ಬೆಂಗಳೂರು; ನಮ್ಮ ಗಮನ ಸ್ಥಳೀಯ ಚುನಾವಣೆಯ ಮೇಲಿರಬೇಕು ಎಂದು ದೆಹಲಿಯ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ ಹೇಳಿದ್ದಾರೆ.
ಸಾಕಷ್ಟು ನಾಯಕರು ದೆಹಲಿಗರ ಹೋಗ್ತಿರೋ ವಿಚಾರ ಮತ್ತು ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಇವತ್ತು ರಾಜಕಾರಣ ಒಂದೊಂದು ಸಂದರ್ಭದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಆದ್ರೆ ಬಿಜೆಪಿಯವರು ನಮ್ಮ ಸಿಎಂ ಮೇಲೆ ಆರೋಪ ಮಾಡಿದ್ದಾರೆ. ಅಪಪ್ರಚಾರ ಮಾಡಿ, ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಆದ್ರೆ ಇವತ್ತು ಸಿಎಂ ನಿರ್ದೋಷಿ ಎಂದು ತೀರ್ಪು ಬಂದಿದೆ. ಮುಂದೆ ಸಳೀಯ ಚುನಾವಣೆ ಆಗಿಲ್ಲ, ಪಂಚಾಯತ್ ಚುನಾವಣೆ ಆಗಿಲ್ಲ.ಹೀಗಾಗಿ ಲೋಕಲ್ ಆಡಳಿತ ದ ಮೇಲೆ ಹೆಚ್ಚು ಗಮನ ಹರಿಸಬೇಕು. ನಮ್ಮ ಗಮನ ಸ್ಥಳೀಯ ಚುನಾವಣೆ ಮೇಲೆ ಹರಿಸಬೇಕು. ಆದ್ರೆ ಈ ವೇಳೆ ಹೈಕಮಾಂಡ್ ನವರು ಏನ್ ತೀರ್ಮಾನ ತೆಗೆದುಕೊಳ್ಳುತ್ತಾರೆ ಅನ್ನೋದು ಅವರಿಗೆ ಬಿಟ್ಟಿದ್ದು.ಈಗ ಯಾವುದೇ ಬದಲಾವಣೆ ಆಗಲ್ಲ ಅಂತ ಅನ್ನಿಸ್ತಿದೆ ಎಂದರು.
ಖರ್ಗೆ ಅವರು ಬಾಯಿ ಮುಚ್ಚಿಕೊಂಡು ಇರಿ ಎಂದಿದ್ದಾರೆ. ಅವರೇ ಹೈಕಮಾಂಡ್ ಆಗಿರೋದ್ರಿಂದ ಅವರ ಸಂದೇಶ ಅರ್ಥ ಮಾಡಿಕೊಳ್ಳಬೇಕು. ಬಾಯಿ ಮುಚ್ಚಿಕೊಂಡು ಇರಿ ಅಂದ್ರೆ ಸುಮ್ಮನೆ ಇರಬೇಕು.ಅವರ ಹೇಳಿಕೆಯಿಂದ ಎಲ್ಲದಕ್ಕೂ ತೆರೆ ಎಳೆದಿದೆ. ಅವರು ಕರ್ನಾಟಕದ ಬಗ್ಗೆ ಅಧ್ಯಕ್ಷರ ಬದಲಾವಣೆ ಕುರಿತು ಹೇಳಿಲ್ಲ ಎಂದರು. ಕೆ ಎನ್ ರಾಜಣ್ಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರು ಏನ್ ಹೇಳ್ತಾರೆ ಅನ್ನೋದಕ್ಕೆ ನಾನೇನು ಹೇಳಲ್ಲ. ನಾವೆಲ್ಲ ಹಿರಿಯರು, ನಾವು ಅರ್ಥ ಮಾಡಿಕೊಳ್ಳಬೇಕು. ಪದೇ ಪದೇ ಎಲ್ಲದಕ್ಕೂ ಉತ್ತರ ಕೊಡೋಕೆ ಆಗಲ್ಲ ಎಂದರು.
