ಬೆಂಗಳೂರು; ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಗೊತ್ತಿಲ್ಲ, ಹೈಕಮಾಂಡ್ ಆ ಬಗ್ಗೆ ನಿರ್ಧಾರ ಮಾಡಲಿದೆ ಎಂದು ಗೃಹಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಸಿಎಂ ದೆಹಲಿ ಪ್ರವಾಸ ಕ್ಯಾಬಿನೆಟ್ ಪುನರ್ ರಚನೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಸಿಎಂ ದೆಹಲಿಯಲ್ಲಿರೋ ಕರ್ನಾಟಕ ಭವನ ನೂತನ ಕಟ್ಟಡ ಉದ್ಘಾಟನೆಗೆ ಹೋಗ್ತಿದ್ದಾರೆ ಎಂದ್ರು. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಗೊತ್ತಿಲ್ಲ. ಹೈಕಮಾಂಡ್ ಆ ಬಗ್ಗೆ ನಿರ್ಧಾರ ಮಾಡಲಿದೆ ಎಂದರು.
ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಆಡಿಯೋ ತನಿಖೆ ಆಗ್ತಿದೆ. ತನಿಖೆ ಸಂಧರ್ಭದಲ್ಲಿ ಯಾವುದೇ ವಿಚಾರ ಬಹಿರಂಗವಾಗಿ ಹೇಳಲ್ಲ. ತನಿಖೆ ವರದಿ ಬಂದ ಬಳಿಕ ಮಾಹಿತಿ ನೀಡ್ತೀನಿ ಎಂದರು. ಹನಿಟ್ರಾಪ್ ಮತ್ತು ಕೊಲೆ ಬೆದರಿಕೆ ಎರಡು ಪ್ರತ್ಯೇಕ ದೂರು ದಾಖಲಾಗ್ತಿದೆಯಾ ಅನ್ನೋ ವಿಚಾರದ ಬಗ್ಗೆ ಮಾತನಾಡಿದ ಅವರು ಎರಡೂ ತನಿಖೆ ನಡೆಯುತ್ತಿದೆ.ಆ ಬಗ್ಗೆ ಯಾವುದೇ ಮಾಹಿತಿ ನೀಡಲ್ಲ ಎಂದಿದ್ದಾರೆ.
ಮೋದಿ ಅವರ ಆರ್ಥಿಕ ನೀತಿಯಿಂದ ಜನರ ಬದುಕು ನರಕ ಆಗಿದೆ ; ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
ಬೆಂಗಳೂರು; ಮೋದಿ ಅವರ ಆರ್ಥಿಕ ನೀತಿಯಿಂದ ಜನರ ಬದುಕು ನರಕ ಆಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬೆಲೆ ಏರಿಕೆ ವಿಚಾರಕ್ಕೆ ಬಿಜೆಪಿ ಆಹೋರಾತ್ರಿ ಮಾಡಲು ಹೊರಟಿರೋದರ ಬಗ್ಗೆ ಮಾತನಾಡಿದ ಅವರು ಅವರು ಅಹೋರಾತ್ರಿ ಧರಣಿ ಮಾಡೋದು ಬಹಳ ಒಳ್ಳೆಯದು.. ಕೊನೆಗೂ ಅವರಿಗೆ ಜ್ಞಾನೋದಯ ಆಗಿದೆ. ಇದು ಕೇಂದ್ರ ಸರ್ಕಾರದ ವಿರುದ್ದ ಮಾಡಿದ್ರೆ ಒಳ್ಳೆಯದು. ಮೋದಿ ಅವರ ಆರ್ಥಿಕ ನೀತಿಯಿಂದ ಜನರ ಬದುಕು ನರಕ ಆಗಿದೆ ಎಂದಿದ್ದಾರೆ.
