ಮನೆ Blog ನಕ್ಸಲರು ಎಲ್ಲಿ ಶಸ್ತ್ರಾಸ್ತ್ರ ಬೀಸಾಕಿದ್ದಾರೆ ಅದನ್ನು ಹುಡುಕಿಸಬೇಕು: ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ

ನಕ್ಸಲರು ಎಲ್ಲಿ ಶಸ್ತ್ರಾಸ್ತ್ರ ಬೀಸಾಕಿದ್ದಾರೆ ಅದನ್ನು ಹುಡುಕಿಸಬೇಕು: ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ನಕ್ಸಲರು ಎಲ್ಲಿ ಶಸ್ತ್ರಾಸ್ತ್ರ ಬೀಸಾಕಿದ್ದಾರೆ ಅದನ್ನು ಹುಡುಕಿಸಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ನಕ್ಸಲರು ಶಸ್ತ್ರಾಸ್ತ್ರ ಹಸ್ತಾಂತರಿಸದ ವಿಚಾರದ ಬಗ್ಗೆ ಮಾತನಾಡಿದ ಅವರು ಅದನ್ನು ಹುಡುಕಿಸಬೇಕು. ಕಾಡಿನಲ್ಲಿ ಎಲ್ಲಿ ಬೀಸಾಕಿದ್ದಾರೆ ಗೊತ್ತಿಲ್ಲ. ಈಗಾಗಲೇ ಇಲಾಖೆಯವರು ಕೆಲಸ  ಮಾಡಿಸ್ತಾರೆ ಎಂದಿದ್ದಾರೆ.

ಶಸ್ತ್ರಾಸ್ತ್ರ ಹಸ್ತಾಂತರಿಸದ್ದಕ್ಕೆ ಬಿಜೆಪಿ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿಯವರು ಹೇಳ್ತಾ ಇರ್ತಾರೆ. ನಾವು ಮಾಡುವ ಕೆಲಸ ಮಾಡ್ತಾ ಇರ್ತೇವೆ. ಶಸ್ತ್ರಾಸ್ತ್ರ ಹುಡುಕಿಸಬೇಕು. ಅವರನ್ನ ಕೇಳುತ್ತೇವೆ. ಅವರಿಂದ ಸಹಾಯ ತೆಗೆದುಕೊಳ್ಳುತ್ತೇವೆ, ಅದೆಕ್ಕೆಲ್ಲ ಪ್ರಕ್ರಿಯೆ ಇರತ್ತೆ. ಬಿಜೆಪಿಯವರಿಗೆ ಏನು ಗೊತ್ತಿಲ್ವಾ? ಅವರು ಕೂಡ ಸರ್ಕಾರ ನಡೆಸಿದ್ದರು. ಆಗ ಪೊಲೀಸ್ ಇಲಾಖೆ ಬೇರೆ ಇರಲಿಲ್ಲ ಎಂದಿದ್ದಾರೆ.

ಇನ್ನೋರ್ವ ನಕ್ಸಲ್ ತಪ್ಪಿಸಿಕೊಂಡ ವಿಚಾರದ ಬಗ್ಗೆ ಮಾತನಾಡಿದ ಅವರು ಇವರು ಅವರನ್ನು ಹೊರಹಾಕಿದ್ದರು ಅಂತ ಇದೆ. ಅದಕ್ಕೆ ಕಾರಣ ಏನು ಅಂತ ಗೊತ್ತಿಲ್ಲ, ಅವರನ್ನು ಹುಡುಕಿಸುತ್ತೇವೆ. ಅವರು ಅದೇ ಭಾಗ, ಚಿಕ್ಕಮಗಳೂರು ಭಾಗದಲ್ಲಿದ್ದಾರೆ ಎನ್ನುವ ಮಾಹಿತಿ ಇದೆ. ಅವರನ್ನು ಹುಡುಕಿಸುವ ಕೆಲಸ ಮಾಡುತ್ತೇವೆ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇಷ್ಟೇ ಆರು ಜನ ಇದ್ದಾರೆ ಅನ್ನೋದು ಇತ್ತು. ಬೇರೆ  ರಾಜ್ಯದಿಂದಲೂ ಬಂದರೇ ಅದರ ಮೇಲೆ ನಿಗಾ ಇಡಲಾಗುತ್ತದೆ. ಹೊರಗಡೆಯಿಂದ ಒರಿಸ್ಸಾ, ಕೇರಳದಿಂದ ಬರುವ ಸಾಧ್ಯತೆ ಇರುತ್ತದೆ. ಅದರ ಮೇಲೆ ನಾವು ನಿಗಾ ಇಡುತ್ತೇವೆ.ಮುಖ್ಯಮಂತ್ರಿಗಳು ಕೂಡ ಮುಖ್ಯವಾಹಿನಿಗೆ ಬನ್ನಿ . ಕಾನೂನಿನ ಮೂಲಕ ಹೋರಾಟ ಮಾಡಿಕೊಳ್ಳಿ. ಶಸ್ತ್ರಾಸ್ತ್ರ ಇಟ್ಟುಕೊಂಡು ಹೋರಾಟ ಮಾಡೋದು ಬೇಡ ಅಂತ ಸಿಎಂ‌ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.ವಿಕ್ರಮಗೌಡ ಕುಟುಂಬ ಪರಿಹಾರ ವಿಚಾರವಾಗಿ ಮಾತನಾಡಿ ಅದನ್ನು ಕೂಡ ಪರಿಶೀಲನೆ ಮಾಡುತ್ತೇವೆ.ಆ ಪ್ರಕರಣ ಬೇರೆ, ಈ ಪ್ರಕರಣ ಬೇರೆ ಎಂದಿದ್ದಾರೆ.

