾರೆ.

ಇವತ್ತು ಕಾಂಗ್ರೆಸ್ ಸರ್ಕಾರ ಏನು ಪರ್ಮನೆಂಟಾ?.ಇನ್ನು ಎರಡು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಬರುತ್ತದೆ. ಬಲಿಜ ಸಮಾಜವನ್ನು ಈ ಶಾಸಕ ಸೇರಿ ಇಡೀ ಕಾಂಗ್ರೆಸ್ ಕಡೆಗಣಿಸಿದೆ.ಪ್ರದೀಪ್ ಈಶ್ವರ್ ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಂಡರೆ ಒಳ್ಳೆಯದು. ಅವರು ಏನೂ ಚಿಕ್ಕಮಗು ಅಲ್ಲ, ವಯಸ್ಸು ಆಗಿದೆ.ನಿನ್ನೆ ಅಂತೂ ನನಗೆ ಮೊದಲ ಅನುಭವ. ಅವರ ಮಾತನ್ನು ನೋಡಿಯೇ ನನಗೆ ಆಶ್ಚರ್ಯ ಆಯಿತು. ಅವರು ಶಾಸಕರಾಗಿದ್ದಾರೆ ಎನ್ನುವುದನ್ನು ಅರಿತುಕೊಳ್ಳಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ  ಆಕ್ಸಿಡೆಂಟಲ್ ಎಂ.ಎಲ್.ಎ ಪ್ರದೀಪ್ ಈಶ್ವರ್ ಅವರೇ . ಅಲ್ಲಿ ನಡೆಯುತ್ತಿರುವುದು ಬಿಜೆಪಿ ಕಾರ್ಯಕ್ರಮವೂ ಅಲ್ಲ, ಕಾಂಗ್ರೆಸ್ ಕಾರ್ಯಕ್ರಮವೂ ಅಲ್ಲ!!. ಅಲ್ಲಿ ನಡೆಯುತ್ತಿರುವುದು ಪವಾಡ ಪುರುಷ ಕೈವಾರ ತಾತಯ್ಯ ಅವರ ಜಯಂತಿ ಕಾರ್ಯಕ್ರಮ!!. ನಿಮಗೆ ಅಷ್ಟೊಂದು ಪ್ರಚಾರದ ಗೀಳಿದ್ದರೆ ಮಜಾ ಟಾಕೀಸ್ ಅಥವಾ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಹೋಗಿ!!. ನಿಮ್ಮ ಪ್ರಚಾರದ ಹಪಾಹಪಿಗಾಗಿ ಪೂಜನೀಯ ಕೈವಾರ ತಾತಯ್ಯ ಅವರ ವೇದಿಕೆಗೆ ಅವಮಾನಿಸಬೇಡಿ ಎಂದಿದ್ದಾರೆ.