ಮನೆ Latest News ನಾನು ಯಾವ ಆಧಾರದ ಮೇಲೆ ರಾಜೀನಾಮೆ ನೀಡಬೇಕು?;ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆ ನೀಡಬೇಕು; ಗವರ್ನರ್ ವಿರುದ್ಧ...

ನಾನು ಯಾವ ಆಧಾರದ ಮೇಲೆ ರಾಜೀನಾಮೆ ನೀಡಬೇಕು?;ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆ ನೀಡಬೇಕು; ಗವರ್ನರ್ ವಿರುದ್ಧ ಸಿದ್ದರಾಮಯ್ಯ ಗರಂ

0

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​​ಗೆ ರಾಜ್ಯಪಾಲರು ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಪ್ರಾಸಿಕ್ಯುಷನ್ ವಿರುದ್ದ ಕಾನೂನಾತ್ಮಕ ಹೋರಾಟ ಮಾಡ್ತೇವೆ.ಪೂರ್ಣ ರಾಜಕೀಯ ದುರುದ್ದೇಶದಿಂದ ಮಾಡಿರುವ ತೀರ್ಮಾನ ಇದು.ಚುನಾಯಿತ ಸರ್ಕಾರ ಕಿತ್ತು ಹಾಕುವುದಕ್ಕೆ ಪ್ರಯತ್ನ ಮಾಡ್ತಿದ್ದಾರೆ. ನಮ್ಮ ಸರ್ಕಾರ ಬಡವರ ಪರವಾಗಿ ಇರುವ ಸರ್ಕಾರ.ಹೀಗಾಗಿ ಇದನ್ನು ಕಿತ್ತೊಗೆಯಲು ಪ್ರಯತ್ನ ಮಾಡ್ತಿದ್ದಾರೆ.ಗ್ಯಾರಂಟಿ ಗಳ ವಿರುದ್ದ ಇರುವವರು ಅವರು.ಬಡವರ ಪರ ನಾವು ಕೆಲಸ ಮಾಡ್ತಿದ್ದೇವೆ ಅಂತ ಅವರು ಹೀಗೆ ಮಾಡ್ತಿದ್ದಾರೆ.ಈ ಪ್ರಯತ್ನ ಯಶಸ್ವಿ ಆಗಿಲ್ಲ.ನಾಡಿನ ಜನರ ಆಶೀರ್ವಾದ ನನ್ನ ಮೇಲೆ ಪಕ್ಷದ ಮೇಲೆ‌ ಇದೆ.ಕುಟಿಲ ಪ್ರಯತ್ನ, ಅಸ್ಥಿರ ಗೊಳಿಸುವುದು ಅವರ ಭ್ರಮೆ.೧೩೫ ಸ್ಥಾನ ನಾವು ಗೆದ್ದಿದ್ದೇವೆ, ಇದು ಅವರಿಗೆ ಸಹಿಸಲು ಆಗುತ್ತಿಲ್ಲ ಎಂದರು.

