ಮನೆ Latest News ನಾಗಮಂಗಲ ಗಲಭೆ ವಿಚಾರ; ಬಿಜೆಪಿ, ಜೆಡಿಎಸ್ ನಾಯಕರಿಗೆ ಸಚಿವ ಸಂತೋಷ ಲಾಡ್ ತಿರುಗೇಟು

ನಾಗಮಂಗಲ ಗಲಭೆ ವಿಚಾರ; ಬಿಜೆಪಿ, ಜೆಡಿಎಸ್ ನಾಯಕರಿಗೆ ಸಚಿವ ಸಂತೋಷ ಲಾಡ್ ತಿರುಗೇಟು

0

ಬೆಂಗಳೂರು; ನಾಗಮಂಗಲ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ  ಬಿಜೆಪಿ, ಜೆಡಿಎಸ್ ನಾಯಕರಿಗೆ ಸಚಿವ ಸಂತೋಷ ಲಾಡ್ ತಿರುಗೇಟು ಕೊಟ್ಟಿದ್ದಾರೆ. ಇದು ಒಂದು ಕೆಟ್ಟ ಘಟನೆ.ಕರ್ನಾಟಕ ಅಲ್ಲ ದೇಶದಲ್ಲೇ ಇಂತಹ ಘಟನೆ ಆಗಬಾರದು.ಯಾರು ಮಾಡಿದ್ದಾರೆ ಅವರನ್ನ ಹುಡುಕಬೇಕು.ಕುಮಾರಸ್ವಾಮಿ ಖಂಡನೆ ಮಾಡ್ತಿದ್ದಾರಲ್ಲ.ಅವರನ್ನ ಹಿಡಿದು ಶಿಕ್ಷೆ ಕೊಡಬೇಕು ಅಷ್ಟೇ.ಬಿಜೆಪಿ ನಾಯಕರಿಗೆ ಇದು ಬಿಟ್ಟು ಬೇರೆ ಏನಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಮನ ಟೆಂಪಲ್ ಸೋರ್ತಿದೆ.3500 ಕೋಡಿ ತೆಗೆದು ಟೆಂಪಲ್ ಕಟ್ಟಿದ್ದಾರೆ.ನಮ್ಮಪ್ಪನು ಇಟ್ಟಿಗೆ ಕೊಟ್ಟಿದ್ದಾನೆ.ಸೋರ್ತಿದೆಯಲ್ಲ ಯಾಕೆ ಅವರು ಮಾತನಾಡ್ತಿಲ್ಲ.ಹಿಂದುಗಳ ಸಮಸ್ಯೆ ಬಗ್ಗೆ ಯಾಕೆ ಮಾತನಾಡ್ತಿಲ್ಲ.ಹಿಂದೂ ಮಕ್ಕಳಿಗೆ ಕೆಲಸ ಕೊಡ್ತಾರೆ.ದೇಶದಲ್ಲಿ ಹಿಂದು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಆಗ್ತಿವೆ.ಇದರ ಬಗ್ಗೆ ಅವರು ಮಾತನಾಡ್ತಾರಾ.ಯಾಕೆ ಬಿಜೆಪಿಯವರು ಅದರ ಬಗ್ಗೆ ಮಾತನಾಡಲ್ಲ ಎಂದು ಪ್ರಶ್ನಿಸಿದ್ದಾರೆ.

ರೈಲ್ವೆ ಅಕ್ಸಿಂಡೆಂಟ್ ಎಷ್ಟು ಆಗಿವೆ.ರೈಲ್ವೆ ಹಳಿಗಳು ತಪ್ಪಿವೆ ಕೇಳಿ ಅವರನ್ನ ಮಾತನಾಡ್ತಾರಾ.ಸೆಬಿಯಲ್ಲಿ ದೊಡ್ಡ ಹಗರಣ ಆಗಿದೆಯಲ್ಲ.ಕೇಳಿ ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೊಡ್ತಾರಾ?ನೀವು ಅವರನ್ನ ಕೇಳಿ ಕೊಡ್ತಾರಾ?.ಸುಮ್ಮನೆ ಹಿಂದೂಗಳು ಅಂತ ಹೇಳ್ತಾರೆ.ಹಿಂದೂ ಮುಸ್ಲಿಂ ಎಲ್ಲರು ಒಂದೇ ಆಲ್ವಾ.ಹಿಂದೂಗಳನ್ನೇ ಯಾಕೆ ಸಪ್ರೇಟ್ ಮಾಡ್ತಾರೆ.ಯಾಕೆ ಹಿಂದೂಳ ಸಬ್ ಕ್ಯಾಸ್ಟ್ ಬಗ್ಗೆ ಮಾತನಾಡ್ತಿಲ್ಲ.ಅಲ್ಲಿ ಒಬಿಸಿ, ಬೇರೆ ಬೇರೆಯವರು ಇಲ್ವಾ.ಬರಿ ಹಿಂದೂ ಅಂದರೆ ಹೇಗೆ ಎಂದು ಸಂತೋಷ್ ಲಾಡ್ ಪ್ರಶ್ನೆ ಮಾಡಿದ್ದಾರೆ.

