ಮನೆ Latest News ಯತ್ನಾಳ್ ಬಗ್ಗೆ ನಾನೇನು ಮಾತನಾಡಲ್ಲ: ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ. ಅಶ್ವಥ್ ನಾರಾಯಣ ಹೇಳಿಕೆ

ಯತ್ನಾಳ್ ಬಗ್ಗೆ ನಾನೇನು ಮಾತನಾಡಲ್ಲ: ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ. ಅಶ್ವಥ್ ನಾರಾಯಣ ಹೇಳಿಕೆ

0

ಬೆಂಗಳೂರು:  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ ಹಿನ್ನೆಲೆ ಶಾಸಕ ಡಾ. ಅಶ್ವಥ್ ನಾರಾಯಣ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಅವರು ಶತಮಾನೋತ್ಸವ ಆಚರಣೆಗೆ ರಾಜ್ಯ ಬಿಜೆಪಿಯಿಂದ ಸಮಿತಿ ರಚಿಸಲಾಗಿದೆ.ಮಾಜಿ ಎಂಎಲ್ಸಿ ಡಾ. ಶಿವಯೋಗಿ ಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.ವಾಜಪೇಯಿ ಅವರ ಬರವಣಿಗೆಗಳನ್ನು ಪಟ್ಟಿ ಮಾಡಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗುತ್ತದೆ.ವಾಜಪೇಯಿ ಸ್ಮೃತಿ ಸಂಕಲನ ಮತ್ತು ಅಭಿಯಾನ ನಡೆಯಲಿದೆ.ಹಿರಿಯ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.ಫೆಬ್ರವರಿ 15 ರಿಂದ ಮಾರ್ಚ್ 15 ರವರೆಗೆ ಜಿಲ್ಲಾ ಮಟ್ಟದಲ್ಲಿ ಅಟಲ್ ವಿರಾಸತ್ ನಡೆಯಲಿದೆ ಎಂದು ತಿಳಿಸಿದರು.

ಇದೇ ವೇಳೆ ಬಿಜೆಪಿಯಲ್ಲಿನ ಗೊಂದಲಗಳ ವಿಚಾರದ ಬಗ್ಗೆ ಮಾತನಾಡಿದ ಅವರು ನಿನ್ನೆ ಸ್ಪಷ್ಟವಾಗಿ ಸಭೆ ಆರಂಭಕ್ಕೂ ಮುನ್ನವೇ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಸಭೆ ಕರೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿ ನಿನ್ನೆಯ ಸಭೆಗಳಲ್ಲಿ ಸಂಘಟನೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ಅಸಮಾಧಾನಗಳು ಸಂಪೂರ್ಣ ಸ್ಥಗಿತವಾಗಿ ಕೊನೆಯಾಗುತ್ತದೆ ಎಂಬ ವಿಶ್ವಾಸವಿದೆ.ಚುನಾವಣಾ ಪ್ರಕ್ರಿಯೆ ಸಹಜವಾಗಿ ಸಹಮತದಲ್ಲೇ ನಡೆಯುತ್ತದೆ, ಚುನಾವಣೆ ಅಂತಾದರೆ ಚುನಾವಣಾಧಿಕಾರಿಗಳು ತೀರ್ಮಾನ ಮಾಡುತ್ತಾರೆ ಎಂದರು.

ತಮ್ಮನ್ನು ಪರಿಗಣಿಸುತ್ತಿಲ್ಲ ಎಂಬ ಮಾಜಿ ಶಾಸಕರ ಆಕ್ಷೇಪದ ಬಗ್ಗೆ ಮಾತನಾಡಿ ಹಾಲಿ ಶಾಸಕ, ಸೋತವರು ಎಲ್ಲರನ್ನೂ ಒಳಗೊಂಡಂತೆ ಪಕ್ಷವನ್ನು ಕಟ್ಟುವ ಕೆಲಸ ಆಗುತ್ತದೆ.ಶಾಸಕಾಂಗ ಪಕ್ಷದ ಸಭೆಗೆ ಚುನಾಯಿತ ಜನಪ್ರತಿನಿಧಿಗಳನ್ನೇ ಕರೆಯಬೇಕಾಗುತ್ತದೆ ಎಂದರು, ಬಿಜೆಪಿಯಲ್ಲಿ ಪರ-ವಿರೋಧ ಹೇಳಿಕೆಗಳು ಮುಂದುವರಿದಿರುವ ವಿಚಾರದ ಬಗ್ಗೆ ಮಾತನಾಡಿ ಸದ್ಯಕ್ಕೆ ಕೋಲ್ಡ್ ವಾರ್, ಇನ್ನೊಂದು ವಾರ್ ಏನೂ ಇಲ್ಲ. ಸದ್ಯಕ್ಕೆ ಚುನಾವಣೆ ನಡೆಯುತ್ತಿರುವುದರಿಂದ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ ಅಂತಾ ಅಷ್ಟೇ. ಚುನಾವಣೆ ನಂತರ ಎಲ್ಲದಕ್ಕೂ ತೆರೆ ಆಗುತ್ತದೆ. ಪಕ್ಷದಲ್ಲಿ ಯಾರನ್ನೂ ಕಡೆಗಣಿಸುವ ಕೆಲಸ ಆಗಿಲ್ಲ. ಪಕ್ಷ ಕಟ್ಟುವುದು ಅಧಿಕಾರ ಎನ್ನುವುದಕ್ಕಿಂತ ಹೆಚ್ಚಾಗಿ ಜವಾಬ್ದಾರಿ ಎಂದು ತಿಳಿಸಿದ್ರು.

