ಮನೆ Latest News ಮುಡಾ ಕೇಸ್ ನಲ್ಲಿ ಏನಾದರೂ ಎವಿಡೆನ್ಸ್ ಇದ್ರೆ ಅವರು ಫೈಟ್ ಮಾಡಿಕೊಳ್ಳಲಿ; : ಡಿಸಿಎಂ ಡಿಕೆ...

ಮುಡಾ ಕೇಸ್ ನಲ್ಲಿ ಏನಾದರೂ ಎವಿಡೆನ್ಸ್ ಇದ್ರೆ ಅವರು ಫೈಟ್ ಮಾಡಿಕೊಳ್ಳಲಿ; : ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು; ಮುಡಾ ಕೇಸ್ ನಲ್ಲಿ ಏನಾದರೂ ಎವಿಡೆನ್ಸ್ ಇದ್ರೆ ಅವರು ಫೈಟ್ ಮಾಡಿಕೊಳ್ಳಲಿ ಎಂದು ಮುಡಾ ಕೇಸ್ ನಲ್ಲಿ ಸಿಎಂಗೆ ಕ್ಲೀನ್ ಚಿಟ್ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಈ ಕೇಸ್ ನಲ್ಲಿ ಯಾವುದೇ ಎವಿಡೆನ್ಸ್ ಇಲ್ಲ. ನಾನು ಆರಂಭ ದಲ್ಲಿ ಹೇಳಿದ್ದೇ. ಬಿಜೆಪಿ ಜೆಡಿಎಸ್ ನವರು ಯವರು ಪಾದಯಾತ್ರೆ ಮಾಡಿದಾಗ ಆವತ್ತೇ ನಾನು ಹೇಳಿದ್ದೆ. ಇದು ರಾಜಕೀಯ ಪ್ರೇರಿತ.ಅವರಿಗೆ ಸಂಬಂಧ ಇರದೇ ಇದ್ದಿದ್ದು. ಅವರದ್ದು ಅವರು ಕ್ಲೇಮ್‌ ಮಾಡಿದ್ದಾರೆ.ಇಂತಹದ್ದೇ ಜಾಗ ಕೊಡಿ ಎಂದು ಕೇಳಿಲ್ಲ.ಇದು ರಾಜಕೀಯದಿಂದ ಮಾಡಿದ್ದಾರೆ ಎಂದು ದೂರಿದ್ದಾರೆ. ಆದ್ರೆ ಕೇಸ್ ನಲ್ಲಿ ಯಾವುದೇ ಎವಿಡೆನ್ಸ್ ಇಲ್ಲ. ಲೋಕಾಯುಕ್ತ ಅವರು ತನಿಖೆ ಮಾಡಿದ್ದಾರೆ.ಇದು ರಾಜಕೀಯ ಪ್ರೇರಿತ ನಡೆ. ಹೈಕೋರ್ಟ್ ಈಗಾಗಲೇ ಹೇಳಿದೆ.ಇಂಡಿಪೆಂಡಂಟ್ ಬಾಡಿ ಎಂದು ಹೈಕೋರ್ಟ್ ಹೇಳಿದ್ದಾರೆ. ಪ್ರತಿಯೊಬ್ಬ ಅಧಿಕಾರಿಗಳು ಸಿಎಂ ಹೇಳಿದ್ದಂತೆ ಕೇಳುತ್ತಾರಾ?. ಲೋಕಾಯುಕ್ತ ಸ್ವತಂತ್ರ ಸಂಸ್ಥೆ, ಇದರಲ್ಲಿ ಯಾವುದೇ ಪ್ರಭಾವ ಇಲ್ಲ ಎಂದಿದ್ದಾರೆ.

ಇನ್ನು ವಿಜಯೇಂದ್ರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರನ ವಿಚಾರ, ಇರೀಗೇಷನ್ ವಿಚಾರ ಆಮೇಲೆ ಮಾತನಾಡುತ್ತೇನೆ. ನಾನು ಆರಂಭದಲ್ಲೇ ಹೇಳಿದ್ದೆ.ಬಿಜೆಪಿ, ಜೆಡಿಎಸ್ ನವರು ಮೈಸೂರಿಗೆ ಪಾದಯಾತ್ರೆ ಮಾಡಿದಾಗ ನಾನು ಆವತ್ತೇ ಏನ್ ಹೇಳಬೇಕೋ ಹೇಳಿದ್ದೀನಿ.ಇದು ರಾಜಕೀಯ ಪ್ರೇರಿತ ಅಂತ ಹೇಳಿದ್ದೇ. ಸಿಎಂ ಅವರದ್ದು ಯಾವುದೇ ಸಹಿ ಇಲ್ಲದೇ ಹೋದಾಗ, ಅವರಿಗೆ ಯಾವುದೇ ಸಂಬಂಧ ಇಲ್ದೇ ಹೋದಾಗ, ಅವರ ಪ್ರಾಪರ್ಟಿ ಕಳೆದುಕೊಂಡುವರು ಕ್ಲೇಮ್ ಕೇಳಿಯೇ ಕೇಳುತ್ತಾರೆ.ಎಲ್ಲರೂ ಕ್ಲೇಮ್ ಕೇಳುತ್ತಾರೆ, ಅದರಂತೆ ಇವರೂ ಕೇಳಿದ್ದಾರೆ, ಹೀಗಾಗಿ ಮುಡಾ ಕೊಟ್ಟಿದೆ. ಆದ್ರೆ ಇಂತಹದ್ದೇ ಜಾಗದಲ್ಲಿ ನೀಡಿ ಎಂದು ಇವರು ಕೇಳಿದ್ದಾರಾ? ಆದರೂ ರಾಜಕೀಯ ಹಿತ ದೃಷ್ಟಿಯಿಂದ ಸಿಎಂ ಅವರು ಸರೆಂಡರ್ ಮಾಡಿದ್ದಾರೆ. ಯಾವುದೋ ಕೇಸ್ ಆಗಬೇಕಾದರೇ ಎವಿಡೆನ್ಸ್ ಬೇಕು, ಆದ್ರೆ ಯಾವ ಎವಿಡೆನ್ಸ್ ಇದೆ ಇಲ್ಲಿ. ಸದ್ಯ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮಾಡಿದ್ದಾರೆ. ಏನಾದರೂ ಇದ್ರೆ ಅವರು ಫೈಟ್ ಮಾಡಿಕೊಳ್ಳಲಿ ಎಂದ್ರು.