ಬೇರೆ ಪ್ರಕರಣಗಳಲ್ಲಿ ಪಿಟಿಷನ್ ಗಳಿಗೆ ಇದುವರೆಗೆ ರಾಜ್ಯಪಾಲರು ಸ್ಯಾಂಕ್ಷನ್ ನೀಡಿಲ್ಲ.ಶಶಿಕಲಾ ಜೊಲ್ಲೆ ವಿರುದ್ದ ೯-೧೨-೨೦೨೧ ರಲ್ಲಿಯೇ ಲೋಕಾಯುಕ್ತ ರಾಜ್ಯಪಾಲರ ಸ್ಯಾಂಕ್ಷನ್ ಕೇಳಿದೆ .ಇದುವರೆಗೆ ನೀಡಿಲ್ಲ.ಎಚ್ ಡಿ ಕುಮಾರಸ್ವಾಮಿ ವಿರುದ್ದ ಲೋಕಾಯುಕ್ತ ರಾಜ್ಯಪಾಲರ ಸ್ಯಾಂಕ್ಷನ್ ಕೇಳಿದೆ.ಕುಮಾರಸ್ವಾಮಿ ಕೇಸ್ ನಲ್ಲಿ ಲೂಟಿಯಲ್ಲಿ ಇವರ ಪಾತ್ರ ಇರುವುದು ಸಾಬೀತಾಗಿದೆ ಎಂದು ಲೋಕಾಯುಕ್ತ ಹೇಳಿದೆ. ಇವರ ಪಾತ್ರ ಇರುವುದು ಗೊತ್ತಾಗಿದ್ದರೂ ರಾಜ್ಯಪಾಲರು ಪ್ರಾಸಿಕ್ಯುಷನ್ ಗೆ ಕೇಳಿಲ್ಲ.ವಿಜಯೇಂದ್ರ ಅಶೋಕ ಕುಮಾರಸ್ವಾಮಿ ಇವರ ಮಾತು ಕೇಳಿಕೊಂಡು ರಾಜ್ಯಪಾಲರು ನನಗೆ ಹೀಗೆ ಮಾಡಿದ್ದಾರೆ.೨೬-೨-೨೦೨೪ ರಲ್ಲಿ ಮುರುಗೇಶ್ ನಿರಾಣಿ ವಿರುದ್ಧ ಪ್ರಾಸಿಕ್ಯುಷನ್ ಕೇಳಲಾಗಿದೆ.ಜನಾರ್ಧನ ರೆಡ್ಡಿ ವಿರುದ್ದವೂ ಕೂಡ ರಾಜ್ಯಪಾಲರ ಮುಂದೆ ಅನುಮತಿ ಬಾಕಿ ಇದೆ.ಇಷ್ಟೆಲ್ಲ ಗಂಭೀರ ಪ್ರಕರಣ ಇದ್ರೂ ರಾಜ್ಯಪಾಲರ ಪ್ರಾಸಿಕ್ಯುಷನ್ ಇಲ್ಲ. ನಮ್ಮದು ತನಿಖೆಯೇ ಇಲ್ಲ ಯಾವುದೇ ರಿಪೋರ್ಟ್ ಇಲ್ಲ ತನಿಕೆ ಇಲ್ಲ.ನಾನು ಯಾವುದೇ ತೀರ್ಮಾನ ಮಾಡಿಲ್ಲ, ನನ್ನ ಸಹಿ ಇಲ್ಲ ಎಂದ್ರು.

ನಾನು ಯಾಕೆ ರಾಜೀನಾಮೆ ನೀಡಬೇಕು? ಯಾವ ಆಧಾರದ ಮೇಲೆ ರಾಜೀನಾಮೆ ನೀಡಬೇಕು?.ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆ ನೀಡಬೇಕು ಎಂದಿದ್ದಾರೆ.

 

ಪ್ರಾಸಿಕ್ಯೂಷನ್ಗೆ ಗವರ್ನರ್ ಅನುಮತಿ ಕೊಡೋದನ್ನು ನಾನು ನಿರೀಕ್ಷೆ ಮಾಡಿದ್ದೆ: ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು;ಮುಡಾ  ಹಗರಣಕ್ಕೆ ಸಂಬಂಧಪಟ್ಟಂತೆ ಪ್ರಾಸಿಕ್ಯೂಷನ್ಗೆ ಗವರ್ನರ್ ಅನುಮತಿ ಕೊಡೋದನ್ನು ನಾನು ನಿರೀಕ್ಷೆ ಯಾವಾಗ ರಾಜ್ಯಪಾಲರು ಆಗಸ್ಟ್ 31 ರಂದು‌ ನೋಟೀಸ್ ಕೊಟ್ರೋ, ಆಗ ನಾನು‌ ನಿರೀಕ್ಷೆ ಮಾಡಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕುಮಾರಸ್ವಾಮಿ ಮೇಲೆ ನವೆಂಬರ್ ತಿಂಗಳಲ್ಲಿ ಪಿಟಿಷನ್ ಇದೆ.ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ಮೇಲೆ ಇದೆ.ನನ್ನ ಮೇಲೆ ಮಾತ್ರ ಶೋಕಾಸ್ ನೋಟೀಸ್ ‌ಕಳುಹಿಸಿದ್ದಾರೆ.ನನಗೆ ‌ಮಾತ್ರ ನೋಟಿಸ್ ಕೊಟ್ಟಿದ್ದಾರೆ.ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ.ಅನೇಕ ರಾಜ್ಯದಲ್ಲಿ ಇದೆ ತರಹ ಮಾಡಿದ್ದಾರೆ.ದಿಲ್ಲಿ, ಜಾರ್ಖಾಂಡ್ ನಲ್ಲಿ ಕೂಡ ಇದೆ ರೀತಿ ಆಗಿದೆ.ಬಿಜೆಪಿ, ಜೆಡಿಎಸ್ ಎಲ್ಲ ಸೇರಿಕೊಂಡಿದ್ದಾರೆ.ರಾಜ್ಯಪಾಲರ ನಿರ್ಧಾರ ಸಂವಿಧಾನ ಬಾಹಿರ.ನಾನು ಕಾನೂನು ಹೋರಾಟ ಮಾಡುತ್ತೇವೆ.ಹೈಕಮಾಂಡ್, ಪಕ್ಷ, ಶಾಸಕರು ನನ್ನ ಜೊತೆ ಇದ್ದಾರೆ.ಎಲ್ಲರೂ ನನ್ನ ಜೊತೆಗೆ ಇದ್ದಾರೆ.ನಾನು ರಾಜೀನಾಮೆ ‌ಕೊಡುವ ತಪ್ಪು ಮಾಡಿಲ್ಲ.ಅವರು ಕಾನೂನು ಬಾಹಿರ ಎಂದು ಸಿಎಂ ತಿಳಿಸಿದ್ದಾರೆ