ಮಂಡ್ಯದಲ್ಲಿ  ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ; ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ

ಮಂಡ್ಯ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ನಾಗಮಂಗಲದ ಮಂಡ್ಯ ಸರ್ಕಲ್ ನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಸಾಗುತ್ತಿತ್ತು. ಇದೇ ಸಂದರ್ಭದಲ್ಲಿ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮುಸ್ಲಿಂ ಯುವಕರು ಹಿಂದೂ ಯುವಕರು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದು ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು  ಗಾಯಗೊಂಡಿದ್ದಾರೆ.

ಕಲ್ಲು ತೂರಾಟ ನಡೆಸಿದ್ದು ಮಾತ್ರವಲ್ಲದೇ ಹಲವು ವಾಹನಗಳನ್ನು ಕೂಡ ಜಖಂಗೊಳಿಸಲಾಗಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೆ ಸುಮ್ಮನಾಗದ ಪುಂಡರು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಗಲಾಟೆಯಲ್ಲಿ ಮುಸ್ಲಿಂ ಯುವಕರು ತಲವಾರು ಪ್ರದರ್ಶಿಸಿದ್ದು ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಮಂಡ್ಯ ಸರ್ಕಲ್ ನಲ್ಲಿ ಮುಸ್ಲಿಂ ಯುವಕರ ಗುಂಪು ಪೆಟ್ರೋಲ್ ಬಾಂಬ್ ಎಸೆದ ಪರಿಣಾಮ ರಸ್ತೆ ಬದಿಯಲ್ಲಿದ್ದ ಅಂಗಡಿಗಳು ಧ್ವಂಸವಾಗಿವೆ.

ಇನ್ನು ಮೈಸೂರ್ ರೋಡಿನ ಗುಜರಿ ಅಂಗಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ನಾಗಮಂಗಲದ ಬದರಿಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೈಸೂರು ರಸ್ತೆಯಲ್ಲಿರುವ ದರ್ಗಾದ ಬಳಿ ಬರುತ್ತಿದ್ದಂತೆ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. ದರ್ಗಾ ಬಳಿ ತಮಟೆ ಬಡಿಯಬೇಡಿ, ಡೊಳ್ಳು ಬಾರಿಸಬೇಡಿ, ಶಬ್ದ ಮಾಡಬೇಡಿ ಎಂದು ಕಿರಿಕ್ ತೆಗೆದು ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.ಇನ್ನು ಕಲ್ಲು ತೂರಾಟ ಮಾಡಿದವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಹಿಂದೂಗಳು ನಾಗಮಂಗಲ ಪೊಲೀಸ್‌ ಠಾಣೆಯ ಎದುರು ಭಾರೀ ಪ್ರತಿಭಟನೆ ನಡೆಸಿದ್ದಾರೆ.  ಗಣೇಶ ಮೂರ್ತಿಯನ್ನು ವಿಸರ್ಜಿಸಿದೇ ಠಾಣೆಯ ಮುಂದೆಯೇ ಇರಿಸಿ ಭಾರೀ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಕಳೆದ ವರ್ಷವೂ ಇದೇ ರೀತಿ ಕಲ್ಲು ತೂರಾಟ ನಡೆದಿತ್ತು ಎನ್ನಲಾಗಿದೆ.

ಮುಸ್ಲಿಂ ಯುವಕರು ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿರುವ ವೀಡಿಯೋಗಳು ಇದೀಗ ಸೋಷಿಯಸ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ಜೋರಾಗಿ ಕೇಳಿ ಬರುತ್ತಿದೆ. ಸದ್ಯ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.