ಮನೆ Blog ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಹೊಡೆದಿದ್ದಾರೆ ಅನ್ನೋದು ಸುಳ್ಳು ಹೇಳಿದ್ರೆ ಅದು ಸರಿಯಲ್ಲ: ಸಚಿವ ಸಂತೋಷ ಲಾಡ್...

ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಹೊಡೆದಿದ್ದಾರೆ ಅನ್ನೋದು ಸುಳ್ಳು ಹೇಳಿದ್ರೆ ಅದು ಸರಿಯಲ್ಲ: ಸಚಿವ ಸಂತೋಷ ಲಾಡ್ ಹೇಳಿಕೆ

0

ಬೆಂಗಳೂರು: ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಹೊಡೆದಿದ್ದಾರೆ ಅನ್ನೋದು ಸುಳ್ಳು ಹೇಳಿದ್ರೆ ಅದು ಸರಿಯಲ್ಲ ಎಂದು ಸಂತೋಷ ಲಾಡ್ ಹೇಳಿದ್ದಾರೆ.

ಹಿಂದೂಗಳನ್ನು ಹುಡುಕಿ ಹೊಡೆದಿಲ್ಲ ಅನ್ನೋ ತಿಮ್ಮಾಪುರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಶಿವಮೊಗ್ಗದ ಮಹಿಳೆ‌ ಹೇಳಿರೋದನ್ನ ಅಲ್ಲಗಳೆಯೋಕೆ ಆಗಲ್ಲ. ಆದ್ರೆ ಅಲ್ಲಿ ನಡೆದಿರೋದ್ರ ಬಗ್ಗೆ 90% ಜನರು ಹಾಗೆ ನಡೆದಿಲ್ಲ ಅಂತ ಹೇಳಿದ್ದಾರೆ. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಹೊಡೆದಿದ್ದಾರೆ ಅನ್ನೋದು ಸುಳ್ಳು ಹೇಳಿದ್ರೆ ಅದು ಸರಿಯಲ್ಲ. ಇದೆಲ್ಲವನ್ನೂ ಮಾಧ್ಯಮಗಳು ಸುದ್ದಿ ಮಾಡಿವೆ. ಪುಲ್ವಾಮಾ ಅಟ್ಯಾಕ್ ಬಗ್ಗೆ ಯಾರು ಬಿಜೆಪಿಯವರು ಮಾತಾಡಲ್ಲ. ಬಿಹಾರ ಚುನಾವಣೆಯಲ್ಲಿ ಇದೇ ವಿಚಾರ ಚರ್ಚೆ ಆಗ್ತಿದೆ .ಬಿಹಾರ ಚುನಾವಣೆ ಇದರ ಮೇಲೆ ಮಾಡೋಕೆ ಹೊರಟಿದ್ದಾರೆ. ಕಾಶ್ಮೀರದಲ್ಲಿ ಟ್ರೇನ್ ಟಿಕೆಟ್ ಮೂರು ಪಟ್ಟು ಹೆಚ್ಚು ಮಾಡಿದ್ದಾರೆ ಎಂದಿದ್ದಾರೆ.

