ಮನೆ Latest News ಸಶಸ್ತ್ರ ಪಡೆಗಳ ವೀರ ಯೋಧರಿಗೆ ನಮನ ಸಲ್ಲಿಸಲು ಹಾಗೂ ಸಶಸ್ತ್ರ ಪಡೆಗಳ ಜೊತೆ ಬೆಂಬಲವಾಗಿ ನಿಲ್ಲಲು...

ಸಶಸ್ತ್ರ ಪಡೆಗಳ ವೀರ ಯೋಧರಿಗೆ ನಮನ ಸಲ್ಲಿಸಲು ಹಾಗೂ ಸಶಸ್ತ್ರ ಪಡೆಗಳ ಜೊತೆ ಬೆಂಬಲವಾಗಿ ನಿಲ್ಲಲು ಕಾಂಗ್ರೆಸ್ ನಿಂದ ಇಂದು ಜೈಹಿಂದ್ ಸಭಾ ಕಾರ್ಯಕ್ರಮ

0

 

ಬೆಂಗಳೂರು; ಸಶಸ್ತ್ರ ಪಡೆಗಳ ವೀರ ಯೋಧರಿಗೆ ನಮನ ಸಲ್ಲಿಸಲು ಹಾಗೂ ಸಶಸ್ತ್ರ ಪಡೆಗಳ ಜೊತೆ ಬೆಂಬಲವಾಗಿ ನಿಲ್ಲಲು ಕಾಂಗ್ರೆಸ್ ನಿಂದ ಇಂದು ಟೌನ್ ಹಾಲ್ ನಲ್ಲಿ ಜೈಹಿಂದ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರು, ಶಾಸಕರು ಸೇರಿದಂತೆ ಹಲವರು ಭಾಗಿಯಾದರು.

ಇಡೀ ದೇಶಾದ್ಯಂತ ಕಾಂಗ್ರೆಸ್ ನಿಂದ ಜೈಹಿಂದ್ ಸಭಾ ಕಾರ್ಯಕ್ರಮ ನಡೆಯುತ್ತಿದೆ. ಇನ್ನು ಕಾಂಗ್ರೆಸ್ಸಿನಿಂದ ಜೈಹಿಂದ್ ಕಾರ್ಯಕ್ರಮಕ್ಕೂ ಮೊದಲೇ ಅಪಸ್ವರ ಕೇಳಿ ಬಂದಿತ್ತು. ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಪೋಟೋ ಹಾಕಿದಕ್ಕೆ ಮಾಜಿ ಸೈನಿಕರು ಆಕ್ರೋಶ ಹೊರ ಹಾಕಿದ್ದಾರೆ. ಅವರೇನು ಯುದ್ಧ ಮಾಡಲು ಹೋಗಿದ್ರಾ ಎಂದು ಆಕ್ರೋಶ ಹೊರ ಹಾಕಿದ್ರು. ಆಕ್ರೋಶ ವ್ಯಕ್ತಪಡಿಸಿದ ಮಾಜಿ‌ ಸೈನಿಕರನ್ನು ಕೈ ನಾಯಕರು ಸಮಾಧಾನ ಮಾಡಿದ್ದಾರೆ.

