ಮನೆ Latest News ಭೂಕುಸಿತ ಪೀಡಿತ ವಯನಾಡಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ಭೂಕುಸಿತ ಪೀಡಿತ ವಯನಾಡಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

0

ವಯನಾಡು: ಭೂಕುಸಿತ ಪೀಡಿತ ದೇವರ ನಾಡು ಕೇರಳದ ವಯನಾಡು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿದರು. ವಿಶೇಷ ವಿಮಾನದ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೇರಳದ ಕಣ್ಣೂರು ಏರ್ಪೋಟ್ ಗೆ ಆಗಮಿಸಿದರು. ಮೋದಿ ಆಗಮಿಸುತ್ತಿದ್ದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಗತಿಸಿದರು.ಇದೇ ಸಂದರ್ಭ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಥ್ ನೀಡಿದ್ರು.

ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೂಕುಸಿತ ಪೀಡಿತ ವಯನಾಡಿನ ಮುಂಡಕೈ-ಚುರಲ್ಮಲಾ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಇದೇ ವೇಳೆ  ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರ ಸಚಿವ ಸುರೇಶ್ ಗೋಪಿ  ಮತ್ತಿತರರು ಹೆಲಿಕಾಪ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಯಲ್ಲಿದ್ದರು.

ವೈಮಾನಿಕ ಸಮೀಕ್ಷೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಚೂರಲ್‌ಮಾಲ ಪ್ರದೇಶದಲ್ಲಿ ಸ್ವತಃ ತಾವೇ  ಸುತ್ತಾಡಿ ಅಧಿಕಾರಿಗಳಿಂದ ಅನಾಹುತಕ್ಕೆ ಸಂಬಂಧಪಟ್ಟಂತೆ ಮಾಹಿತಿ ಪಡೆದರು. ಅಲ್ಲಗೇ ನಿರಾಶ್ರಿತರ ಕೇಂದ್ರಕ್ಕೂ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭೂಕುಸಿತ ಸಂತ್ರಸ್ತರ ಜತೆ ಸಂವಾದ ನಡೆಸಿದರು. ಇದೇ ವೇಳೆ ಭೀಕರ ದುರಂತದಲ್ಲಿ ತಮ್ಮ ಹೆತ್ತವರನ್ನು ಕಳೆದುಕೊಂಡ ಮಕ್ಕಳನ್ನು ಎತ್ತಿಕೊಂಡು ಪ್ರೀತಿಯಿಂದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿಸಿದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ ಈ ದುರಂತ ಸಹಜವಾಗಿಲ್ಲ. ಕೇಂದ್ರ ಸರ್ಕಾರದಿಂದ ಅಗತ್ಯವಾಗುವ ಎಲ್ಲಾ ಸಹಕಾರ ಕೇರಳಕ್ಕೆ ನೀಡೋದಾಗಿ ತಿಳಿಸಿದರು. ನಾನು ಭೂಕುಸಿತ ದುರಂತ ನಡೆದ ದಿನದಿಂದಲೂ ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಘಟನೆ ನಡೆದ ಸ್ಥಳ ಖುದ್ದು ನೋಡಿದ್ದೇನೆ. ದುರಂತದಿಂದಾಗಿ ಸಾವಿರಾರು ಕುಟುಂಬಗಳ ಕಸನು ಛಿದ್ರವಾಗಿದೆ. ನಾನು ಆಸ್ಪತ್ರೆಯಲ್ಲಿರುವ ದುರಂತದಲ್ಲಿ ಗಾಯಗೊಂಡಿರುವವರನ್ನು ಹಾಗೂ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿಸಿದ್ದೇನೆ ಎಂದರು.

ವಯನಾಡು ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸೇನಾ ಸಿಬ್ಬಂದಿಗೆ ಭಾವನಾತ್ಮಕ ವಿದಾಯ

ವಯನಾಡು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 413ಕ್ಕೆ ಏರಿಕೆಯಾಗಿದೆ. ಇನ್ನು ಕೂಡ 150 ಕ್ಕೂ ಹೆಚ್ಚು  ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಬಗ್ಗೆ ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಭಾರತೀಯ ಸೇನೆ, ಪೊಲೀಸರು, ಸ್ಥಳೀಯರು, ಸಂಘ ಸಂಸ್ಥೆಗಳ ನೆರವಿನಿಂದ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ನಿನ್ನೆ 1 ಸಾವಿರಕ್ಕೂ ಹೆಚ್ಚು ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ವಯನಾಡಿನ ಚಾಲಿಯಾರ್ ನದಿ ಹಾಗೂ ಮಲಪ್ಪುರಂ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ರು. ಇನ್ನು  ಕಾರ್ಯಾಚರಣೆಯ ಸಮಯದಲ್ಲಿ ಒಟ್ಟು 78 ಮೃತದೇಹಗಳು ಮತ್ತು 150ಕ್ಕೂ ಹೆಚ್ಚು ದೇಹದ ಭಾಗಗಳು ಪತ್ತೆಯಾಗಿವೆ ಎನ್ನಲಾಗಿದೆ. ನದಿಗಳಲ್ಲಿಯೂ ದೇಹದ ಭಾಗಗಳು ಪತ್ತೆಯಾಗಿದ್ದು, ಶವಗಳ ಗುರುತು ಪತ್ತೆಗೆ ಡಿಎನ್ ಎ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಕೆಲವರು ತಮ್ಮ ಕುಟುಂಬದ ಎಲ್ಲರನ್ನೂ ಕಳೆದುಕೊಂಡಿದ್ದು ಅಂತಹವರ ನೋವು ಹೇಳ ತೀರದಾಗಿದೆ. ಅದರಲ್ಲೂ ಕೆಲವರ ಕುಟುಂಬದ ಸದಸ್ಯರ ಮೃತದೇಹ ಕೂಡ ಪತ್ತೆಯಾಗಿಲ್ಲ. ಒಂದಷ್ಟು ಮಂದಿ ಶೋಧ ಕಾರ್ಯಾಚರಣೆ ನಡೆಯುವ ಜಾಗದಲ್ಲಿ ತಮ್ಮ ಮೃತಹೇದ ಸಿಗುತ್ತೋ ಏನೋ ಎಂದು ಕಾಯುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ.