ಫ್ರೀ ಟಿಕೆಟ್ ಕೊಡೋದು ಬಿಡಿ, ಸೆಂಟ್ರಲ್ ನವರು ಪ್ರೈಸ್ ಹೆಚ್ಚಳ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಜನರ ದುಡ್ಡು ಲೂಟಿ‌ ಹೊಡೆದಿದ್ದಾರೆ. ನೀರು ನಿಲ್ಲಿಸಲು ಸಾಧ್ಯ ಇದ್ಯಾ?. ಇದರ ಬಗ್ಗೆ ಪರಾಮರ್ಶೆ ಆಗಿದ್ಯಾ?. ಸರ್ಕಾರ ನಿರ್ಣಯ ತೆಗೆದುಕೊಳ್ಳುವ ಮೊದಲು ಮಾಧ್ಯಮಕ್ಕೆ ಬಿಡುತ್ತಾರೆ. ಈ ವಿಷಯವನ್ನು ದಾರಿ ತಪ್ಪಿಸಲು ಇಂತಹ ವಿಚಾರ ಚರ್ಚೆಗೆ ಬರುತ್ತಿದೆ. ಶಿವಮೊಗ್ಗದಲ್ಲಿ ಮೊನ್ನೆ ಮೆರವಣಿಗೆ ಮಾಡಿದ್ರು. ನಿಮ್ಮದೇ ಅಡಳಿತ ಇದ್ದಾಗ ಹಿಂದೂಗಳು ಸುರಕ್ಷಿತವಾಗಿಲ್ಲ ಅಂತಾರೆ. ಪ್ರಧಾನಿಗಳು ಕಾಶ್ಮೀರಕ್ಕೆ ಹೋಗಿ ಪ್ರೆಸ್ ಮೀಟ್ ಮಾಡ್ಲಿಲ್ಲ. ಬಿಹಾರಕ್ಕೆ ಹೋಗಿ ಭಾಷಣ ಮಾಡಿದ್ರು. ಮಾಧ್ಯಮದಲ್ಲಿ ಯುದ್ಧ ಶುರುವಾಗತ್ತೆ, ಫೈಟರ್ ಜೆಟ್ ರೆಡಿ‌ ಇದೆ ಅಂತ‌ ಸುದ್ದಿ ಆಗುತ್ತಿದೆ. ಯಾವುದೋ ಕೆರೆ ನೀರು ತೋರಿಸುತ್ತಿದ್ದಾರೆ. ಈಗ ಟೆರಿರಿಸ್ಟ್ ಮನೆ ಧ್ವಂಸ ಮಾಡ್ತಿದ್ದಾರೆ ಅಂತ‌ ಸುದ್ದಿ ಆಗ್ತಿದೆ. ರಿರಿಸ್ಟ್‌ಗಳ‌ ಮನೆಗಳ ಬಗ್ಗೆ‌ ಮೊದಲು ಇದ್ದದ್ದು ಗೊತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಆ ಟೆಕ್ನಾಲಜಿ ಈ ಟೆಕ್ನಾಲಜಿ ಅಂತಾರೆ ಮೋದಿ. ಎಐ ಟೆಕ್ನಾಲಜಿ ಅಂತಾರೆ, ಆದ್ರೆ ಅಲ್ಲಿ ಒಂದು ಡ್ರೋನ್ ಇಲ್ಲ. ಡ್ರೋನ್ ಮೂಲಕ ಬೀಜ ಹಾಕಿ ಮರ ಬೆಳೆಸ್ತೇವೆ ಅಂತಾರೆ. ಆದ್ರೆ ಅಲ್ಲಿ ಯಾವ ರೀತಿ ಸೆಕ್ಯುರಿಟಿ ಇದೆ ಅನ್ನೋದರ ಬಗ್ಗೆ ಚರ್ಚೆ ಆಗ್ತಿದೆ. ಫೈರ್ ಆದಾಗಲೂ ಆರ್ಮಿ ಹೋಗಬೇಕಾದ್ರೆ ಎರಡು ಗಂಟೆ ಬೇಕು ಅಂತ ಮಾಹಿತಿ ಇದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಸಂತೋಷ ಲಾಡ್ ವಾಗ್ದಾಳಿ ನಡೆಸಿದ್ದಾರೆ.

