ಮನೆ Latest News ಜೆಡಿಎಸ್ ಕಛೇರಿಯಲ್ಲಿ ‌ಪಕ್ಷ ಸೇರ್ಪಡೆ ಕಾರ್ಯಕ್ರಮ; ಬಿಜೆಪಿ ತೊರೆದು ಜೆಡಿಎಸ್ ಸೇರಿದ ಪರಾಜಿತ ಅಭ್ಯರ್ಥಿ ಕೃಷ್ಣ...

ಜೆಡಿಎಸ್ ಕಛೇರಿಯಲ್ಲಿ ‌ಪಕ್ಷ ಸೇರ್ಪಡೆ ಕಾರ್ಯಕ್ರಮ; ಬಿಜೆಪಿ ತೊರೆದು ಜೆಡಿಎಸ್ ಸೇರಿದ ಪರಾಜಿತ ಅಭ್ಯರ್ಥಿ ಕೃಷ್ಣ ನಾಯಕ್

0

 

ಬೆಂಗಳೂರು: ಜೆಡಿಎಸ್ ಕಛೇರಿಯಲ್ಲಿ ‌ಪಕ್ಷ ಸೇರ್ಪಡೆ ಕಾರ್ಯಕ್ರಮ  ನಡೆಯಿತು. ಈ ವೇಳೆ ಬಿಜೆಪಿ ಪರಾಜಿತ ಅಭ್ಯರ್ಥಿ ಕೃಷ್ಣ ಬಿಜೆಪಿ ತೊರೆದು ಜೆಡಿಎಸ್ ಸೇರಿದರು. 2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಕೃಷ್ಣ ನಾಯಕ್ ಸೋಲು ಅನುಭವಿಸಿದ್ದರು.  ಎಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಕೃಷ್ಣ ನಾಯಕ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕೇಂದ್ರ ಸಚಿವ  ಕುಮಾರಸ್ವಾಮಿ ಸಮ್ಮುಖದಲ್ಲಿ ಬೆಂಬಲಿಗರ ಜೊತೆ  ಕೃಷ್ಣ ನಾಯಕ್ ಜೆಡಿಎಸ್ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ  ಕೇಂದ್ರ ಸಚಿವ ಕುಮಾರಸ್ವಾಮಿ ಸಾಂಕೇತಿಕವಾಗಿ ಇಂದು ಕೃಷ್ಣ ನಾಯಕ, ಅವರ ಬೆಂಬಲಿಗರು ಸೇರಿದ್ದಾರೆ. ಕೃಷ್ಣ ನಾಯಕ ನನಗೆ ಆತ್ಮೀಯರು, ಇದು ಪಕ್ಷ ಸೇರ್ಪಡೆ ಕಾರ್ಯಕ್ರಮ ಅಲ್ಲ. ಹೋದ ಬಾರಿ ಸ್ವಲ್ಪ ಗೊಂದಲ ಆಗಿದ್ದಕ್ಕೆ ಟಿಕೆಟ್ ಅವರಿಗೆ ಸಿಗಲಿಲ್ಲ. ಅವರೇ ಅವತ್ತು ಅಭ್ಯರ್ಥಿ ಆಗಿದ್ರೆ ಗೆಲ್ಲುತ್ತಿದ್ದರು. ಅಲ್ಲಿನ ಜನತೆ, ಕಾರ್ಯಕರ್ತರು ಪಕ್ಷಕ್ಕೆ ನಿಷ್ಟೆಯಿಂದ ಇದ್ದಾರೆ. ಕೃಷ್ಣ ನಾಯಕರನ್ನ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇವೆ. ಅಲ್ಲಿ ಇನ್ಮುಂದೆ ಯಾವುದೇ ಗೊಂದಲ ಆಗಬಾರದು. ದೇವೇಗೌಡರ ಜೊತೆಗೆ ಕೆಲಸ ಮಾಡಿದವರು ನಮ್ಮ ಜೊತೆಗೆ ಇದ್ದಾರೆ. ಸದ್ಯದಲ್ಲಿಯೇ ಚಿಕ್ಕಣ್ಣ ಸೇರಿ ಎಲ್ಲರ ಜೊತೆಗೆ ಮಾತಾಡುತ್ತೇನೆ. ಮುಂದಿನ ಚುನಾವಣೆಯನ್ನ ಕೃಷ್ಣ ನಾಯಕ ನೇತೃತ್ವದಲ್ಲಿ ಮಾಡ್ತಿವಿ. ಬೃಹತ್ ಸಭೆಯನ್ನ ಹೆಚ್ ಡಿ ಕೋಟೆಯಲ್ಲಿ ಮಾಡೋಣ. ಇಲ್ಲಿ ಇರೋರು ಎಲ್ಲ ನಮ್ಮ ಕಾರ್ಯಕರ್ತರು, ಕಳೆದ ಬಾರಿ ಎರಡು ಬಣ ಆಗಿ ಸಮಸ್ಯೆ ಆಗಿದೆ. ನಿಮ್ಮ ಒಕ್ಷಯ ಇದು, ನೀವೇ ಬೆಳೆಸಿದ ಪಕ್ಷ ಇದು. ಹೆಚ್.ಡಿ ಕೋಟೆ ಮೊದಲ ಟಿಕೆಟ್ ಘೋಷಣೆ ಆಗುತ್ತದೆ. ನೀವೆಲ್ಲರೂ ಹೋಗಿ ಕೆಲಸ ಮಾಡಿ. ಕೃಷ್ಣ ನಾಯಕ ಮರಳಿ ಮನೆಗೆ ಬಂದಿದ್ದಾರೆ, ಇದೇನು ಪಕ್ಷ ಸೇರ್ಪಡೆ ಅಲ್ಲ ಎಂದರು.

ಕೃಷ್ಣ ನಾಯಕ್ ಮಾತನಾಡಿ ಎಲ್ಲರ ಬೆಂಬಲದಿಂದ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷ ಕಟ್ಟಬೇಕು.೨೦೨೮ ಕ್ಕೆ ಕುಮಾರಸ್ವಾಮಿ ಅವರನ್ನ ಸಿಎಂ ಮಾಡೊದಕ್ಕೆ ನಾವೆಲ್ಲಾ ಪಕ್ಷ ಸಂಘಟನೆ ಮಾಡಬೇಕು. ಹೆಚ್ ಡಿ ಕೋಟೆಯಲ್ಲಿ ೨೦೨೮ ಕ್ಕೆ ಮೊದಲು ಅಭ್ಯರ್ಥಿ ಘೋಷಣೆಯಾಗುತ್ತೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದರು. ಇದೇ ವೇಳೆ ಕೃಷ್ಣ ನಾಯಕ ಅಭಿಮಾನಿದ ಹೆಚ್‌ಡಿಕೆ ಗೆ ಮನವಿ ಮಾಡಿದ್ರು. ಮುಂದಿನ ಚುನಾವಣೆಯಲ್ಲಿ ಮೋಸ ಮಾಡಬೇಡಿ ಎಂದರು. ಆಗ ಹೆಚ್ ಡಿ ಕೆ ಅಭಿಮಾನಿಗೆ ನಾವು ಮೋಸ ಮಾಡಿಲ್ಲ ಎಂದರು.