ಮನೆ Latest News ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿಯ ಸಾವು ಪ್ರಕರಣ: ಸಿಎಂ, ಡಿಸಿಎಂ ನೇರ ಹೊಣೆ ಎಂಬ ಬಿಜೆಪಿ...

ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿಯ ಸಾವು ಪ್ರಕರಣ: ಸಿಎಂ, ಡಿಸಿಎಂ ನೇರ ಹೊಣೆ ಎಂಬ ಬಿಜೆಪಿ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

0

ಬೆಂಗಳೂರು; ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿಯ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ, ಡಿಸಿಎಂ ನೇರ ಹೊಣೆ ಎಂಬ ಬಿಜೆಪಿ ಆರೋಪಕ್ಕೆ  ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ಕೊಟ್ಟಿದ್ದಾರೆ. ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಸೀಮಿತ ಅಲ್ಲ. ಆ ತರಹ ಯಾರು ಹೇಳಿಕೆ ನೀಡಿಲ್ಲ. ಖಾಸಗಿ ಕಾರ್ಯಕ್ರಮ ಆಗಿರೋದ್ರಿಂದ ಜವಾಬ್ದಾರಿ ತೆಗೆದುಕೊಳ್ಳಲು ಆಗಲ್ಲ ಎಂದಿದ್ದಾರೆ.ಆದ್ರೆ ಸಿಎಂ ಹೇಳಿಕೆ ತಪ್ಪಾಗಿ ಅರ್ಥೈಸಲಾಗುತ್ತದೆ. ಅದನ್ನು ಬೇರೆ ರೀತಿ ತಿರುಚುವದರಲ್ಲಿ ನಿಸ್ಸೀಮರು.ಸುಳ್ಳು ಸತ್ಯ ಮಾಡ್ತಾರೆ, ಸತ್ಯ ಸುಳ್ಳು ಮಾಡ್ತಾರೆ. ಬಿಜೆಪಿಯವರಿಗೆ ಅದು ಬಿಟ್ಟು ‌ಬೇರೆ ಕೆಲಸ ಅವರಿಗಿಲ್ಲ ಎಂದಿದ್ದಾರೆ.

ಸಿಎಂ, ಡಿಸಿಎಂ ದೆಹಲಿ ಪ್ರವಾಸ ವಿಚಾರದ ಬಗ್ಗೆ ಮಾತನಾಡಿದ ಅವರು ಯಾಕೆ ಹೋಗಿದ್ದಾರೆ ಎನ್ನೋ ಮಾಹಿತಿ ನನಗೆ ಇಲ್ಲ. ಆರ್‌ಸಿಬಿ ವಿಚಾರದ ವಿವರಣೆ ನೀಡಲು ಭೇಟಿ ನೀಡಿರಬಹುದು. ಸಚಿವ ಸಂಪುಟ ಪುನರ್ ರಚನೆ ಬಗ್ಗೆಯೂ ಮಾಹಿತಿ ಇಲ್ಲ ಎಂದ ಅವರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರ ಮನೆಗೆ ಅಶೋಕ್ ಭೇಟಿ ವಿಚಾರದ ಬಗ್ಗೆ ಮಾತನಾಡಿ ಹೋಗಲಿ, ಭೇಟಿ ನೀಡಲಿ, ಆದ್ರೆ ರಾಜಕೀಯ ಮಾಡಬೇಡಿ. ಇಷ್ಟು ದಿನ ಹೋಗದೇ ಈಗ ಹೋಗಿ ರಾಜಕೀಯ ಮಾಡೋಕೆ ಹೋಗಬೇಡಿ ಎಂದಿದ್ದಾರೆ.

