ಮನೆ Latest News ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಬಗ್ಗೆ ಕೇಂದ್ರದಿಂದ ವರದಿ ಬಂದಿಲ್ಲ ಎಂದ ಎಂಬಿ...

ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಬಗ್ಗೆ ಕೇಂದ್ರದಿಂದ ವರದಿ ಬಂದಿಲ್ಲ ಎಂದ ಎಂಬಿ ಪಾಟೀಲ್

0

ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಬಗ್ಗೆ ಕೇಂದ್ರದಿಂದ ವರದಿ ಬಂದಿಲ್ಲ ಎಂದ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಇನ್ನೂ ಕೂಡ ಕೇಂದ್ರದಿಂದ ನಮಗೆ ವರದಿ ಬಂದಿಲ್ಲ. ನಾವು ಶಿಫಾರಸು ಮಾಡಿದ್ದ ಸೈಟುಗಳ ಪರಿಶೀಲನೆ ಮಾಡಿದ್ದಾರೆ. ಆದರೆ ಇನ್ನೂ ಕೂಡ ವರದಿ ಬಂದಿಲ್ಲ. ಅದಕ್ಕಾಗಿ ಇನ್ನೊಮ್ಮೆ ಸಿಎಂ ಬಳಿ ಮಾತನಾಡಿ ನಾವು ದೆಹಲಿಗೆ ತೆರಳಿ ಸಿವಿಲ್ ಏವಿಯೇಷನ್‌ ಮಂತ್ರಿಗಳನ್ನು ಭೇಟಿ ಮಾಡುತ್ತೇವೆ.ಯಾವ ಸ್ಥಳ ಸೂಕ್ತ ಎಂದು ವರದಿ ನೀಡಿದರೆ ಮುಂದುವರಿಯುತ್ತೇವೆ ಎಂದಿದ್ದಾರೆ.

ನಿನ್ನೆ ಅಹಮದಾಬಾದ್ ನಲ್ಲಿ ವಿಮಾನದ ದುರ್ಘಟನೆಯಲ್ಲಿ ೨೦೦ ಕ್ಕಿಂತ ಜಾಸ್ತಿ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶದ ಅತಿದೊಡ್ಡ ದುರ್ಘಟನೆ ಇದು ಅನಿಸುತ್ತದೆ. ಮೃತಪಟ್ಟ ಕುಟುಂಬಸ್ಥರಿಗೆ ಸಂತಾಪವನ್ನು ಕೋರುತ್ತೇವೆ.ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದರು.ಎರಡು ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ  ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿ, ಡಿಕೆಶಿ ಅವರು ಉಪಮುಖ್ಯಮಂತ್ರಿಯಾಗಿ ನಾನು ಕೈಗಾರಿಕಾ ಸಚಿವನ್ನಾಗಿ ಕಾರ್ಯ ನಿರ್ವಹಿಸುತ್ತಿಧ್ದೇನೆ. 6,57,650 ಕೋಟಿ ಹೂಡಿಕೆ ಗೆ 115 ಒಡಬಂಡಿಕೆ ಮಾಡಲಾಗಿದೆ.ಇದರಿಂದ ಅನೇಕ ಉದ್ಯೋಗಗಳು ಸೃಷ್ಟಿಯಾಗಿವೆ. ಫಾಕ್ಸ್ಕಾನ್ 22.000 ಕೋಟಿ 50.000 ಉದ್ಯೋಗ ಸೃಷ್ಟಿಯಾಗಿದೆ. ಶೆವ್ರಾನ್ ನಲ್ಲಿ 8,000 ಕೋಟಿ ಹೂಡಿಕೆ‌ ಮಾಡಲಾಗಿದೆ. ಹೀರೋ ಎನಜೀಸ್ ಗೆ 11,000 ಕೋಟಿ ಹೂಡಿಕೆ ಮಾಡಲಾಗಿದೆ ಎಂದರು.

