ಮನೆ Latest News ಕಿಯೋನಿಕ್ಸ್ ಇ-ಕಾಮರ್ಸ್ ಪೋರ್ಟಲ್ ಉದ್ಘಾಟನೆ

ಕಿಯೋನಿಕ್ಸ್ ಇ-ಕಾಮರ್ಸ್ ಪೋರ್ಟಲ್ ಉದ್ಘಾಟನೆ

0

ಬೆಂಗಳೂರು; ಕಿಯೋನಿಕ್ಸ್ ಇ-ಕಾಮರ್ಸ್ ಪೋರ್ಟಲ್ ಉದ್ಘಾಟನಾ ಸಮಾರಂಭಕ್ಕೆ  ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು. ಬೆಂಗಳೂರಿನ ಕುಮಾರ ಪಾರ್ಕ್ ರಸ್ತೆಯಲ್ಲಿರುವ ಕಿಯೋನಿಕ್ಸ್ ಕೇಂದ್ರ ಕಚೇರಿಯಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಸೇರಿದಂತೆ ಹಲವರ ಉಪಸ್ಥಿತರಿದ್ದರು.

ಪೋರ್ಟಲ್ ಉದ್ಘಾಟನೆ ಮಾಡಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್  ನಾನು ಶಾಲೆಯಲ್ಲಿ ಓದುತ್ತಿದ್ದಾಗ ಎಲೆಕ್ಟ್ರಾನಿಕ್ ಸಿಟಿ ಆರಂಭವಾಯ್ತು. ಕ್ಯಾಲ್ಯೂಕ್ಯುಲೆಟರ್ ಇಲ್ಲದ ಕಾಲದಲ್ಲಿ ನಾನು ಓದುತ್ತಿದ್ದೆ. ಈಗ ಜಗತ್ತು ಬೆಳೆದಿದೆ, ನಮ್ಮ ಬೆಂಗಳೂರು ವಿಶ್ವ ನೋಡುವಂತೆ ಬೆಳೆದಿದೆ. ಕಳೆದ ಎರಡು ವರ್ಷಗಳಿಂದ ಕಿಯೋನಿಕ್ಸ್ ಸಂಸ್ಥೆ ಸಂಕಷ್ಟ ಎದುರಿಸಿತ್ತು. ಈಗ ಅವೆಲ್ಲವನ್ನ ಮೆಟ್ಟಿನಿಂತು ಸಂಸ್ಥೆ ಮುಂದೆ ಸಾಗುತ್ತಿದೆ. ತಂತ್ರಜ್ಞಾನದಿಂದಲೇ ಇವತ್ತು ಎಲ್ಲವನ್ನೂ ಮಾಡಲು ಸಾಧ್ಯ. ತಂತ್ರಜ್ಞಾನವೇ ಈಗ ಸಂಪತ್ತು.ನಮ್ಮ ಈ  ಸರ್ಕಾರಿ ಸಂಸ್ಥೆ, ಖಾಸಗಿಯವರಿಗೂ ಪೈಪೋಟಿ ನೀಡುವಂತೆ ಕೆಲಸ ಮಾಡುತ್ತಿದೆ ಎಂದರು.

ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ ವೇದಿಕೆ ಮೇಲೆ ಡಿಸಿಎಂ ಡಿಕೆಶಿ ಅವರನ್ನ ಹಾಡಿ ಹೊಗಳಿದ್ರು. ಸಮುದ್ರದ ಮಂಥನ ಆದ ಸಂದರ್ಭದಲ್ಲಿ ಪ್ರಪ್ರಥಮವಾಗಿ ಅಮೃತ ಬಂತು. ಅಮೃತ ಬಂದ ನಂತರ ವಿಷ ಬಂತು. ಆದರೆ ಕಿಯೋನಿಕ್ಸ್ ನಲ್ಲಿ ಮಂಥನ ಮಾಡಿದ ಸಂದರ್ಭದಲ್ಲಿ ಪ್ರಪ್ರಥಮವಾಗಿ ವಿಷ ಬಂತು. ಸಮುದ್ರ ಮಂಥನ ಮಾಡಿದ ಸಂದರ್ಭದಲ್ಲಿ ವಿಷವನ್ನ ಕುಡಿಯೋಸ್ಕರ ಶಿವನನ್ನ ಕರೆಸಿದ್ರು. ಕಿಯೋನಿಕ್ಸ್ ಮಂಥನ ಮಾಡಿದಾಗ ಅಮೃತ ಬಂದಾಗ ಶಿವನ ಕರೆಸುವುದಕ್ಕೆ ಆಗಿಲ್ಲ, ಶಿವಕುಮಾರ್ ಅವರನ್ನ ಕರೆಸಿದ್ದೇವೆ. ಸಂಸ್ಥೆ ಹಳೆಯ ಜಡತ್ವ ಬಿಗಿಯಾಗಿ ಚಾಟಿ ಬಿಸುವವರ ಕೈನಲ್ಲಿ ಇರಬೇಕು. ಚಾಟ ಬೀಸಿ ಜಡತ್ವ ಬಿಡಿಸುವ ಕೆಲಸವನ್ನ ಸಚಿವ ಪ್ರಿಯಾಂಕ್ ಖರ್ಗೆಯವರ ಮಾರ್ಗದರ್ಶನದಿಂದ ಮಾಡಿದ್ದೇವೆ ಎಂದರು.

