ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರು ಈಶ್ವರ್ ಖಂಡ್ರೆ ಆಗ್ಲಿ ಯಾರೇ ಆಗಲಿ ನಮ್ಮ ಸಪೋರ್ಟ್ ಅಂತೂ ಇದ್ದೇ ಇರುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಸಿಎಂದೆಹಲಿಯಿಂದ ವಾಪಸ್ಸಾದ ಮೇಲೆ ಚರ್ಚೆ ಮಾಡ್ತೇನೆ. ಈಶ್ವರ್ ಖಂಡ್ರೆ ಹಾಗೂ ನನ್ನ ಹೆಸರಿದೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೆಸರಿದೆ ಅಂತ ಪತ್ರಿಕೆಯಲ್ಲಿ ನೋಡಿದ್ದೇನೆ. ಸಿಎಂ ಹೈಕಮಾಂಡ್ ಜೊತೆಗೆ ಏನೇನು ಚರ್ಚೆ ಮಾಡಿದ್ದಾರೆ ಅಂತ ಸಂಜೆ ಗೊತ್ತಾಗಬಹುದು. ಈಶ್ವರ್ ಖಂಡ್ರೆ ಆಗ್ಲಿ ಯಾರೇ ಆಗಲಿ ನಮ್ಮ ಸಪೋರ್ಟ್ ಅಂತೂ ಇದ್ದೇ ಇರುತ್ತದೆ ಎಂದಿದ್ದಾರೆ.
ಈ ಸಲ ಹೈಕಮಾಂಡ್ ನಾಯಕರನ್ನು ಯಾರೂ ಭೇಟಿ ಮಾಡಿಲ್ಲ. ಎಲ್ಲ ಎಂಎಲ್ಸಿ ಆಕಾಂಕ್ಷಿಗಳು ಇದ್ದರು ಅಲ್ಲಿ. ಕರ್ನಾಟಕ ಭವನ ಕಾರ್ಯಕ್ರಮಕ್ಕೆ ಜನರಲ್ ಆಗಿ ಆಹ್ವಾನ ನೀಡಿದ್ದಾರೆ. ಪರಮೇಶ್ವರ್ ಅವರಿಗೆ ಸೇರಿ ಎಲ್ಲರಿಗೂ ಜನರಲ್ ಆಗಿ ಆಹ್ವಾನ ನೀಡಲಾಗಿತ್ತು. ಡಿಪಿಆರ್ ನವರು ಪ್ರೊಟೋಕಾಲ್ ಫಾಲೋ ಮಾಡಬೇಕು. ನಿಗದಿತ ಕೇಂದ್ರ ಸಚಿವರಿಗೆ ಮಾತ್ರ ಆಹ್ವಾನ ನೀಡಿದ್ದರು. ಪರಮೇಶ್ವರ್ ಅವರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದ್ರು.
ಇನ್ನು ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ನಾವೇ ಎಲ್ಲರಿಂದ ಎಚ್ಚರವಾಗಿರಬೇಕಷ್ಟೇ. ಇದಕ್ಕೆಲ್ಲ ಇತಿಶ್ರೀ ಹಾಡಲೇಬೇಕು. ಹಾಯ್ ಅಂದ್ರೆ ಹಾಯ್ ಅನ್ನಬಾರದು ನಾವು. ಹಾಯ್ ಅಂದ್ರೆ ಬೈ ಬೈ ಅಂತ ಓಡಿಹೋಗಬೇಕಷ್ಟೇ. ರಾಜಣ್ಣ ಹಾಯ್ ಅಂದವ್ರಿಗೆ ಬೈ ಬೈ ಅಂದಿದ್ದಾರಂತೆ. ನಾವೆಲ್ಲರೂ ಹಾಗೇ ಇರಬೇಕು ಹಾಯ್ ಅಂದ್ರೆ ಹಾಯ್ ಅನ್ನಬಾರದು ಅಷ್ಟೇ ಎಂದಿದ್ದಾರೆ.
ಕೊಡಗು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ವಿಚಾರದ ಬಗ್ಗೆ ಮಾತನಾಡಿದ ಅವರು ಪೊಲೀಸರು ತನಿಖೆ ಮಾಡಲಿ. ಆತ್ಮಹತ್ಯೆ ಕೇಸ್ ಅಂದಾಗ ಸಹಜವಾಗಿಯೇ ಪೊಲೀಸರು ತನಿಖೆ ಮಾಡ್ತಾರೆ. ಯಾರ ತಪ್ಪಿದೆ ತನಿಖೆಯಿಂದ ಗೊತ್ತಾಗುತ್ತದೆ. ನಾವು ಇಷ್ಟು ದೂರ ಕುಳಿತು ಹೀಗೇ ಆಗಿದೆ ಎಂದು ಹೇಗೆ ಹೇಳುವುದು?. ತನಿಖೆಯಾಗಿ ಸತ್ಯ ಹೊರ ಬರಲಿ ಎಂದ್ರು. ಬೆಲೆ ಏರಿಕೆ ಅನಿವಾರ್ಯ ಎಂದ ಅವರು ಅಭಿವೃದ್ಧಿ ಕೆಲಸಗಳು ಆಗಬೇಕು ಅಂದ್ರೆ ಬೆಲೆ ಏರಿಕೆ ಅನಿವಾರ್ಯ ಎಂದ್ರು. ಹಿಂದೆ ಬಿಜೆಪಿ ಕಾಲದಲ್ಲಿ ಬೆಲೆ ಏರಿಕೆ ಆಗಿಲ್ವಾ?.ಅವರೂ ಮಾಡಿದ್ದಾರೆ ಮೆಟ್ರೋ ದರ ಏರಿಕೆ ಮಾಡಿದ್ಯಾರು?. ಪ್ರತಿಭಟನೆಗಳು ಸಕಾರಣವಾಗಿರಬೇಕು.ವಿರೋಧ ಪಕ್ಷ ವಿರೋಧ ಮಾಡಬೇಕು ಎಂಬ ಕಾರಣಕ್ಕೆ ಆಗಬಾರದು. ಹಿಂದೆ ಅವರ ಕಾಲದಲ್ಲಿ ಬೆಲೆ ಏರಿಸಿ ಇಳಿಸಿದ್ರು ಎಂದ್ರು.
