ಮನೆ Latest News ನಟ್ಟು, ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ನಿಖಿಲ್ ಕುಮಾರಸ್ವಾಮಿ...

ನಟ್ಟು, ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ನಿಖಿಲ್ ಕುಮಾರಸ್ವಾಮಿ ತಿರುಗೇಟು

0

ಬೆಂಗಳೂರು; ನಟ್ಟು, ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಿನಿಮಾ ರಂಗದಲ್ಲಿ ಇರುವ ಕಲಾವಿದರು, ನಿರ್ದೇಶಕರು, ನಿರ್ಮಾಪಕರು  ಯಾರೇ ಇರಬಹುದು ಎಲ್ಲರಿಗೂ ಕೂಡಾ ಸಮಾಜದ ಆಗು ಹೋಗುಗಳ ಬಗ್ಗೆ ಪ್ರಜ್ಞೆ ಇದೆ ಎಂದು ನಾನು ಭಾವಿಸಿದ್ದೇನೆ. ಯಾವ ಸಂದರ್ಭದಲ್ಲಿ ಯಾವ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ಹೋರಾಟ ಕೈಜೋಡಿಸಬೇಕು. ಅವರ ವೈಯಕ್ತಿಕ ಅಭಿಪ್ರಾಯ. ರಾಜಕೀಯವಾಗಿ ಒಂದು ಪಕ್ಷದ ಜೊತೆ ಗುರುತಿಸಿಕೊಳ್ಳೋದಕ್ಕೆ ಬಹುಶಃ ಕಲಾವಿದರು ಹಿಂದೆ ಸರಿದಿರಬಹುದು ಎಂಬುದು ನನ್ನ ಭಾವನೆ. ಹಾಗಾಗಿ ಈ ರೀತಿ ನೆಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಇವೆಲ್ಲವೂ  ಈ ವಿಷಯಗಳನ್ನ ಬಿಟ್ಟು ಎಲ್ಲರನ್ನ ಗೌರವಯುತವಾಗಿ ಕಲಿಯಬೇಕು ಎಂದಿದ್ದಾರೆ.

ರಾಜಕಾರಣಿಗಳ ಮಕ್ಕಳು ಚಿತ್ರರಂಗದಿಂದ ವಾಪಸ್ ರಾಜಕೀಯಕ್ಕೆ ಬಂದ ವಿಚಾರದ ಬಗ್ಗೆ ಮಾತನಾಡಿದ ಅವರು ಡಿಸಿಎಂ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.  ಕುಮಾರಣ್ಣ ವೃತಿ ಪ್ರಾರಂಭ ಮಾಡಿದ್ದು ಸಿನಿಮಾ ಹಂಚಿಕೆದಾರಾಗಿ. ಸ್ವಾಭಾವಿಕವಾಗಿ ನಾನು ಚಿಕ್ಕವಯಸ್ಸಿನಲ್ಲಿ ಕುಮಾರಣ್ಣ ವಿತರಣೆ ಮಾಡಬೇಕಾದರೆ ಸಾಕಷ್ಟು ಪ್ರದರ್ಶನ ಮಾಡಬೇಕಾದರೆ ಹಲವಾರು ಸಿನಿಮಾಗಳನ್ನ ನಾನು ವೀಕ್ಷಣೆ ಮಾಡಿದ್ದೇನೆ. ಬಹುಶಃ ೨೦೦ ಕ್ಕೂ ಹೆಚ್ಚು ಸಿನಿಮಾಗಳ ವಿತರಣೆ ಮಾಡಿ ಬಹಳ ಯಶಸ್ವಿ ವಿತರಕರಾಗಿ ಕೆಲಸ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ನನಗೂ ಸಹ ನನ್ನ ವೃತಿ ಬದುಕು . ರಾಜಕಾರಣ ಹೊರತುಪಡಿಸಿ ಸಿನಿಮಾ ರಂಗದಲ್ಲಿ ಪ್ರಾರಂಭ ಮಾಡಬೇಕು ಅಂತ ಕನಸು ಕಲ್ಪನೆ ಹೊತ್ತು ಬಹಳ ವರ್ಷಗಳ ತಯಾರಿ ಮಾಡ್ಕೊಂಡು ಜಾಗ್ವಾರ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟೆ. ಹಾಗಾಗಿ ಸಿನಿಮಾ ರಂಗ ನಮಗೆ ಹೊಸದೇನು ಅಲ್ಲ. ಇವತ್ತು ನಮಗೆ ಸಮಾಜದಲ್ಲಿ ಬಹಳ ಜವಾಬ್ದಾರಿ ಇದೆ. ಪಕ್ಷದ ಜವಾಬ್ದಾರಿ ಇದೆ. ಆ ಹಿನ್ನೆಲೆಯಲ್ಲಿ ಸ್ವಲ್ಪ ಸಂಪುರ್ಣವಾಗಿ ರಾಜಕಾರಣಕ್ಕೆ ಬಂದಿದ್ದೇನೆ ಎಂದಿದ್ದಾರೆ.

