ಮನೆ Latest News ನಾನು ವಾರಕ್ಕೆ ಒಂದು ದಿನ ಜಿಲ್ಲೆಗೆ ಹೋಗುತ್ತೇನೆ: ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬಿ ಎಸ್...

ನಾನು ವಾರಕ್ಕೆ ಒಂದು ದಿನ ಜಿಲ್ಲೆಗೆ ಹೋಗುತ್ತೇನೆ: ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿಕೆ

0

ಬೆಂಗಳೂರು; ಮಾಜಿ ಸಿಎಂ ಯಡಿಯೂರಪ್ಪ ಈ ಹಿಂದೆ  ನಿರಂತರವಾಗಿ ಬಿಜೆಪಿ ಕಚೇರಿಗೆ ಆಗಮಿಸುವುದಾಗಿ ಹೇಳಿದ್ದರು. ಅದರಂತೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಗೆ ಇಂದು ಆಗಮಿಸಿದ್ರು. ಶಾಮಪ್ರಸಾದ್ ಮುಖರ್ಜಿಯವ್ರ  ಸ್ಮೃತಿ ದಿನ,  ಜಗನ್ನಾಥ ರಾವ್ ಜೋಷಿ ಜನ್ಮದಿನ ಕಾರ್ಯಕ್ರಮದಲ್ಲಿ ಬಿ ಎಸ್ ವೈ ಭಾಗಿಯಾಗಿದ್ರು. ಈ ವೇಳೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಬಿಎಸ್ ವೈ ಬಿ.ಆರ್ ಪಾಟೀಲ್ ಲಂಚ ಆರೋಪ ಮಾಡಿದ್ದಾರೆ. ಸಿಎಂ ಮುಂದೆಯೂ ವಾಸ್ತವಿಕ ಸ್ಥಿತಿ ಹೇಳ್ತಿನಿ ಅಂದಿದ್ದಾರೆ. ಬಿ.ಆರ್ ಪಾಟೀಲ್ ಬಾಯಿ ಮುಚ್ಚಿಸುವ ಪ್ರಯತ್ನ ಸಿಎಂ ಮಾಡಬಹುದು. ಮೋಹನ್ ದಾಸ್ ಪೈ ಮೇಲೂ ದೂರು ದಾಖಲಾಗಿದೆ. ಸರಕಾರದ ವಿರುದ್ಧ ಮಾತನಾಡುವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಶಿವಕುಮಾರ್ ಹೆಜ್ಜೆ ಹಜ್ಜೆಗೂ ಇಂತಹವರಿಗೆ ಸಹಕಾರ ಕೊಡ್ತಿದ್ದಾರೆ. ಮುಂದೆ ಹೋರಾಟ ರೂಪರೇಷೆ ರೂಪಿಸುತ್ತೇವೆ. ವಾರಕ್ಕೆ ಒಂದು ದಿನ ಜಿಲ್ಲೆಗೆ ಹೋಗುತ್ತೇನೆ.ಭ್ರಷ್ಟಾಚಾರ ಹಗರಣ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡುತ್ತೇವೆ. ರಾಜಕಾಗೆ ಮಾತ್ರ ಅಲ್ಲ ಅಂತಹ ಹತ್ತಾರು ಜನ ಇದ್ದಾರೆ. ಒಬ್ಬೋಬ್ಬರಾಗೆ ಬಾಯಿ ಬಿಡ್ತಾರೆ ನೀವೇ ನೋಡ್ತಾ ಇರಿ ಎಂದರು.