ಇದರ ಮಧ್ಯೆ 10 ದಿನಗಳ ಕಾಲ ಊಟ, ನಿದ್ರೆ ಬಿಟ್ಟು ನಿರಂತರವಾಗಿ ಭಾರತೀಯ ಸೇನೆ ಭೂಕುಸಿತದಲ್ಲಿ ಸಿಲುಕಿದವರ ರಕ್ಷಣೆಗೆ ನಿಂತಿತ್ತು. ನಿರಂತರವಾಗಿ ಹಗಲು ರಾತ್ರಿ ಎನ್ನದೇ ಒಂದು ಕ್ಷಣವೂ ತಮ್ಮ ಬಗ್ಗೆ ಯೋಚಿಸದೇ ನೊಂದವರಿಗೆ ಸ್ಪಂದಿಸುತ್ತಿದ್ದರು ನಮ್ಮ ಹೆಮ್ಮೆಯ ಯೋಧರು. ಅದರಲ್ಲೂ ಕೇವಲ 16 ಗಂಟೆಗಳಲ್ಲಿ ಬೈಲಿ ಸೇತುವೆ ನಿರ್ಮಾಣ ಮಾಡುವ ಅವರ ಶ್ರಮ ಪದಗಳಲ್ಲಿ ವರ್ಣಿಸಲಾಗದ್ದು. ನಿನ್ನೆ 10 ದಿನಗಳ ನಿರಂತರ ಕಾರ್ಯಾಚರಣೆಯ ಬಳಿಕ ಭಾರತೀಯ ಸೇನೆ ತೆರಳಿದ್ದು ಈ ವೇಳೆ ಸೇನಾ ಸಿಬ್ಬಂದಿಗೆ ವಯನಾಡಿ ಜನ ಧನ್ಯತಾ ಭಾವದಿಂದ ಭಾವಾನಾತ್ಮಕ ವಿದಾಯ ಹೇಳಿದ್ರು.

10 ದಿನಗಳ ತಮ್ಮರೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬಂತೆ ತಮ್ಮ ಜೀವವನ್ನೇ ಒತ್ತೆಯಿಟ್ಟು ಸ್ಥಳೀಯರಿಗೆ ಬೆಂಬಲವಾಗಿ ನಿಂತ ಸೇನಾ ಸಿಬ್ಬಂದಿಗೆ  ಕೃತಜ್ಞತೆ ಮತ್ತು ಮೆಚ್ಚುಗೆಯ ಮಹಾ ಪ್ರವಾಹವೇ ಹರಿದು ಬಂತು. ಕೊಚ್ಚಿ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಸೇನಾ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಈ ವೇಳ ಮಾತನಾಡಿದ ಅವರು”ಈ ದುರಂತದ ರಕ್ಷಣಾ ಕಾರ್ಯಾಚರಣೆಯಲ್ಲಿ ನಮಗೆ ಸಹಾಯ ಮಾಡಿ, ನಮಗೆ ಬೆನ್ನೆಲುಬಾಗಿ  ನಿಂತ ನಮ್ಮ ಕೆಚ್ಚೆದೆಯ ವೀರರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ.ನಿಮ್ಮ ಧೈರ್ಯ ಮತ್ತು ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇನ್ನು ಯೋಧರು ತೆರಳುತ್ತಿದ್ದಂತೆ ಸೈನಿಕರು ಸ್ಥಳೀಯರು, ಅಧಿಕಾರಿಗಳು , ಇತರೆ ರಕ್ಷಣಾ ಕಾರ್ಯಕರ್ತರು ಬೀದಿಗಳಲ್ಲಿ ಸಾಲುಗಟ್ಟಿ ನಿಂತು ತಮ್ಮ ಹೃತ್ಪೂರ್ವಕ ಧನ್ಯವಾದಗಳು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸಿದರು. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲ ವೈರಲ್ ಆಗಿದೆ.