ಬೆಂಗಳೂರು; ಅಧಿಕಾರ ದುರುದ್ದೇಶಕ್ಕೆ ಸಿದ್ದರಾಮಯ್ಯ ನನ್ನ ಮೇಲೆ ಅಕ್ರಮ ಗಣಿಗಾರಿಕೆ ಆರೋಪ ಹೊರಿಸಿದ್ದರು ಎಂದು ಜೈಲಿನಿಂದ ಹೊರಬಂದ ನಂತರ ಶಾಸಕ ಜನಾರ್ಧನ್ ರೆಡ್ಡಿ ಹೇಳಿದ್ದಾರೆ.
ಅಧಿಕಾರ ದುರುದ್ದೇಶಕ್ಕೆ ಸಿದ್ದರಾಮಯ್ಯ ಪಾದಯಾತ್ರೆ ಮಾಡಿ ನನ್ನ ಮೇಲೆ ಅಕ್ರಮ ಗಣಿಗಾರಿಕೆ ಆರೋಪ ಹೊರಿಸಿದ್ದರು . ಇವತ್ತು ನಮ್ಮ ಹೈದ್ರಾಬಾದ್ ಸಿಬಿಐ ಕೋರ್ಟ್ ತೀರ್ಪು ಕೊಟ್ಟಿದೆ. ತೀರ್ಪಿನಲ್ಲಿ ಓಬಳಾಪುರಂ ಮೈನಿಂಗ್ ನಲ್ಲಿ ಅಕ್ರಮ ಗಣಿಗಾರಿಕೆ ಆಗಿಲ್ಲ ಅಂತ ಹೇಳಿದೆ. ವಿದೇಶಕ್ಕೆ ರಫ್ತು ಮಾಡಿರುವ ಆರೋಪ ಸಾಬೀತಾಗಿಲ್ಲ ಅಂತ ಕೇಸ್ ಹೊಡೆದು ಹಾಕಿದ್ದಾರೆ. ಮೈನಿಂಗ್ ಲೈಸನ್ಸ್ ವಿಚಾರವಾಗಿ ಶಿಕ್ಷೆ ವಿಧಿಸಲಾಗಿದೆ ಅದನ್ನ ನಾನು ಹೈಕೋರ್ಟ್ ನಲ್ಲಿ ಪ್ರಸ್ತಾಪ ಮಾಡಿದ್ದೀನಿ ಎಂದಿದ್ದಾರೆ.
ಅಂಜನಾದ್ರಿ ಹನುಮಂತ ಗಂಗಾವತಿ ಜನರ ಸೇವೆ ಮಾಡಲು ಆಶೀರ್ವಾದ ಮಾಡಿದ್ದಾನೆ. ಅಂಜನಾದ್ರಿಯನ್ನ ತಿರುಪತಿ ಹಾಗೂ ಅಯೋಧ್ಯೆ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಶಾಸಕನಾಗಿ ಉಳಿಸಿದ್ದಾನೆ. ನ್ಯಾಯಾಲಯದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಮುಂದೆ ನನ್ನ ಕಾನೂನು ಹೋರಾಟ ಮುಂದುವರೆಸುತ್ತೇನೆ. ಮೇ 6 ಕೆ ಕೋರ್ಟ್ ಗೆ ಹೋಗೋ ಮುನ್ನ ಮೂಕಾಂಬಿಕೆ ಹಾಗೂ ಉಡುಪಿ ಕೃಷ್ಣನ ಮಠಕ್ಕೆ ಹೋಗಿದ್ದೆ. ಈ ವೇಳೆ ಪುತ್ತಿಗೆ ಶ್ರೀಗಳು ಕೋಟಿ ಗೀತಾ ಲೇಖನ ಯಜ್ಞ ಎಂಬುವ ಪುಸ್ತಕ ಕೊಟ್ಟಿದ್ದರು. ಅದರಲ್ಲಿ 18 ಅಧ್ಯಾಯಗಳನ್ನ ನಾನೇ ನನ್ನ ಸ್ವಂತ ಅಕ್ಷರಗಳಿಂದ ಬರೆದಿದ್ದೇನೆ ಎಂದರು.
ಇದೇ ವೇಳೆ ಬಳ್ಳಾರಿ ಶಾಸಕ ಹಾಗೂ ಸಂಸದರ ಮೇಲೆ ಇಡಿ ದಾಳಿ ವಿಚಾರದ ಬಗ್ಗೆ ಮಾತನಾಡಿದ ಅವರು ಚುನಾವಣಾ ಪ್ರಚಾರಗಳಿಗೆ ಕೇವಲ ನಾಗೇಂದ್ರ ಅಷ್ಟೇ ಅಲ್ಲ ತುಕಾರಾಮ ಸೇರಿದಂತೆ ಗೆದ್ದಿರುವ ಶಾಸಕರು ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡು ಚುನಾವಣೆ ಗೆದ್ದಿದ್ದಾರೆ. ಇಡಿ ಸಹ ಸರಿಯಾದ ದಾಖಲೆಗಳು ಇಲ್ಲದೆ ರೈಡ್ ಮಾಡೋದಿಲ್ಲ ಮುಂದೇನಾಗುತ್ತದೆ ನೋಡೋಣ. ಅಧಿಕಾರ ಇದ್ದಾಗ ಏನೇನು ಮಾಡಿದ್ರು ಅನ್ನೋದಕ್ಕೆ ನಾನೇ ನಿಮ್ಮ ಮುಂದೆ ಉದಾಹರಣೆ ಇದ್ದೀನಿ.ಸತ್ಯ ಯಾವತ್ತಿದ್ರು ಬೆಳಕಿಗೆ ಬಂದೇ ಬರುತ್ತೆ . 16 ನೆ ತಾರೀಕು ನಾನು ಕ್ಷೇತ್ರಕ್ಕೆ ಹೋಗ್ತೀನಿ ಕೆಡಿಪಿ ಮೀಟಿಂಗ್ ಇದೆ.ನಾನು ಯಾವಾಗಲೂ ಸಕ್ರಿಯ ರಾಜಕಾರಣದಲ್ಲಿದ್ದೀನಿ. ಸದ್ಯ ಬೆಂಗಳೂರಿಗೆ ಹೋಗುತ್ತಿದ್ದೇನೆ ಎಂದು ಜನಾರ್ದನ ರೆಡ್ಡಿ ಹೇಳಿದ್ರು.