ಮನೆ Latest News ಪಂಚಮಸಾಲಿ ಸಮುದಾಯದಿಂದ ಮೀಸಲಾತಿಗಾಗಿ ಬೇಡಿಕೆ ವಿಚಾರ; ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ

ಪಂಚಮಸಾಲಿ ಸಮುದಾಯದಿಂದ ಮೀಸಲಾತಿಗಾಗಿ ಬೇಡಿಕೆ ವಿಚಾರ; ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ

0

ಬೆಂಗಳೂರು; ಪಂಚಮಸಾಲಿ ಸಮುದಾಯದಿಂದ ಮೀಸಲಾತಿಗಾಗಿ ಬೇಡಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಿತು. ಸಭೆಯಲ್ಲಿ  ಡಿಸಿಎಂ ಡಿಕೆ ಶಿವಕುಮಾರ್, ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಸಮುದಾಯದ ನಾಯಕರು, ಮುಖಂಡರು ಭಾಗಿಯಾಗಿದ್ದರು.

ಇನ್ನು ಸಿಎಂ ನೇತೃತ್ವದ ಸಭೆಗೂ ಮುನ್ನ ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತತ್ವದಲ್ಲಿ ಸಭೆ ನಡೆಯಿತು.ಸಭೆಯಲ್ಲಿ ಮೀಸಲಾತಿ ಕುರಿತಂತೆ ವಕೀಲರ ನಿಯೋಗದೊಂದಿಗೆ ಸ್ವಾಮೀಜಿ ಚರ್ಚೆ ನಡೆಸಿದ್ರು.ಈವರೆಗಿನ ಹೋರಾಟ, ಜಾಥಾದ ಬಗ್ಗೆ ಸ್ವಾಮೀಜಿ ಮೆಲುಕು ಹಾಕಿದ್ರು. ಮೀಸಲಾತಿ ಕುರಿತು ಸಿಎಂ ಮುಂದೆ ಪ್ರಸ್ತಾಪ ಮಾಡುವ ಅಂಶಗಳ ಕುರಿತು ಚರ್ಚೆ ನಡೆಸಿದ್ರು.

ಸಭೆಯನ್ನು ಉದ್ದೇಶಿಸಿ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದ್ರು. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಾಮೀಜಿ ಹಾಡಿ ಹೊಗಳಿದ್ರು.ಸಿಎಂ ಅವರು ಅಧಿಕಾರ ಬಂದ್ಮೇಲೆ ಎಲ್ಲಾ ಸಮುದಾಯ ಗಳಿಗೆ ಸ್ಪಂದಿಸುತ್ತಾರೆ.ಅದೇ ರೀತಿ ನಮ್ಮ ಸಮುದಾಯಗಳಿಗೆ ಬೆಂಬಲ ನೀಡಬೇಕು.ಮೀಸಲಾತಿ ಕುರಿತು ನಮ್ಮ ಬೇಡಿಕೆ ಈಡೇರಿಸಬೇಕು.ವಕೀಲರ ಮೂಲಕ ನಾವು ಒತ್ತಾಯ ಮಾಡುತ್ತಿದ್ದೇವೆ.ಅಧಿಕಾರಕ್ಕೆ ಬಂದ ೧೮ ತಿಂಗಳ ನಂತ್ರ ನಮ್ಮ ಜೊತೆ ಮಾತುಕತೆ ನಡೆಸಲು ಕರೆದಿದ್ದಾರೆ.ವಕೀಲರ ನಿಯೋಗ ಮ‌ೂಲಕ ಆಗ್ರಹ ಮಾಡೋಣ.ಮುಖ್ಯಮಂತ್ರಿ ಗಳ ಜೊತೆ ಸಭೆ ನಡೆಸಿ ಮತ್ತೆ ಸೇರೋಣ.ಈ ಸಭೆ ಫಲಪ್ರದವಾಗುತ್ತೋ ಅಥವಾ ಇಲ್ವೋ ಗೊತ್ತಿಲ್ಲ.ಫಲಪ್ರದವಾದ್ರೆ ಎಲ್ಲರಿಗೂ ಒಳ್ಳೆಯದು.ಒಂದ್ವೇಳೆ ಆಗದಿದ್ರೆ ಮತ್ತೆ ಹೋರಾಟ ನಡೆಸಬೇಕು, ಅದಕ್ಕಾಗಿ ಮತ್ತೆ ಇಲ್ಲಿ ಸೇರಿ ಚರ್ಚಿಸೋಣ ಎಂದರು. ಸಭೆಯ ಬಳಿಕ ಸ್ವಾಮೀಜಿ ನೇತೃತ್ವದಲ್ಲಿ ಗಾಂಧಿ ಭವನದಿಂದ ಸಿಎಂ ಗೃಹ ಕಚೇರಿ ಕೃಷ್ಣಾವರೆಗೂ ಕಾಲ್ನಡಿಗೆ ಮಾಡಿದ್ರು.