ಇನ್ನು ಇದೇ ವೇಳೆ ಮಾತನಾಡಿದ ಅವರು ರಾಜ್ಯಪಾಲರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯ ಕೈಗೊಂಬೆಯಾಗಿದ್ದಾರೆ ರಾಜ್ಯಪಾಲರು.ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ರಾಜ್ಯಪಾಲರ ನಡೆಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಈ ಬಗ್ಗೆ ವಿಧಾನಸೌಧದಲ್ಲಿ ಸಚಿವ ಸಂತೋಷ್ ಲಾಡ್ ಈಗ ಬಿಜೆಪಿಯವರು ಸಿದ್ದರಾಮಯ್ಯ ರಾಜೀನಾಮೆ ಕೇಳ್ತಿದ್ದಾರೆ.ಅದು ಸೈಡಿಗೆ ಇಡಿ.ಆದ್ರೆ ರಷ್ಯದಲ್ಲಿ ಯುದ್ದಕ್ಕೆ ನಮ್ ಯುವಕರು ಹೋಗಿದ್ರು.ಯುದ್ಧದಲ್ಲಿ ನಮ್ಮವರು ಪ್ರಾಣ ಬಿಟ್ಟಿದ್ದಾರೆ.ಇದರ ಬಗ್ಗೆ ಯಾರೂ ಕೂಡ ಮಾತಾಡುತ್ತಿಲ್ಲ.ಆದ್ರೆ ಈಗ ಸಿಎಂ ಸಿದ್ದರಾಮಯ್ಯ ವಿರುದ್ದ ಆರೋಪ ಮಾಡಿದ್ದಾರೆ, ಈಗ ಪ್ರಾಸಿಕ್ಯೂಷನ್ ಕೊಟ್ಟಿದ್ದಾರೆ.ಈಗ ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ.ಈಗ ಸಿಎಂ ಸಿದ್ದರಾಮಯ್ಯ ವಿಚಾರದಲ್ಲಿ ಪ್ರಾಸಿಕ್ಯೂಷನ್ ಕೊಟ್ಟಿದ್ದಾರೆ.ರಾಜ್ಯಪಾಲರು ರಾಜಕೀಯ ಮಾಡೋಕೆ ಬಂದಿದ್ದಾರೆ.. ಇಡಿ, ಸಿಬಿಐ ಒತ್ತಡದಲ್ಲಿವೆ.ಬಡವರಿಗೆ ಹಿಂದುಳಿದ ನಾಯಕರು ೬೦ ಸಾವಿರ ಕೋಟಿ  ಕೊಟ್ಟಿದ್ದಾರೆ.ಇದನ್ನ ಸಹಿಸೋಕೆ ಆಗದೇ ಪ್ರಾಸಿಕ್ಯೂಷನ್ ಗೆ ಕೊಟ್ಟಿದ್ದಾರೆ. ಅದು ಪ್ರೀ ಪ್ಲಾನ್ ಆಗಿ ಮಾತಾಡಿದ್ದಾರೆ, ಅದನ್ನೇ ಮಾಡಿದ್ದಾರೆ.ಇದನ್ನೆಲ್ಲಾ ಮಾಡಿದ್ದಾರೆ.‌ಆದ್ರೆ ರಷ್ಯಾದಲ್ಲಿ ಯುವಕರ ಸಾವಿನ ಬಗ್ಗೆ ಮಾತಾಡುತ್ತಿಲ್ಲ.ಜಮ್ಮು ಕಾಶ್ಮೀರದಲ್ಲಿ ಸೈನಿಕರ ಹತ್ಯೆಗೆ ಮಾತಾಡುತ್ತಿಲ್ಲ ಎಂದ್ದಾರೆ.

