ಬೆಂಗಳೂರು: ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಬೇಕು ಎಂಬ ರಾಯರೆಡ್ಡಿ ಹೇಳಿಕೆಯನ್ನು ಸಚಿವ ಸತೀಶ್ ಜಾರಕಿಹೊಳಿ ಸಮರ್ಥಿಸಿಕೊಂಡಿದ್ರೆ, ಸತೀಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ಕಂಪ್ಲಿ ಕಾಂಗ್ರೆಸ್ ಶಾಸಕ ಗಣೇಶ್ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಕಂಪ್ಲಿ ಗಣೇಶ್ ಸಿದ್ರಾಮಯ್ಯ ರಾಜ್ಯಕ್ಕಷ್ಟೇ ಅಲ್ಲ ದೇಶಕ್ಕೆ ಅನಿವಾರ್ಯವಾಗಿದ್ದಾರೆ. ನಾವೆಲ್ಲ ಶಾಸಕರು ಅವರ ಬೆಂಬಲಕ್ಕಿದ್ದೇವೆ. 138 ಶಾಸಕರು ಅವರ ಬೆಂಬಲಕ್ಕಿದ್ದೇವೆ. ಅವರಿರೋದ್ರಿಂದ ಪಾರ್ಟಿಗೆ ಅನುಕೂಲವಾಗಿದೆ. ಈ ಬಾರಿಯ ಚುನಾವಣೆಯನ್ನು ನೋಡಿದ್ದೀರ. ಅವರು ಒಂದು ರೀತಿ ರೋಲ್ ಮಾಡೆಲ್ ಇದ್ದಂತೆ. ಅವರಿಂದಾನೇ ಐದಕ್ಕೆ ಐದು ಗೆದ್ದಿದ್ದೇವೆ.ನಮ್ಮ ಭಾಗದಲ್ಲಿ ಸೀಟು ಗೆದ್ದಿದ್ದೇವೆ ಎಂದಿದ್ದಾರೆ.
ಇದೇ ವೇಳೆ ಐದು ವರ್ಷ ಅವರೇ ಸಿಎಂ ಆಗ್ಬೇಕು ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಹೈಕಮಾಂಡ್ ಹೇಳಿದ್ರೆ ಐದು ವರ್ಷ ಮುಂದುವರಿತಾರೆ. ಅವರು ಮುಂದುವರಿದ್ರೆ ಒಳ್ಳೆಯದಲ್ವೇ?.ನಾನೊಬ್ಬನೇ ಅಲ್ಲ 138 ಶಾಸಕರ ಬೆಂಬಲವಿದೆ ಎಂದು ಸಿದ್ದರಾಮಯ್ಯ ಪರ ಗಣೇಶ್ ಬ್ಯಾಟಿಂಗ್ ಮಾಡಿದ್ದಾರೆ. ಆ ಮೂಲಕ ಡಿ ಕೆ ಶಿ ಬಣದ ವಿರುದ್ಧ ಪ್ರತ್ಯಕ್ಷವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.
ಸಿದ್ದರಾಮಯ್ಯ ನಮಗೆ ಬೇಕು,ಚುನಾವಣೆ ನಿವೃತ್ತಿ ಆದ್ರೂ ಕೂಡ ರಾಜಕೀಯದಲ್ಲಿ ಇರಬೇಕು;ಸತೀಶ್ ಜಾರಕಿಹೊಳಿ ಹೇಳಿಕೆ
ಬೆಂಗಳೂರು; ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಬೇಕು ಎಂಬ ರಾಯರೆಡ್ಡಿ ಹೇಳಿಕೆಯನ್ನು ಸಚಿವ ಸತೀಶ್ ಜಾರಕಿಹೊಳಿ ಸಮರ್ಥಿಸಿಕೊಂಡಿದ್ದಾರೆ.ಸಿದ್ದರಾಮಯ್ಯ ನಮಗೆ ಬೇಕು,ಚುನಾವಣೆ ನಿವೃತ್ತಿ ಆದ್ರೂ ಕೂಡ ರಾಜಕೀಯದಲ್ಲಿ ಇರಬೇಕು.ಮುಂದಿನ ಚುನಾವಣೆ ಗೆಲ್ಲಬೇಕು ಅಂದ್ರೆ ಅವರು ಇರಬೇಕು. ಸಿದ್ದರಾಮಯ್ಯ ಇರಬೇಕು ಎಂಬ ಆಸೆ ಇದೆ.ನಮಗೆ ಚುನಾವಣೆ ಗೆಲ್ಲಲು ಅವರು ಬೇಕು.ಹೊಸ ನಾಯಕತ್ವ ತಯಾರಾಗುವರೆಗೆ ಸಿದ್ದರಾಮಯ್ಯ ಅನಿವಾರ್ಯ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಬೇಕು ಎಂದು ರಾಯರೆಡ್ಡಿ ಅವರು ಏನು ಹೇಳಿದ್ದಾರೆ. ಅದುನಮ್ಮ ಆಶಯ ಕೂಡ ಆಗಿದೆ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಚುನಾವಣೆ ನಿವೃತ್ತಿ ಆದ್ರೂ ಸಕ್ರಿಯ ರಾಜಕೀಯದಲ್ಲಿ ಇರಬೇಕು.ಮುಂದಿನ ಚುನಾವಣೆ ಗೆಲ್ಲಬೇಕು ಅಂದ್ರೆ ಸಿದ್ದರಾಮಯ್ಯ ಬೇಕು.ಚುನಾವಣೆ ಗೆಲ್ಲಲು ಅನುಕೂಲ ಆಗುತ್ತೆ.ಇನ್ನೊಂದು ಅವಧಿಯವರೆಗೆ ರಾಜಕೀಯದಲ್ಲಿ ಅವರು ಇರಬೇಕು ಎಂದು ಸತೀಶ್ ಜಾರಕಿಹೊಳಿ ಅವರು ರಾಯರೆಡ್ಡಿ ಅವರ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ. ಆ ಮೂಲಕ ನಾವು ಸಿದ್ದರಾಮಯ್ಯ ಪರ ಅನ್ನೋದನ್ನು ನೇರವಾಗಿಯೇ ಹೇಳಿದ್ದಾರೆ.