ಬೆಂಗಳೂರು: ರನ್ಯಾ ರಾವ್ ಪ್ರಕರಣದಲ್ಲಿ ಸಚಿವರ ಹೆಸರು ಯಾಕೆ ಬರ್ತಾ ಇದೆ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲಎಂದು ವಿಧಾನಸೌಧದಲ್ಲಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಮಾಧ್ಯಮದಲ್ಲಿ ಇಲ್ಲಿವರೆಗೂ ಏನ್ ಬಂದಿದ್ಯೂ ನಾನು ಅದನ್ನು ಇಲ್ಲಿವರೆಗೂ ನೋಡಿದ್ದೀನಿ. ತಾವೆಲ್ಲರು ತೋರಿಸಿದ್ದೀರಾ, ಮಾನ್ಯ ಹೋಮ್ ಮಿನಿಸ್ಟರ್ ಸಹ ಇದಕ್ಕೆ ರಿಪ್ಲೇ ಮಾಡಿದ್ದಾರೆ.ತನಿಖೆ ನಡೆಯುತ್ತಾ ಇದೆ, ತನಿಖೆ ಆದ ಮೇಲೆ ಯಾರು ಎಷ್ಟೇ ಪ್ರಭಾವಿ ಇದ್ರು ಮುಚ್ಚಿಡಲಿಕ್ಕೆ ಸಾಧ್ಯವಿಲ್ಲ. ಕಾನೂನು ರೀತಿ ಏನ್ ಕ್ರಮ ಆಗಬೇಕೋ ಅದು ಆಗೇ ಆಗುತ್ತೆ. ಸಚಿವರ ಹೆಸರು ಯಾಕೆ ಬರ್ತಾ ಇದೆ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ ಇರೋರನ್ನು ಕೇಳಿದ್ರೆ ಅವರಿಗೆ ಗೊತ್ತಿರುತ್ತೆ.ನೀವು ಮಾಧ್ಯಮದಲ್ಲಿ ಏನ್ ತೋರುಸ್ತಾ ಇದ್ದೀರೊ ಅದನ್ನು ನಾನು ನೋಡಿದ್ದೇನಷ್ಟೆ ಎಂದರು.
ಗ್ಯಾರೆಂಟಿ ಅನುಷ್ಠಾನ ವಿಚಾರವಾಗಿ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ವಿಚಾರದ ಬಗ್ಗೆ ಮಾತನಾಡಿ ಬಿಜೆಪಿ ಅವರಿಗೆ ಮಾಡೋದಕ್ಕೆ ಕೆಲಸ ಇಲ್ಲ. ಮೊದಲು ಗ್ಯಾರಂಟಿ ನಡೆಯೋದಿಲ್ಲ ಅಂತ ಹೇಳಿದ್ರು. ಅದನ್ನು ನಡೆಸಿದ್ವಿ, ಇವಾಗ ಗ್ಯಾರಂಟಿ ಸಮಿತಿ ಬಗ್ಗೆ ಮಾತನಾಡ್ತಾ ಇದ್ದಾರೆ. ಒಂದೂವರೆ ವರ್ಷ ಆಯ್ತು ಗ್ಯಾರಂಟಿ ಸಮಿತಿ ಮಾಡಿ. ಇಷ್ಟು ದಿನ ಏನು ಕಣ್ಮುಚ್ಚಿ ಕೂತ್ಕೊಂಡಿದ್ರಾ? .ಏನ್ ನಿದ್ದೆ ಮಾಡ್ತಾ ಇದ್ರಾ ಬಿಜೆಪಿ ಅವ್ರು. ಅನುಷ್ಠಾನ ಸಮಿತಿಯಾಗಿ ಮೂರು ಸದನ ಆಯ್ತು.ಇದು ಮೂರನೇ ಸದನ ಇವತ್ತು ಅವರಿಗೆ ಜ್ಞಾನೋದಯ ಆಗಿದ್ಯಾ. ಸುಮ್ನೆ ಒಂದು ಪಿಳ್ಳೆ ನೆವ ಬೇಕು .ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ ಅದರ ಮೇಲೆ ಚರ್ಚೆ ಆಗ ಬೇಕು.ಬಜೆಟ್ ನಲ್ಲಿ ಯಾವ ಯಾವ ಪ್ರಾಂತ್ಯಗಳಿಗೆ ಅನ್ಯಾಯ ಆಗಿದೆ ಅದರ ಮೇಲೆ ಚರ್ಚೆ ಆಗಬೇಕಿದೆ.ಇದನ್ನೆಲ್ಲ ಬಿಟ್ಟು ರಾಜ್ಯದ ಜನರ ದಿಕ್ಕನ್ನು ಬದಲಾಯಿಸೋದಕ್ಕೆ ಗ್ಯಾರಂಟಿ ಯೋಜನೆ ಬಗ್ಗೆ ಹೇಳ್ತಾರೆ ಎಂದ್ರು.
