ಬೆಂಗಳೂರು; ಮೆಟ್ರೋ ದರ ಇಳಿಸಿದ್ರೆ ಜನಸಾಮಾನ್ಯರಿಗೆ ಅನುಕೂಲ ಆಗುತ್ತೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.ಮೆಟ್ರೋ ದರ ಇಳಿಕೆಗೆ ಸಿಎಂ ಸೂಚಿಸಿರೊ ವಿಚಾರದ ಬಗ್ಗೆ ಮಾತನಾಡಿದ ಅವರು ಮೆಟ್ರೋ ದಲ್ಲಿ ಸಹಭಾಗಿತ್ವವನ್ನ ನಾವು ಹೊಂದಿದ್ದೇವೆ. ಪಬ್ಲಿಕ್ ಟ್ರಾನ್ಸ್ಪೋರ್ಟ್ನಲ್ಲಿಯೂ ದರ ಹೆಚ್ಚಿಸಿದರೆ, ವಾಹನದಲ್ಲಿ ಓಡಾಡುವುದಕ್ಕೂ ಮೆಟ್ರೋ ಓಡಾಟಕ್ಕೂ ಒಂದೇ ಆಗುತ್ತೆ .ಮೆಟ್ರೋ ದರ ಇಳಿಸಿದ್ರೆ ಜನಸಾಮಾನ್ಯರಿಗೆ ಅನುಕೂಲ ಆಗುತ್ತೆ. ಬೆಂಗಳೂರು ಒತ್ತಡ ಕಡಿಮೆ ಆಗಬೇಕಾದರೆ ಸಬ್ ಅರ್ಬನ್ ರೈಲ್ವೆ ಫೆರಿಫೆರಲ್ ರಿಂಗ್ ರೋಡ್ ಎಲ್ಲಾ ಆಗಬೇಕು. ಸಿಎಂ ಒಳ್ಳೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.
ತೇಜಸ್ವಿ ಸೂರ್ಯ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಕುಳಿತು ಚರ್ಚೆ ಮಾಡಬೇಕು. ಎರಡು ಸರ್ಕಾರ ಜನರ ಮೇಲೆ ಹೊರೆ ಆಗುವ ಕೆಲಸ ಮಾಡಬಾರದು.ನಮ್ಮ ರಾಜ್ಯದ ಭಾಗವನ್ನ ಸಿಎಂ ಹೇಳಿದ್ದಾರೆ. ರಾಜಕಾರಣ ಮಾಡಬೇಕಾದರೆ ಸಿಎಂ ಹೇಳಿದಂತೆ ಅವರು ಮಾಡಲಿ. ಸಿಎಂ ಪತ್ರ ಬರೆದಿಲ್ಲ ಎಂದರೆ ಈಗ ಅಧಿಕೃತವಾಗಿ ಹೇಳಿದ್ದಾರೆ.ಸಿಎಂ ಏನ್ ಹೇಳಿದ್ದಾರೆ ಇಳಿಸ್ತೇವೆ ಹೇಳಿದ್ದಾರೆ. ನಿಮ್ಮವರು ಹೇಳಬೇಕಿತ್ತು,ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಬೇಕಿತ್ತು. ರಾಜ್ಯ ಸರ್ಕಾರ ಕಡಿಮೆ ಮಾಡಿದ್ರೆ ನಾವು ಮಾಡ್ತೇವೆ ಎನ್ನಬೇಕಿತ್ತು. ನಿಮ್ಮವರು ಯಾಕೆ ಹೇಳಿಲ್ಲ ಎಂದಿದ್ದಾರೆ.