ಮನೆ Latest News ಕೆಪಿಟಿಸಿಎಲ್‌ ನೌಕರರ ಸಂಘದ ವಜ್ರಮಹೋತ್ಸವ ಕಾರ್ಯಕ್ರಮ

ಕೆಪಿಟಿಸಿಎಲ್‌ ನೌಕರರ ಸಂಘದ ವಜ್ರಮಹೋತ್ಸವ ಕಾರ್ಯಕ್ರಮ

0

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೆಪಿಟಿಸಿಎಲ್‌ ನೌಕರರ ಸಂಘದ ವಜ್ರಮಹೋತ್ಸವ ಕಾರ್ಯಕ್ರಮ ನಡೆಯಿತು. ವಜ್ರ ಜ್ಯೋತಿ ಸ್ಮರಣ ಸಂಚಿಕೆ ಲೋಕಾರ್ಪಣೆ ಸಮಾರಂಭ ನಡೆಯಿತು. ರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಇಂಧನ ಸಚಿವ ಕೆಜೆ ಜಾರ್ಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಸಂತೋಷವಾಗಿ ಭಾಗಿಯಾಗಿದ್ದೇನೆ. ನಾನು ಡಿಕೆ ಶಿವಕುಮಾರ್,  ಜಾರ್ಜ್, ರಾಜೇಗೌಡ್ರು, ಖಾದ್ರಿ, ಗೌರವ್ ಗುಪ್ತ ಎಲ್ಲರು ಸೇರಿ ವಜ್ರ ಜ್ಯೋತಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ್ದೇವೆ. 1964 ರಲ್ಲಿ ಈ ಸಂಘ ಪ್ರಾರಂಭ ಆಯ್ತು .ಯಾವುದೆ ಸಂಘಟನೆಯಲ್ಲಿ 60 ವರ್ಷಗಳು ಮಹತ್ವದ್ದಾಗಿದೆ. ನೌಕರರ ಕಷ್ಟ ಸುಖಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ಪೂರೈಸುವ ಕೆಲಸ ನೀವೆಲ್ಲಾ ಮಾಡ್ತಿದ್ದಿರಾ ನಿಮಗೆ ಅಭಿನಂದನೆಗಳು. 1902 ರಲ್ಲಿ ದಕ್ಷಿಣ ಏಷ್ಯದಲ್ಲಿ ಮೊದಲ ಬಾರಿಗೆ ಶಿವನ ಸಮುದ್ರದಲ್ಲಿ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆ ಆಯ್ತು. ಚಾಮರಾಜ ಒಡೆಯರ್ ಧರ್ಮ ಪತ್ನಿ ರಾಜಮಾತಿ ಕೆಂಪ ನಂಜಮ್ಮಣ್ಣಿ ಇದನ್ನ ಪ್ರಾರಂಭ ಮಾಡಿದ್ರು. ಏಷ್ಯಾದಲ್ಲಿ ಕರ್ನಾಟಕ ಮೊದಲ ಬಾರಿಗೆ ಉತ್ಪಾದನೆ ಅದ ಹೆಗ್ಗಳಿಕೆ ನಮಗೆ ಸೇರುತ್ತೆ ಎಂದರು.

1902  ರಲ್ಲಿ ಅರಮನೆಗೆ ವಿದ್ಯುತ್ ಬಂತು. 2023 ರಲ್ಲಿ ಅಧಿಕಾರಕ್ಕೆ ಬಂದ 34 ಸಾವಿರ ಮೆಗಾ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಅದು ಕೂಡ ಸಾಲಲ್ಲ, ರೈತರ ಪಂಪಸೆಟ್ ಗೆ ನಾವು ಏಳು ಗಂಟೆ ಮಾತ್ರ ಕೊಡ್ತಿದ್ದೇವೆ. ಆಹಾರ ಉತ್ಪಾದನೆ ಹೆಚ್ಚು ಮಾಡಲು ನಾವು ವಿದ್ಯುತ್ ಪೂರೈಕೆ ಮಾಡಬೇಕಾಗಿದೆ.ಕುಸುಮ‌ ಸಿ ಯಲ್ಲಿ 2400 ಮೆಗಾ ವಿದ್ಯುತ್ ಉತ್ಪಾದನೆ ಮಾಡ್ತೇವೆ.ರಾಜ್ಯದ ಜನರಿಗೆ ದಿನಕ್ಕೆ ‌ 24 ಗಂಟೆ ವಿದ್ಯುತ್ ನೀಡ್ತೇವೆ. 63 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ‌ ಇಟ್ಟುಕೊಂಡಿದ್ದೇವೆ.19 ಸಾವಿರ ಕೋಟಿ ಹಣ ಪಂಪಸೆಟ್ ಗಳಿಗೆ ಸಬ್ಸಿಡಿ ಕೊಡ್ತಿದ್ದೇವೆ. ರೈತರು ಸ್ವಾವಲಂಬಿ ಆಗಬೇಕು, ಬೇರೆ ದೇಶಗಳಿಗೆ ಆಹಾರ ಕೊಡವ ಕೆಲಸ ಆಗಬೇಕು. ಆಹಾರ ಕೂಡಲು ನೀವೆಲ್ಲರೂ ಕಾರಿಣಿಕರ್ತರು. ಮುಂದಿನ ರಾಜ್ಯದ ಅಭಿವೃದ್ಧಿ ಆಗಬೇಕು ಎಂದ್ರೆ ನಿಮ್ಮ ಪಾತ್ರ ಬಹಳ ಇದೆ. ವಿದ್ಯುತ್ ಒಂದು ಕಚ್ಚಾವಸ್ತು, ಎಲ್ಲದಕ್ಕೂ ಬೇಕು. ಅಪಘಾತಗಳಾಗುತ್ತವೇ, ನೀವೆಲ್ಲ ಕಷ್ಟದಿಂದ ಕೆಲಸ ಮಾಡ್ತಿದ್ದೀರಿ.ನಿಮಗೆ ಸರ್ಕಾರ ಎಲ್ಲ ರೀತಿಯ ಸಹಕಾರ ಕೊಡ್ತೇವೆ ಎಂದು ಭರವಸೆ ನೀಡಿದ್ರು.

