ಮನೆ Latest News ಆರ್ ಅಶೋಕ್ ಆರೋಪಕ್ಕೆ ತಿರುಗೇಟು ಕೊಟ್ಟ ಸಚಿವ ಕೆ ಎನ್ ರಾಜಣ್ಣ

ಆರ್ ಅಶೋಕ್ ಆರೋಪಕ್ಕೆ ತಿರುಗೇಟು ಕೊಟ್ಟ ಸಚಿವ ಕೆ ಎನ್ ರಾಜಣ್ಣ

0

ಬೆಂಗಳೂರು: ಎಸ್ ಸಿ ಎಸ್ ಟಿ ಹಣವನ್ನ ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂಬ ಆರ್ ಅಶೋಕ್ ಆರೋಪಕ್ಕೆ ಸಚಿವ ಕೆ ಎನ್ ರಾಜಣ್ಣ ಅವರು ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಅವರ ಕಾಲದಲ್ಲಿ ಎಷ್ಟು ಉಪಯೋಗಿಸಿಕೊಂಡಿದ್ದಾರೆ. ವಿಪಕ್ಷದಲ್ಲಿ ಇದ್ದಾರೆ ಅದಕ್ಕೆ ಆರೋಪ ಮಾಡ್ತಾರೆ ಇದು ಅವರ ಚಾಳಿ.ಎಸ್ ಸಿ ಎಸ್ ಟಿ ಗೆ ಏನು ಅನುದಾನ ಕೊಡಬೇಕೊ ಅದನ್ನ‌ ಕೊಟ್ಟಿದ್ದೇವೆ.ಉಳಿದಿದ್ದು ಮಾರ್ಚ್ ೩೧ ರ ಒಳಗಾಗಿ ಕೊಡ್ತಿವಿ ಎಂದರು. ಅನುದಾನ ಸಮರ್ಪಕವಾಗಿಲ್ಲ ಎಂಬ ಕಾಂಗ್ರೆಸ್ ಶಾಸಕರ ಅಸಮಾಧಾನ ಬಗ್ಗೆ ಮಾತನಾಡಿದ ಅವರು ಕ್ಷೇತ್ರದಲ್ಲಿ ಹೆಚ್ಚು ಕಾರ್ಯಕ್ರಮ ಅಭಿವೃದ್ದಿ ಮಾಡಬೇಕು ಎಂಬ ಬೇಡಿಕೆ ಇಟ್ಟಿರುತ್ತಾರೆ.ಅವರೇನು ಅವರ ಮನೆಗೆ ಕೇಳಲ್ಲ.ಅವರ ಬೇಡಿಕೆಯನ್ನ ನಮ್ಮ ಸರ್ಕಾರ ಹಂತಹಂತವಾಗಿ ಈಡೇರಿಸುತ್ತೆ.ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತಾಡೋ ರಾಜಣ್ಣ ಅವರಿಂದ ಡ್ಯಾಮೇಜ್ ಅಗ್ತಿದೆ  ಎಂದರು.

ಶಾಸಕ ಕಡೂರು ಆನಂದ ಆರೋಪದ ಬಗ್ಗೆ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವ ಅಭಿಪ್ರಾಯ ಸಲ್ಲಿಸೋದಕ್ಕೆ ಸರ್ವ ಸ್ವತಂತ್ರರು.ಅವರು ಹೇಳಿಕೊಂಡ್ರೆ ನಮ್ಮ ಆಪೇಕ್ಷೆ ಇಲ್ಲ. ಇದೇ ವೇಳೆ ಸಿಎಂ ಪತ್ನಿ ಹಾಗೂ ಸಚಿವ ಸುರೇಶ್ ಗೆ ಇಡಿ ನೋಟಿಸ್ ವಿಚಾರದ ಬಗ್ಗೆ ಮಾತನಾಡಿ ಅದು ರಾಜಕೀಯ ಪ್ರೇರಿತರಾಗಿ ಕೊಟ್ಟಿರುವ ನೋಟಿಸ್.ನೋಟಿಸ್ ಕೊಟ್ಟಿರುವ ಸತ್ಯಾಸತ್ಯತೆ ವಿಚಾರ ಕೊರ್ಟ್ ಮುಂದೆ ಬಂದಿದೆ.ಕೊರ್ಟ್ ನಲ್ಲಿರುವ ವಿಚಾರದ ಬಗ್ಗೆ ಹೆಚ್ಚು ಮಾತಾಡಲ್ಲ.ಸಿಬಿಐಗೆ ತನಿಖೆಗೆ ಕೊಟ್ಟರೆ ಕಷ್ಟ ಆಗುತ್ತೆ ಎಂಬ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ನೋಡ್ರಿ ಕಾನೂನು ಎಲ್ಲರಿಗೂ ಒಂದೇ.ಅವರಿಗೆ ಒಂದು ಇವರಿಗೊಂದು ಅಂತ ಎರಡು  ಕಾನೂನು ಇರೊಲ್ಲ.ಸಿಬಿಐ ಇಗ ಯಾರ ಕೇಂದ್ರದ ಹೋಮ್ ಮಿನಿಸ್ಟರ್ ಅಧೀನದಲ್ಲಿ‌ ಇರುತ್ತೆ.ಒದೊಂದು‌ ತನಿಖಾ ಸಂಸ್ಥೆ ಒಬ್ಬೊಬ್ಬರ ಅಧೀನದಲ್ಲಿರುತ್ತೆ.ಆ ಸಂಸ್ಥೆಗಳು ಸ್ವಾಯತ್ತ‌ ತನಿಖೆ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತೆ.ನಾವು ಅವರ ಕಾರ್ಯ ಸ್ವಾಯತ್ತತೆ ನಿರ್ವಹಣೆ ಬಗ್ಗೆ ಅನುಮಾನ ವ್ಯಕ್ತಪಡಿಸೊದು ಸರಿಯಲ್ಲ ಎಂದಿದ್ದಾರೆ.

