ಬೆಂಗಳೂರು; ಕರ್ನಾಟಕ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಏಳು ಮಂದಿ ಸಚಿವರಿಗೆ ಪತ್ರ ಬರೆದಿದೆ.ಸಚಿವ ಡಿಸಿಎಂ ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ, ಮಹದೇವಪ್ಪ, ಜಮೀರ್ ಅಹಮದ್, ಬೋಸರಾಜು, ದಿನೇಶ್ ಗುಂಡೂರಾವ್, ರಹೀಂ ಖಾನ್ ಗೆ ಗುತ್ತಿಗೆ ದಾರರ ಸಂಘ ಪತ್ರ ಬರೆದಿದೆ.
ಪತ್ರದಲ್ಲಿ ಸಚಿವರ ವರ್ತನೆ ಬಗ್ಗೆ ಗುತ್ತಿಗೆದಾರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಗುತ್ತಿಗೆದಾರರ ಕುಂದು ಕೊರತೆಗಳ ಬಗ್ಗೆ ಹಾಗೂ ಗುತ್ತಿಗೆದಾರರ ಬಾಕಿ ಬಗ್ಗೆ ಸುಮಾರು ಸಲ ತಮ್ಮ ಗಮನಕ್ಕೆ ತಂದಿರುತ್ತೇವೆ. ಆದರೆ ತಾವುಗಳು ಇದುವರೆವಿಗೂ ನಮಗೆ ಯಾವುದೇ ಪತ್ರ ಸಹ ಬರೆದಿರುವುದಿಲ್ಲ. ಹೀಗಾಗಿ ಸಭೆ ಕರೆದು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು. ತಮ್ಮ ಇಲಾಖೆಯ ಅಧಿಕಾರಿಗಳನ್ನು ನಾವು ಕೇಳಿದರೆ ಹಣ ಪಾವತಿಯಾಗಲಿ ಬೇರೆ ವಿಷಯದಲ್ಲಿ ಯಾವುದೇ ಸಮಸ್ಯೆಗಳಿದ್ದರು ಮಾನ್ಯ ಮಂತ್ರಿಗಳನ್ನು ಬೇಟಿ ಮಾಡಿ ಎಂದು ಹೇಳುತ್ತಾರೆ.ಹಣ ಪಾವತಿಸುವ ವಿಷಯದಲ್ಲಿ ಸಚಿವರು ಕೊಟ್ಟ ಪಟ್ಟಿಯ ಪ್ರಕಾರ ಜೇಷ್ಠತೆಯನ್ನು ಕಡೆಗಣಿಸಿ ಹಣ ಪಾವತಿಸಲು ಸೂಚಿಸಿರುತ್ತಾರೆ.ಈ ತರಹ ಮಾಡಿದರೆ ನಮ್ಮ ಎಲ್ಲಾ ಗುತ್ತಿಗೆದಾರರಿಗೂ ಅನ್ಯಾಯ ಮಾಡಿದಂತಾಗುತ್ತದೆ.ನಾವು ಈ ಹಿಂದಿನ ಸರ್ಕಾರದ ವಿರುದ್ಧ ಹೋರಾಟ ಮಾಡಿರುವ ಬಗ್ಗೆ ತಮಗೆ ತಿಳಿದಿದೆ. ಆದ್ದರಿಂದ ತಮಗೆ ನಮ್ಮ ಸಂಘದ ಬಗ್ಗೆ ಸ್ವಲ್ಪವು ಕರುಣೆ ಇಲ್ಲ ಎಂದು ಅನಿಸುತ್ತದೆ.ಈ ರೀತಿ ನಮ್ಮನ್ನು ಕಡೆಗಣಿಸುತ್ತೀರಿ ಎಂದು ನಾವು ಕನಸಿನಲ್ಲು ಭಾವಿಸಿರುವುದಿಲ್ಲ.ಈ ಪತ್ರ ತಲುಪಿ 7 ದಿನದೊಳಗೆ ನಮ್ಮ ಸಂಘದ ಸಭೆ ಕರೆದು ನಮಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾಗುತ್ತೆ.ಮುಂದೆ ಹೋರಾಟದ ಹಾದಿ ಹಿಡಿಯಲು ನಾವು ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ.ಆದ ಕಾರಣ ಅದಷ್ಟು ಬೇಗನೆ ಇದರ ಬಗ್ಗೆ ಗಮನ ಹರಿಸಿ ಕ್ರಮಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇನ್ನು ಗುತ್ತಿಗೆದಾರರ ಸಂಘ ಸಚಿವರಿಗೆ ಪತ್ರ ಬರೆದಿರೊ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ ಖರ್ಗೆ ಪತ್ರವನ್ನ ನಾನು ನೋಡಿಲ್ಲ. ಆದರೆ ಸಂಘದ ಅಧ್ಯಕ್ಷರ ನನ್ನನ್ನು ಭೇಟಿಯಾಗಿ ಮಾತಾಡಿದ್ದಾರೆ. 2019-20ರಲ್ಲಿ ಸಾಕಷ್ಟು ಇಲಾಖೆ ಹಣ ಪೇಮೆಂಟ್ ಬಾಕಿ ಇಟ್ಟಿದ್ದಾರೆ.ಇದಕ್ಕೆ ನಾನು ಸಿಎಂ ಸದನದಲ್ಲಿ ಕ್ಲಾರಿಟಿ ಕೊಟ್ಟಿದ್ದೇವೆ. ಬಿಜೆಪಿ ಅವಧಿಯಲ್ಲಿ ಅನುದಾನ ಮೀರಿ ಕಾಮಗಾರಿ ಅನುಮೋದನೆ ನೀಡಿದ್ದಾರೆ. 100₹ ಇದ್ದರೆ 10 ಸಾವಿರ ರೂಪಾಯಿ ಅನುಮೋದನೆ ನೀಡಿದ್ದಾರೆ. ಬಿಜೆಪಿ ಅವಧಿಯಲ್ಲಿ ಅವೈಜ್ಞಾನಿಕವಾಗಿ ಕೆಲಸ ಮಾಡಿದ್ದಾರೆ. ಯಾರ್ ಯಾರಿಗೋ ಮನವೊಲಿಕೆ ಮಾಡೋಕೆ ಇಂತಹ ಕೆಲಸ ಮಾಡಿದ್ದಾರೆ.ಬಿಜೆಪಿ ಅವರು ಸಾಲ ಮಾಡಿ ತುಪ್ಪ ತಿಂದಿದ್ದಾರೆ ಈಗ ಸಾಲದ ಬಡ್ಡಿ ನಾವ್ ಕಟ್ಟಿತ್ತಿದ್ದೇವೆ ಎಂದಿದ್ದಾರೆ.
