ಮನೆ Latest News ಮೋದಿಯವರು ದೇಶವನ್ನು ಮುನ್ನೆಡೆಸುತ್ತಿದ್ದಾರೆ.ಅವರಿಗೆ ಎದುರು ನಡೆಯೋ ವ್ಯಕ್ತಿ ಯಾರೂ ಇಲ್ಲ ; ಮಾಜಿ ಪ್ರಧಾನಿ ದೇವೆಗೌಡ...

ಮೋದಿಯವರು ದೇಶವನ್ನು ಮುನ್ನೆಡೆಸುತ್ತಿದ್ದಾರೆ.ಅವರಿಗೆ ಎದುರು ನಡೆಯೋ ವ್ಯಕ್ತಿ ಯಾರೂ ಇಲ್ಲ ; ಮಾಜಿ ಪ್ರಧಾನಿ ದೇವೆಗೌಡ ಹೇಳಿಕೆ

0

 

ಬೆಂಗಳೂರು; ಜೆಡಿಎಸ್ ಪಕ್ಷದ ಜನರೊಂದಿಗೆ ಜನತಾದಳ ಅಭಿಯಾನಕ್ಕೆ ಇಂದು ಬೆಳಗ್ಗೆ 11ಗಂಟೆಗೆ ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೆಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರುಜನರೊಂದಿಗೆ ಜನತಾ ದಳ ಅಭಿಯಾನದ ಮೂಲಕ ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡಲಿದ್ದಾರೆ. 58 ದಿನಗಳ ಕಾಲ ರಾಜ್ಯ ಪ್ರವಾಸ ಮಾಡಲಿದ್ದಾರೆ. ಪಕ್ಷ ಬಲವರ್ಧನೆ ಹಿನ್ನೆಲೆ ಜನರೊಂದಿಗೆ ಜನತಾದಳ ಅಭಿಯಾನ ನಡೆಯಲಿದೆ.

ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ  ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಭಾಷಣ  ನಿಖಿಲ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಮೂರು ಸಲ ಚುನಾವಣೆಗೆ ನಿಂತು ಸೋತ್ರು ಕೂಡ ಧೃತಿಗೆಡದೇ ರಾಜಕೀಯ ಬೇಡ ಎನ್ನದೇ ರಾಜಕೀಯದಲ್ಲಿ ಮತ್ತೆ ತೊಡಗಿಸಿಕೊಳ್ಳುತ್ತಿದ್ದಾರೆ. ಇದನ್ಮ ನೋಡಿದ್ರೆ ನಂಗೆ ಬಹಳ ಆನಂದ ಆಗುತ್ತೆ. ಬೆಳಗ್ಗೆ ಕಾಲಭೈರವೇಶ್ವರನ ಆರ್ಶೀವಾದ ಪಡೆದು ಈ ಒಂದು ವೇದಿಕೆಗೆ ಬಂದಿದ್ದಾರೆ. ನನ್ಮ ಮೊಮ್ಮಗ ಅಂತಾ ನಾನು ಈ ಮಾತು ಹೇಳುತ್ತಿಲ್ಲ. ಯಾರಾದ್ರೂ ಮೂರು ಸಲ ಸೋತಿದ್ದು ಪಕ್ಷದ ಜವಾಬ್ದಾರಿ ಕೆಲಸ ಮಾಡಿ ಅಂದ್ರೆ ಮಾಡುತ್ತಿರಲಿಲ್ಲ. ಈ ಚಿಕ್ಕ ವಯಸ್ಸಿನಲ್ಲಿಯೇ ದೈವದಲ್ಲಿ ನಂಬಿಕೆಯಿಟ್ಟು ಜನರೊಂದಿಗೆ ಜನತಾದಳ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ ಎಂದರು.