ಡಿ ಕೆ ಶಿವಕುಮಾರ ಅವರನ್ನು ಸಿಎಂ ಮಾಡೋದು‌ ಹೈಕಮಾಂಡ್, ಶಾಸಕರಲ್ಲ ಎಂಬ ಇಕ್ಬಾಲ್ ಹುಸೇನ್ ಹೇಳಿಕೆ ಬಗ್ಗೆ ಮಾತನಾಡಿದ ಅವರು ಶಾಸಕರನ್ನ ಕೇಳಿ ಹೈಕಮಾಂಡ್ ತಗೆದುಕೊಳ್ಳುವ ನಿರ್ಣಯ. ಶಾಸಕರ ಅಭಿಪ್ರಾಯ ಏನೇ ಇದ್ರೂ 138 ಜನ ಒಂದೇ ಅಭಿಪ್ರಾಯ ಹೇಳಲ್ಲ. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಸಂದೇಶ ಕೊಟ್ಟಿದ್ದಿನಿ ನೋಡೋಣ ಎಂಬ ಖರ್ಗೆ ಹೇಳಿಕೆಗೆ ರಿಯ್ಯಾಕ್ಟ್ ಮಾಡಿದ ಅವರು ಅವರ ಹೇಳಿದ ಮೇಲೆ ಏನು ಮಾತಾಡೋದಕ್ಕೆ ಹೋಗೋದಿಲ್ಲ.ಪಕ್ಷ ನಾಯಕತ್ವದ ಬಗ್ಗೆ ಎಲ್ಲಾ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತೆ ಎಂದರು. ಒನ್ ಮ್ಯಾನ್ ಒನ್ ಪೋಸ್ಟ್ ವಿಚಾರದ ಬಗ್ಗೆ ಮಾತನಾಡಿ ಯಾರಿಗೆ ಯಾವುದು ಅನ್ವಯ ಆಗುತ್ತೆ ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಅದನ್ನ ನಾವು ಒಪ್ಪಬೇಕಾಗುತ್ತೆ ಎಂದರು.

ಶ್ರೀ ರಾಮುಲು ಕಾಂಗ್ರೆಸ್ ಸೇರುವ ವಿಚಾರದ ಬಗ್ಗೆ ಮಾತನಾಡಿ ರಾಜಕಾರಣ ನಿಂತ ನೀರಲ್ಲ. ಹರಿಯುವ ನೀರು.ನೀರನ್ನು ಕೆಳಗಿನಿಂದ ಮೇಲೆ ತಗೆದುಕೊಂಡು ಹೋಗೋದಕ್ಕೆ ಆಗಲ್ಲ.ಅದರ ಪಾಡಿಗೆ ನೀರು ದಾರಿ ಹುಡುಕಿ ಹರಿದು ಹೋಗುತ್ತದೆ.ರಾಮುಲು ಸಮುದಾಯದ ಪ್ರಭಾವಿ ನಾಯಕ. ಸ್ವಯಂಪ್ರೇರಿತವಾಗಿ ಸಿದ್ದಾಂತ ಒಪ್ಪಿ ಬರೋದಾದ್ರೆ ಸ್ವಾಗತ ಮಾಡ್ತಿವಿ ಎಂದ್ರು.