ಮನೆ Latest News ಮಹಾರಾಷ್ಟ್ರ ದಲ್ಲಿ ನಾವು ನಿರೀಕ್ಷೆ ಮಾಡಿದ್ದು ಉಲ್ಟಾ ಆಗಿದೆ; ಗೃಹ ಸಚಿವ ಡಾ ಜಿ ಪರಮೇಶ್ವರ್...

ಮಹಾರಾಷ್ಟ್ರ ದಲ್ಲಿ ನಾವು ನಿರೀಕ್ಷೆ ಮಾಡಿದ್ದು ಉಲ್ಟಾ ಆಗಿದೆ; ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಮಹಾರಾಷ್ಟ್ರ ದಲ್ಲಿ ನಾವು ನಿರೀಕ್ಷೆ ಮಾಡಿದ್ದು ಉಲ್ಟಾ ಆಗಿದೆ ಎಂದು  ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ  ಮಾತನಾಡಿದ ಅವರು  ಅಶೋಕ್ ಗೆಹ್ಲೋಟ್ ಭಗೇಲ್ ಸೇರಿ ಅನುಭವಿ ಸಿಎಂಗಳು ಚರ್ಚೆ ಮಾಡಿದ್ದೇವೆ. ಬಹಳಷ್ಟು ಕಡೆ ಇವಿಎಂ ಮ್ಯಾನಿಪ್ಯುಲೆಟ್ ಮಾಡಿದ್ದಾರೆ ಎಂದು ಚರ್ಚೆ ಆಗಿದೆ.ಆದ್ರೆ ಜಾರ್ಖ್ಂಡ್ ನಲ್ಲಿ ಯಾಕೆ ಹಾಗಾಗಲಿಲ್ಲ?. ಬಿಜೆಪಿಯವರು ಪ್ಲ್ಯಾನ್ ಆಫ್ ಆ್ಯಕ್ಷನ್ ತರಹ ಇದನ್ನು ಮಾಡ್ತಾರೆ. ನಂಬಿಕೆ ಬರಬೇಕು ಅಂತ ಕೆಲವು ರಾಜ್ಯಗಳಲ್ಲಿ ಇವಿಎಂ ಹ್ಯಾಕ್ ಮಾಡುವುದಿಲ್ಲ. ಇವಿಎಂ ಹ್ಯಾಕ್ ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಎನಿಸುತ್ತದೆ. ಸ್ಟ್ರಾಟಜಿ ಮಾಡುವುದರಲ್ಲಿ ಕೂಡ ನಾವು ಫೇಲ್ ಆಗಿದ್ದೇವೆ ಎಂದಿದ್ದಾರೆ.

ನಾವು ಅಶೊಕ್ ಗೇಹ್ಲೋಟ್ ಸೇರಿ ಹಲವರು ಚರ್ಚೆ ಮಾಡಿದ್ರು. ಬಹಳಷ್ಟು ಕಡೆ ಇವಿಎಂ ಮೊನುಪುಲೇಟ್ ಮಾಡಿದ್ರು ಅಂತ ಚರ್ಚೆ ಅಯ್ತು. ಜಾರ್ಖಂಡ್ ನಲ್ಲಿ ಯಾಕೆ ಮಾಡಿಲ್ಲ ಅಂದ್ರೆ ಕೆಲವು ಕಡೆ ಬಿಟ್ ಬಿಡ್ತಾರೆ. ರಾಜ್ಯದಲ್ಲಿ ಕೆಲವು ಗೆದ್ದೆ ಗೆಲ್ತಿವಿ ಅಂತ ಕಡೆ ಬಿಡ್ತಾರೆ. ಅವರ ಲಾಡ್ಲಿ ಬೆಹನ್ ಸಾಕಷ್ಟು ಇಂಪ್ಯಾಕ್ಟ್ ಅಗಿದೆ. ಅವರು ಆರು ತಿಂಗಳು ಮೊದಲು ಕೊಟ್ಟರು. ಇದೆಲ್ಲವೂ ಅವರ ಕೈ ಹಿಡಿದಿದೆ. ಕೊನೆಗೆ ಟಿಕೆಟ್ ಘೋಷಣೆ ಮಾಡಿದ್ವು. ಪಕ್ಷದಲ್ಲೂ ಗೊಂದಲ ಆಯ್ತು. ಪವರ್ ಗುಂಪು,ಉದ್ದವ್ ಗುಂಪು ನಡುವೆ ಸರಿಯಾಗಿ ಹೊಂದಾಣಿಕೆ ಆಗಿಲ್ಲ .