ಪರಿಸರ ಸ್ನೇಹಿ ಇಂಧನ ನೀತಿಯನ್ನು ಜಾರಿಗೆಗೆ ತಂದಿದ್ದೇವೆ. 2024-2025ರ ಸಾಲಿನಲ್ಲಿ ವಿದೇಶಿ ಹೂಡಿಕೆನಲ್ಲಿ ಒಟ್ಟು 56.000 ಕೋಟಿ ಹೂಡಿಕೆ ಮಾಡಲಾಗಿದೆ. ರಫ್ತಿನಲ್ಲಿ ರಾಜ್ಯವು ನಂಬರ್ ಒನ್‌ ಸ್ಥಾನದಲ್ಲಿದೆ. ಏರೋಸ್ಪೇಸ್ & ಡಿಫೆನ್ಸ್, ಮಷೀನ್ ಟೂಲ್ಸ್. ಟೆಕ್ಸ್ ಟೈಲ್ಸ್ , ಕೋರ್ ಮಾನ್ಯುಫ್ಯಾಕ್ಚರಿಂಗ್ ಹೀಗೆ ಎಲ್ಲದರಲ್ಲಿ ನಂಬರ್ 1 ಆಗಿದ್ದೇವೆ ಎಂದು ತಿಳಿಸಿದ್ರು.

ಮೈಸೂರು ಸ್ಯಾಂಡಲ್‌ ಜೊತೆಗೆ ಜಾಸ್ಮಿನ್ ಸೋಪುಗಳ ತಯಾರಿಕೆಗೆ ಗಮನ‌ ಹರಿಸಿದ್ದೇವೆ. ನಮ್ಮಲ್ಲಿ ಸ್ಯಾಂಡಲ್ ಸೋಪ್ ಗೆ ಹೆಚ್ಚಿನ ಮಾರುಕಟ್ಟೆ ಇದ್ರೆ ವಿದೇಶಗಳಲ್ಲಿ ಅದರಲ್ಲೂ ದುಬೈ ನಂತ ರಾಷ್ಟ್ರಗಳಲ್ಲಿ ಜಾಸ್ಮಿನ್ ಸೋಪ್ ಗೆ ಹೆಚ್ಚಿನ ಮಾರುಕಟ್ಟೆ ಬೇಡಿಕೆ ಇದೆ.ಅದು ಜಾಸ್ಮಿನ್ ಆಯ್ಲ್ ಗೆ ಒಂದು ಕೆಜಿಗೆ ೧.೮೦ ಲಕ್ಷ ರೂಪಾಯಿ ಇದೆ.ಹೀಗಾಗಿ ಅದರ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೇವೆ ಎಂದು ತಿಳಿಸಿದ್ರು.

 

ವಿಜಯಪುರ ಜಿಲ್ಲೆಯಲ್ಲಿ ಸೌರ ಫಲಕದ ಬಿಡಿಭಾಗಗಳ ತಯಾರಿಕಾ ಘಟಕ‌ ನಿರ್ಮಿಸಲು ಕೆಲವೊಂದು ಕಂಪೆನಿಗಳು ಮುಂದೆ ಬಂದಿವೆ. ಕೆಎಸ್ಡಿಎಲ್ ಉತ್ಪನ್ನದ ಮಾರುಕಟ್ಟೆ ವಿಸ್ತರಣೆಗೆ ಒತ್ತು ನೀಡಲಾಗಿದೆ. ಚಿಟ್ ಫಂಡ್ ಗ್ರಾಮಾಂತರ ಪ್ರದೇಶದಲ್ಲಿ ಮೊಬೈಲ್ ಆ್ಯಪ್ ಬಳಸಿ ಚೀಟಿ ವ್ಯವಹಾರ ನಡೆಸಲು ಕ್ರಮ ತೆಗೆದುಕೊಳ್ಳಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಭಾರತದ ಮೊದಲ ಡೀಪ್ ಟೆಕ್ ಪಾರ್ಕ್ 3000 ಎಕರೆಗಳಲ್ಲಿ ನಿರ್ಮಾಣ ಆಗಿದೆ. ಹುಬ್ಬಳ್ಳಿಯಲ್ಲಿ ಸ್ಟಾರ್ಟ್ ಅಪ್ ಪಾರ್ಕ್ ನಿರ್ಮಾಣ ಮಾಡಲಾಗಿದ್ದು ಕೈಗಾರಿಕೆ ಬೆಳವಣಿಗೆಗೆ ಇದು ಸಹಾಯಕ ಎಂದು ತಿಳಿಸಿದ್ರು.