ಇನ್ನು ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಸಿದ್ದರಾಮಯ್ಯ ಸರಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಮಾತನ್ನು ಪದೆ ಪದೆ ಹೇಳುತ್ತಿದ್ದೆವು. ಅದು ಅವರಿಗೆ ಸತ್ಯ ಅನ್ನಿಸಲಿಲ್ಲ.ಈಗ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಕರ್ನಾಟಕ ನಂಬರ್ ಒನ್ ಭ್ರಷ್ಟಾಚಾರ ನಡೆಯುತ್ತಿದೆ  ಅಂತಾ ರಾಯರೆಡ್ಡಿ ಹೇಳಿದ್ದಾರೆ. ರಾಜುಕಾಗೆ ಸೂಸೈಡ್ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎನ್ನುತ್ತಿದ್ದಾರೆ. ಸಿಎಂ ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಬಿ.ಆರ್ ಪಾಟೀಲ್ ಲಂಚ ಆರೋಪ ಮಾಡಿದ್ದಾರೆ. ದುಡ್ಡಿಲ್ಲದೆ ಏನು ನಡೆಯಲ್ಲ ಎಂದು ಹೇಳಿದ್ದಾರೆ. ಸಿಎಂಗೂ ಅದನ್ನೇ ಹೇಳುತ್ತೇನೆ ಎಂದಿದ್ದಾರೆ. ಮಂತ್ರಿಗಳ ವಿರುದ್ದ ನಾರಾಯಣಸ್ವಾಮಿ ತಿರುಗಿ ಬಿದ್ದಿದ್ದಾರೆ. ಬೇಳೂರು ಗೋಪಾಲಕೃಷ್ಣ ಜಮೀರ್ ರಾಜೀನಾಮೆ ಒತ್ತಾಯಿಸಿದ್ದಾರೆ. ದೇಶಪಾಂಡೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಮತ್ತೆ ಏನ್ ಬೇಕಾಗಿದೆ ಸರಕಾರಕ್ಕೆ. ಇದು ಲೂಟಿ ಕೋರ ಸರಕಾರ.ಸತ್ಯ ಹೇಳಿದ್ರೆ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ. ಈ ಸರಕಾರದಲ್ಲಿ ಏನು ನಡೆಯಲ್ಲ. ವ್ಯಾಪಾರಕ್ಕೆ ಕುಳಿತಿರುವ ಕಾಂಗ್ರೆಸ್ ಸಂತೆ ಇದು .ವ್ಯಾಪಾರಕ್ಕೆ ಬಂದಿರುವ ಕಾಂಗ್ರೆಸ್ ಹೊರತು ಸೇವೆಗೆ ಬಂದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ರು.

40% ಆರೋಪ ಮಾಡಿದ್ರಿ ಅದ್ರೆ ಯೋಗ್ಯತೆಗೆ ಸಾಬೀತು ಮಾಡಲಿಲ್ಲ. ಜನರು ನಿಮ್ಮ ಮೇಲೆ ಛೀ.. ಥೂ.. ಅಂತಾ ಹೇಳ್ತಿದ್ದಾರೆ. ಮಂತ್ರಿಗಳು ರಾಜೀನಾಮೆ ಕೊಡೊಕ್ಕಿಂತ ಸಿಎಂ, ಡಿಸಿಎಂ ರಾಜೀನಾಮೆ ಕೊಟ್ರೆ ಸರಿಯಾಗುತ್ತೆ. ಬಿಹಾರ ಚುನಾವಣೆಗಾಗಿ ಕಪ್ಪ ಕಾಣಿಕೆ ಕೊಡಬೇಕಾಗುತ್ತೆ. ಹಾಗಾಗಿ ರಾಜ್ಯದಲ್ಲಿ ಭ್ರಷ್ಟಾಚಾರ ನಡಿತಿದೆ. ಪ್ರತಿಯೊಬ್ಬರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಸಿದ್ದರಾಮಯ್ಯನವರಿಗೆ ಮಾನಮರ್ಯಾದೆ ಇದ್ದರೆ. ಜನರ ಬಳಿ ಛೀ.. ಥೂ.. ಅನ್ನಿಸಿಕೊಳ್ಳದೆ ಇದ್ರೆ ತಕ್ಷಣ ರಾಜೀನಾಮೆ ಕೊಡಬೇಕು. ಸರಕಾರದ ಆಯಸ್ಸು ಕಡಿಮೆ ಆಗುತ್ತಿದೆ. ನಾವು ಉಸಿರುಕಟ್ಟಿ ಹೋರಾಟ ಮಾಡುತ್ತಿದ್ದೇವೆ.ನಾವು ಎಷ್ಟೇ ಹೋರಾಟ ಮಾಡುದ್ರು ಸರಕಾರ ಮೊಂಡುತನ ಪ್ರದರ್ಶನ ಮಾಡುತ್ತಿದೆ. ರಾಜ್ಯದಲ್ಲಿ ಜನ ದಂಗೆ ಏಳುವ ಸ್ಥಿತಿ ನಿರ್ಮಾಣವಾಗಿದೆ.ದೊಡ್ಡ ಹೋರಾಟ ಜೆಡಿಎಸ್ ಜೊತೆ ರೂಪಿಸುತ್ತೇವೆ ಎಂದರು.