ವಿದರ್ಭದಲ್ಲಿ ಹೆಚ್ಚು ಸೀಟ್ ಬರಲಿಲ್ಲ. ಎಲ್ಲಿಯವರೆಗೆ ಇವಿಎಂ ಇರುತ್ತೆ ಅಲ್ಲಿಯವರೆಗೆ ಕಾಂಗ್ರೆಸ್ ಬರೋದು ಕಷ್ಟ ಆಗುತ್ತೆ. ಅಲ್ಲಿಯವರೆಗೆ ಬಿಜೆಪಿನೇ ಗೆಲ್ಲುತ್ತಿರುತ್ತೆ. ಒಂದು ರಾಜ್ಯ ಬಿಟ್ಟು ಬಿಡ್ತಾರೆ.  ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಬಳಿಕ ದೊಡ್ಡ ನಾಯಕತ್ವ ‌ಇರಲಿಲ್ಲ.ಅದಕ್ಕೆ ಬಿಟ್ಟರು. ಅವರು ಹ್ಯಾಕ್ ಮಾಡೊದ್ರಲ್ಲಿ ಬಿಜೆಪಿಗರು ನಿಪುಣರು. ಜಾರ್ಖಂಡನಲ್ಲಿ ಜೆಎಂಎಂ ಬರುತ್ತೆ ಅಂತ ಬಿಟ್ಟರು. ಕಾಂಗ್ರೆಸ್ ಬರುತ್ತೆ ಅಂತಿದ್ರೆ ಅಲ್ಲೂ ಮಾಡ್ತಿದ್ರು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಕಳೆದ 15 ವರ್ಷಗಳಿಂದ ‌ನಾವು ಹೇಳ್ತಿದೇವೆ ಇವಿಎಂ‌ ಬೇಡ ಅಂತಾ. ಅಮೆರಿಕಾದಲ್ಲೂ ಇವಿಎಂ ಬೇಡ ಅಂತಾರೆ. ನಮ್ಮಲ್ಲಿ ‌ಎಐಸಿಸಿ ಕೂಡ‌ಒಂದು ಕಮಿಟಿ ಮಾಡಿದ್ರು.. ಇವಿಎಂ‌ ಬೇಡ ಅಂತಾ.ಇವುಎಂ ತೆಗೆದು ಬ್ಯಾಲೆಟ್‌ಪೇಪರ್ ಮಾಡೋಕೆ ಏನ್ ಆಗುತ್ತದೆ?.ಮೊದಲೆಲ್ಲಾ ಬ್ಯಾಲೆಟ್ ನಲ್ಲಿ ಮಾಡಿಲ್ವಾ?.ನನ್ನ ಅನಿಸಿಕೆ ಇವಿಎಂ ಬದಲು ಬ್ಯಾಲೆಟ್ ಪೇಪರ್ ಹೋಗೋದು ಸೂಕ್ತ. ಸಿಸ್ಟಮ್ ಅವರ‌ ಕೈನಲ್ಲಿದೆ‌‌.. ಏನ್ ಮಾಡೋದು.ಅವರಲ್ಲೂ ಸಹ‌ ಅನೇಕರು ಇವಿಎಂ‌ ವಿರೋಧಿಸಿದ್ದಾರೆ‌. ಸೆಲೆಕ್ಟೀವ್ ಆಗಿ ಮಾಡ್ತಾರೆ…‌ನಂಬಿಕೆ‌ ಬರೋ ರೀತಿ. ಎಲ್ಲವನ್ನೂ‌ ಹ್ಯಾಕ್ ಮಾಡಿದಾರೆ ಅಂತಾಲ್ಲ..‌ ಕೆಲವೊಂದ್ ಕಡೆ ಆಗಿರಬಹುದು ಎಂದಿದ್ದಾರೆ.