ಬೆಂಗಳೂರು; ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಬರಲಿ, ತನಿಖೆ ಮಾಡ್ತೀವಿ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಹೇಳಿದ್ದಾರೆ.
ನಿನ್ನೆ ಉನ್ನತ ಮಟ್ಟದ ತನಿಖೆ ಮಾಡುತ್ತೇವೆ ಎಂದು ಹೇಳಿದ್ದೇನೆ. ಅದು ಯಾವ ರೀತಿ ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ . ದೂರು ಬರಲಿ ತನಿಖೆ ಮಾಡುತ್ತೇವೆ ಎಂದು ಸದನದಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಕೇಂದ್ರ ನಾಯಕರು, ಜಡ್ಜ್ ಗಳು ಇದ್ದಾರೆ, ಸಿಬಿಐ ತನಿಖೆ ಆಗಲಿ. ಸಿಎಂ ಬೆಂಬಲಿಗರಿಗೇ ಟಾರ್ಗೆಟ್ ಮಾಡುತ್ತಿದ್ದಾರೆ. ಇಂದು ಸಿದ್ದರಾಮಯ್ಯ ಸಿಎಂ ಇದ್ದಾರೆ. ನಾಳೆ ಬೇರೆ ಪಕ್ಷದವರು ಸಿಎಂ ಆಗಬಹುದು, ಅವರ ಮೇಲೂ ಹೀಗೆ ಆಗಬಹುದು ಎಂದು ವಿಪಕ್ಷ ನಾಯಕ ಅಶೋಕ್ ಹೇಳಿದ್ದಾರೆ.
ಇನ್ನು ಹನಿ ಟ್ರ್ಯಾಪ್ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಸರ್ಕಾರಕ್ಕೆ ಪರಿಷತ್ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.ತಮ್ಮ ಸಚಿವರನ್ನೇ ತಮ್ಮ ಪಕ್ಷದವರೇ ಹನಿ ಟ್ರ್ಯಾಪ್ ಮಾಡಿದ್ದಾರೆಂದರೆ ಏನರ್ಥ. ಇಂತಹ ಅನಿಷ್ಟ ಪದ್ದತಿಯನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಯಾರಿದ್ದಾರೆ ಇಲ್ಲ ಅನ್ನೋದಲ್ಲ ಯಾರೇ ಇದ್ದರೂ ಸತ್ಯ ಹೊರ ಬರಲೇಬೇಕು.ಇದಕ್ಕೆ ಮುಖ್ಯಮಂತ್ರಿಗಳು ಉತ್ತರವನ್ನ ಕೊಡಲೇಬೇಕು. ಇದು ರಾಜ್ಯ ಸರ್ಕಾರದ ಮೇಲೆ ಬಂದಿರುವಂತಹ ಆರೋಪ. ಹನಿ ಟ್ರಾಪ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲೇಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿವ ಸಂಪುಟ ಸದಸ್ಯರು ಹನಿಟ್ರ್ಯಾಪ್ ಪ್ರಯತ್ನ ಆಗಿದೆ ಎಂದು ಆರೋಪ ಮಾಡಿದ್ದರೂ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಯಾಕೆ ಎಂದು ಪ್ರಶ್ನಿಸಿದ ಶಾಸಕ ಸುನೀಲ್ ಕುಮಾರ್
ಬೆಂಗಳೂರು; ಸಚಿವ ಸಂಪುಟ ಸದಸ್ಯರು ಹನಿಟ್ರ್ಯಾಪ್ ಪ್ರಯತ್ನ ಆಗಿದೆ ಎಂದು ಆರೋಪ ಮಾಡಿದ್ದರೂ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಯಾಕೆ ಎಂದು ಶಾಸಕ ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.
