ಮನೆ Latest News ಮೈಸೂರಿನಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಪೊಲೀಸ್ ಕಮಿಷನರ್ ಅಥವಾ ಐಜಿ ಬಳಿ ಮಾತಾಡ್ತೇನೆ; ಗೃಹ...

ಮೈಸೂರಿನಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಪೊಲೀಸ್ ಕಮಿಷನರ್ ಅಥವಾ ಐಜಿ ಬಳಿ ಮಾತಾಡ್ತೇನೆ; ಗೃಹ ಸಚಿವ ಪರಮೇಶ್ವರ್ ಹೇಳಿಕೆ

0

ಮೈಸೂರಿನಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಪೊಲೀಸ್ ಕಮಿಷನರ್ ಅಥವಾ ಐಜಿ ಬಳಿ ಮಾತಾಡ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮೈಸೂರಿನಲ್ಲಿ ಮಗು ಅಪಹರಣ ಮಾಡಿ ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪದ ಈ ಬಗ್ಗೆ ಮಾತನಾಡಿದ ಅವರು ಈಗಾಗಲೇ ಕಠಿಣ ಕಾನೂನು ತಂದಿದ್ದೇವೆ. ಇವತ್ತು ಮೈಸೂರು ಪೊಲೀಸ್ ಕಮಿಷನರ್ ಅಥವಾ ಐಜಿ ಬಳಿ ಮಾತಾಡ್ತೇನೆ. ಮಗು ತರಿಸೋದಕ್ಕೆ ಕ್ರಮ ಕೈಗೊಳ್ಳುತ್ತೇವೆ. ಕಠಣ ಹೃದಯಿಗಳು.. ಮಾನವೀಯತೆ ಇಲ್ಲದವರು ಮಗುವನ್ನ ಅಪಹರಣ ಮಾಡಿದ್ದಾರೆ. ಮಾತಾಡಿ‌ ಕ್ರಮ ತಗೋತೇವೆ ಎಂದಿದ್ದಾರೆ.

ಸರ್ಕಾರಿ ಮನೆಗಳನ್ನ ನೀಡುವಾಗ‌ ಲಂಚ ಪಡೆದಿರುವ ಅರೋಪದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಶಾಸಕ ಬಿ ಆರ್‌ ಪಾಟೀಲ್ ಬಿ ಆರ್‌ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಗೃಹ ಸಚಿವ ‌ಪರಮೇಶ್ವರ್ ಸ್ಪಷ್ಟವಾಗಿ ಏನನ್ನು ಮಾಧ್ಯಮದಲ್ಲಿ ಹೇಳಿಲ್ಲ. ಸಚಿವರಿಗೆ ನೇರವಾಗಿ ಹೇಳಿದ್ರೆ ವಿಚಾರ ಮಾಡಿಕ್ರಮ ಕೈಗೊಳ್ಳುತ್ತಾರೆ. ಮಾಧ್ಯಮಗಳಲ್ಲಿ ನೋಡಿದ್ದೇನೆ. ಪಾಟೀಲರು ಯಾವ ಅರ್ಥದಲ್ಲಿ ಹೇಳಿದಾರೆ ಅಂಥಾ ಗೊತ್ತಿಲ್ಲ.. ಅವರು ನೇರವಾಗಿ ಹೇಳಿಲ್ಲ. ಇಲಾಖೆ‌ ಸಚಿವರು ಇದಾರೆ.. ಯಾರು‌ ಲಂಚ ಕೇಳ್ತಿದಾರೆ ಅಂತಾ ದೂರು‌ ಕೊಡಲಿ  ಕ್ರಮ ತಗೋತಾರೆ ಎಂದಿದ್ದಾರೆ.

ಅಲ್ಪಸಂಖ್ಯಾತರಿಗೆ ವಸತಿ ಯೋಜನೆಗಳಲ್ಲಿ ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರಿಗೆ ಮನೆ ಇಲ್ಲ ಅವರಿಗೆ ಕೊಡಬೇಕಾಗುತ್ತದೆ. ಇಲ್ಲಿ 15%, 20% ಪ್ರಶ್ನೆ ಅಲ್ಲ. ಯಾರಿಗೆ ಮನೆ ಇಲ್ಲ ಅವರಿಗೆ ಕೊಡಬೇಕಾಗುತ್ತದೆ. ಆ ಸಮುದಾಯದವರಿಗೆ ಮನೆ ಇಲ್ಲ ಅಂದಾಗ ಕೊಡಬೇಕಾಗುತ್ತದೆ.ಈ ವರ್ಷ ಕೊಟ್ರೆ ಮುಂದೆ ಅವರ ಪರ್ಸಂಟೇಜ್ ಕಡಿಮೆ ಆಗುತ್ತದೆ.ಧರ್ಮಾಧಾರಿತ ಪ್ರಶ್ನೆ ಬರಲ್ಲ.. ಈವರೆಗೆ ಪರಿಶಿಷ್ಟರಿಗೆ ಕಡಿಮೆ ಇತ್ತು.. ಅವರಿಗೆ ಕೊಟ್ವಿ, ಈಗ ಅವರ ಸಂಖ್ಯೆ ‌ಕಡಿಮೆ ಆಗಿದೆ.ಮುಂದೆ ಅದೇ ರೀತಿ ಇವರದ್ದು ಸಂಖ್ಯೆ ಕಡಿಮೆ ಆಗಲಿದೆ ಎಂದಿದ್ದಾರೆ.