ವಿಧಾನಸೌಧ ಮೆಟ್ಟಿಲುಗಳಿಗೆ ಸಿಎಂ ಸೀಮಿತ ಅಲ್ಲ .ನಾವ್ಯಾರು ಕೂಡ ಅದನ್ನು ಹೇಳಿಯೂ ಇಲ್ಲ. ಬಹಳ ಸ್ಪಷ್ಟವಾಗಿ ಮುಖ್ಯಮಂತ್ರಿಗಳು ಹೇಳಿದ್ದು ಖಾಸಗಿ ಕಾರ್ಯಕ್ರಮಗಳ ಆಯೋಜನೆ ಮಾಡುವಾಗ ಅವರು ಪತ್ರಗಳು ಕೊಟ್ಟರೆ ಭದ್ರತೆ ಕೊಡುವುದು ಸಿಬ್ಬಂದಿ ಜವಾಬ್ದಾರಿ ಅಷ್ಟೇ ಎಂದು ಹೇಳಿದ್ದಾರೆ . ಕಾನೂನು ವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಅಲ್ಲ ಎಂದು ಸಿಎಂ ಹೇಳಿಲ್ಲ . ಇದನ್ನು ತಿರುಚಿ ಬೇರೆ ರೀತಿಯಾಗಿ ಬಿಂಬಿಸುವುದು ತಪ್ಪಾಗುತ್ತದೆ. ಬಿಜೆಪಿಯವರು ಇದರಲ್ಲಿ ನಿಪುಣರು ಅಲ್ವಾ? . ಮಾತನ್ನು ತಿರುಚುವುದರಲ್ಲಿ ಸುಳ್ಳು ಹೇಳುವುದರಲ್ಲಿ ಸುಳ್ಳನ್ನು ಸತ್ಯ ಮಾಡುವುದರಲ್ಲಿ ಸತ್ಯವನ್ನು ಸುಳ್ಳು ಮಾಡುವುದರಲ್ಲಿ ಪಿಎಚ್ಡಿ ಪಡೆದಿದ್ದಾರೆ ಬಿಜೆಪಿಯವರು. ಅದನ್ನೇ ಈಗಲೂ ಪ್ರಯತ್ನ ಮಾಡುತ್ತಿದ್ದಾರೆ ಅಷ್ಟೇ ಎಂದಿದ್ದಾರೆ.

ತನಿಖಾ ವರದಿ ನೋಡಿಕೊಂಡು ನಾವು ಕ್ರಮ ಕೈಗೊಳ್ಳುತ್ತೇವೆ. ಇದನ್ನು ಹೊರತು ಪಡಿಸಿ ಏನು ಮಾಡಬಹುದು ಹೇಳಿ?. ಪದೇ ಪದೇ ರಾಜೀನಾಮೆ ಕೊಡಬೇಕು ರಾಜೀನಾಮೆ ಕೊಡಬೇಕು ಅಂತ ಬಿಜೆಪಿಯವರು ಹೇಳಿದರೆ, ಎಲ್ಲರಿಗೂ ಒಂದೇ ಮಾನದಂಡ ಇರಲಿ. ಮುಂಬೈನಲ್ಲಿ ಸಿಮಿಲರ್ ಸಿಚುಯೇಷನ್ ನಿಂದ ಐದು ಮಂದಿ ಸಾವನ್ನಪ್ಪಿದರು. ಅಲ್ಲಿ ಮಹಾರಾಷ್ಟ್ರ ಸಿಎಂ ಡಿಸಿಎಂ ರಾಜೀನಾಮೆ ಕೊಟ್ಟರಾ?. ಇವರು ಯಾರಾದರೂ ಮಹಾರಾಷ್ಟ್ರ ನಾಯಕರ ರಾಜೀನಾಮೆ ಕೇಳಿದರಾ?. ವಿಷಯ ಗೊತ್ತಾದ ತಕ್ಷಣವೇ ನಾವು ಎಲ್ಲವನ್ನೂ ಮಾಡಿದ್ದೇವೆ. ಯೋಗಿ ಅದಿತ್ಯನಾಥ್ ಸರ್ಕಾರಕ್ಕೆ ಕೋರ್ಟ್ ಛೀಮಾರಿ ಹಾಕಿಲ್ವಾ?.ಕುಂಭಮೇಳದಲ್ಲಿ ಮೃತಪಟ್ಟವರಿಗೆ ಇನ್ನೂ ಪರಿಹಾರವನ್ನೇ‌ ಕೊಟ್ಟಿಲ್ಲ. ಅವರಿಗೊಂದು ಮಾನದಂಡ ನಮಗೊಂದು ಮಾನದಂಡಾನಾ?.ಬಿಜೆಪಿ ಸರ್ಕಾರ ಇದ್ರೆ ಒಂದು ಮಾನದಂಡ ಕಾಂಗ್ರೆಸ್ ಸರ್ಕಾರ ಇದ್ರೆ ಒಂದು ಮಾನದಂಡ ನಾ?. ಬಿಜೆಪಿ ಮುಖ್ಯಮಂತ್ರಿಗಳು ಯಾರಾದರೂ ರಾಜೀನಾಮೆ ಕೊಟ್ಟು ಕೇಳಿದರೆ ಅದಕ್ಕೊಂದು ನೈತಿಕತೆ ಇದೆ ಎಂದಿದ್ದಾರೆ.