ಮನೆ Latest News ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಕೇಂದ್ರ ಸಚಿವ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ

ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಕೇಂದ್ರ ಸಚಿವ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ

0

ಬೆಂಗಳೂರು;  ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಕೇಂದ್ರ ಸಚಿವ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಹಾಲಿ ಮಾಜಿ ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಿದ್ರು.

ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಕಾಂಗ್ರೆಸ್ ಗೆ ಹೇಳಿದ್ದನ್ನೇ ಹೇಳೋದು ಬಿಟ್ರೆ ಬೇರೆ ಕೆಲಸ ಇಲ್ಲ. ಜಿಎಸ್ ಟಿ ಬಗ್ಗೆ ನಾವು ಅವರ ಜೊತೆ ಚರ್ಚೆ ಮಾಡೊಣಾ. ೧೯೫೨  ರಲ್ಲಿ ಫೈನಾನ್ಸ್ ಕಮಿಟಿ ಜಾರಿಗೆ ತಂದವರೆ ಕಾಂಗ್ರೆಸ್ ನವರು.ಅಲ್ಲಿಂದ ೫೦ ವರ್ಷ ರಾಜ್ಯ ದೇಶ ಆಳುದ್ರಲ್ಲಾ, ಅಲ್ಲಿಂದ ಗೈಡ್ ಲೈನ್ಸ್ ರಾಜ್ಯಗಳಿಗೆ ಅನ್ಯಾಯ ತಾರತಮ್ಯ ಇರೋದನ್ನ ತೆಗೆದು ಹಾಕಬೇಕಿತ್ತು. ಈಗ ಜ್ಞಾನೋದಯ ಆಗಿದ್ಯಾ , ೧೦ ವರ್ಷ ಮನಮೋಹನ್ ಸಿಂಗ್ ಇರಲಿಲ್ವಾ . ಆಗಲೆ ಗೈಡ್ ಲೈನ್ಸ್ ಬದಲಾವಣೆ ಮಾಡಬೇಕಿತ್ತು. ನಮ್ಮ‌ ತೆರಿಗೆ ಅದನ್ನೆಲ್ಲಾ ಆಮೇಲೆ ಚರ್ಚೆ ಮಾಡಲಿ. ನೈಸ್ ಹೆಸರಿನಲ್ಲಿ ಕೆ ಐ ಡಿ ಬಿ ಅಧಿಕಾರಿಗಳು , ಕಾಂಗ್ರೆಸ್ ನವರು   ಭೂಮಿ ಲುಟಿ ಮಾಡಿದಿರಲ್ಲಾ. ಜಡ್ಜ ಮೆಂಟ್ ಕೊಟ್ಟು ಎಷ್ಟು ದಿನ ಆಗಿದೆ ಏನ್ ಮಾಡಿದ್ದರೆ , ೨೦೧೯ ಗೈಡ್ ಲೈನ್ಸ್ ವ್ಯಾಲ್ಯು ಇದೆ ಅದರ ಹಣ ಕೊಡಬೇಕು. ಎಂಬಿ ಪಾಟಲ್ ಎಲ್ಲಿದ್ದಾರೆ ಡಿನ್ನರ್ ಪಾರ್ಟಿ‌ಮಾಡಿಕೊಂಡು ಕೂತಿದ್ದಾರೆ. ರೈತರಿಗೆ ದುಡ್ಡು ಕೊಡಬೇಕಾಲ್ಲಾ ಎರಡು ತಿಂಗಳಲ್ಲಿ ಹಣ ಕೊಡಬೇಕಾಲ್ವಾ . ರೈತರ ಬಗ್ಗೆ ಚಿಂತೆ ಇದ್ಯಾ. ಜಡ್ಜ್ ಮೆಂಟ್ ಕೊಟ್ಟಿದ್ಯಲ್ಲಾ ಸುಪ್ರೀಂ ಕೋರ್ಟ್ ಎಂದಿದ್ದಾರೆ.