ನಿನ್ನೆ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಿಯಾಂಕ್ ಗಾಂಧಿಯನ್ನು ಕಿತ್ತೂರು ಚೆನ್ನಮ್ಮಗೆ ಹೋಲಿಕೆ ಬಗ್ಗೆ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಹೊಗಳು ಭಟರಿಗೆ ಏನೂ ಕಡಿಮೆ ಇಲ್ಲ. ಚೆನ್ನಮ್ಮ ಅವರಿಗೂ ಇವರಿಗೂ ಏನು ಹೋಲಿಕೆ?.ರಾಣಿ ಚೆನ್ನಮ್ಮ ತರಹ ಇವರೂ ಜೀವನ ನಡೆಸಿ ಸಾಧನೆ ಮಾಡಲಿ.ಚೆನ್ನಮ್ಮ ಅವರ ದಾರಿಯಲ್ಲಿ ಸಾಗಲು ಇವರು ಇನ್ನೂ ಪ್ರಾರಂಭವನ್ನೇ ಮಾಡಿಲ್ಲ. ಆಗಲೇ ತೆಗೆದುಕೊಂಡು ಹೋಗಿ ರಾಣಿ ಚೆನ್ನಮ್ಮ ಮಾಡಿ ಕೂರಿಸಿಬಿಟ್ಟರೆ? .ಅವರು ರಾಣಿ ಚೆನ್ನಮ್ಮ ತರಹ ಆಗಲಿ ಅಂತಾ ನಾವೂ ಬಯಸುತ್ತೇವೆ.ಒಬ್ಬರು ಹಿರಿಯರೇ ಈ ರೀತಿ ಹೊಗಳು ಭಟರಾದರೆ ತಪ್ಪು ಸಂದೇಶ ಹೋಗುತ್ತದೆ.ನಾವು ದೇಶ ಮೊದಲು ಎನ್ನುವವರು.ಕಾಂಗ್ರೆಸ್ ನವರಂತೆ ಪಕ್ಷ ಮೊದಲು ಎನ್ನುವುದಿಲ್ಲ.ಕಾಂಗ್ರೆಸ್ ನಲ್ಲೂ ಒಳ್ಳೆಯ ನಾಯಕರು ಬಂದರೆ ಪ್ರಜಾಪ್ರಭುತ್ವಕ್ಕೆ ಒಳ್ಳೆಯದೇ.ದೇಶಕ್ಕೆ ಒಳ್ಳೆಯದಾದರೆ ಸಾಕು, ಕುಟುಂಬಕ್ಕೆ ಒಳ್ಳೆಯದು ಆದರೆ ಸಾಕು ಅಂತಾ ಅಲ್ಲ ಎಂದರು.

ನನ್ನ, ಯತ್ನಾಳ್ ನ‌ ಉಚ್ಛಾಟನೆ ಮಾಡಲು ಧಮ್ ಬೇಕು ಎಂಬ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅವರು ಬೆಳೆದಿರುವ ನಾಯಕರು.ಅವರ ಬಗ್ಗೆ ನಾವೇನೂ ಮಾತಾಡುವುದು ಇಲ್ಲ.ನಾಯಕರಾಗಿ ಬೆಳೆದು ಎಲ್ಲರಿಗೂ ಒಳ್ಳೆಯದು ಮಾಡಲಿ ಅಷ್ಟೇ.  ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಭಾಗಿಯಾದ ಬಗ್ಗೆ ಮಾತನಾಡಿ ಪಕ್ಷದ ಚುನಾವಣಾ ಪ್ರಕ್ರಿಯೆ ‌ನಡೆದ ಬಳಿಕವೇ ಎಲ್ಲಾ ಕ್ರಮ, ನಿಲುವು ಎಲ್ಲವೂ .ಅಲ್ಲಿಯವರೆಗೂ ಬರೀ ಚುನಾವಣೆ ಅಷ್ಟೇ ಎಂದರು. ಕೋರ್ ಕಮಿಟಿಯಲ್ಲಿ ಜಿಲ್ಲಾಧ್ಯಕ್ಷರ ನೇಮಕ ಕುರಿತು ಚರ್ಚೆ ಬಗ್ಗೆ ಮಾತನಾಡಿ ಯಾವುದೇ ಚರ್ಚೆ ಆಗಿಲ್ಲ.ಬಂದಿರುವ ಹೆಸರುಗಳನ್ನು ಓದಿದ್ದು, ಕೇಳಿಸಿಕೊಂಡಿದ್ದು ಅಷ್ಟೇ. ಚುನಾವಣಾಧಿಕಾರಿಗಳು ಪಟ್ಟಿ ಮಾಡಿ ಕೋರ್ ಕಮಿಟಿ ಮುಂದೆ ಇಟ್ಟಿದ್ದರು.23 ಜಿಲ್ಲೆಯದ್ದು ಮಾತ್ರ ನಿನ್ನೆ ಪಟ್ಟಿ ಬಂದಿತ್ತು. ನೇಮಕಕ್ಕೆ ಕೆಲವು ಮಾನದಂಡಗಳನ್ನು ಇಟ್ಟುಕೊಳ್ಳಲಾಗಿದೆ. ಇವರು ಬೇಕು, ಅವರನ್ನು ಬದಲಾಯಿಸಬೇಕು ಎಂಬ‌ ಯಾವುದೇ ಚರ್ಚೆ ಆಗಿಲ್ಲ.ಮೂರು ಜನರ ಪಟ್ಟಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದರು.