ಮನೆ Latest News ಮುಸ್ಲಿಂರಿಗೆ ಗುತ್ತಿಗೆ ಮೀಸಲು ಬಗ್ಗೆ ನಿಲುವು ಸ್ಪಷ್ಟಪಡಿಸಿದ ಜೆಡಿಎಸ್

ಮುಸ್ಲಿಂರಿಗೆ ಗುತ್ತಿಗೆ ಮೀಸಲು ಬಗ್ಗೆ ನಿಲುವು ಸ್ಪಷ್ಟಪಡಿಸಿದ ಜೆಡಿಎಸ್

0

ಬೆಂಗಳೂರು; ಮುಸ್ಲಿಂರಿಗೆ ಗುತ್ತಿಗೆ ಮೀಸಲು ಬಗ್ಗೆ ಜೆಡಿಎಸ್ ತನ್ನ ನಿಲುವು ಸ್ಪಷ್ಟಪಡಿಸಿದೆ. ಈ ಬಗ್ಗೆ ಎಕ್ಸ್  ಖಾತೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಮುಸ್ಲಿಮರಿಗೆ ಕಾಂಗ್ರೆಸ್ ಸರಕಾರ 4% ಗುತ್ತಿಗೆ ಮೀಸಲಾತಿ ನೀಡಿರುವುದರ ವಿರುದ್ಧದ ಹೋರಾಟದಲ್ಲಿ ಜೆಡಿಎಸ್ – ಬಿಜೆಪಿ ನಡುವೆ ಹೊಂದಾಣಿಕೆ ಇಲ್ಲ, ಗೊಂದಲವಿದೆ ಎನ್ನುವುದು ಸತ್ಯಕ್ಕೆ ದೂರ. ಕೆಲ ಪತ್ರಿಕೆ ಮತ್ತು ಸುದ್ದಿವಾಹಿನಿಗಳಲ್ಲಿ ವರದಿಯಾಗಿರುವ ವರದಿಗಳು ಸತ್ಯಕ್ಕೆ ದೂರ. ಅಧಿವೇಶನ ಆರಂಭಕ್ಕೆ ಮೊದಲೇ ಬೆಂಗಳೂರಿನಲ್ಲಿ  ಎನ್ ಡಿ ಎ ಸಮನ್ವಯ ಸಮಿತಿ’ ಸಭೆ ನಡೆಸಿದೆ. ಎಲ್ಲಾ ವಿಚಾರಗಳನ್ನೂ ಸಮಗ್ರವಾಗಿ ಚರ್ಚಿಸಲಾಗಿದೆ. ಸರಕಾರದ ವಿರುದ್ಧ ಹೋರಾಟದ ರೂಪುರೇಷೆ ರೂಪಿಸಲಾಗಿತ್ತು. ಆ ಸಭೆಯಲ್ಲಿ ಸ್ವತಃ ನಾನೂ ಭಾಗವಹಿಸಿದ್ದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಚುನಾವಣಾ ಸ್ವಾರ್ಥಕ್ಕೆ, ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ. ಜೆಡಿಎಸ್ – ಬಿಜೆಪಿ ಪಕ್ಷಗಳು ಈಗಾಗಲೇ  ಒಟ್ಟಾಗಿ ಅನೇಕ ಜನಪರ ಹೋರಾಟಗಳಲ್ಲಿ ಭಾಗಿಯಾಗಿವೆ, ಮುಂದೆಯೂ ಹೋರಾಡುತ್ತವೆ. ಈ ಬಗ್ಗೆ ರಾಜಿ ಪ್ರಶ್ನೆಯೇ ಇಲ್ಲ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ದುರ್ಬಲವಾಗಿರುವ ಎಲ್ಲಾ ಸಮುದಾಯಗಳಿಗೆ ಸಮಾನ ಅವಕಾಶಗಳು, ಸೌಲಭ್ಯಗಳು ಸಿಗಬೇಕು. ಒಂದು ನಿರ್ದಿಷ್ಟ ಸಮುದಾಯದ ತುಷ್ಟೀಕರಣ, ಬಹು ಸಮುದಾಯಗಳ ತುಚ್ಚೀಕರಣ ನ್ಯಾಯ ಸಮ್ಮತವಲ್ಲ.ಇದು ಸಂವಿಧಾನಕ್ಕೆ ಎಸಗುವ ಅಪಚಾರ ,ಮೀಸಲು ಧರ್ಮಾಧಾರಿತ ಅಲ್ಲ. ಮೀಸಲಾಗಿ ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನಿಂತಿದೆ. ನಿಂತಿರಬೇಕು ಎನ್ನುವುದು ಜೆಡಿಎಸ್ ಅಚಲ ನಿಲುವು  ಎಂದಿದ್ದಾರೆ.

