ಮನೆ Blog ಜನಿವಾರ, ಮಾಂಗಲ್ಯ ಧರಿಸಿ ಬಂದರೆ ತೆಗೆಯಬಾರದೆಂದು ಈಗಾಗಲೇ ಸೂಚನೆ ನೀಡಲಾಗಿದೆ; ಕೇಂದ್ರ ರೈಲ್ವೇ ಇಲಾಖೆ ರಾಜ್ಯ...

ಜನಿವಾರ, ಮಾಂಗಲ್ಯ ಧರಿಸಿ ಬಂದರೆ ತೆಗೆಯಬಾರದೆಂದು ಈಗಾಗಲೇ ಸೂಚನೆ ನೀಡಲಾಗಿದೆ; ಕೇಂದ್ರ ರೈಲ್ವೇ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿಕೆ

0

ಬೆಂಗಳೂರು; ಜನಿವಾರ, ಮಾಂಗಲ್ಯ ಧರಿಸಿ ಬಂದರೆ ತೆಗೆಯಬಾರದೆಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಕೇಂದ್ರ ರೈಲ್ವೇ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಏಪ್ರಿಲ್ 28, 29 ಮತ್ತು 30 ರಂದು ರೈಲ್ವೇ ಇಲಾಖೆಯಲ್ಲಿ ನೇಮಕಾತಿಗಾಗಿ ಪರೀಕ್ಷೆ ನಡೆಯುತ್ತಿದೆ. ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಸೂತ್ರ ತೆಗೆದಿಟ್ಟು ಪರೀಕ್ಷೆ ಬರೆಯಬೇಕೆಂಬ ವಿಷಯವನ್ನು ಪರೀಕ್ಷಾ ನಿಯಮದಲ್ಲಿ ಉಲ್ಲೇಖಿಸಲಾಗಿದೆಯೆಂಬ ದೂರುಗಳು ನನಗೆ ಬಂದಿದೆ. ಈ ಬಗ್ಗೆ, ಸಂಸದರು, ಶಾಸಕರು ಇದನ್ನು ಸರಿಪಡಿಸುವಂತೆ ಮನವಿ ಮಾಡಿರುತ್ತಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ವಿವಿಧ ಸಂಘಟನೆಗಳು ಈ ಬಗ್ಗೆ ನನ್ನ ಗಮನವನ್ನು ಸೆಳೆದಿರುತ್ತಾರೆ. ಈ ವಿಷಯದ ಬಗ್ಗೆ ಇಂದು ನಾನು ನವದೆಹಲಿಯಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಗೊಂದಲ ನಿವಾರಿಸಲಾಗಿದೆ.ಜನಿವಾರ, ಮಾಂಗಲ್ಯ ಇತ್ಯಾದಿ ಸಂಸ್ಕೃತಿಯನ್ನು ಬಿಂಬಿಸುವ ಯಾವುದೇ ವಸ್ತುವನ್ನು ಧರಿಸಿ ಬಂದಲ್ಲಿ ಅಭ್ಯರ್ಥಿಗಳಿಗೆ ತೊಂದರೆ ನೀಡಬಾರದೆಂದು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದರು.

ಇತರ ಎಲ್ಲಾ ಪರೀಕ್ಷಾ ನಿಯಮವನ್ನು ಪಾಲಿಸಿ, ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಸೂಚಿಸಲಾಗಿದೆ. ಪರೀಕ್ಷಾ ಅಭ್ಯರ್ಥಿಗಳು ಸಹ ನಿಯಮಾನುಸಾರ ಪರೀಕ್ಷೆ ಬರೆಯುವಂತೆ ಮನವಿ ಮಾಡುತ್ತೇನೆ. ಅಭ್ಯರ್ಥಿಗಳು ಗೊಂದಲಕ್ಕೀಡಾಗಬಾರದೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ರು.