ಕಿಯೋನಿಕ್ಸ್ ಹಗರಣದ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಶಾಸಕ ಶರತ್ ಬಚ್ಚೇಗೌಡ  ಹಿಂದೆ ಕಿಯೋನಿಕ್ಸ್ ಸಂಸ್ಥೆಯ ಲೋಪದೋಷಗಳನ್ನು ಮಾಧ್ಯಮ ಮಿತ್ರರು ವರದಿ ಮಾಡಿದ್ದಾರೆ. ಹಿಂದಿನ ಸರ್ಕಾರದ ಆಡಳಿತದಲ್ಲಿ ವ್ಯಕ್ತಿ ಆಧಾರಿತವಾಗಿತ್ತು. ವ್ಯವಸ್ಥಿತವಾಗಿ ಒಂದು ವರ್ಷದ ಸತತ ಪ್ರಯತ್ನದಿಂದ ಕಿಯೋನಿಕ್ಸ್ ಹಗರಣ ಸಂದರ್ಭದಲ್ಲಿ ಸರ್ಕಾರ ತನಿಖೆ ಪ್ರಾರಂಭ ಆದಾಗ ಹಳೆಯ ವ್ಯವಸ್ಥೆಯನ್ನು ನೆಲಸಮ ಮಾಡಿ, ನೆಲಸಮದಿಂದ ಮತ್ತೊಮ್ಮೆ ಕಟ್ಟಡ ಕಟ್ಟುವ ಕೆಲಸ ಮಾಡಿದ್ದೀವಿ. ಸಾಕಷ್ಟು ಬದಲಾವಣೆ ಮಾಡಿದ್ದೇವ, SOPಗಳನ್ನ ತಂದಿದ್ದೇವೆ ವ್ಯಕ್ತಿ ಇರಬಹುದು, ಹೋಗಬಹುದು ವ್ಯವಸ್ಥೆ ಬದಲಾವಣೆ ಮುಖ್ಯ. ರೇಷ್ಮೆ ಹುಳು ಚಿಟ್ಟೆಯಾಗಿ ಹೊರಬರಬೇಕು. ಆ ರೀತಿ ಕಿಯೋನಿಕ್ಸ್ ಸಂಸ್ಥೆ ಕೆಲಸ ಮಾಡುತ್ತೆ ಎಂದರು.

ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಬೆಂಗಳೂರು; ಜಾತಿಗಣತಿ ಸಮೀಕ್ಷಾ ವರದಿಯ ಮೂಲ ವರದಿ ಬಗ್ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ಕೊಟ್ಟಿದ್ದಾರೆ.

ಸಮಿತಿಯ ಸದಸ್ಯರೆಲ್ಲರೂ ಸಹಿ ಹಾಕಿದ್ದಾರೆ.ಆ ಸಮಿತಿ ಸದಸ್ಯರನ್ನ ನೇಮಿಸಿದ್ದು ಯಾವ ಸರ್ಕಾರ ?. ಇದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕ ಮಾಡಿರೋದು ಅಲ್ಲವೇ ?. ಅವರನ್ನ ನಂಬಿಕೊಂಡೇ ಸಂಪುಟದಲ್ಲಿ ಮಂಡನೆ ಮಾಡಲಾಗಿದೆ.ಹಾಗಾದರೆ ಬಿಜೆಪಿ ಅವಧಿಯ ಸದಸ್ಯರು ಸಿದ್ಧಪಡಿಸಿರೋ ವರದಿ ಸುಳ್ಳೇ ?.ಆದರೂ ಈಗ ವಿರೋಧಿಸುತ್ತಿರುವುದು ಯಾಕೆ ?. ಸರಿ ಇದೆಯೋ ತಪ್ಪಿದೆಯೋ ಅಂತಾ ಸಿಎಂ ಸಂಪುಟ ಸಭೆಯಲ್ಲಿ ಕೇಳಿದ್ದಾರೆ. ಅಭಿಪ್ರಾಯವನ್ನು ಸಚಿವರೆಲ್ಲರೂ ಹೇಳಿದ್ದಾರೆ.ಜೊತೆಗೆ ಸಮಯಾವಕಾಶವನ್ನ ಸಹ ಕೇಳಿದ್ದಾರೆ ಎಂದು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಅಪಪ್ರಚಾರ ಮಾಡುವುದು ನಿಲ್ಲಿಸಬೇಕು. ಜಾತಿಗಣತಿ ಬಗ್ಗೆ ನಿಮ್ಮ ನಿಲುವು ಏನು ಅಂತ ರಾಷ್ಟ್ರ ಮಟ್ಟದಲ್ಲಿ ತಿಳಿಸಿ. ಈಗಾಗಲೇ ಸಚಿವರು ಅವರ ಅಭಿಪ್ರಾಯ ಹೇಳಿದ್ದಾರೆ. ಆಯಾ ಸಮುದಾಯಗಳು ಕೂಡ  ಅಭಿಪ್ರಾಯ ಹೇಳುತ್ತಿವೆ. ಎಲ್ಲ ಡಾಟಾಗಳು ಜಿಲ್ಲಾಧಿಕಾರಿಗಳ ಬಳಿ ಇವೆ. ಯಾವ ಡಾಟಾ ಬೇಕು ಹೇಳಿ ತರಿಸಿ ಕೋಡೋಣ.ಆದ್ರೆ ಬಿಜೆಪಿ ಸುಳ್ಳು ಹೇಳುವುದು ಬೇಡ ಎಂದಿದ್ದಾರೆ.