ಇಷ್ಟೆಲ್ಲಾ ಬೆಲೆ ಏರಿಕೆಗೆ ಕೇಂದ್ರವೇ ಕಾರಣ. ತೈಲ ಬೆಲೆ ಯಾರು ನಿಗದಿ ಮಾಡ್ತಾರೆ?. ಮೋದಿ ಅವರ ಮಾಸ್ಟರ್ ಸ್ಟ್ರೋಕ್ ನಿಂದ ದೇಶದ ಆರ್ಥಿಕ ಸ್ಥಿತಿ ಕುಸಿದು ಹೋಗಿದೆ. ಆದಾನಿ ಅಂಬಾನಿ ಪರ ನೀತಿಯಿಂದಲೇ ಇಷ್ಟೆಲ್ಲಾ ಆಯ್ತು ಎಂದ್ರು,ಕೆಲಸಕ್ಕೆ ಬಾರದು ಹಲಾಲ್ ಅಂದರು, ಹನಿಟ್ರ್ಯಾಪ್ ಅಂದರು, ಇಷ್ಟೆಲ್ಲಾ ಚರ್ಚೆ ಆಯ್ತು. ಯಾಕೆ ಬೆಲೆ ಏರಿಕೆ ಕುರಿತು ಚರ್ಚೆ ಆಗಿಲ್ಲ, ಎಲ್ಲಿ ಲೋಪ ಇದ್ಯಾ ಅಂತ ಮಾತಾಡಲಿಲ್ಲ. ಯತ್ನಾಳ್, ವಿಜಯೇಂದ್ರ ಸಮರ ಮುಚ್ಚಿಹಾಕೋಕೆ ಪ್ರತಿಭಟನೆ ನಡೀತಿದೆ. ಇವರಿಗೆ ನೈತಿಕತೆ, ಸಾಮರ್ಥ್ಯ ಇಲ್ಲ. ಬಿಜೆಪಿಯಲ್ಲಿ ಒಗ್ಗಟ್ಟು ಇಲ್ಲ, ನಾಯಕತ್ವದ ಕೊರತೆ ಇದೆ. ಸದನದಲ್ಲೇ ನೀವೇ ನೋಡಿದ್ದೀರಿ ಅಲ್ವೇಯ ಸಮಯನ್ವಯದ ಕೊರತೆ ಇಷೆ, ಎದ್ದು ಕಾಣ್ತಿದೆ. ಒಗ್ಗಟು ಪ್ರದರ್ಶಿಸೋ ಅನಿವಾರ್ಯತೆ ಇದೆ ಎಂದು ತಿಳಿಸಿದ್ರು.
18 ಶಾಸಕರನ್ನ ಯಾಕೆ ಅಮಾನತು ಮಾಡಲಾಯಿತು, ಅವರ ನಡತೆಯಿಂದ ಮಾತ್ರ ಅಲ್ವೇ. ಸದನದಲ್ಲಿ ಚರ್ಚೆ ಮಾಡಬೇಕಿತ್ತು, ಆದ್ರೆ ಸ್ಪೀಕರ್ ಚೇರ್ ಬಳಿ ಹೋಗಿ ಪುಸ್ತಕ ಹರಿಯೋದು, ಚೆಲ್ಲೋದು ಆಗಿತ್ತು. ನಾನಾಗಿದ್ರೆ ಒಂದು ವರ್ಷ ಅಮಾನತು ಮಾಡುತ್ತಿದ್ದೆ. ನಿಮಗೆ ಶಾಸಕರಿಗೆ ಎಲ್ಲಾ ಸೌಲಭ್ಯ ಬೇಕು, ಆದ್ರೆ ಜವಾಬ್ದಾರಿ, ಕರ್ತವ್ಯ ಗೊತ್ತಿಲ್ವಾ? ಎಂದು ಪ್ರಶ್ನಿಸಿದ್ದಾರೆರಾಜ್ಯಪಾಲರಿಂದ ಬಿಲ್ ವಾಪಸ್ ವಿಚಾರದ ಬಗ್ಗೆ ಮಾತನಾಡಿದ ಅವರು ನೋಡೋಣ ಬಿಡಿ.. ಇದರಲ್ಲಿ ಹೊಸದೇನಿದೆ. ತಮಿಳುನಾಡಲ್ಲೂ ಇದೇ ರೀತಿ ಮಾಡಿದ್ದಾರೆ. ಸ್ಪಷ್ಟನೆ ಕೇಳಿದ್ರೆ ಕೊಡುತ್ತೇವೆ. ಏನೂ ಮಾಡೋದಕ್ಕೆ ಆಗಲ್ಲ.ಬಿಲ್ ತರೋಕೆ ಹಾಗೇ ಅಗುತ್ತಾ? ಸದನದಲ್ಲಿ ಚರ್ಚೆ ಆಗುತ್ತೆ ಅಲ್ವಾ?. ವಿಧೇಯಕ ಅಂಗೀಕಾರ ಮಾಡೋದು ಸದನ ಅಲ್ವೇ ಎಂದಿದ್ದಾರೆ.