ಜಿಂಕಾರದಲ್ಲಿ ಅದಿರು ಗಣಿಗಾರಿಕೆ ವಿಚಾರದ ಬಗ್ಗೆ ಮಾತನಾಡಿ ಜಿಂಕಾರ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ನಮ್ಮಲ್ಲಿ ಜಿಂಕೆ ಮರಿಗಳು ಒಂದೊಂದು ರೀತಿ ಇರುತ್ತವೆ. ಅದಕ್ಕೆ ಜಿಂಕಾರ ಅಂತೇಳಿ ಹೆಸರು ಇಟ್ಟಿದ್ದಾರೆ.ಅದರ ಗಡಿಯಲ್ಲಿ ಬರುವ ಕ್ಷೇತ್ರಗಳ ನಡುವೆ ಬರುವ ವನ್ಯಧಾಮ. ಪರಿಸರ ಕಾಪಾಡುವ ದೃಷ್ಟಿಯಿಂದ ನಾನೇ ಡಿಕ್ಲೇರ್ ಮಾಡಿದ್ದು.ಅಲ್ಲಿ ಮೈನಿಂಗ್ ಏರಿಯಾ ಏನಿಲ್ಲ. ಚಿಕ್ಕನಾಯಕನಹಳ್ಳಿ ಮಾತ್ರ ಮೈನಿಂಗ್ ಇದೆ. ಎಲ್ಲೋ ಒಂದು ಕಡೆ ಕ್ವಾರಿ ಇರಬಹುದು, ಇಕೋ ಸೆನ್ಸಿಟೀವ್ ಝೋನ್ ಗೆ ತೊಂದ್ರೆ ಆಗಲ್ಲ ಎಂದರು.
ನಾನು ಶಾಸಕನಾಗಿ 40 ವರ್ಷ. ನಾನು ಬೆಳೆದಿದ್ದು ಅಲ್ಲಿಯೇ. ಹೀಗಾಗಿ ಗಣಿಗಾರಿಕೆ ಮಾಡುವ ಪ್ರದೇಶ ಅಲ್ಲಿಲ್ಲ. ಮರಗಳು ಹೇರಳವಾಗಿದೆ, ಆದ್ರೆ ಪರಿಸರ ಉಳೀಬೇಕು. ನಾನೇ ಗಿಡಗಳ ಪ್ಲಾಂಟೇಷನ್ ಮಾಡಿಸಿದ್ದೇ, ಈಗ ಹೆಮ್ಮರವಾಗಿದೆ.ಪರಿಸರ ವಾದಿಗಳು ಪ್ರಪೋಸಲ್ ರಿಜೆಕ್ಟ್ ಮಾಡಲು ಒತ್ತಾಯಿಸಿದ್ದಾರೆ ಎಂದರು.
ಉಸ್ತುವಾರಿ ಸಚಿವರ ಮೇಲೆ ಎಲ್ಲಾ ಕಡೆ ಆಕ್ಷೇಪ ಆಗುತ್ತಿದೆ. ನಿಮ್ಮ ಜಿಲ್ಲೆಯ ವಾತಾವರಣ ಹೇಗಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಉಸ್ತುವಾರಿ ಸಚಿವರು ಸಚಿವರ ಬಗ್ಗೆ ಯಾರಾದರೂ ಆಕ್ಷೇಪ ಎತ್ತಿದ್ದಾರೆ. ಯಾರೋ ಎತ್ತಿದ್ದಾರೆ ಅಂದ್ರೆ ಗೊತ್ತಿಲ್ಲ. ಸಣ್ಣ ಸಣ್ಣ ವಿಚಾರ ಇರಬಹುದು ಅಷ್ಟೇ.ಅವರು ನಿರ್ಧಾರ ತೆಗೆದುಕೊಂಡಿದ್ದಾರೆ, ಅದನ್ನ ಚರ್ಚೆ ಮಾಡುವ ಅಗತ್ಯವಿಲ್ಲ.ನಾನು ದೆಹಲಿಯಲ್ಲಿ ಇರುತ್ತೇನೆ ಅಲ್ಲ ಅದರ ಬಗ್ಗೆ ಅಷ್ಟೇ ಹೇಳುತ್ತೇನೆ ಎಂದರು.
ಸಚಿವ ಸಂಪುಟ ಪುನಾರಚನೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಚಿವ ಸಂಪುಟ ಪುನಾರಚನೆ ಆಗಬೇಕು ಬೇಡ್ವಾ ಎಂಬುದು ವರಿಷ್ಠ ರು ತೀರ್ಮಾನ ಮಾಡುತ್ತೆ. ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದವರು. ಅವರೇ ಸುದೀರ್ಘ ರಾಜಕಾರಣ ಮಾಡಿಕೊಂಡು ಬರ್ತಿದ್ದಾರೆ. ಖರ್ಗೆ ಅವರು ಇಡುತ್ತಿರೋ ಹೆಜ್ಜೆ ಏನು ಅನ್ನೋದು ಗೊತ್ತಿಲ್ಲ. ನಾನು ಅವರೊಂದಿಗೆ ಭೇಟಿ ಮಾಡುತ್ತಲೇ ಇರುತ್ತೇನೆ.ನೀರಾವರಿ ಸಚಿವರೊಂದಿಗೆ ಭೇಟಿ ಮಾಡುತ್ತೇವೆ, ಡಿಕೆ ಸಹ ಬರ್ತಾರೆ ಎಂದರು.