ಮನೆ Latest News ಮುಖ್ಯಮಂತ್ರಿಗಳು ಲೋಕಾಯುಕ್ತ ಅಧಿಕಾರಿಗಳನ್ನ ದುರುಪಯೋಗ ಪಡಿಸಿಕೊಂಡಿದ್ದಾರೆ;ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ

ಮುಖ್ಯಮಂತ್ರಿಗಳು ಲೋಕಾಯುಕ್ತ ಅಧಿಕಾರಿಗಳನ್ನ ದುರುಪಯೋಗ ಪಡಿಸಿಕೊಂಡಿದ್ದಾರೆ;ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ

0

ಬೆಂಗಳೂರು; ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಲೋಕಾಯುಕ್ತ ಅಧಿಕಾರಿಗಳನ್ನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಸರ್ಕಾರ ಅಧಿಕಾರದ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.ಕೋರ್ಟ್ ಲ್ಲಿ ನಿವೇಶನ ನಮ್ಮದೇ ಎಂದು ಹೇಳಿದ್ದಾರೆ.ಆಸ್ತಿ ಕೋರ್ಟ್ ಅಂಗಳದಲ್ಲಿದೆ. ಯಾವ ಅಧಾರದ ಮೇಲೆ ವಾಪಸು ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.ಮುಡಾ,ಕಮಿಷನರ್ ಗೆ ವಾಪಸು ತೆಗೆದುಕೊಳ್ಳುವ ಅಧಿಕಾರ ಇಲ್ಲ. ಅಧಿಕಾರಿಯನ್ನ ಮೊದಲು ಬಂಧಿಸಬೇಕು. ಮುಖ್ಯಮಂತ್ರಿಗಳು ಲೋಕಾಯುಕ್ತ ಅಧಿಕಾರಿಗಳನ್ನ ದುರುಪಯೋಗ ಪಡಿಸಿಕೊಂಡಿದ್ದಾರೆ.ಮುಡಾ ಕಮಿಷನರ್ ಯಾವ ಆಧಾರದ ಮೇಲೆ ವಾಪಸು ಪಡೆದ್ರು. ಅದು ಯಾರ ಆಸ್ತಿ.. ಗ್ರಾಂಟ್ ಆಗಿರುವ ಲ್ಯಾಂಡ್.ಅದನ್ನು ಖರೀದಿ ಮಾಡಿ ಗಿಫ್ಟ್ ಕೊಟ್ರು.ಬಳಿಕ ಕೋರ್ಟ್ ಲ್ಲಿ ನನ್ನದೇ ಆಸ್ತಿ ಎಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಅದು ಜೂಜುಬಿ ನಿವೇಶನಗಳು ಎಂದ್ರು. 62 ಕೋಟಿ ಬೆಲೆ ಬಾಳುವ ಆಸ್ತಿ ಅಂದಿದ್ದರು.ಇವತ್ತು ಮುಡಾ ಅಧಿಕಾರಿ ಎಲ್ಲಿ ಬಂದು ವಾಪಸು ಪಡೆಯುವ ಮನವಿ ಪಡೆದ್ರು .ಎಷ್ಟು ಅಧಿಕಾರ ದುರುಪಯೋಗ ಆಗಿದೆ .ಮುಡಾ ಕಮಿಷನರ್ ನ ಮೊದಲು ಬಂಧಿಸಬೇಕು ಎಂದು ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಊರು ಕೊಳ್ಳೆಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ ಹಾಗೆ ಆಗಿದೆ: ನವದೆಹಲಿಯಲ್ಲಿ ಬಿಜೆಪಿ ನಾಯಕ ಸಿ‌.ಟಿ ರವಿ ಹೇಳಿಕೆ

ನವದೆಹಲಿ; ಸಿದ್ದರಾಮಯ್ಯ ಪತ್ನಿ ಮುಡಾ ಸೈಟ್ ಗಳನ್ನು ವಾಪಾಸ್ ಕೊಟ್ಟ ವಿಚಾರಕ್ಕೆ ಸಂಬಂಧಪಟ್ಟಂತೆ ನವದೆಹಲಿಯಲ್ಲಿ ಬಿಜೆಪಿ ನಾಯಕ ಸಿ‌.ಟಿ ರವಿ ಪ್ರತಿಕ್ರಿಯಿಸಿದ್ದಾರೆ. ಇದು ಊರು ಕೊಳ್ಳೆಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ ಹಾಗೆ ಆಗಿದೆ ಎಂದು ಲೇವಡಿ ಮಾಡಿದ್ದಾರೆ.