ಅಕ್ಷಯ್ ಕುಮಾರ್‌ಗೆ ಮೋದಿ ಇಂಟರ್‌ವ್ಯೂವ್ ಕೊಟ್ಟಿದ್ರು. ಅದಕ್ಕೆ ಮೋದಿ ಇಂಟರ್‌ವ್ಯೂವ್ ಮಾಡಿದ್ರು. ಅಕ್ಷಯ್ ಕುಮಾರ್ ಮೋದಿ ಮಾವಿನಹಣ್ಣು ಹೇಗೆ ತಿಂದ್ರು. ಮೋದಿ ಬಗ್ಗೆ ಗುಣಗಾನ ಮಾಡಿದ್ರು. ಈಗ ಅವರನ್ನ ಹೋಗಿ ಕೇಳಬೇಕು ಎಂದು ಅಕ್ಷಯ್ ಕುಮಾರ್ ವಿರುದ್ಧ ಲಾಡ್ ವಾಗ್ದಾಳಿ ನಡೆಸಿದ್ದಾರೆ. ಎಐ ಕೇಂದ್ರ ಉದ್ಘಾಟನೆಗೆ ಕರಣ್ ಜೋಹರ್ ಕರೆಯುತ್ತಾರೆ. ಅವರಿಗೆ ಏನೇನು ಗೊತ್ತಿರಲ್ಲ, ಅವರು ಬಂದು ಉದ್ಘಾಟನೆ ಮಾಡ್ತಾರೆ. ಅವರೆಲ್ಲ ಡ್ರೀಮ್ ಎಲೆವೆನ್ ಪ್ರಮೋಷನ್ ಮಾಡ್ತಾರೆ. ಪಾರ್ಲಿಮೆಂಟಿನಲ್ಲಿಟ್ಟು ಆ‌್ಯಪ್ ಬ್ಯಾನ್ ಮಾಡಿ ನೋಡೋಣ. ಎಷ್ಟೋ ಯುವಕರು‌ ಇವತ್ತು ಬೆಟ್ಟಿಂಗ್ ನಿಂದ ಸಾಯುತ್ತಿದ್ದಾರೆ. ಯಾಕೆ ಆಗ್ತಿಲ್ಲ ಇವರ ಕೈಯಲ್ಲಿ? ಎಂದು ಕೇಂದ್ರ ಸರ್ಕಾರದ ‌ವಿರುದ್ಧ ಸಂತೋಷ ಲಾಡ್ ವಾಗ್ದಾಳಿ ನಡೆಸಿದ್ದಾರೆ.

ಜನಿವಾರ,ಮಂಗಳಸೂತ್ರ ತೆಗೆಯುವ ವಿಚಾರದ ಬಗ್ಗೆ ಮಾತನಾಡಿದ ಅವರು ಹಿಂದೂ ವಿರೋಧಿಗಳು ಎಲ್ಲಿಗೆ ಹೋದ್ರು. ಕೇಂದ್ರವೇ ಮಂಗಳಸೂತ್ರ, ಜನಿವಾರ ತೆಗೆಯಬೇಕೆಂದಿದೆಯಲ್ಲ. ರೈಲ್ವೆ ಮಾರ್ಗಸೂಚಿ ಇದೆಯಲ್ಲ. ಯಾಕೆ ಕೇಂದ್ರದ ವಿರುದ್ಧ ಯಾರು ಮಾತನಾಡ್ತಿಲ್ಲ. ಅರವಿಂದ ಬೆಲ್ಲದ್ ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ರು. ನನ್ನ ಕಚೇರಿ ಮುಂದೆ ತಂದು ಮಾಡಿದ್ರು. ಈಗಲೂ ಅವರು ಕೇಂದ್ರದ ವಿರುದ್ಧ ಮಾಡಬೇಕು. ಜನಿವಾರ ತೆಗೆಯಿರು,ಮಂಗಳಸೂತ್ರ ತೆಗೆಯಿರಿ ಅಂತಿದ್ಯಲ್ಲ. ಈಗ ಯಾಕೆ ಸುಮ್ಮ‌ನಿದ್ದೀರ. ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಬೇಕು. ಅರವಿಂದ ಬೆಲ್ಲದ್ ಪ್ರತಿಭಟನೆ ಮಾಡಿ. ಬಿಜೆಪಿ ನಾಯಕರು ಪ್ರತಿಭಟನೆ ಮಾಡಬೇಕು ಎಂದು ಬಿಜೆಪಿ ವಿರುದ್ದ್ ಸಂತೋಷ್ ಲಾಡ್ ಆಕ್ರೋಶ ಹೊರ ಹಾಕಿದ್ದಾರೆ.