ಮೇಲ್ಮನೆ ಸದಸ್ಯರೊಬ್ಬರು ಕೂಡಾ ಹನಿಟ್ರ್ಯಾಪ್ ಪ್ರಯತ್ನ ಆಗಿದೆ ಎಂದು ಹೇಳಿದ್ದಾರೆ. ಇದರ ಬಗ್ಗೆ ಸಿಎಂ ಉತ್ತರ ಕೊಡಬೇಕು. ಸಚಿವ ಸಂಪುಟ ಸದಸ್ಯರು ಆರೋಪ ಮಾಡಿದ್ದಾರೆ. ಯಾರು ಮಾಡಿದ್ದಾರೆ, ಏನು ಕ್ರಮ ಕೈಗೊಂಡಿದ್ದೀರಿ ಎಂದು ನೀವು ಮೊದಲು ಉತ್ತರ ಕೊಡಬೇಕು. ನಿಮ್ಮ ಸಂಪುಟ ಸದಸ್ಯರದ್ದೇ ಕೈವಾಡ ಇದ್ದರೆ ಮೊದಲು ಅವರನ್ನು ವಜಾ ಮಾಡಿ ನಂತರ ಬಜೆಟ್ ಉತ್ತರ ಕೊಡಿ. ಸಚಿವ ಸಂಪುಟ, ಸಿಎಂಗೆ ನೈತಿಕತೆ ಇಲ್ಲವೇ?. ಮೊದಲು ಇದಕ್ಕೆ ಉತ್ತರ ಕೊಡಿ, ನಂತರ ಬಜೆಟ್ ಗೆ ಬನ್ನಿ ಎಂದಿದ್ದಾರೆ.
ನಾಳೆ ನಿಮ್ಮ ಕುರ್ಚಿಗೂ ಧಕ್ಕೆ ಬರುತ್ತದೆ, ಇನ್ನೊಬ್ಬರ ಕುರ್ಚಿಗೂ ಧಕ್ಕೆ ಬರುತ್ತದೆ. ನೀವು ಇವತ್ತು ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕು ಎಂದು ಸಿಎಂಗೆ ಶಾಸಕ ಸುನೀಲ್ ಕುಮಾರ್ ಒತ್ತಾಯ. ಮಾಡಿದ್ದಾರೆ. ಈಗಾಗಲೇ ಗೃಹ ಸಚಿವರು ಉತ್ತರ ಕೊಟ್ಟಿದ್ದಾರೆ, ಮತ್ತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಸಚಿವರು ಇದೇ ವೇಳೆ ಹೇಳಿದ್ದಾರೆ. ಆಗ ಸಿಎಂ ಮೊದಲು ಉತ್ತರ ಕೊಡಬೇಕು ಎಂದು ಶಾಸಕರಾದ ಸುನೀಲ್ ಕುಮಾರ್, ಅರಗ ಜ್ಞಾನೇಂದ್ರ ಮತ್ತು ವಿಪಕ್ಷ ನಾಯಕ ಅಶೋಕ್ ಆಗ್ರಹಿಸಿದ್ದಾರೆ.
ಇದೇ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಕೇಂದ್ರದ ನಾಯಕರು ಕೂಡಾ ಇದ್ದಾರೆ ಅಂತಾ ರಾಜಣ್ಣ ಹೇಳಿದ್ದಾರೆ. ಕೇಂದ್ರದ ನಾಯಕರು ಅಂದರೆ ಕಾಂಗ್ರೆಸ್ ನವರಾ ಬಿಜೆಪಿಯವರಾ?. ಸಿಎಂ ಪದವಿಗೋಸ್ಕರ, ಇನ್ನೊಂದು ಪದವಿಗೋಸ್ಕರ ಎಲ್ಲರನ್ನೂ ಧ್ವಂಸ ಮಾಡಿ ಹಾಕುತ್ತಾರೆ ಅಂದರೆ ಹೇಗೆ?. ಜಡ್ಜ್ ಗಳು ಕೂಡಾ ಇದ್ದಾರೆ ಅಂತಾ ಮಾಧ್ಯಮದಲ್ಲಿ ಬಂದಿದೆ ಎಂದು ಹೇಳಿದ್ದಾರೆ.ಆಗ ಅಶೋಕ್ ಮಾತಿಗೆ ಸಚಿವ ದಿನೇಶ್ ಗುಂಡೂರಾವ್ ವಿರೋಧ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕ ಆಗಬೇಕು ಅಂತಾ ಕೂಡಾ ಇರಬಹುದು, ಸದನದಲ್ಲಿ ಊಹಾಪೋಹ ಮಾತಾಡುವುದು ಬೇಡ ಎಂದು ದಿನೇಶ್ ಗುಂಡೂರಾವ್.ಹೇಳಿದ್ದಾರೆ.