ವಿಧಾನಸೌಧದಲ್ಲಿ ಶಾಸಕ ಶಿವಲಿಂಗೇಗೌಡ ಮಾತನಾಡಿ ಪ್ರಾಸಿಕ್ಯೂಷನ್ ಕೊಟ್ಟರೇ ರಕ್ತ ಕ್ರಾಂತಿ ಯಾಗುತ್ತೆ ಎಂಬ ತಮ್ಮ ಹೇಳಿಕೆ‌ ವಿಚಾರ.ನು ನನ್ಜ ಮಾತಿಗೆ ಬದ್ಧವಾಗದ್ದೇನೆ.ಈಗಲೂ ಕರ್ನಾಟಕ ರಾಜ್ಯದಲ್ಲಿ ಕ್ರಾಂತಿ ಆಗುತ್ತದೆ.ಇನ್ನೂ ಮುಂದೆ ಕೂಡ ಕ್ರಾಂತಿ ಆಗಲಿದೆ.ತೆಗೇರಿ ಮುಖ್ಯಮಂತ್ರಿ ಅವರನ್ನ ನೋಡೋಣ.ಸಿಎಂ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಹೈಕಮಾಂಡ್ ಇದೆ.ಹೈಕಮಾಂಡ್ ಏನ್ ಹೇಳುತ್ತದೆ ಅದನ್ನ‌ ಶಾಸಕರು ಸಚಿವರು ಕೇಳಬೇಕು.ಕುಮಾರಸ್ವಾಮಿ ಜೋತಿಷ್ಯ ಯಾವಾಗ ಸೇರಿಕೊಂಡರಾ?.ಕುಮಾರಸ್ವಾಮಿ ಕೇಂದ್ರ ಸಚಿವರು ಜೋತಿಷ್ಯರು ಅಲ್ಲ.ಪ್ರಜೆಗಳು ಪ್ರಭುಗಳು.. ಅವರು  ಏನ್ ಹೇಳ್ತಾರೆ ಅದೇ ಫೈನಲ್ ಎಂದಿದ್ದಾರೆ.

ಡಿಕೆ ಶಿವಕುಮಾರ್ ಮಾತನಾಡಿ ರಾಜ್ಯಪಾಲರು ಸರಿಯಾಗಿ ಕಾನೂನು ಪಾಲನೆ ಮಾಡಿಲ್ಲ.ನಮ್ಮ ರಿಜೆಕ್ಷನ್ ಆಪ್ ಅಡ್ವೈಸ್ ಗೂ ಕೂಡ ರಾಜ್ಯಪಾಲರು ಗೌರವ ಕೊಟ್ಟಿಲ್ಲ.ಸುಪ್ರಿಂ ಕೋರ್ಟ್ ನ ೭ ಪೀಠದ ಆದೇಶದ ಬಗ್ಗೆ ನಾವು ತಿಳಿಸಿದ್ದೆವು ಕ್ಯಾಬಿನೆಟ್ ಮೀಟಿಂಗ್ ನಿರ್ಣಯದಲ್ಲಿ ಆದರೂ ಅದಕ್ಕೆ ಅವರು ಮನ್ನಣೆ ನೀಡಿಲ್ಲ.ಇದನ್ನು ನಾವು ಖಂಡನೆ ಮಾಡಲೇಬೇಕಿದೆ.ಸಂವಿಧಾನಕ್ಕೆ ಅಪಮಾನ ಆಗುತ್ತಿದೆ.ರಾಜ್ಯಪಾಲರ ನಿರ್ಣಯವನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.