ಮನೆ Latest News ಹಿಂದಿನ ಮಂಗಳೂರು ಮತ್ತೆ ಸೃಷ್ಟಿಯಾಗಬೇಕು : ಎಂಎಲ್‌ಸಿ,ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿಕೆ

ಹಿಂದಿನ ಮಂಗಳೂರು ಮತ್ತೆ ಸೃಷ್ಟಿಯಾಗಬೇಕು : ಎಂಎಲ್‌ಸಿ,ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿಕೆ

0

ಬೆಂಗಳೂರು; ಮಂಗಳೂರಿನಲ್ಲಿ ಅಮಾಯಕರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಂಎಲ್‌ಸಿ,ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು ದುರ್ದೈವ್ಯ ಕರಾವಳಿಯಲ್ಲಿ ಕೋಮುವಾದದಿಂದ ಪ್ರಕ್ಷುಬ್ಧ ವಾತಾವರಣದ ಸೃಷ್ಟಿಯಾಗಿದೆ. ಮಂಗಳೂರನ್ನ ಹಿಂದೆ ತೆಗೆದು ಕೊಂಡು ಹೋಗ್ತಾ ಇದ್ದೇವೋ ಅನ್ನಿಸ್ತಿದೆ. ಹಿಂದಿನ ಮಂಗಳೂರು ಮತ್ತೆ ಸೃಷ್ಟಿಯಾಗಬೇಕು .ದಿನಗೂಲಿ ಮಾಡಿ ಜೀವನ ನಡೆಸುತ್ತಿದ್ದವನ ಕೊಲೆಯಾಗಿದೆ. ಹಿಂದೂ ಸಂಘಟನೆ ಪ್ರಚೋದನಾ ಸಭೆ ಮಾಡಿದೆ. ಹಿಂದೂತ್ವದ ಅಮಲಿನಲ್ಲಿ ಈ ಕೃತ್ಯ ವಾಗಿದೆ .ಇದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸಿಎಂ‌ಗೆ ಪತ್ರ ಬರೆದು ಮನವಿ ಮಾಡಿದ್ದೇವೆ. ಪೊಲೀಸರು ಪ್ರೀ ಹ್ಯಾಂಡ್ ಇಲ್ಲ ಎಂದು ಯಾರ್ ಹೇಳಿದ್ರು?. ಯಾರೇ ಆಗಿರಲಿ ಅವರ ಮೇಲೆ ಪೊಲೀಸರು ಕ್ರಮತೆಗೆದುಕೊಳ್ಳಬೇಕು ಎಂದಿದ್ದಾರೆ.

ಮತ್ತೊಮ್ಮೆ ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ.ADGP ಅವರ ನೇತ್ರತ್ವದಲ್ಲಿ ತನಿಖೆಯಾಗಬೇಕು. ಒಳ್ಳೆಯ ಅಧಿಕಾರಿಗಳನ್ನ ಜಿಲ್ಲೆಯಲ್ಲಿ ನೇಮಕ ಮಾಡಬೇಕು ಎಂದ ಅವರು ಎರಡು ಕಡೆಯವರನ್ನ ಕರೆದು ಶಾಂತಿ ಸಭೆ ಮಾಡುವ ವಿಚಾರದ ಬಗ್ಗೆ ಮಾತನಾಡಿ ನಾನು ಈ ಬಗ್ಗೆ ಮನವಿ ಮಾಡಿದ್ದೇನೆ. ಯಾವುದೇ ಜಾತಿ ಧರ್ಮ ನೋಡದೇ ಶಾಂತಿ ಸಭೆ ಮಾಡಬೇಕು .ಎಲ್ಲರನ್ನ ಕರೆದು ಶಾಂತಿ ಸಭೆಯನ್ನ ಮಾಡಬೇಕು ಎಂದರು.