ಬಿಜೆಪಿ ಅವರು ಸಾವಿರಾರು ಕೋಟಿ ಬಿಲ್ ಪೆಂಡಿಂಗ್ ಇಟ್ಟಿದ್ದಾರೆ.ಹಿಂದಿನ ಸರ್ಕಾರದಲ್ಲಿ ಶಾಸಕರ ಮನವೊಲಿಕೆಗೆ ಇಂತಹ ಕಾಮಗಾರಿಗಳಿಗೆ ಅನುಮೋದನೆ ಕೊಟ್ಟಿದ್ದಾರೆ. ಹಾಸಿಗೆ ಇದ್ದಷ್ಟು ಕಾಲು ಚಾಚಿಲ್ಲ.ನಾವು ಅದನ್ನ ಸರಿ ಮಾಡೋ ಕೆಲಸ ಮಾಡ್ತಿದ್ದೇವೆ.ನಮ್ಮ ಸರ್ಕಾರದಲ್ಲಿ ಅನುದಾನ ಕೊಡ್ತಿದ್ದೇವೆ.ನಮ್ಮ ಸರ್ಕಾರದಲ್ಲಿ ಎಷ್ಟು ಹಣ ಇದೆಯೋ ಅಷ್ಟೇ ಅನುದಾನ ಕೊಟ್ಟಿದ್ದೇವೆ. ಬಿಜೆಪಿ ಅವರ ತರಹ ನಾವು ಮಾಡಿಲ್ಲ. ಬಿಜೆಪಿ ಅವಧಿಯಲ್ಲಿ ಚುನಾವಣೆ ಸಮಯದಲ್ಲಿ ಮನಸೋ ಇಚ್ಚೋ ಅನುಮೋದನೆ ನೀಡಿದ್ದಾರೆ. ಗುತ್ತಿಗೆದಾರರಿಗೆ ಜೇಷ್ಠತೆ ಮೀರಿ ನಾವು ಹಣ ಬಿಡುಗಡೆ ಮಾಡಿಲ್ಲ. ಯಾರಾದ್ರು ಗುತ್ತಿಗೆದಾರ ಆಸ್ಪತ್ರೆ ಬಿಲ್, ಬ್ಯಾಂಕ್ ಸಾಲ ತೋರಿಸಿದಾಗ ಮಾನವೀಯ ದೃಷ್ಟಿಯಿಂದ ಕೆಲವರಿಗೆ ಹಣ ಬಿಡುಗಡೆ ಮಾಡಿದ್ದೇವೆ. ಅದನ್ನ ಬಿಟ್ಟು ಜೇಷ್ಠತಾ ಪಟ್ಟಿ ಮೇಲೆ ಹಣ ರಿಲೀಸ್ ಅಗುತ್ತದೆ. ಬೇರೆ ಯಾರಿಗೂ ಹಣ ಬಿಡುಗಡೆ ಮಾಡೊಲ್ಲ. ದಿನ ಸರ್ಕಾರದಲ್ಲಿ ನಾವು ಮಾಡ್ತಿಸ್ತೀವಿ ಅಂತ ಮಂತ್ರಿಗಳಿಗೆ ಪರ್ಸೆಂಟೇಜ್ ಕೊಟ್ಟಿದ್ದಾರೆ. ಬಿಜೆಪಿ ಅವಧಿಯಲ್ಲಿ ಮಧ್ಯವರ್ತಿಗಳು ಇದ್ದರು. ನಮ್ಮಲ್ಲಿ ಅ ರೀತಿ ಇಲ್ಲ,. ಗುತ್ತಿದಾರರು ಹೋರಾಟ ಮಾಡಿ ಬೇಡಿಕೆ ಇಡೋಕೆ ತಕರಾರು ಇಲ್ಲ. ಆದರೆ ನಿಮ್ಮ ಮಾತು ನಾವು ಕೇಳ್ತಿದ್ದೇವೆ .ಹೋರಾಟ ಯಾಕೆ ನೇರವಾಗಿ ಬಂದು ಮಾತಾಡಿ ಎಂದಿದ್ದಾರೆ