ಅಧ್ಯಕ್ಷರ ಮನೆ ಮುಂದೆ, ಮಾಧ್ಯಮದ ಮುಂದೆ ಚರ್ಚೆ ಮಾಡೋದಕ್ಕೆ ಆಗುತ್ತೆ. ನೋಡೋಣ. ಸಿಎಂ , ಡಿಸಿಎಂ ಅವರು ದೆಹಲಿಗೆ ಹೋಗ್ತಾರೆ. ಅಲ್ಲಿ ಚರ್ಚೆ ಮಾಡ್ತಾರೆ, ನೋಡೋಣ. ಸಂಪುಟ ಪುನಾರಚನೆ ವಿಚಾರ ಎಲ್ಲವೂ ನೋಡೋಣ. ಪರಿಷತ್ ಸ್ಥಾನದ ಕುರಿತು ಅಲ್ಲಿ ಚರ್ಚೆ ಆಗುತ್ತೆ ಅದು ಮುಖ್ಯ, ಆದ್ರೆ ಅಧ್ಯಕ್ಷರ ಬದಲಾವಣೆ ಕುರಿತು ನಮಗೆ ಗೊತ್ತಿಲ್ಲ ಎಂದ್ರು. ನಾವು ತಮಿಳುನಾಡು ರೀತಿ ಸುಪ್ರೀಂ ಕೋರ್ಟ್ ಗೆ ಹೋಗಬೇಕಾಗುತ್ತದೆ. ಕೇವಶ ಕೃಪಾ, ಆರ್ ಆರ್ ಎಸ್ ಹೇಳಿದಂತೆ ರಾಜಭವನ ಕೇಳುತ್ತಿದೆ. ಎಂದ ಅವರು ಗ್ರಾಮೀಣಾಭಿವೃದ್ಧಿ ವಿವಿ ಬಿಲ್ ವಾಪಾಸ್ ಕಳುಹಿಸಿದ ವಿಚಾರದ ಬಗ್ಗೆ ಮಾತನಾಡಿ ರಾಜಭವನ ಬಿಜೆಪಿ ಕಛೇರಿ, ಕೇಶವ ಕೃಪಾ ಆಗಿದೆ. ನೋಡೋಣ ಬಿಡಿ.. ಇದರಲ್ಲಿ ಹೊಸದೇನಿದೆ. ತಮಿಳುನಾಡಲ್ಲೂ ಇದೇ ರೀತಿ ಮಾಡಿದ್ದಾರೆ. ತಮಿಳುನಾಡಿನಂತೆ ನಾವು ಸುಪ್ರಿಂಕೋರ್ಟ್ಗೆ ಹೋಗ್ತೇವೆ. ಸ್ಪಷ್ಟನೆ ಕೇಳಿದ್ರೆ ಕೊಡುತ್ತೇವೆ, ಏನೂ ಮಾಡೋದಕ್ಕೆ ಆಗಲ್ಲ. ಬಿಲ್ ತರೋಕೆ ಹಾಗೇ ಅಗುತ್ತಾ? ಸದನದಲ್ಲಿ ಚರ್ಚೆ ಆಗುತ್ತೆ ಅಲ್ವಾ?.ವಿಧೇಯಕ ಅಂಗೀಕಾರ ಮಾಡೋದು ಸದನ ಅಲ್ವೇ. ರಾಜಭವನ, ರಾಜ್ಯ ಸರ್ಕಾರದ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಬೇಕಿರೋದು ಯಾರು?. ಕೇಂದ್ರ ಸರ್ಕಾರ, ಬಿಜೆಪಿಯವ್ರ ಮಾತಿನಂತೆ ರಾಜ್ಯಪಾಲರು ನಡೆಯುತ್ತಿದ್ದಾರೆ ಎಂದ್ರು.