ಇತ್ತ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆಯಲ್ಲಿ ಸಭೆಯಲ್ಲಿ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಸಚಿವ ಶಿವರಾಜ್ ತಂಗಡಗಿ, ಸಚಿವೆ ಲಕ್ಷ್ಮೀ ಹೆಬ್ಬಾಳ್  ವಿಜಯಾನಂದ್ ಕಾಶಪ್ಪನವರ್, ಶಾಸಕ ವಿನಯ್ ಕುಲಕರ್ಣಿ ಭಾಗಿಯಾಗಿದ್ರು.

ಸಭೆ ಬಳಿಕ ಮಾತನಾಡಿ ವೀಣಾ ಕಾಶಪ್ಪನವರ್ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸಭೆ ನಡೀತು.ಇವತ್ತು ನಮ್ಮ ಹೋರಾಟ ಜಯ ಸಿಗುತ್ತೆ ಅಂದುಕೊಂಡಿದ್ವಿ.ನಮ್ಮ ಸಮುದಾಯಕ್ಕೂ ಮೀಸಲಾತಿ ಬೇಕು ಎಂದು ಒತ್ತಾಯ ಮಾಡಿದ್ದೇವೆ.ಇದಕ್ಕೆ ಮಹಿಳಾ‌ಘಟಕ ಕೂಡ ಮನವಿ ಮಾಡಿದೆ.ಶ್ರೀಗಳು ಏನು ತೀರ್ಮಾನ ತೆಗೆದುಕೊಳ್ತಾರೆ ಅದಕ್ಕೆ ನಾವು ಬದ್ದವಾಗಿದ್ದೇವೆ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಮಾತನಾಡಿ ಇವತ್ತು ವಕೀಲರು ಸ್ವಾಮೀಜಿ ಜೊತೆ ಸಭೆ ಆಯ್ತು.ಒಂದೂವರೆ ಗಂಟೆ ಅವರ ಬೇಡಿಕೆಗಳ‌ ಕುರಿತು ಚರ್ಚೆ ನಡೆಸಿದರು.ಏನೇನು ಮಾಡಬೇಕು ಅಂತ ಚರ್ಚಿಸಿದ್ದಾರೆ.ಆದ್ರೆ ಸದ್ಯಕ್ಕೆ ನೀತಿ ಸಂಹಿತೆ ಜಾರಿಯಾಗಿರೋದ್ರಿಂದ ಮುಂದೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.ಆದ್ರೆ ಹಿಂದೆಯೇ ಈ‌ಸಭೆ ನಿಗದಿಯಾಗಿತ್ತು.ಆದ್ರೆ ದಸರಾ ಹಿನ್ನಲೆ ಯಲ್ಲಿ ಸಭೆ ಮುಂದೂಡಿಕೆಯಾಗಿತ್ತು.ಆದ್ರೆ ಇದರ ನಡುವೆ ನೀತಿ ಸಂಹಿತೆ ಜಾರಿಯಾಗಿದೆ.ಈಗ ಸಭೆ ಮುಂದೂಡಿದ್ದರೆ ಸಮಾಜ ಅನ್ಯಾಯ ಮಾಡಿದೆ ಎಂದು ಹೇಳಬಾರದು ಅನ್ನೋ ಕಾರಣಕ್ಕೆ ಸಭೆ ಮಾಡಿದ್ದೇವೆ ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಬಾರದು ಅನ್ನೋದು ಸರ್ಕಾರದ ಒತ್ತು.ಆದ್ರೆ ಅವರು ಸಿಎಂ ಅವರಿಗೆ ಟೈಮ್ ಲೈನ್ ಕೊಡಿ ಎಂದಿದ್ದಾರೆ.ಆದ್ರೆ ಅದು ಆಗಲ್ಲ.ಹಿಂದೆ ಬಿಜೆಪಿ ಅವಧಿಯಲ್ಲಿ ಬೇರೆ ತೀರ್ಮಾನ ತೆಗೆದುಕೊಂಡಿತ್ತು.ಕೋರ್ಟ್ ನಲ್ಲಿ ವಿಷ್ಯ ಇದೆ. ನಾವು ಗೌರವ ದಿಂದ ಎಲ್ಲವೂ ತೀರ್ಮಾನ ಆಗುತ್ತೆ. ನೀತಿ ಸಂಹಿತೆ ಜಾರಿ ಸಹ ಇದೆ ಎಂದರು.