ಬೆಂಗಳೂರು; ನಮ್ಮದು ಮಹದೇದಪ್ಪ ಅವರದ್ದು 30 ವರ್ಷಗಳ ಸ್ನೇಹ ಭೇಟಿಗೆ ವಿಶೇಷ ಕಾರಣ ಏನಿಲ್ಲ ಹೊಸದೇನು ಇಲ್ಲ ಮಾಮೂಲಿ ನಂತೆ ಸಚಿವರ ಭೇಟಿ ಮಾಡಿದ್ದೇವೆ. ನಮ್ಮ ಭೇಟಿಯಲ್ಲಿ ಅಂತದ್ದೇನು. ಎಲ್ಲ ಸುದ್ದಿ ಆಗುವಂತದ್ದು ಏನೂ ಇಲ್ಲ .ಕೆಪಿಸಿಸಿಗೆ ಅಧ್ಯಕ್ಷರು ಅಂತ ಇದ್ದಾರೆ ಅವರು ನಡೆಸ್ತಾ ಇದ್ದಾರೆ. ಅದನ್ನ ಸಾಕಷ್ಟು ಬಾರಿ ಹೇಳಿದ್ದೇನೆ. ನಮ್ಮ ಹಂತದಲ್ಲಿ ಏನು ಇಲ್ಲ ಚರ್ಚೆ ಅಧ್ಯಕ್ಷರಿದ್ದಾರೆ ಕೆಲಸ ಮಾಡುತ್ತಿದ್ದಾರೆ ಎಂದರು.
ರಾಜೇಂದ್ರ ಕ್ಯಾತಸಂದ್ರದಲ್ಲಿ ಎಲ್ಲೊ ದೂರು ಕೊಟ್ಟಿದ್ದಾರೆ. ಪೊಲೀಸರೆ ತನಿಖೆ ಮಾಡಿ ಹೇಳಬೇಕು . ಆ ನಾಯಕ ಯಾರು ಅಂತ ತನಿಖೆ ಮಾಡಲಿ ಅವರೆ ಹೇಳಬೇಕು. ಯಾರ ಮೇಲೂ ಆರೋಪ ಮಾಡೋಕೆ ನಮಗೆ ಅಧಿಕಾರ ಇಲ್ಲ. ಪ್ರಭಾವಿ ನಾಯಕರು ಯಾರು ಅಂತ ಪೊಲೀಸರೆ ಕಂಡು ಹಿಡಿಯಬೇಕು. ನಾವೇನು ಇನ್ವೆಸ್ಟಿಗೇಷನ್ ಏಜೆನ್ಸಿ ಅಲ್ಲ ವೈಟ್ ಮಾಡೋಣ. ಮಹಾನಾಯಕನನ್ನ ನವೆಲ್ಲಿ ಹುಡುಕೋದು ಹುಡುಕೋಕೆ ಟೈಮ್ ಬೇಕಾಗುತ್ತೆ ಪೊಲೀಸರು ಹುಡುಕಲಿ. ಮಹಾನಾಯಕರು ದೇಶದಲ್ಲಿ ಸುಮರು ಇದ್ದಾರೆ. ಆದಂತ ಘಟನೆಗಳು ಸಹಾ ಇದ್ದಾವೆ. ಬೇರೆ ರಾಜ್ಯಗಳಲ್ಲಿ ಆಗಿದೆ ನಮ್ಮ ರಾಜ್ಯದಲ್ಲಿ ಆದ ಉದಾಹರಣೆ ಇದೆ. ಇವರೆ ಅವರೆ ಅಂತ ಹೇಳೋಕೆ ಅಗಲ್ಲ ಪೊಲೀಸರು ಏನು ತನಿಖೆ ಮಡ್ತಾರೆ ಮಾಡಲಿ ಕಾದು ನೋಡೋಣ ಎಂದು ತಿಳಿಸಿದ್ರು.
ತನಿಖೆ ಆಗಲಿ, ಸತ್ಯಾಸತ್ಯತೆ ಗೊತ್ತಾಗುತ್ತೆ ; ಸಚಿವ ಹೆಚ್ ಸಿ ಮಹದೇವಪ್ಪ ಹೇಳಿಕೆ
ಬೆಂಗಳೂರು; ಹನಿಟ್ರಾಪ್ ಬಗ್ಗೆ ತನಿಖೆ ಆಗಲಿ ಸತ್ಯಾಸತ್ಯತೆ ಗೊತ್ತಾಗುತ್ತೆ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ಅವರು ನಮ್ಮ ಸಂಬಂಧ ಮೂವತ್ತು ವರ್ಷಕ್ಕಿಂದು ಹೆಚ್ಚು. ಸತೀಶ್ ಜಾರಕಿಹೊಳಿ ಗಡ್ಕರಿ ಅವ್ರನ್ನ ಭೇಟಿ ಮಾಡಿದ್ರು. ಟನಲ್ ಬಗ್ಗೆ ಎಲ್ಲಾ ಚರ್ಚೆ ಮಾಡಿದ್ರು. ರಾಷ್ಟ್ರೀಯ ನಾಯಕರನ್ನ ಭೇಟಿ ಮಾಡೋದು ಸಹಜ. ಹೈಕಮಾಂಡ್ ಏನ್ ಅಭಿಪ್ರಾಯ ಹೇಳುತ್ತೋ ಅಂತಿಮ. ಹೈಕಮಾಂಡ್ ನಿರ್ಧಾರ ಅಂತಿಮ. ರಾಜೇಂದ್ರ ಕಂಪ್ಲೇಂಟ್ ಕೊಟ್ಟಿದ್ದಾರೆ. ಪ್ರಭಾವಿ ಯಾರು ಅಂತಾ ನಾನು ಹೇಗೆ ಹೇಳೋಕಾಗುತ್ತೆ.ತನಿಖೆ ಆಗಲಿ, ಸತ್ಯಾಸತ್ಯತೆ ಗೊತ್ತಾಗುತ್ತೆ
ಇನ್ನು ಇದೇ ವೇಳೆ ಮಾತನಾಡಿದ ಅವರು ಸಂಪುಟ ಪುನರ್ ರಚನೆ ಹೈಕಮಾಂಡ್ ಗೆ ಬಿಟ್ಟಿದ್ದು. ಸಿಎಂ ಭೇಟಿ ವೇಳೆ ಸಮಾವೇಶದ ಬಗ್ಗೆ ಚರ್ಚೆ ಆಗಿಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.