ನವದೆಹಲಿ; ಎಲ್ಲಾ ವಿಚಾರವೂ ಹೈಕಮಾಂಡ್ ನಾಯಕರಿಗೂ ಹೇಳಿದ್ದೇನೆ ಎಂದು ನವದೆಹಲಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಾಳೆ ಬೆಂಗಳೂರಿನಲ್ಲಿ ಎಲ್ಲವೂ ಹೇಳ್ತಿನಿ. ಎಚ್ ಡಿ ಕೆ ಭೇಟಿ ಕುರಿತು ಖರ್ಗೆ, ಸುಜೇರ್ವಾಲ ಸೇರಿ ಎಲ್ಲವೂ ಹೇಳಿದ್ದೇನೆ. ಖರ್ಗೆ ಅವರಿಗೆ ದೆಹಲಿ ಬೆಳವಣಿಗೆ ಬಗ್ಗೆ ಹೇಳಿದ್ದೇನೆ. ಸಿಎಂ ಬದಲಾವಣೆಯ ಇಲ್ಲ. ಕೆಪಿಸಿಸಿಗೆ ಅಧ್ಯಕ್ಷರೂ ಇದ್ದಾರೆ ಅಲ್ವಾ? ಎಂದಿದ್ದಾರೆ.
ಇನ್ನು ಕಾಂಗ್ರೆಸ್ ಸಂಸದ ಜಿ.ಸಿ ಚಂದ್ರಶೇಖರ್ ಮಾತನಾಡಿ ಹೆಚ್ಡಿಕೆ ಕೇಂದ್ರ ಮಂತ್ರಿಯಾಗಿ ಹೆಚ್ಡಿಕೆ ಇರದೆ ಇದ್ದರೆ ಬೇರೆ ಅರ್ಥ ಬರುತ್ತಿತ್ತು. ಈಗ ಕೇಂದ್ರ ಮಂತ್ರಿಯಾಗಿದ್ದಾರೆ ಹಾಗಾಗಿ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವುದು ಬೇಡ . ಸತೀಶ್ ಜಾರಕಿಹೊಳಿ ನಮ್ಮ ಪಕ್ಷದ ಶಿಸ್ತಿನ ಸಿಪಾಯಿ. ಅಭಿವೃದ್ಧಿ ಬಗ್ಗೆ ಹೆಚ್ಡಿಕೆ ಬಳಿ ಸತೀಶ್ ಮಾತನಾಡಿರ್ತಾರೆ. ನಾವು ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತವೆ. ಎಲ್ಲದರಲ್ಲೂ ತಪ್ಪು ಹುಡುಕಬಾರದು ಎಂದರು.
ಅದು ಬಿಜೆಪಿಯವರ ವೈಜ್ಞಾನಿಕ ವಿಚಾರ; ಯತ್ನಾಳ್ ಉಚ್ಛಾಟನೆ ಸಂಬಂಧ ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
ಬೆಂಗಳೂರು; ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಅದು ಬಿಜೆಪಿಯವರ ವೈಜ್ಞಾನಿಕ ವಿಚಾರ ಎಂದು ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನಸೌಧದಲ್ಲಿ ಬಿಜೆಪಿಯಿಂದ ಶಾಸಕ ಯತ್ನಾಳ್ ಉಚ್ಚಾಟನೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಅದು ಬಿಜೆಪಿಯವರ ವೈಜ್ಞಾನಿಕ ವಿಚಾರ. ಅದು ಅವರ ಪಕ್ಷದ ಆಂತರಿಕ ವಿಚಾರ. ಯಾರನ್ನ ಇಟ್ಟಿಕೊಳ್ತಾರೆ, ಬಿಡ್ತಾರೆ ಅವರಿಗೆ ಬಿಟ್ಟ ವಿಚಾರ. ಯತ್ನಾಳ್ ಅವರದ್ದು ಕುಟುಂಬ ರಾಜಕೀಯ ಮತ್ತು ಭ್ರಷ್ಟಾಚಾರದ ವಿರುದ್ಧ ಇತ್ತು. ಕುಟುಂಬ ರಾಜಕೀಯ ಮತ್ತು ಭ್ರಷ್ಟಾಚಾರ ಅಂದ್ರೆ ಇಷ್ಟ ಅಂತ ಕೇಂದ್ರ ಬಿಜೆಪಿ ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ. ಇವರಿಬ್ಬರನ್ನ ಬಿಟ್ಟು ಕೊಡೊಲ್ಲ ಅಂತ ತೋರಿಸಿದ್ದಾರೆ. ದುಬೈನೊಂದಿಗೆ ನಂಟು ಇರುವವರನ್ನ ಬಿಟ್ಟು ಕೊಡೊಲ್ಲ ಅಂತ ಸಂದೇಶ ರವಾನಿಸಿದ್ದಾರೆ ಎಂದಿದ್ದಾರೆ.
ದೆಹಲಿಯಲ್ಲಿ ಹೆಚ್ ಡಿಕೆ ಮತ್ತು ಸಚಿವ ಸತೀಶ್ ಜಾರಕಿಹೊಳಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಕಚೇರಿಯಲ್ಲಿ ಭೇಟಿ ಮಾಡಿದ್ದಾರೆ, ಅದರಲ್ಲಿ ತಪ್ಪೇನಿದೆ?. ನಾನೂ ಸಹ ಕೇಂದ್ರದ ಸಚಿವರನ್ನ ಭೇಟಿ ಮಾಡ್ತಾ ಇರುತ್ತೇನೆ. ಕೇಂದ್ರದ ಅನುದಾನ, ಹೊಸ ಯೋಜನೆಗಳ ಬಗ್ಗೆ ಮಾತನಾಡಬಾರದಾ?. ನೀವೇ ಮಾರ್ಗಸೂಚಿ ಕೊಡಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸದನದಲ್ಲಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲಿ, ಅವರಿಗೆ ಸದಸ್ಯರೇ ಇಲ್ಲ. ಮುಂದೆ ಏನೇನೋ ಆಗುತ್ತೆ, ಕಾದು ನೋಡಿ. ಇದು ಅವರ ರಾಜಕೀಯ ಅಸ್ತಿತ್ವ ಎಂದಿದ್ದಾರೆ.