ಡಿನ್ನರ್ ಪಾರ್ಟಿ ದಿನ ಮಾಡಿಕೊಳ್ಳಿ ನನ್ನ ಅಭ್ಯಂತರವಿಲ್ಲ. ರಾಯಚೂರಿನಲ್ಲಿ ತೊಗರಿ ಕೊಂಡುಕೊಳ್ಳುವವರು ಇಲ್ಲಾ ಅಂತಾರೆ. ಮೈಸೂರು ಮಂಡ್ಯದಲ್ಲಿ ಭತ್ತ ಖರೀದಿ ಕೇಂದ್ರ ಶುರುಮಾಡಿಲ್ಲ. ರಾಜ್ಯದಲ್ಲಿ ಸರ್ಕಾರ ನಮ್ಮ ರೈತರಿಗೆ ಏನ್ ಮಾಡಬೇಕು ಅದನ್ನ ಮಾಡಿ. ಸುಪ್ರೀಂ ಕೊರ್ಡ್ ಆದೇಶ ಆಯ್ತು ನೈಸ್ ದರೋಡೆ ಯಾರ ಯಾರ ಪಾತ್ರ ಇದೆ. ಜಯಚಂದ್ರ ಅವರೆ ಕಾನೂನು ಸಚಿವರಾಗಿದ್ದಾಗ ಅಧ್ಯಕ್ಷರನ್ನಾಗಿ ಮಾಡಿ ವರದಿ ಕೊಟ್ರಿ ಅದನ್ನ ಕಸದ ಬುಟ್ಟಿಗೆ ಹಾಕುದ್ರಿ. ಏನ್ ಗ್ರೇಟ್ ಸಿದ್ದರಾಮಯ್ಯ ಅವರು ದೇಶದಲ್ಲಿ ಯಾರು ಮಾಡಿಲ್ವಂತೆ . ಇಂತ ಮುಖ್ಯಮಂತ್ರಿ ಇಲ್ವಂತೆ ಏನ್ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಸಭೆ ಬಗ್ಗೆ ಮಾತನಾಡಿದ ಹೆಚ್ಡಿಕೆ ಪಕ್ಷದ ಸಾಂಸ್ಥಿಕ ಚುನಾವಣೆ, ಸದಸ್ಯತ್ಯ ನೋಂದಣಿ ಮಾಡಬೇಕೆಂಬ ತೀರ್ಮಾನ ಆಯ್ತು. ಮುಂದಿನ ಏಪ್ರಿಲ್ ಒಳಗೆ ರಾಜ್ಯದ ಘಟಕದ ಅಧ್ಯಕ್ಷ ಸ್ಥಾನವನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ತೀರ್ಮಾನ ಆಗಿದೆ. ಪಕ್ಷದ ಸಂಘಟನೆ ಬಗ್ಗೆ ಪಕ್ಷದ ನಾಯಕರಿಗೆ ಕಠಿಣವಾಗಿಯೇ ಹೇಳಿದ್ದೇನೆ.ಯಾರು ಪ್ರಾಮಾಣಿಕವಾಗಿ ಪಕ್ಷದ ಸಂಘಟನೆಗೆ ದುಡೀತಾರೋ ಅಂಥವರಿಗೆ ಆದ್ಯತೆ ಕೊಡ್ತೀವಿ ಅಂದಿದ್ದೇವೆ. ವಾರದಲ್ಲಿ ನಾಲ್ಕು ದಿನ ದೆಹಲಿಗೆ ಸಚಿವಾಲಯದಲ್ಲಿ ಇಲಾಖೆ ಸಭೆ, ಇಲಾಖೆ ಕೆಲಸ ಮಾಡ್ತೇನೆ.ವಾರದಲ್ಲಿ ಒಂದು ದಿನ ಅಥವಾ ಎರಡು ದಿನ ದೇಶದ ಸ್ಟೀಲ್ ಇಂಡಸ್ಟ್ರಿಗಳಿಗೆ ಖುದ್ದು ಭೇಟಿ ಮಾಡ್ತೇನೆ. ಸ್ಟೀಲ್ ಇಂಡಸ್ಟ್ರಿಗಳು ಲಾಭತರಲ್ಲ ಅನ್ನುವ ಭಾವನೆ ಏನಿದೆ, ಅದನ್ನು ಹೋಗಲಾಡಿಸಬೇಕು.ಇನ್ನು ವಾರದಲ್ಲಿ ಒಂದೆರಡು ದಿನ ಪಕ್ಷದ ಸಂಘಟನೆ ಸಭೆ, ಪ್ರವಾಸ, ಮಂಡ್ಯ ಭೇಟಿ ಮಾಡಬೇಕು ಅಂತ ಟೈಮ್‌ಟೇಬಲ್ ನಾನೇ ರೆಡಿ‌ ಮಾಡ್ಕೊಂಡಿದ್ದೇನೆ ಎಂದರು.