ಅಧ್ಯಕ್ಷ ಬಲರಾಮ್ ಅನೇಕ ಬೇಡಿಕೆ ಇಟ್ಟಿದ್ದಾರೆ. ನಾವು ಯಾವಾಗಲೂ ನಿಮ್ಮ ಜೊತೆಗೆ ಇದ್ದೇವೆ. ನೀವು ನಮ್ಮ ಜೊತೆಗೆ ಇರಬೇಕು, ನಿಮ್ಮ ಬೇಡಿಕೆ ಕೂಲಂಕುಷವಾಗಿ ಪರಿಶೀಲನೆ ಮಾಡಿ ಅನುಕೂಲ ಮಾಡ್ತೇವೆ. 88 ಸಾವಿರ ‌ನಿಮ್ಮ ಸಿಬ್ಬಂದಿ ಸಾಮರ್ಥ್ಯ ಇದೆ.  35 ಸಾವಿರ ಖಾಲಿ ಹುದ್ದೆ ಇರೋದು ಈಗ ಗೊತ್ತಾಗಿದೆ. ಹಂತ ಹಂತವಾಗಿ ಹುದ್ದೆ ನೇಮಕ ಮಾಡ್ತೇವೆ.ನಮ್ಮ ಸರ್ಕಾರ ‌ನುಡಿದಂತೆ ನಡೆಯುವ ಸರ್ಕಾರ. ಗ್ಯಾರಂಟಿ ಜೊತೆಗೆ 200 ಕ್ಕೂ ಹೆಚ್ಚು ಕೊಟ್ಟ ಮಾತು ಉಳಿಸಿಕೊಳ್ಳೋ ಸರ್ಕಾರ‌ ನಮ್ಮದು.ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗೋಣ. ಕೇವಲ ಇಲಾಖೆ ಮಾತ್ರವಲ್ಲ, ಇಡೀ ರಾಜ್ಯದ ಎಲ್ಲ ಜವಾಬ್ದಾರಿ ಹೊರಬೇಕಾಗುತ್ತದೆ. 558 ಪೌರ ಕಾರ್ಮಿಕರಿದ್ದಾರೆ, ಅವರನ್ನ ಖಾಯಂ ಮಾಡೋಣ.ಒಪಿಎಸ್ ನಾವು ಮಾಡೋದಲ್ಲ, ಕೇಂದ್ರ ಸರ್ಕಾರ ಮಾಡಬೇಕು. ಇದನ್ನ ನೀವು ಅರ್ಥ ಮಾಡಿಕೊಳ್ಳಬೇಕು.ನಾವು ಚರ್ಚೆ ಮಾಡೋಣ ಪ್ರಣಾಳಿಕೆಯಲ್ಲಿಟ್ಟಿದ್ದೇವೆ. ಚರ್ಚೆ ಮಾಡಿ ತೀರ್ಮಾನ ಮಾಡೋಣ.ಗೃಹ ಜ್ಯೋತಿ ಯೋಜನೆ 2೦೦ ಯುನಿಟ್ ಫ್ರಿಯಾಗಿ ಕೊಡ್ತಿದ್ದೇವೆ. ಇದಕ್ಕೆಲ್ಲಾ ನೀವೆ ಕಾರಣ.ಏನೆ ಕಾರ್ಯಕ್ರಮ ಮಾಡಿದ್ರು ನೀವು ಕೈ ಜೋಡಿಸಬೇಕು. ನಿಮ್ಮ ಬೇಡಿಕೆಗಳನ್ನ ಮಾನವೀಯತೆಯಿಂದ ಪರಿಗಣಿಸುತ್ತೇವೆ ಎಂದು ಸಿಎಂ ಭರವಸೆ ನೀಡಿದ್ರು.