ಬಿಜೆಪಿಯಲ್ಲಿ ಲಂಚ್ ಮೀಟಿಂಗ್ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಬಗ್ಗೆ ಹಾಗೂ ಹೆಚ್ಚು ಪ್ರಚಾರ ಕೊಟ್ರಲ್ಲ ಹಾಗೇ ಅವರಿಗೂ ಕೊಡಿ. ಶಾಸಕಾಂಗ ಪಕ್ಷದ ಸಭೆಯ ಅಜೆಂಡಾ ಏನು ಅಂತ ಗೊತ್ತಿಲ್ಲ.ಬಜೆಟ್ ಸಂಬಂಧ ಮುಖ್ಯವಾದ ಪಾಲಿಸಿ ವಿಚಾರ ಗಮನಕ್ಕೆ ತರಬಹುದು. ಜಾತಿ‌ ಜನ ಗಣತಿ ಬಗ್ಗೆಯೂ ಚರ್ಚೆ ಆಗಬಹುದು.ನಕ್ಸಲರ ಶಸ್ತ್ರಾಸ್ತ್ರಗಳನ್ನು ಎಲ್ಲಿ ಇಟ್ಟಿದ್ದಾರೆ ಅಂತ ಅವರಿಂದ ಕೇಳಿ ಹುಡುಕುವ ಕೆಲಸ ಪೊಲೀಸರು ಮಾಡ್ತಾರೆ. ಬಿಜೆಪಿಯವ್ರು ಈ ಬಗ್ಗೆ ಟೀಕೆ ಮಾಡೋದೇನು, ಅವರಿಗೆ ಇದೆಲ್ಲ ಗೊತ್ತಿಲ್ವಾ, ಅವರೂ ಅಧಿಕಾರದಲ್ಲಿ ಇದ್ರಲ್ಲ.ಮತ್ತೊಬ್ಬ ನಕ್ಸಲ್ ಚಿಕ್ಕಮಗಳೂರು ಕಾಡಲ್ಲೇ ಎಲ್ಲೋ ಇದ್ದಾರೆ ಅಂತ ಮಾಹಿತಿ ಇದೆ. ಅವರನ್ನೂ ಹುಡುಕುವ ಕೆಲಸ ಆಗಲಿದೆ. ನಮಗೆ ಬಂದ ಮಾಹಿತಿ ಪ್ರಕಾರ ಈಗ ಶರಣಾದವರೇ ಕೊನೆಯ ನಕ್ಸಲರು. ಹೊರಗಿಂದ ಬಂದರೆ ಅದನ್ನು ಮಾನಿಟರ್ ಮಾಡಿಸ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ನಕ್ಸಲರು ಯಾರೂ ಇಲ್ಲ. ವಿಕ್ರಮ್ ಗೌಡ ಕುಟುಂಬಕ್ಕೆ ಪರಿಹಾರ ಕುರಿತು ಪರಿಶೀಲನೆ ಮಾಡ್ತೇವೆ. ಅದೇ ಬೇರೆ ಪ್ರಕರಣ ಇದೇ ಬೇರೆ ಪ್ರಕರಣ ಎಂದರು.

ಶಾಸಕರಿಗೆ ಅನುದಾನ ಕೊಡೋ ಬಗ್ಗೆ ಸಿಎಂ ಈಗಾಗಲೇ ಸಿಎಲ್ ಪಿಯಲ್ಲಿ ಹೇಳಿದ್ದಾರೆ. ನಾವು ನಮ್ಮ ರಾಜ್ಯದಿಂದ ಈಗಾಗಲೇ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದೇವೆ. ಈಗ ಬೇರೆ ರಾಜ್ಯದವ್ರೂ ಸೇರಿ ಸಹ ದನಿ ಎತ್ತಬೇಕು ಅಂತ ಚರ್ಚೆ ಆಗಿದೆ. ಅದನ್ನು ಸಿಎಂ ಯಾವ ರೀತಿ ಚರ್ಚೆ ಮಾಡಿ ತೀರ್ಮಾನ ತಗೋತಾರೋ ನೋಡಬೇಕು ಎಂದು ತಿಳಿಸಿದರು.