ನಾವು ಅಧಿಕಾರಕ್ಕೆ ಬರಬೇಕೆನ್ನುವುದು ನಮ್ಮ ಬಯಕೆ. ಆದ್ರೆ ಅಧಿಕಾರಕ್ಕೆ ಬರೋಕ್ಕೆ ನಮ್ಮ ಎದುರಾಳಿ ಯಾರು..?. ಯಾವ ರೀತಿ ಸರ್ಕಾರ ಜನತೆಗೆ ಆಡಳಿತ ಕೊಡ್ತಿದೆ. ಇದರ ಬಗ್ಗೆ ನಾನು ಚರ್ಚೆ ಮಾಡೋಕ್ಕೆ ಹೋಗಲ್ಲ. ಇದರ ಬಗ್ಗೆ ಪ್ರತಿಯೊಬ್ಬರಿಗೂ ಅರ್ಥ ಆಗಿದೆ. ಈ‌ ದೇಶದಲ್ಲಿ ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ. ಬಿಜೆಪಿಯೂ ಕೂಡ ಒಂದು ರಾಷ್ಟ್ರೀಯ ಪಕ್ಷ. ಇನ್ನುಳಿದ ಪಕ್ಷಗಳೆಲ್ಲವೂ ಪ್ರಾದೇಶಿಕ ಪಕ್ಷ. ನಾವು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ.  ಕಾಂಗ್ರೆಸ್ ಕೇವಲ 3 ರಾಜ್ಯದಲ್ಲಿ ಅಧಿಕಾರದಲ್ಲಿದೆ. ಇನ್ನುಳಿದ ಕಡೆ ಪ್ರಾದೇಶಿಕ ಪಕ್ಷ ಹಾಗೂ ಬಿಜೆಪಿಯಿದೆ. ಬಿಜೆಪಿ ನಾಯಕರಾಗಿ ನರೇಂದ್ರ ಮೋದಿ ಇದ್ದಾರೆ. ಮೋದಿಯವರು ದೇಶವನ್ನು ಮುನ್ನೆಡುಸುತ್ತಿದ್ದಾರೆ.ಅವರಿಗೆ ಎದುರು ನಡೆಯೋ ವ್ಯಕ್ತಿ ಯಾರೂ ಇಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಎರಡು ವರ್ಷ ಅಧಿಕಾರ ಪೂರೈಸಿದೆ, ಐದು ವರ್ಷ ಪೂರೈಸೋ ಬಗ್ಗೆ ಆಸೆ‌ ಇರುತ್ತದೆ. ಅದರ ಬಗ್ಗೆ ನಾನು ಚರ್ಚೆ ಮಾಡಲ್ಲ. ಕುಮಾರಸ್ವಾಮಿ ಇಡೀ‌ ಹಿಂದೂಸ್ತಾನದಲ್ಲಿರೋ ರಾಜ್ಯದ ಮುಖ್ಯಮಂತ್ರಿಗಳಿಗೆ ಸಹಕಾರ ಕೊಡ್ತಿದ್ದಾರೆ. ಅದನ್ನ‌‌ ರಾಜ್ಯ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮ ಪಕ್ಷದ ಶಕ್ತಿ ಹೆಚ್ಚು ಮಾಡೋದಕ್ಕೆ ಮುಂದಾಗಿದ್ದಾರೆ. ಇದರ‌ ಹೊಣೆಗಾರಿಕೆ ಸುರೇಶ್ ಬಾಬು, ‌ನಾಡಗೌಡರು, ನಿಖಿಲ್ ಕುಮಾರಸ್ವಾಮಿ ಹೊರಬೇಕು. ಇವರು ಮೂರು ಜನರೇ ‌ಜವಾಬ್ದಾರಿ‌ನೋಡಿಕೊಳ್ಳಬೇಕು. ಶಾಸಕರು, ‌ಮಾಜಿ‌ ಶಾಸಕರು ಎಲ್ಲ‌ ಘಟಕಗಳು  ಕಾರ್ಯಕ್ರಮದಲ್ಲಿ ಭಾಗಿಯಾಗಿ  ಜಿಲ್ಲಾ ಪ್ರವಾಸಕ್ಕೆ ಪಕ್ಷ ಬಂದಾಗ ಸರಿಯಾಗಿ‌ ನೋಡಿಕೊಳ್ಳಬೇಕು. ಹಿಂದೆ ದೊಡ್ಡ ಕಾರ್ಯಕ್ರಮದ ಮೂಲಕ ರಾಜ್ಯದ ಜನರಿಗೆ ನೀರು ಕೊಡಿಸಲು ಹೋರಾಟ ಮಾಡಿದ್ದೇವು. 28 ಸಾವಿರ ಕೋಟಿ‌ಸಾಲ ಮನ್ನಾ ಮಾಡಿದ್ದೇವೆ. ಕೇವಲ‌ ಎರಡು‌‌ ಸಾವಿರ ಕಾರ್ಯಕ್ರಮ ಮಾಡಿ ರಾಜ್ಯಕ್ಕೆ ದೊಡ್ಡ ಪೆಟ್ಟು ನೀಡಿದ್ದಾರೆ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡ್ತಿದ್ದೇವೆ. 2028 ರ‌ ಚುನಾವಣೆ ವೇಳೆ ಮಹಿಳಾ ಮೀಸಲಾತಿ‌ ಸಿಗಬೇಕು. 79 ಜನರು ಮಹಿಳೆಯರು ಅಧಿಕಾರಕ್ಕೆ ಬರಬೇಕು. ನಾನು ಹೆಮ್ಕಳ್ಳ ವಿಭಾಗದ ಮುಖ್ಯಸ್ಥೆ ರಶ್ಮಿ,‌ರಮೇಶ್ ಗೌಡ‌ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಇಡೀ ರಾಜ್ಯದಿಂದ‌ ಬಂದಿರೋ ಯುವಕರಿಗೆ ಕೈ ಮುಗಿದು‌ ಬೇಡಿಕೊಳ್ಳುತ್ತೇನೆ ಎಂದರು.