ಇದು ಸಿದ್ದರಾಮಯ್ಯ ನವರ ಪ್ರಾಮಾಣಿಕ ನಿರ್ಧಾರ ಅಲ್ಲ.ಯಾರಿಗೂ ಜಗ್ಗಲ್ಲ, ಬಗ್ಗಲ್ಲ ಅಂತಾ ಹೇಳ್ತಿದ್ರು.ದೊಡ್ಡ ವಕೀಲರನ್ನು ಕರೆಸಿ ಬ್ಯಾಡ್ ಕೇಸ್ ನ ವಾದ ಮಾಡಿದ್ರು.ಇ.ಡಿ ಎಂಟ್ರಿಯಾದ ಮೇಲೆ ನಿವೇಶನ ವಾಪಾಸ್ ಕೊಟ್ರು.ಪ್ರಾಮಾಣಿಕವಾಗಿದ್ರೆ ಮೊದಲೆ ಸೈಟ್ ವಾಪಾಸ್ ಕೊಡಬೇಕಿತ್ತು. ಸಂವಿಧಾನಕ್ಕಿಂತ ನಾನೇ ಮೇಲೆ ಎಂದು ಸಿದ್ದರಾಮಯ್ಯ ಅಂದುಕೊಂಡಿದ್ರು.ಮುಡಾದಲ್ಲಿ ಸಾವಿರಾರು ಕೋಟಿ ಹಗರಣ ನಡೆದಿದೆ. ಜಿಲ್ಲಾಧಿಕಾರಿ ಪತ್ರ ಬರೆದಿರುವುದೆ ಇದಕ್ಕೆ ಉದಾಹರಣೆ..ಸಾವಿರಾರು ಕೋಟಿಗಳ ಅಕ್ರಮದ ತನಿಖೆ ನಡೆಯಬೇಕು.ಯಾರ್ಯಾರು ತಪ್ಪು ಮಾಡಿದ್ದಾರೆ ಎಲ್ಲವೂ ಬಹಿರಂಗವಾಗಬೇಕು.ಸರಕಾರ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯನವರ ನಿಜಬಣ್ಣ ಬಯಲು ಆಗಿದೆ.ಬಿಎಸ್ ವೈ ಸೈಟ್ ವಾಪಸ್ ಕೊಟ್ಟ ವಿಚಾರವಾಗಿ ಸಿದ್ದರಾಮಯ್ಯ ಹೇಗೆ ಮಾತನಾಡಿದ್ರು.ಸಿದ್ದರಾಮಯ್ಯನವರಿಗೆ ಈಗ ನಿಮಗೆ 62ಕೋಟಿ ಬೇಡವಾ..?ಅವತ್ತು ಬೇಕು ಅಂದಿದ್ರು ಇವತ್ತು ಬೇಡವಾ.ಸಿಎಂ 62ಕೋಟಿ ಕೇಳಿದ್ದು, ಸುಳ್ಳೋ ನಿಜವೋ..? ಮೊಕದ್ದಮೆಯೂ ದಾಖಲಾಯ್ತು ಮರ್ಯಾದಿಯೂ ಹೋಯ್ತು.ಹೋದ ಮರ್ಯಾದಿ ವಾಪಾಸ್ ಬರುವುದಿಲ್ಲ.ಅಕ್ರಮವಾಗಿ ನಿವೇಶನ ಪಡೆದ ಎಲ್ಲರ ಮೇಲೆ ತನಿಖೆ ಆಗಲಿ.ಮುಡಾಕಿಂತ ದೊಡ್ಡ ಹಗರಣ ಅರ್ಕಾವತಿ ಹಗರಣ.ಸಿದ್ದರಾಮಯ್ಯ ಅರ್ಕಾವತಿ ಹಗರಣದ ಹೊಣೆ ಹೊರಬೇಕು.ಯೋಜನಾಬದ್ಧವಾಗಿ ಮಾಡಿದ ಮೋಸ ಅರ್ಕಾವತಿ ಹಗರಣ. ಈಗ ಅರ್ಕಾವತಿ ವರದಿ ಮಂಡಿಸಲಿ.ವರದಿ ಮಂಡಿಸಲು ಸಿದ್ದರಾಮಯ್ಯ ನವರಿಗೆ ಭಯವೇ..?.ಹೇಗೂ ಪ್ರಾಮಾಣಿಕ ಎಂದು ಸಿದ್ದರಾಮಯ್ಯ ಹೇಳ್ತಾರೆ.ಯಾವುದಕ್ಕೂ ಹೆದರಬೇಡಿ , ಅರ್ಕಾವತಿ ವರದಿ ಮಂಡಿಸಿ.ರಾಜ್ಯಪಾಲರಿಗೆ ಲಗಾಮು ಹಾಕ್ತಿವಿ ಅಂತಾ ಹೋದ್ರು ಆಯ್ತಾ..?ಸಂವಿದಾನಕ್ಕೆ ಲಗಾಮಿ ಹಾಕೊಕೆ ಆಗುತ್ತಾ..? ನೂರು ಜನ ಬಂದ್ರು ಆಗಲ್ಲ.ಬೆದರಿಕೆ ಎಲ್ಲಾ ಗೂಂಡಾ ರಾಜ್ಯದಲ್ಲಿ ನಡೆಯುತ್ತೆ, ಪ್ರಜಾಪ್ರಭುತ್ವದಲ್ಲಿ ನಡೆಯಲ್ಲ ಎಂದಿದ್ದಾರೆ.