ಕಾಂಗ್ರೆಸ್ ನಮ್ಮ ಶಾಸಕರನ್ನು ಆಪರೇಷನ್ ಮಾಡ್ತಿದೆ, ಜೆಡಿಎಸ್ ನಲ್ಲಿ ಗಡಗಡ, ಸಂಕ್ರಾಂತಿ ನಂತರ ಜೆಡಿಎಸ್ ಇರದೇ ಇಲ್ಲ… ಹೀಗೆ ಯಾರಾದ್ರೂ ನಿಮಗ ಹೇಳಿದರೆ ನಂಬಬೇಡಿ. ಮೊದಲು ಕಾಂಗ್ರೆಸ್‌ನವ್ರು ಅವರ ಪಕ್ಷದ ಬಗ್ಗೆ ನೋಡಿಕೊಳ್ಳಲಿ. ದೆಹಲಿಯಲ್ಲಿ ಏನಾಗಿದೆ, ಇಂಡಿ ಕೂಟದ ಒಳಗೆ ಏನಾಗ್ತಿದೆ ನೋಡಿಕೊಳ್ಳಿ. ನಿಮ್ಮ ಪಕ್ಷದ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎಂ ಬಿ ಪಾಟೀಲರೇ ಅದನ್ನು ಮೊದಲು ನೋಡಿ, ಬೇರೆಯವರಿಗೂ ಇದು ಅನ್ವಯ.ನಮಗೆ, ನಮ್ಮ ಕುಟುಂಬಕ್ಕೆ ಸೋಲು ಗೆಲುವು ಹೊಸದೇನಲ್ಲ.ಸೋತಾಗ ಕುಗ್ಗಿಲ್ಲ…ಗೆದ್ದಾಗ ಹಿಗ್ಗಿಲ್ಲ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರ ಹೆಸರು ಆಯ್ಕೆ ಆಗಬೇಕು ಅಂತ ಇವತ್ತಿನ ಸಭೆಯಲ್ಲಿ ಚರ್ಚೆ ಆಗಿಲ್ಲ ಎಂದರು.

ಇದೇ ವೇಳೆ ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಹೆಚ್ಡಿಕೆ ತೀವ್ರ ಖಂಡನೆ ವ್ಯಕ್ತಪಡಿಸಿದ ಅವರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಇದು ರಾಕ್ಷಸೀ ಕೃತ್ಯ.ಕಾಂಗ್ರೆಸ್ ಆಡಳಿತ ಇವತ್ತು ಎಲ್ಲಿಗೆ ಬಂದಿದೆ?. ಇಲ್ಲಿಯವರೆಗೆ ಮನುಷ್ಯರನ್ನು ಕೊಲ್ಲೋದನ್ನು ನೋಡಿದ್ದೀವಿ. ಕಾಮಧೇನು, ಮಹಾಲಕ್ಷ್ಮಿ ಹಾಗೆ. ಅಂಥ ಕಾಮದೇನು ಕೆಚ್ಚಲು ಕೊಯ್ಯುವ ಹೇಯ ಕೃತ್ಯ ಮಾಡಿರೋ ಆ ಕೆಟ್ಟ ಮನಸ್ಥಿತಿಗೆ ಏನನ್ನಬೇಕು. ಪರಮೇಶ್ವರ್ ಅವರು ಈ ನಿಟ್ಟಿನಲ್ಲಿ ಕಠಿಣ ಕ್ರಮ ತಗೋಬೇಕು, ಅವರ ಬೆಣ್ಣೆ ಮಾತು ನಡೆಯಲ್ಲ. ಡಿನ್ನರ್ ಮೀಟಿಂಗ್ ನಿಲ್ಸಿ, ಆಡಳಿತ ಸರಿ ಮಾಡೋದನ್ನು ನೋಡಿ. ಇಂಥ ವಿಚಾರಗಳಲ್ಲಿ ಕ್ರಮ ತಗೊಳ್ಳಿ.ಇವರ ಸರ್ಕಾರದ ಅವಧಿಯಲ್ಲಿ ರಾಕ್ಷಸೀ ಕೃತ್ಯ ಮೆರೆಯುವ ಇಂಥ ಜನರನ್ನ ಸೃಷ್ಟಿ ಮಾಡ್ತಿದ್ದಾರೆ ಎಂದರು.