ಸೋಲು ಗೆಲುವಿಗೆ ಬುನಾದಿ,‌ ಎದೆಗುಂದದೇ ಕೆಲಸ ಮಾಡಿ. ನನಗೆ  92 ಮುಗಿದಿದೆ, ಸ್ವ ಕಾಲು ತೊಂದರೆ ಇದೆ. ಆದ್ರೆ ‌ಬುದ್ದಿಗೆ ಯಾವ ತೊಂದರೆ ಇಲ್ಲ. ನಮ್ಮ ಮನೆಗೆ ಯಾರೇ ಬಂದರೂ, ಎಷ್ಟೋತ್ತಿಗೆ ಬಂದರೋ ತಿರಸ್ಕಾರ ಭಾವನೆಯಿಂದ‌ ನೋಡಿಲ್ಲ . 42 ಕಡೆ ನಾವು ಹಿಂದಿನ‌ ಚುನಾವಣೆ ವೇಳೆ ಬಯಲು ಕಾರ್ಯಕ್ರಮ ಮಾಡಿದ್ವಿ. ಸೋಲಿನ ಬಗ್ಗೆ ಚರ್ವೆ ಬೇಡ,‌ ಸೋಲಿಗೆ ಎದೆಗುಂದೋದು ಬೇಡ. ನಿಖಿಲ್ ಕುಮಾರಸ್ವಾಮಿ ದೇವರ ಮುಂದೆ ಹೋಗಿ ಶಕ್ತಿ‌ ಕೊಡು ಅಂತ ಕೇಳ್ತಾರೆ. ಜನರ ಪರವಾಗಿ ಇರೋದಕ್ಕೆ ಪಕ್ಷ ಉಳಿದಿದೆ. ಈ ಪಕ್ಷ ಎಂದು ನಾನು ಹೋದ ಮೇಲೂ ಪಕ್ಷ ಉಳಿಯುತ್ತದೆ. ಪಕ್ಷ ಮುಗಿಸುತ್ತೇವೆ ಎನ್ನೋ ಮಹಾನುಭಾವ ಇಲ್ಲ. ಇದು ಕುಟುಂಬಕ್ಕೆ‌ ಸೇರಿದ ಪಕ್ಷ ಅಲ್ಲ‌. ಸ್ವಲ್ಪ ಆ ಮಾತು ಆಡೋರು ಅವರ ಮನಸ್ಸಿಗೆ ಪ್ರಶ್ನೆ ಹಾಕಿಕೊಳ್ಳಬೇಕು. ಈ ಪಕ್ಷದಿಂದ ಬಂದು ಯಾರು ಯಾವ ಅಧಿಕಾರ‌ ಅನುಭವಿಸುತ್ತಿದ್ದಾರೆ. ಅನುಭವಿಸಿದ್ದಾರೆ ಅನ್ನೋದನ್ನ ನಾನು ನೆನಪಿಸೋಕೆ ಹೋಗಲ್ಲ. ಕುಳಿತುಕೊಳ್ಳಲು ಜಾಗ ಕೊಡದೇ ಇದ್ದದ್ದು ನೋಡಿದ್ದೇನೆ ಎಂದ್ರು.