ನಿಮಗೆ ರಾಜಣ್ಣನ ನಟ್ಟು ಬೋಲ್ಟ್ ಟೈಟ್ ಮಾಡೋಕೆ ಆಗ್ಲಿಲ್ಲ, ಸಿನಿಮಾ ತಾರೆಯರ ನೆಟ್ಟು ಬೊಲ್ಟ್ ಟೈಟ್ ಮಾಡ್ತೀರಾ? ; ಡಿಕೆಶಿಗೆ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ತಿರುಗೇಟು

ಬೆಂಗಳೂರು; 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರರಂಗದವರ ನೆಟ್ಟು, ಬೋಲ್ಟ್ ಹೇಗೆ ಟೈಟ್ ಮಾಡಬೇಕು ಅನ್ನೋದು ನನಗೆ ಗೊತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ನೀಡಿದ ಹೇಳಿಕೆ ಇದೀಗ ಪರ ವಿರೋಧದ ಚರ್ಚೆಗೆ  ಕಾರಣವಾಗಿದೆ. ಈ ಬಗ್ಗೆ  ಪ್ರತಿಕ್ರಿಯಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಡಿಕೆಶಿಗೆ ತಿರುಗೇಟು ಕೊಟ್ಟಿದ್ದಾರೆ. ನಿಮಗೆ ರಾಜಣ್ಣನ ನಟ್ಟು ಬೋಲ್ಟ್ ಟೈಟ್ ಮಾಡೋಕೆ ಆಗ್ಲಿಲ್ಲ, ಸಿನಿಮಾ ತಾರೆಯರ ನೆಟ್ಟು ಬೊಲ್ಟ್ ಟೈಟ್ ಮಾಡ್ತೀರಾ?  ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಈಗ ನೀವು ಸುದೀಪ್ ದರ್ಶನ್ ಯಶ್ ಅಂತವರ ನಟ್ಟು ಬೋಲ್ಟ್ ಟೈಟ್ ಮಾಡೋಕೆ ಹೋಗಿದ್ದಾರೆ. ಸಿನಿಮಾ ನಟರು ಡಿಕೆ ಶಿವಕುಮಾರ್ ಅವರ ಗುಲಾಮರಲ್ಲ‌. ನಿಮ್ಮ ಆಶೀರ್ವಾದಿಂದ ಸಿನಿಮಾ ಗೆದ್ದಿಲ್ಲ. ನಿನ್ನ ಆಶೀರ್ವಾದದಿಂದ ಸಿನಿಮಾ ಸಕ್ಸಸ್ ಆದ್ರೆ ಹೇಳು. ಇದು ಪ್ರಜಾಪ್ರಭುತ್ವಕ್ಕೆ ಅಪಮಾನ. ಡಾ. ರಾಜ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಶ್ ಇದ್ದಂತ ಕ್ಷೇತ್ರ. ಇಂದು ಅಂಬರೀಶ್ ಇದ್ದಿದ್ರೆ ಅವರ ಭಾಷೆಯಲ್ಲೆ ಉತ್ತರ ಕೊಡ್ತಾ ಇದ್ರು ಡಿಕೆಗೆ. ಸಿನಿಮಾ ತಾರೆಯರು ಡಿಕೆ ಹೇಳಿಕೆಯನ್ನು ಖಡಾಖಂಡಿತವಾಗಿ ಖಂಡಿಸಬೇಕು. ನಮ್ಮ ಪ್ರಧಾನಿ ಎಲ್ಲಾ ಸಿನಿಮಾ ನಟರಿಗೆ ಗೌರವ ಕೊಡ್ತಾರೆ. ಇಲ್ಲಿ ಡಿಕೆ ಧಮ್ಕಿ ಹಾಕ್ತಾರೆ‌. ತಾರಾ ಅವರು ಹೇಳಿದ್ದಾರೆ ನನಗೆ ಕರೆದೆ ಇಲ್ಲ ಎಂದು ಅಂತಾ ಅಶೋಕ್ ತಿಳಿಸಿದ್ದಾರೆ.