ಅವರು ಮಾನವರಲ್ಲ, ಉಗ್ರರು ಮೃಗಕ್ಕಿಂತ ಕಡೆ: ಬಸವರಾಜ ರಾಯರೆಡ್ಡಿ ಹೇಳಿಕೆ

ಬೆಂಗಳೂರು; ಅವರು ಮಾನವರಲ್ಲ, ಉಗ್ರರು ಮೃಗಕ್ಕಿಂತ ಕಡೆ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಅಟ್ಟಹಾಸ ವಿಚಾರದ ಬಗ್ಗೆ ಮಾತನಾಡಿದ ಅವರು  22ನೇ ತಾರೀಖು ಪ್ರವಾಸಿಗರ ಮೇಲೆ ಏಕಾಏಕಿ ಪಾಕಿಸ್ತಾನದ ಉಗ್ರರು ನಮ್ಮ ದೇಶಕ್ಕೆ ನುಗ್ಗಿ ದಾಳಿ ನಡೆಸಿದ್ದಾರೆ. ದೇಶದ 26 ಜನ ಸಾವನ್ನಪ್ಪಿದ್ದಾರೆ. ಅವರು ಮಾನವರಲ್ಲ, ಉಗ್ರರು ಮೃಗಕ್ಕಿಂತ ಕಡೆ. ನಾವೆಲ್ಲರೂ ಖಂಡಿಸಬೇಕಾದ ವಿಚಾರ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಟೀಕೆ ಟಿಪ್ಪಣಿಗೆ ಮಾತ್ರ ಸೀಮಿತವಾಗಬಾರದು.ಕೇಂದ್ರ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ.ನಮ್ಮ ಪಕ್ಷದ ನಾಯಕರು ಸಂಪೂರ್ಣ ಬೆಂಬಲ ನೀಡವುದಾಗಿ ತಿಳಿಸಿದ್ದಾರೆ. ಮೊದಲು ದೇಶ, ನಂತರ ಪಕ್ಷ ಎಂದಿದ್ದಾರೆ.

ಆರ್. ಅಶೋಕ್, ಬಿ.ವೈ ವಿಜಯೇಂದ್ರ ಸಿಎಂ ವಿರುದ್ಧ ಮಾತನಾಡುತ್ತಿದ್ದಾರೆ. ಭದ್ರತೆ ಮೊದಲು ಸರಿ ಮಾಡಿ ಸಿಎಂ‌ ಹೇಳಿದ್ದಾರೆ. ಕೇಂದ್ರ ಸರ್ಕಾರವೇ ಭದ್ರತಾ ವೈಪಲ್ಯ ಅಂತ ಒಪ್ಪಿಕೊಂಡಿದೆ. ಇಂಟಲಿಜೆನ್ಸ್ ಸಂಗ್ರಹಿಸಿ ವರದಿ ಕೊಡದಿದ್ದರೆ ಹೇಗೆ?. ಒಂದು ವಾರಕ್ಕೂ ಮುನ್ನವೇ ಮಾಹಿತಿ ಇತ್ತು ಅಂತ ಹೇಳಲಾಗುತ್ತದೆ. ಪಾಕಿಸ್ತಾನದವರನ್ನ ದೂರ ಇಡಬೇಕು. ಅನಿವಾರ್ಯ ಇದ್ದರೆ ಯುದ್ಧ ಮಾಡಿ ಅಂತ ಸಿಎಂ ಹೇಳಿದ್ದಾರೆ. ಬಿಜೆಪಿ ನಾಯಕರು ತಮ್ಮ ಹೇಳಿಕೆ ವಾಪಾಸ್ ಪಡೆಯಬೇಕು ಎಂದರು,

ನಾವೇ ಮೊದಲು ವಿಮಾನದ ಮೂಲಕ ಕರೆ ತಂದಿದ್ದೇವೆ. ನಂತರ ಬೇರೆ ರಾಜ್ಯದವರು ಕಳುಹಿಸಿದ್ರು. ದೇಶದ ಆಂತರಿಕ ಪ್ರಶ್ನೆ. ಮೊದಲು ನರೇಂದ್ರ ಮೋದಿಯವರು ಕಾಶ್ಮೀರಕ್ಕೆ ಭೇಟಿ ನೀಡಬೇಕು. ಅವರ ಜವಾಬ್ದಾರಿ ತೋರಿಸಬೇಕು, ತಕ್ಷಣ ಭೇಟಿ ನೀಡಬೇಕು. ಕೂಡಲೇ ವಿಶೇಷ ಸಂಸತ್ತಿನ ಅಧಿವೇಶನ ಕರೆಯಬೇಕು. ಅಲ್ಲಿ ಈ ಎಲ್ಲ ವಿಚಾರ ಚರ್ಚೆ ಆಗಬೇಕು. ಪಾಕಿಸ್ತಾನದ ಉಗ್ರಗಾಮಿಗಳ ತಾಣ ಘೋಷಣೆಯಾಗಬೇಕು. ಸಣ್ಣತನ ಮಾಡುವುದು ಒಳ್ಳೆಯದಲ್ಲ. ಯುದ್ದ ನಾಳೆಯಿಂದಲೇ ಶುರು ಮಾಡಿ, ಯಾರು ಬೇಡ ಅಂದ್ರು?. ಉಗ್ರರ ಕ್ಯಾಂಪ್ ಮೇಲೆ ಬಾಂಬ್ ಹಾಕಿ. 6.81 ಕೋಟಿ ರೂ. ರಕ್ಷಣಾ ಇಲಾಖೆ ಬಳಿ ಇದೆ.500 ಕೋಟಿ ರೂ. ಯುದ್ಧಕ್ಕೆ ಬೇಕಾಗುತ್ತದೆ. ಕ್ಯಾಬಿನೆಟ್ ನಲ್ಲಿ ಅನುಮತಿ ಪಡೆದು ಯುದ್ದ ಮಾಡಬೇಕು. ಆರ್ಮಿ ನೇಮಕಾತಿಯಲ್ಲಿ 1 ಲಕ್ಷದ 45 ಸಾವಿರ ಖಾಲಿ ಇದೆ. ಪಾಕಿಸ್ತಾನದವರು ಯಾವಾಗ ಏನು ಮಾಡ್ತಾರೊ ಗೊತ್ತಿಲ್ಲ. ಹೀಗಾಗಿ ಕೂಡಲೇ ಸಭೆ ಕಡೆದು ನೇಮಕಾತಿ ಮಾಡಿ ಎಂದರು.

