ಮನೆ Latest News ವಿಜಯೋತ್ಸವ ಆಚರಣೆ ಸಿಎಂ ತೀರ್ಮಾನವೋ, ಡಿಸಿಎಂ ತೀರ್ಮಾನವೋ ಸ್ಪಷ್ಟಪಡಿಸಬೇಕು; ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿಕೆ

ವಿಜಯೋತ್ಸವ ಆಚರಣೆ ಸಿಎಂ ತೀರ್ಮಾನವೋ, ಡಿಸಿಎಂ ತೀರ್ಮಾನವೋ ಸ್ಪಷ್ಟಪಡಿಸಬೇಕು; ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿಕೆ

0

ಬೆಂಗಳೂರು; ವಿಜಯೋತ್ಸವ ಆಚರಣೆ ಸಿಎಂ ತೀರ್ಮಾನವೋ, ಡಿಸಿಎಂ ತೀರ್ಮಾನವೋ ಸ್ಪಷ್ಟಪಡಿಸಬೇಕು ಎಂದು  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ದುರ್ಘಟನೆಗೆ ಯಾರು ಹೊಣೆಗಾರಿಕೆ ತೆಗೆದುಕೊಳ್ಳಬೇಕು?. ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡಿದ್ದರೆ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಅಹಮದಾಬಾದ್ ನಲ್ಲಿ ಫೈನಲ್ ನಡೆದಾಗ ಯಾವುದೇ ಅನಾಹುತ ನಡೆಯಲಿಲ್ಲ. ಬೆಂಗಳೂರಿನಲ್ಲಿ ಸಂಭ್ರಮಾಚರಣೆ ವೇಳೆ ಅನಾಹುತ ನಡೆದಿರುವುದು ತಲೆ ತಗ್ಗಿಸುವಂತಾಗಿದೆ. ರಾಜ್ಯ ಸರ್ಕಾರ ಯಾಕೆ ಇಷ್ಟು ಆತುರಾತುರವಾಗಿ ಆಯೋಜನೆ ಮಾಡಿದರು?. ಇನ್ಯಾರೋ ಆಯೋಜನೆ ಮಾಡಿದ್ದರೆ ಯಾಕೆ ತರಾತುರಿಯಲ್ಲಿ ರಾಜ್ಯ ಸರ್ಕಾರ ಪೂರ್ವಾನುಮತಿ ಕೊಟ್ಟಿತು?. ರಾಜ್ಯ ಸರ್ಕಾರಕ್ಕೆ ವಿಧಾನಸೌಧದ ಮುಂದೆ ಸಂಭ್ರಮಾಚರಣೆ ಅವಶ್ಯಕತೆ ಏನಿತ್ತು?. ಸಿಎಂ ತೀರ್ಮಾನವೋ, ಡಿಸಿಎಂ ತೀರ್ಮಾನವೋ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆರ್ ಸಿಬಿ ತಂಡ ಹೋಟೆಲ್ ನಿಂದ ಹೊರಡುವ ಮುನ್ನವೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ, ಒಂದು ಎರಡು ಸಾವು ಆಗಿದೆ ಗೊತ್ತಿದ್ದರೂ ಸಂಭ್ರಮಾಚರಣೆ ಯಾಕೆ ಮಾಡಿದರು?. ಸಾವು ನೋವಿನ ಮಾಹಿತಿ ಇದ್ದರೂ ಯಾಕೆ ಅಮಾನುಷ ತೀರ್ಮಾನ ಮಾಡಿದರು?. ನಾಲ್ಕೈದು ಸಾವು ಆಗಿದ್ದರೂ ಕ್ರೀಡಾಂಗಣದಲ್ಲಿ ಡಿಸಿಎಂ ಹೋಗಿ ಕಪ್ ಗೆ ಮುತ್ತಿಕ್ಕುತ್ತಾರೆ, ವಿಧಾನಸೌಧದಲ್ಲಿ ಸೆಲ್ಫಿಗಳ ಭರಾಟೆ. ಜಾಸ್ತಿ ಜನ ಬರುವ ನಿರೀಕ್ಷೆ ಮಾಡಿರಲಿಲ್ಲ ಎಂದರೆ ಅದು ರಾಜ್ಯ ಸರ್ಕಾರದ ವೈಫಲ್ಯ. ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕಾಲ್ತುಳಿತ ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡ. ಮತ್ತೊಬ್ಬರ ಸಾಧನೆಯನ್ನು ಸರ್ಕಾರ ಆತುರದಲ್ಲಿ ದುರ್ಲಾಭ ಪಡೆಯುವ ತೀರ್ಮಾನ. ಕಪ್ ನಮ್ಮದೇ, ತಪ್ಪು ಯಾರದ್ದು?. ಇದು ಆಡಳಿತದ ವೈಫಲ್ಯಕ್ಕೆ ಹಿಡಿದ ಸ್ಪಷ್ಟ ಕನ್ನಡಿ. 100 ಮೀಟರ್ ಅಂತರದಲ್ಲಿ ಎರಡು ಕಾರ್ಯಕ್ರಮ ಯಾಕೆ?. ಬೆಂಗಳೂರಿನ ಘಟನೆ ನಮಗೆ ಗೊತ್ತೇ ಇಲ್ಲ ಎಂದು ಐಪಿಎಲ್ ಅಧ್ಯಕ್ಷ ಹೇಳಿದ್ದಾರೆ. ನಮಗೆ ಸಂಬಂಧವೇ ಇಲ್ಲ ಎಂದು ಅವರು ಕೈ ತೊಳೆದುಕೊಂಡಿದ್ದಾರೆ. ಸರ್ಕಾರ ಕೇಳಿದೆ, ಸ್ಟೇಡಿಯಂ ಕೊಟ್ಟಿದ್ದೇವೆ, ನಮ್ಮದು ತಪ್ಪಿಲ್ಲ ಅಂತಾ ಕೆಎಸ್ ಸಿಎ ಹೇಳಿದೆ.ಇದರಲ್ಲಿ ಕೆಎಸ್ ಸಿಎ ತಪ್ಪು ಕೂಡಾ ಇಲ್ಲ.ಆಟಗಾರರನ್ನು ವಿಧಾನಸೌಧಕ್ಕೆ ಕರೆ ತಂದ ಪುಣ್ಯಾತ್ಮ ಯಾರು?. ಅವನ ಹೆಸರು ಸುವರ್ಣಾಕ್ಷರಲ್ಲಿ ಬರೆದಿಡಬೇಕಲ್ವಾ?. ಫೈನಲ್ ಮ್ಯಾಚ್ ಮುಗಿದ ಮೇಲೆ ರಾತ್ರಿ 3 ಗಂಟೆಯವರೆಗೆ ಜನರನ್ನು ಕಳುಹಿಸಲು ಬೆಂಗಳೂರಿನಲ್ಲಿ ಪೊಲೀಸರು ಬೆವರು ಸುರಿಸಿದ್ದಾರೆ. ಅದೇ ಪೊಲೀಸರನ್ನು ಮತ್ತೆ ಕರ್ತವ್ಯಕ್ಕೆ ನಿಯೋಜಿಸಿದ್ದಾರೆ.ನನಗಿರುವ ಮಾಹಿತಿ ಪ್ರಕಾರ ಕಾರ್ಯಕ್ರಮಕ್ಕೆ ಪೊಲೀಸರು ನಿರಾಕರಿಸಿದ್ದಾರೆ. ಆಗ ಸರ್ಕಾರ ಬಲಾತ್ಕಾರವಾಗಿ ನಾನೋ ನೀನೋ ಅಂತಾ ಕೇಳಿದ್ದಾರೆ. ಹೈಕೋರ್ಟ್ ನಿರ್ಬಂಧಿತ ವಲಯದಲ್ಲಿ ಡ್ರೋಣ್ ಬಳಕೆ ಮಾಡಿದ್ದಾರೆ. ಕೋರ್ಟ್ ಕಟ್ಟಡದ ಮೇಲೆ ಕೂಡಾ ಹತ್ತಿದ್ದಾರೆ, ಬಿಟ್ಟವರು ಯಾರು? ಎಂದು ಪ್ರಶ್ನಿಸಿದ್ದಾರೆ.

ಜನ ಸೇರುವ ಅಂದಾಜಿರಲಿಲ್ಲ ಎಂದು ಸಿಎಂ ಬಾಯಲ್ಲಿ ಬಂದ ನುಡಿಮುತ್ತು. ಮುಂಬೈ, ಕೋಲ್ಕತಾ, ಹೈದರಾಬಾದ್ ನಲ್ಲಿ ಎಷ್ಟು ಜನ ಸೇರಿದ್ದರು ಎಂಬ ಕಾಮನ್ ಸೆನ್ಸ್ ಇರಲಿಲ್ವಾ?. ತಪ್ಪನ್ನು ಬೇರೆಯವರ ಮೇಲೆ ಹಾಕಲು ನಿನ್ನೆ ಸಿಎಂ ಸುದ್ದಿಗೋಷ್ಠಿ ಮಾಡಿದರು. ಸಿಎಂ ಪ್ರಕಾರ ನಿನ್ನೆ ಆಗಿದ್ದು ಜನರ ತಪ್ಪಿನಿಂದ.ಕೆಎಸ್ ಸಿಎ ನಲ್ಲಿ 12 ಗೇಟ್ ಇದ್ದರೂ ಓಪನ್ ಮಾಡಿದ್ದು 2 ಗೇಟ್ .ನಿನ್ನೆ ಪಾಸ್ ಕೊಟ್ಟ ಪುಣ್ಯಾತ್ಮ ಯಾರು?. ಎಷ್ಟು ಹೊತ್ತಿಗೆ ಒಳಗೆ ಬಿಡಬೇಕು ಎಂಬ ನಿರ್ದೇಶನವೇ ಇಲ್ಲ, ಯಾರು ನಡೆಸುತ್ತಿದ್ದಾರೆ ಎಂದು ಗೊತ್ತೇ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.ಆಟಗಾರರು ಗೆದ್ದರೆ ಡಿ.ಕೆ. ಶಿವಕುಮಾರ್ ಬಾವುಟ ಹಿಡಿದುಕೊಂಡು ಹೋಗಿದ್ದಾರೆ. ನಿಮಗೆ ಅನುಮತಿ ಕೊಟ್ಟವರಾರು ಮಿಸ್ಟರ್ ಡಿ.ಕೆ. ಶಿವಕುಮಾರ್?.ನಿಮ್ಮ ಕೈಕೆಳಗೆ ಕೈ ಕಟ್ಟಿಕೊಂಡು ನಿಂತ ಡಿಸಿ ಬಂದು ನಿಮ್ಮ ತನಿಖೆ ಮಾಡುತ್ತಾರಾ?.ಯಾರ ಮೇಲೆ ಕೇಸ್ ಹಾಕಿ ಯಾರನ್ನು ಅರೆಸ್ಟ್ ಮಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.