ಹನಿಟ್ರ್ಯಾಪ್ ವಿಚಾರದಲ್ಲಿ ಯಾರು ಶತ್ರುಗಳು ಯಾರು ಮಿತ್ರರು ಅಂತ ಗೊತ್ತಾಗಲ್ಲ.೩೦೦ ಕೀಮಿ ರೇಡಿಯಸ್ ನಲ್ಲಿ ಏನು ಬೇಕಾದರೂ ಆಗಬಹುದು. ಸಚಿವರು ಅಂತಲ್ಲ, ಶಾಸಕರು ನಾವು ನೀವೂ ಕೂಡ ಎಚ್ಚರಿಕೆ ಯಿಂದ ಇರಬೇಕು ಎಂದ್ರು. ಕೆಪಿಸಿಸಿ ಅಧ್ಯಕ್ಷ ಆಯ್ಕೆ ಬಗ್ಗೆ ಶೀಘ್ರದಲ್ಲೆ ಆಗುತ್ತೆ ಇಲ್ವೋ ಅನ್ನೋದು ಸಿಎಂ ಬಂದ ಬಳಿಕ ಅವರ ಜೊತೆ ಚರ್ಚೆ ಆದ ಬಳಿಕವೇ ತಿಳಿಸುವೆ. ಕೆಪಿಸಿಸಿ ಅಧ್ಯಕ್ಷ ಆಗುವವರ ಬಗ್ಗೆ Terms & conditions ಬಗ್ಗೆ ಚರ್ಚೆ ಆಗಿಲ್ಲ.ಆ ಬಗ್ಗೆ ಹೈಕಮಾಂಡ್ ಅಭಿಪ್ರಾಯ ಕೇಳಿದ್ರೆ ನಮ್ಮ ನಮ್ಮ ವಿಚಾರ ತಿಳಿಸುತ್ತೇವೆ ಎಂದ್ರು.
ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಅನುದಾನ ದೊರೆಯದ ವಿಚಾರದ ಬಗ್ಗೆ ಮಾತನಾಡಿ ನಾವೂ ಕೇಳಿದ್ದೇವೆ. ನಮಗೂ ಸಿಗಬೇಕಾಗಿದೆ. ನಮ್ಮದೂ ವೇಯಿಟಿಂಗ್ ಲಿಸ್ಟ್ ನಲ್ಲಿದೆ. ನಾವೂ ಅನುದಾನ ಕೇಳ್ತಾನೇ ಇದೀವಿ. ಒಂದು ಸರಿ ಸಭೆ ಮಾಡ್ತೀವಿ. ನಾವೂ ಲಿಸ್ಟ್ ಕೊಟ್ಟ ಬಹಳ ದಿನ ಆಯ್ತು. ರಾಯಚೂರು ಶಾಸಕರ ಪೋನ್ ಟ್ಯಾಪ್ ಬಗ್ಗೆ ಪತ್ರ ಕೊಟ್ಟರೇ ತನಿಖೆ ಮಾಡಿ ಉತ್ತರ ಕೊಡ್ತೀವಿ. ಸ್ವ ಪಕ್ಷದಲ್ಲಿ ಪೋನ್ ಟ್ಯಾಪಿಂಗ್ ಆಗಿಲ್ಲ ಅಂದ್ರು.ಈ ವಿಚಾರದಲ್ಲಿ ಎಲ್ಲರೂ ಸೂಕ್ಷ್ಮವಾಗಿ ಇರಬೇಕು. ಹಾಯ್ ಅಂದ್ರೆ ಬಾಯ್ ಅಂತಾ ಹೇಳಿ ಹೋಗಬೇಕು. ರಾಜಣ್ಣ ನನ್ನ ಜೊತೆ ಚರ್ಚೆ ಮಾಡಿದಾಗ ಬಾಯ್ ಎಂದಿರುವುದಾಗಿ ಹೇಳಿದ್ದರು.ರಾಜಣ್ಣ ಹಾಯ್ ಎಂದಿರಲೂಬಹುದು ಎಂದ್ರು.