 ರಾಜಣ್ಣ ಅವರು ಹೆಸರು ಹೇಳಲಿಲ್ಲ, ಆದರೆ ಇದರ ಹಿಂದೆ ಮಹಾನಾಯಕ ಮಾಡಿರಬಹುದು; ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

ನವದೆಹಲಿ; ರಾಜಣ್ಣ ಅವರು ಹೆಸರು ಹೇಳಲಿಲ್ಲ, ಆದರೆ ಇದರ ಹಿಂದೆ ಮಹಾನಾಯಕ ಮಾಡಿರಬಹುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು ಚೀಟಿ ಬರೆದು ಯಾರು ಕಳಿಸಿದರೋ ಗೊತ್ತಿಲ್ಲ.ಆದರೆ ಅದರಲ್ಲಿ ಇರೋದು ಹೇಳಿದರೆ ಕ್ರಾಂತಿ ಆಗಲಿದೆ . ಹನಿಟ್ರ್ಯಾಪ್ ಆಗ್ತಿದೆ ಎಂದು ಹೇಳ್ತಿದ್ದರು. ಸಚಿವರೇ ಬಹಿರಂಗವಾಗಿ ಹೇಳ್ತಿದ್ದಾರೆ. ಸಾರ್ವಜನಿಕವಾಗಿ ಚರ್ಚೆ ಆಗ್ತಿದೆ, ಸದನದಲ್ಲಿ ಪ್ರಶ್ನೆ ಮಾಡಿದೆ. ಇದರಿಂದ ಕಾಂಗ್ರೆಸ್ ನಲ್ಲಿ ಗಲಿಬಿಲಿಯಾಯಿತು. ರಾಜಣ್ಣ ಅವರು ಹೆಸರು ಹೇಳಲಿಲ್ಲ, ಆದರೆ ಇದರ ಹಿಂದೆ ಮಹಾನಾಯಕ ಮಾಡಿರಬಹುದು. ಬಂದಿರುವ ಚೀಟಿಯಲ್ಲಿ ಏನಿತ್ತು ಎಂದು ಹೇಳಿದ್ರೆ ಎರಡು ಪಕ್ಷದ ನಾಯಕರು ಮನೆಗೆ ಹೋಗ್ತಾರೆ. ನಾನು ಯಾರಿಂದ ಬಳಕೆಯಾಗುವ ವ್ಯಕ್ತಿಯಲ್ಲ. ಅವರು ಕೊಟ್ಟಿದ್ದನ್ನು ಓದಲು ನಾನು ಕಾಂಗ್ರೆಸ್ ಏಜೆಂಟ್ ಅಲ್ಲ ಎಂದಿದ್ದಾರೆ.

ರಾಜ್ಯದ ಹಿತಕ್ಕಾಗಿ ಮಾತನಾಡುತ್ತಿದ್ದೇವೆ. ಎರಡು ಕಂಪನಿ ಫ್ಯಾಕ್ಟರಿ ಗಳಿದೆ.ಆ ಕಡೆ ಹಲೋ ಅಂದರೆ ಈ ಕಡೆ ಹಲೋ ಅಂತಾರೆ. ಜೈಶ್ರೀರಾಮ ಅಂದರೆ ಜೈಶ್ರೀರಾನ ಅಂತಾರೆ.. ಸುಮ್ನೆ ಏನೋ ಮಾತನಾಡಬಾರದು. ಶಾಸಕರ ಮಾನ ಹರಾಜು ಮಾಡುವ ಹಲ್ಕಾ ಕೆಲಸ ಮಾಡಬಾರದು. ಇಂತವರು ರಾಜಕೀಯದಿಂದ ಹೊರ ಹೋಗಬೇಕು, ಮುಖ್ಯಮಂತ್ರಿ ಆಗಬಾರದು. ಹೈಕೋರ್ಟ್ ಜಡ್ಜ್ ಗಳಿದೆ ಇದೆ ಅಂತಾರೆ. ರಾಜಕೀಯ ಭೇಟಿಗೆ ಬಂದಿಲ್ಲ, ಗಡ್ಕರಿ ಭೇಟಿಗೆ ಬಂದಿದ್ದೇನೆ. ರಾಜ್ಯದಲ್ಲಿ ರಾಜ್ಯಧ್ಯಕ್ಷರ ಬದಲಾವಣೆ ಯಾವಾಗ ವಿಜಯೇಂದ್ರ ಅವರನ್ನ ಕೇಳಿ . ಪಕ್ಷ ಅವಕಾಶ ಕೊಟ್ಟರೇ 134 ತರ್ತಿನಿ, ನೋ ಆಪರೇಷನ್ ಎಂದಿದ್ದಾರೆ.

ಬಿಜೆಪಿಯವ್ರು ಸಂವಿಧಾನ ಬದಲಾಯಿಸುತ್ತೇವೆ ಎಂದು ಕಾಂಗ್ರೆಸ್ ನವರು ಹೇಳಿಕೊಂಡು ಬಂದಿದ್ದರು. ಈಗ ಡಿಸಿಎಂ ಡಿ.ಕೆ ಶಿವಕುಮಾರ್ ಸಂವಿಧಾನ ಬದಲಾಯಿಸುವುದಾಗಿ ಹೇಳಿದ್ದಾರೆ. ಸಂವಿಧಾನ ವಿರೋಧಿಯಾಗಿ ಮೀಸಲಾತಿ ನೀಡಿದ್ದರು ಮೀಸಲಾತಿ ನೀಡಿದ್ದಾರೆ. ಕಾಂಗ್ರೆಸ್ ಸಂವಿಧಾನ ಬದಲಿಸಲಿದೆ ಎಂದು ಅವರ ನಾಯಕರ ಹೇಳಿಕೊಂಡಿದ್ದಾರೆ ಎಂದಿದ್ದಾರೆ.