ನೀರು ಬಂದ್ ಮಾಡಿದ್ರೆ ಸ್ವಾಗತ. ಆದರೆ ನೀರು ಹರಿದು ಹೋಗುತ್ತದೆ. ಸಿಂಧೂ ನದಿ ನಿಲ್ಲಿಸಿದ್ರೂ ಹರಿದು ಹೋಗುತ್ತದೆ. ನೀರು ಹರಿದು ಹೋಗುತ್ತೆ ನಿಲ್ಲಿಸೋಕೆ ಆಗೊಲ್ಲ. 6 ಉಪ ನದಿಗಳು ಇವೆ.ಯುದ್ದ ಶುರು ಮಾಡಿ, ಉಗ್ರರ ರಾಷ್ಟ್ರ ಅಂತ ಘೋಷಣೆ ಮಾಡಿ. ಭಾರತ ಯುದ್ಧ ಮಾಡಿದ್ರೆ ವಾರಕ್ಕೆ ನಾಶ ಮಾಡುವ ಶಕ್ತಿ ಇದೆ. ಈ ಹಿಂದೆ 1972ರಲ್ಲಿ ಇಂದಿರಾಗಾಂಧಿ ಬಾಂಗ್ಲಾದೇಶವನ್ನ ಹೊಡೆದು ಹಾಕಿ. ಇಂದಿರಾಗಾಂಧಿ ತೀರ್ಮಾನವನ್ನೇ ಮೋದಿ ಅನುಸರಿಸಬೇಕು. ಆರ್.ಅಶೋಕ್, ವಿಜಯೇಂದ್ರ ತಮ್ಮ ಹೇಳಿಕೆ ಬದಲಿಸಿಕೊಳ್ಲಬೇಕು.ದೇಶದ ಏಕತೆಯ ದೃಷ್ಟಿಯಿಂದ ಯುದ್ಧ ಮಾಡಿ. ನಮ್ಮ ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ. ಬಜೆಟ್ ಹೆಚ್ಚಿಸಿಕೊಂಡು ಯುದ್ದ ಮಾಡಿ. ಒಂದು ವಾರ ಆಯ್ತು ದಾಳಿ ನಡೆದು  ನಮ್ಮ ಸಿಎಂ ಅನಿವಾರ್ಯ ಇದ್ರೆ ಯುದ್ಧ ಮಾಡಿ ಅಂದಿದ್ದಾರೆ. ಸಿಎಂ ಎಂದೂ ದೇಶದ ವಿರುದ್ಧ ಇಲ್ಲ. ನ್ಯೂಕ್ಲಿಯರ್ ಬಾಂಬ್ ಹಾಕಬಹುದು ಅಲ್ವಾ?. ಅಲ್ಲೇ ಶೂಟ್ ಮಾಡಿ, ಬೇಡ ಅಂದೋರು ಯಾರು?. ಪ್ರಧಾನಿಯೇ ಸರ್ವ ಪಕ್ಷಗಳ ಸಭೆ ಹೋಗಲು ರೆಡಿ ಇಲ್ಲ. ರಾಹುಲ್ ಗಾಂಧಿ ಸೇರಿದಂತೆ ಎಲ್ಲರೂ ಕಾಶ್ಮೀರಕ್ಕೆ ಹೋಗಿ ಬಂದ್ರು. ಪ್ರಧಾನಿ ಸಹ ಹೋಗಿ ಬರಬೇಕು ಎಂದು ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಎಸ್ಪಿ ಅವರನ್ನ ವೇದಿಕೆ ಮೇಲೆ ಸಿಎಂ ಹೊಡೆಯಲು ಮುಂದಾದ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನನಗೆ ಗೊತ್ತಿಲ್ಲ. ಅಲ್ಲಿನ ಪರಿಸ್ಥಿತಿ ಏನೆಂದು ಗೊತ್ತಿಲ್ಲ. ನೀವು ಈ ಪ್ರಶ್ನೆ ಕೇಳಿದ್ರಿ ಅಂತ ಸಿಎಂಗೆ ಹೇಳುತ್ತೇನೆ. ನನಗೆ ಗೊತ್ತಿಲ್ಲ, ನಾನು ನೋಡಿಲ್ಲ ಎಂದಿದ್ದಾರೆ.