ಮನೆ ಪ್ರಸ್ತುತ ವಿದ್ಯಮಾನ ಹಲವು ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಆಪರೇಷನ್ ಕಮಲದ ಬಗ್ಗೆ ಡಿ ಕೆ ಶಿವಕುಮಾರ್ ಸ್ಫೋಟಕ...

ಹಲವು ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಆಪರೇಷನ್ ಕಮಲದ ಬಗ್ಗೆ ಡಿ ಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

0

ಬೆಂಗಳೂರು: ಹಲವು ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಆಪರೇಷನ್​ ಕಮಲದ ಬಗ್ಗೆ ಡಿ ಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಹಲವು ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ನನ್ನ ಸಂಪರ್ಕ ಮಾಡೋ ಕೆಲಸವೂ ಮಾಡ್ತಿದ್ದಾರೆ. ಈ ಬಗ್ಗೆ ನಾನು ನಮ್ಮ ಪಕ್ಷದಲ್ಲಿ ಚರ್ಚೆ ಮಾಡಿದ್ದೇನೆ. ನಮ್ಮ ಸಚಿವರು ಕೂಡ ಸಂಪರ್ಕದ ಬಗ್ಗೆ ಚರ್ಚಿಸಿದ್ದಾರೆ. ಆದ್ರೆ ನಾನು ಯಾವುದನ್ನೂ ಬಹಿರಂಗ ಮಾಡೋದಿಲ್ಲ. ಬಿಜೆಪಿ ಒಡೆದ ಮನೆ, ಕಾಂಗ್ರೆಸ್​ ಒಗ್ಗಟ್ಟಿನ ಮನೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿಕೆಶಿ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.

ನಟ್ಟು, ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ನಿಖಿಲ್ ಕುಮಾರಸ್ವಾಮಿ ತಿರುಗೇಟು

ಬೆಂಗಳೂರು; ನಟ್ಟು, ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಿನಿಮಾ ರಂಗದಲ್ಲಿ ಇರುವ ಕಲಾವಿದರು, ನಿರ್ದೇಶಕರು, ನಿರ್ಮಾಪಕರು  ಯಾರೇ ಇರಬಹುದು ಎಲ್ಲರಿಗೂ ಕೂಡಾ ಸಮಾಜದ ಆಗು ಹೋಗುಗಳ ಬಗ್ಗೆ ಪ್ರಜ್ಞೆ ಇದೆ ಎಂದು ನಾನು ಭಾವಿಸಿದ್ದೇನೆ. ಯಾವ ಸಂದರ್ಭದಲ್ಲಿ ಯಾವ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ಹೋರಾಟ ಕೈಜೋಡಿಸಬೇಕು. ಅವರ ವೈಯಕ್ತಿಕ ಅಭಿಪ್ರಾಯ. ರಾಜಕೀಯವಾಗಿ ಒಂದು ಪಕ್ಷದ ಜೊತೆ ಗುರುತಿಸಿಕೊಳ್ಳೋದಕ್ಕೆ ಬಹುಶಃ ಕಲಾವಿದರು ಹಿಂದೆ ಸರಿದಿರಬಹುದು ಎಂಬುದು ನನ್ನ ಭಾವನೆ. ಹಾಗಾಗಿ ಈ ರೀತಿ ನೆಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಇವೆಲ್ಲವೂ  ಈ ವಿಷಯಗಳನ್ನ ಬಿಟ್ಟು ಎಲ್ಲರನ್ನ ಗೌರವಯುತವಾಗಿ ಕಲಿಯಬೇಕು ಎಂದಿದ್ದಾರೆ.

ರಾಜಕಾರಣಿಗಳ ಮಕ್ಕಳು ಚಿತ್ರರಂಗದಿಂದ ವಾಪಸ್ ರಾಜಕೀಯಕ್ಕೆ ಬಂದ ವಿಚಾರದ ಬಗ್ಗೆ ಮಾತನಾಡಿದ ಅವರು ಡಿಸಿಎಂ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.  ಕುಮಾರಣ್ಣ ವೃತಿ ಪ್ರಾರಂಭ ಮಾಡಿದ್ದು ಸಿನಿಮಾ ಹಂಚಿಕೆದಾರಾಗಿ. ಸ್ವಾಭಾವಿಕವಾಗಿ ನಾನು ಚಿಕ್ಕವಯಸ್ಸಿನಲ್ಲಿ ಕುಮಾರಣ್ಣ ವಿತರಣೆ ಮಾಡಬೇಕಾದರೆ ಸಾಕಷ್ಟು ಪ್ರದರ್ಶನ ಮಾಡಬೇಕಾದರೆ ಹಲವಾರು ಸಿನಿಮಾಗಳನ್ನ ನಾನು ವೀಕ್ಷಣೆ ಮಾಡಿದ್ದೇನೆ. ಬಹುಶಃ ೨೦೦ ಕ್ಕೂ ಹೆಚ್ಚು ಸಿನಿಮಾಗಳ ವಿತರಣೆ ಮಾಡಿ ಬಹಳ ಯಶಸ್ವಿ ವಿತರಕರಾಗಿ ಕೆಲಸ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ನನಗೂ ಸಹ ನನ್ನ ವೃತಿ ಬದುಕು . ರಾಜಕಾರಣ ಹೊರತುಪಡಿಸಿ ಸಿನಿಮಾ ರಂಗದಲ್ಲಿ ಪ್ರಾರಂಭ ಮಾಡಬೇಕು ಅಂತ ಕನಸು ಕಲ್ಪನೆ ಹೊತ್ತು ಬಹಳ ವರ್ಷಗಳ ತಯಾರಿ ಮಾಡ್ಕೊಂಡು ಜಾಗ್ವಾರ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟೆ. ಹಾಗಾಗಿ ಸಿನಿಮಾ ರಂಗ ನಮಗೆ ಹೊಸದೇನು ಅಲ್ಲ. ಇವತ್ತು ನಮಗೆ ಸಮಾಜದಲ್ಲಿ ಬಹಳ ಜವಾಬ್ದಾರಿ ಇದೆ. ಪಕ್ಷದ ಜವಾಬ್ದಾರಿ ಇದೆ. ಆ ಹಿನ್ನೆಲೆಯಲ್ಲಿ ಸ್ವಲ್ಪ ಸಂಪುರ್ಣವಾಗಿ ರಾಜಕಾರಣಕ್ಕೆ ಬಂದಿದ್ದೇನೆ ಎಂದಿದ್ದಾರೆ.