ಇನ್ನು ಸ್ವಾಗತದ ಬಳಿಕ ಮಾಜಿ ಸೈನಿಕರಿಂದ ಸಿಎಂ ಡಿಸಿಎಂ ಗೆ ಗೌರವ ಸಲ್ಲಿಕೆ ಆಯಿತು. ಮಾಜಿ ಸೈನಿಕರು ಗೌರವಪೂರ್ವಕವಾಗಿ ಸಿಎಂ, ಡಿಸಿಎಂಗೆ ಆರ್ಮಿ ಜಾಕೆಟ್ ತೊಡಿಸಿದರು. ಆರ್ಮಿ ಜಾಕೆಟ್ ತೊಟ್ಟು ಸಿಎಂ ಸಿದ್ದರಾಮಯ್ಯ ಸುರ್ಜೆವಾಲಾ ವೇಣುಗೋಪಾಲ ಡಿಕೆಶಿ ಹಸನ್ಮುಖಿಯಾಗಿ ಕುಳಿತರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲಾ ಇಡೀ ದೇಶದ ಜನರಿಗೆ ಸೇನೆಯ ಮೇಲೆ ಗೌರವವಿದೆ, ನಂಬಿಕೆ ಇದೆ, ಹೆಮ್ಮೆ ಇದೆ.ಭಾರತ ಮಾತೆಯ ರಕ್ಷಣೆಗಾಗಿ ಒಂದೇ ಒಂದು ಹೆಜ್ಜೆ ನಮ್ಮ ಸೇನೆ ಹಿಂದೆ ಸರಿಯುವುದಿಲ್ಲ. ನಿಮ್ಮಿಂದಾಗಿಯೇ ನಮ್ಮ ಶತ್ರು ಒಂದೇ ಒಂದು ಹೆಜ್ಜೆ ನಮ್ಮ ಭೂಮಿ ಮೇಲೆ ಕಾಲಿಡಲು ಸಾಧ್ಯವಿಲ್ಲ ಸಾಧ್ಯ ಆಗಿಲ್ಲ. ಕಾರ್ಗಿಲ್ ಯದ್ದವೇ ಇರಲಿ, ಆಪರೇಷನ್ ಸಿಂಧೂರ್ ಇರಲಿ ಏನೇ ಇದ್ದರೂ ಸೇನೆ ಮಾಡಿ ತೋರಿಸಿದೆ. ಇಂದಿರಾ ಗಾಂಧಿ ಕಾಲದಲ್ಲಿ ಕೂಡ ನಮ್ಮ ಸೇನೆ ಪರಾಕ್ರಮ ವನ್ನು ತೋರಿಸಿದೆ. ನಮ್ಮ ಸೇನೆಯಲ್ಲಿ ಎಷ್ಟು ನೇಮಕಾತಿ ಆಗುವುದು ಬಾಕಿ ಇದೆ ಎಂದು ನಾವು ಹಲವು ಬಾರಿ ಪ್ರಶ್ನೆ ಮಾಡಿದ್ದೇವೆ. ೧,೭೮,೦೦೦ ಹುದ್ದೆಗಳು ನಮ್ಮ ಸೇನೆಯಲ್ಲಿ ಬಾಕಿ ಇವೆ.೨೫ ಸಾವಿರಕ್ಕೂ ಹೆಚ್ಚು ಅಧಿಕಾರಿಗಳ ಮಟ್ಟದ ಭರ್ತಿ ನೇಮಕಾತಿ ಬಾಕಿ ಇದೆ.ನೇಮಕಾತಿಯನ್ನೇ ನಾವು ಮಾಡಲಿಲ್ಲ ಅಂದ್ರೆ ದೇಶದ ಸೇವೆ ಮಾಡುವುದು ಹೇಗೆ? ದೇಶದ ಭದ್ರತೆ ಮಾಡುವುದು ಹೇಗೆ? ಎಂದು ಪ್ರಶ್ನಿಸಿದ್ರು.

ಏರ್ ಸ್ಕ್ವಾಡ್ರಂಟ್ ನೇಮಕಾತಿ ಬಾಕಿ ಇದೆ. ಒನ್ ರ್ಯಾಂಕ್ ಒನ್ ಪೆನ್ಶನ್ ಬಗ್ಗೆ ರಾಹುಲ್ ಗಾಂಧಿ ಕೂಡ ಹಲವು ಬಾರಿ ಧ್ವನಿ ಎತ್ತಿದ್ದಾರೆ. ಇದಕ್ಕೆ ಹಣಕಾಸು ಇಲಾಖೆ ಹಣಕಾಸು ಇಲಾಖೆಯಲ್ಲಿ ಕುಳಿತವರು ಸಮ್ಮತಿ ಸೂಚಿಸುವುದೇ ಇಲ್ಲ.ನಮ್ಮ ಸೈನಿಕರ ಪೆನ್ಶನ್ ವಿಚಾರದಲ್ಲಿ ಹೊಂದಾಣಿಕೆ ಬೇಡ.ಒನ್ ರ್ಯಾಂಕ್ ಒನ್ ಪೆನ್ಶನ್ ಜಾರಿಗೆ ಬರಲೇಬೇಕು.ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ನೇಮಕ ಬಗ್ಗೆ ಮನಮೋಹನ್ ಸಿಂಗ್ ಆಸಕ್ತಿ ಹೊಂದಿದ್ದರು.ಆದರೆ ೧೧ ವರ್ಷಗಳಿಂದ ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ಸ್ಥಾಪನೆ ಆಗಲೇ ಇಲ್ಲ.ಯಾವಾಗ ಇದಾಗುತ್ತದೆ ಎಂದು ಸರ್ಕಾರವನ್ನು ನಾವು ಕೇಳಲೇಬೇಕಾಗಿದೆ ಎಂದರು.

ಮುಂದುವರಿದು ಮಾತನಾಡಿದ ಅವರು ನಮ್ಮ ದೇಶದ ವಿಚಾರದಲ್ಲಿ ಮೂಗು ತೂರಿಸಲು ಅಮೇರಿಕದ ಅಧ್ಯಕ್ಷರು?.ನಮ್ಮ ಯುದ್ಧವನ್ನು ನಿಲ್ಲಿಸಲು ಡೋನಾಲ್ಡ್ ಟ್ರಂಪ್ ಯಾರು?.ನಮ್ಮ ಭೂಮಿಯ ವಿಚಾರದಲ್ಲಿ ನಿರ್ಣಯ ಕೈಗೊಳ್ಳಲು ಟ್ರಂಪ್ ಯಾರು?.ಕದನ ವಿರಾಮದ ಷರತ್ತುಗಳು ಏನಾಗಿತ್ತು? ಯಾರೂ ಬಹಿರಂಗಪಡಿಸಿಲ್ಲ.ಇಂದಿರಾ ಗಾಂಧಿ ಮೇಲೂ ಕೂಡ ಒತ್ತಡಗಳಿತ್ತು.ಆದರೂ ಇಂದಿರಾ ಗಾಂಧಿ ಶಿಮ್ಲಾ ಒಪ್ಪಂದ ಮಾಡಿಕೊಂಡರು.ಈಗ ಪಾಕಿಸ್ತಾನದ ಜೊತೆಗೆ ಕದನ ವಿರಾಮ ಮಾಡಿಕೊಳ್ಳಲು ಷರತ್ತುಗಳೇನಾಗಿತ್ತು?.ಇದರ ಬಗ್ಗೆ ನಾವು ದೇಶದ ಸುರಕ್ಷತೆ ದೃಷ್ಟಿಯಿಂದ ಪ್ರಶ್ನೆ ಎತ್ತಲೇಬೇಕಿದೆ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮಾತನಾಡಿ ಅಪರೇಷನ್ ಸಿಂಧೂರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ.ನಾವೆಲ್ಲಾ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡಿದ್ದೇವೆ.ನಮ್ಮಲ್ಲಿ ರಾಜಕೀಯ ‌ಭಿನ್ನಾಬಿಪ್ರಾಯಗಳು ಇರಬಹುದು. ಆದರೆ ನಮಗೆ ದೇಶ ಮೊದಲು ನಂತರ ಉಳಿದದ್ದು .ಪಾಕಿಸ್ತಾನದಲ್ಲಿ ಟೆರರಿಸ್ಟ್ ಫ್ಯಾಕ್ಟರಿ ಇದೆ. ಎರಡು ಭಾರಿ ಸರ್ವಪಕ್ಷ ಸಭೆಯನ್ನ ಕರೆಯಲಾಗಿತ್ತು. ಈ ಸಭೆಯಲ್ಲಿ ನಾವು ಕೇಂದ್ರ ಸರ್ಕಾರದ ನಿರ್ಧಾರ ಪರ ನಿಂತಿದ್ದೆವು. ಪಾಕಿಸ್ತಾನಕ್ಕೆ ನಮ್ಮ ಸೈನಿಕರು ತಕ್ಕ ಉತ್ತರ ಕೊಟ್ಟಿದ್ದಾರೆ. ವಿಶೇಷ ಸಂಸತ್ ಅಧಿವೇಶನ ಕರೆಯುವಂತೆ ಹೇಳಿದ್ದೆವು. ನಾವೆಲ್ಲಾ ಕೇಂದ್ರ ಸರ್ಕಾರ ಹಾಗೂ ಸೈನಿಕರ ಪರ ಇದ್ದೇವೆ. ದೇಶದ ವಿಚಾರದಲ್ಲಿ ನಾವು ಯಾವುತ್ತು ರಾಜಕೀಯ ಮಾಡೋದಿಲ್ಲ. ಮುಂಬೈ ದಾಳಿ ನಡೆದಾಗ ಜಾಹೀರಾತಿನ ಮೂಲಕ ಟೀಕಾ ಟಿಪ್ಪಣಿಗಳನ್ನ ಮಾಡಿದ್ದರು. ಆದರೆ ನಾವು ಹಾಗೆ ಮಾಡಿಲ್ಲ. ಒಂದು ತಿಂಗಳಿನಿಂದ‌ ದೇಶದ ಏಕತೆಗಾಗಿ ನಿಂತಿದ್ದೇವೆ, ಟೀಕೆ ಮಾಡಿಲ್ಲ. ಯಾಕೆ ಪಹಲ್ಗಾಮ್ ಘಟನೆಯಲ್ಲಿ ಗುಪ್ತಚರ ಇಲಾಖೆ ವಿಫಲವಾಯ್ತು.ಇದಕ್ಕೆಲ್ಲಾ  ಕೇಂದ್ರ ಸರ್ಕಾರ ಉತ್ತರ ಕೊಡಬೇಕು. ೨೬ ಜನರನ್ನ ಹತ್ಯೆ ಮಾಡಿದ ಭಯೋತ್ಪಾದಕರು ಎಲ್ಲಿದ್ದಾರೆ. ಕದನ ವಿರಾಮ ಅಗಿದೆ, ನಾವು ಯುದ್ಧವನ್ನ ಬಯಸೋದಿಲ್ಲ. ಕದನ ವಿರಾಮದ ಷರತ್ತುಗಳೇನು ಅಂತ ಪ್ರಧಾನಿಗಳು ಹೇಳಬೇಕು. ಅಮೇರಿಕಾ ಕದನ ವಿರಾಮ ಘೊಷಿಸುವಂತೆ ಒತ್ತಡ ಹಾಕಿದೆ. ಟ್ರಂಪ್ ‌ಕದನ ವಿರಾಮದ ಮೊದಲ ಟ್ವೀಟ್ ಮಾಡುತ್ತಾರೆ.ನಮ್ಮ ವಿದೇಶಾಂಗ ನೀತಿಯು ವಾಷಿಂಗ್ಟನ್‌ ಡಿಸಿಯನ್ನ ಅವಲಂಬಿಸಿದೆಯಾ ?. ದೇಶ ಸಮಧಾನದ ಉತ್ತರವನ್ನ ಬಯಸುತ್ತಿದೆ ಎಂದರು.