ಮಹಾರಾಷ್ಟ್ರದಲ್ಲಿ ಲಾಂಡ್ಲೀ ಬೆಹನ ಘೊಷಣೆ ಮಾಡಿದ್ರು .ಎಲೆಕ್ಷನ್ ಗೂ ಮುಂಚೆ 2100 ರೂ. ಎರಡು ತಿಂಗಳಷ್ಟ ನೀಡಿದ್ರು ಇವಾಗ ಬಂದ್ ಮಾಡಿ ಬಿಟ್ಟಿದ್ದಾರೆ. ಮಹಾರಾಷ್ಟ್ರ ಸಚಿವರುಗಳ ನಾಲ್ಕು ನಾಲ್ಕು ಜನ ಆರ್ ಎಸ್ ಎಸ್ ಕಾರ್ಯಕರ್ತರನ್ನು ಪಿಎ ಎಂದು ತಂಗೊಂಡಿದ್ದಾರೆ.ಅವರಿಗೇನು ಬಿಜೆಪಿ ಪಗಾರ್ ಕೊಡ್ತಾ ಇದ್ಯಾ?.ಮಹಾರಾಷ್ಟ್ರ ಸರ್ಕಾರ ಪೇಮೆಂಟ್ ಮಾಡ್ತಾ ಇದೆ .ಕೆಎಎಸ್ ಅಧಿಕಾರಿಗಳು ತಕೊಳ್ಳುವಷ್ಟು ಸಂಬಳ ಆರ್ ಎಸ್ ಎಸ್ ಕಾರ್ಯಕರ್ತರು ತಕೊಳ್ತಾ ಇದ್ದಾರೆ. ಎಲ್ಲಿ ಬಿಜೆಪಿ ಇದ್ಯೋ ಅಲ್ಲಿ ಇವೆಲ್ಲವೂ ಚೆನ್ನಾಗಿ ಕಾಣುತ್ತೆ .ಕಾಂಗ್ರೆಸ್ ಸರ್ಕಾರ ಇರುವ ಕಡೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಾ ಇದ್ದಾರೆ ಎಂದ್ರು.
ಬೆಳಗಾವಿ ಪಹಣಿಯಲ್ಲಿ ಮರಾಠಿ ಕೈ ಬರಹ ವಿಚಾರದ ಬಗ್ಗೆ ಮಾತನಾಡಿ ನನಗೆ ಆ ಬಗ್ಗೆ ಮಾಹಿತಿ ಇಲ್ಲ.ಯಾಕಂದ್ರೆ ಇಲ್ಲಿಯವರೆಗು ಕನ್ನಡದಲ್ಲೇ ಪಹಣಿ ನೀಡ್ತಾ ಇದ್ರು ಅದು ನನಗೆ ಗೊತ್ತು. ಮರಾಠಿ ಪಹಣಿ ಆಗಿರೋ ಬಗ್ಗೆ ನನಗೆ ಮಾಹಿತಿ ಇಲ್ಲ .ಇದು ಬಹಳಷ್ಟು ಸೂಕ್ಷ್ಮ ವಿಚಾರ ಇದೆ .ನನಗೆ ಅದರ ಬಗ್ಗೆ ಏನು ಗೊತ್ತಿಲ್ಲ.ಗೊತ್ತಿಲ್ದೆ ರಿಯಾಕ್ಟ್ ಮಾಡಿದ್ರೆ ಅದು ತಪ್ಪಾಗುತ್ತೆ. ಯಾಕಂದ್ರೆ ಬೆಳಗಾವಿ ಅಲ್ಲಿ ಏನೇ ಗಲಾಟೆ ಆದ್ರು ಸಹ ಅದು ಲಕ್ಷ್ಮೀ ಹೆಬ್ಬಾಳ್ಕರ್ ಅಂತ ಬಿಂಬಿತವಾಗ್ತಿದೆ ಎಂದ್ರು.