ಮನೆ Latest News ನನಗೆ ಮಂಪರು ಪರೀಕ್ಷೆ ಅಗತ್ಯವಿಲ್ಲ : ಬೆಂಗಳೂರಿನಲ್ಲಿ ಶಾಸಕ ಮುನಿರತ್ನ ಹೇಳಿಕೆ

ನನಗೆ ಮಂಪರು ಪರೀಕ್ಷೆ ಅಗತ್ಯವಿಲ್ಲ : ಬೆಂಗಳೂರಿನಲ್ಲಿ ಶಾಸಕ ಮುನಿರತ್ನ ಹೇಳಿಕೆ

0

ಬೆಂಗಳೂರು; ಶಾಸಕ ಮುನಿರತ್ನರನ್ನು  ಮಂಪರು ಪರೀಕ್ಷೆಗೆ ಒಳಪಡಿಸಿ ಎಂಬ ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿಕೆಗೆ ಶಾಸಕ ಮುನಿರತ್ನ ಪ್ರತಿಕ್ರಿಯಿಸಿದ್ದು ನನಗೆ ಮಂಪರು ಪರೀಕ್ಷೆ ಅಗತ್ಯವಿಲ್ಲ. ರಾಜಣ್ಣನವರು ಎಲ್ಲಾ ವಾಹಿನಿಯ ಒಂದು ಕಡೆ ಕರೆದು ನನ್ನ ಜೊತೆ ಕುಳಿತುಕೊಂಡರೆ  ಮುಂಪರು ಪರೀಕ್ಷೆಗೆ ಇಲ್ಲದೇ ಎಲ್ಲವನ್ನ ಹೇಳಲು ಸಿದ್ಧವಾಗಿದ್ದೇನೆ.ರಾಜಣ್ಣನವರು ಬಹಿರಂಗವಾಗಿ 48 ಜನರ ಮಾಹಿತಿಯನ್ನು ಕೊಡುತ್ತೇನೆ ಎಂದು ಹೇಳಿದಾಗ  ಅದು ಒಂದು ಸತ್ಯವಾದ ಮಾತಾಗಿರುತ್ತದೆ .ನನಗೂ ಮಂಪರು ಪರೀಕ್ಷೆ ಬೇಡ ಅವರಿಗೂ ಒಬ್ಬರು ಪರೀಕ್ಷೆ ಬೇಡ ಎಂದಿದ್ದಾರೆ.

ಅಶೋಕ್ ಪಟ್ಟಣ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಈ ವೇದಿಕೆಗೆ ಕರೆದರೆ ಮತ್ತಷ್ಟು ಸತ್ಯ ಹೊರಬರುತ್ತದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ರಾಜಣ್ಣ ಅವರು ಹೆಸರು ಹೇಳಲಿಲ್ಲ, ಆದರೆ ಇದರ ಹಿಂದೆ ಮಹಾನಾಯಕ ಮಾಡಿರಬಹುದು; ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

ನವದೆಹಲಿ; ರಾಜಣ್ಣ ಅವರು ಹೆಸರು ಹೇಳಲಿಲ್ಲ, ಆದರೆ ಇದರ ಹಿಂದೆ ಮಹಾನಾಯಕ ಮಾಡಿರಬಹುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು ಚೀಟಿ ಬರೆದು ಯಾರು ಕಳಿಸಿದರೋ ಗೊತ್ತಿಲ್ಲ.ಆದರೆ ಅದರಲ್ಲಿ ಇರೋದು ಹೇಳಿದರೆ ಕ್ರಾಂತಿ ಆಗಲಿದೆ . ಹನಿಟ್ರ್ಯಾಪ್ ಆಗ್ತಿದೆ ಎಂದು ಹೇಳ್ತಿದ್ದರು. ಸಚಿವರೇ ಬಹಿರಂಗವಾಗಿ ಹೇಳ್ತಿದ್ದಾರೆ. ಸಾರ್ವಜನಿಕವಾಗಿ ಚರ್ಚೆ ಆಗ್ತಿದೆ, ಸದನದಲ್ಲಿ ಪ್ರಶ್ನೆ ಮಾಡಿದೆ. ಇದರಿಂದ ಕಾಂಗ್ರೆಸ್ ನಲ್ಲಿ ಗಲಿಬಿಲಿಯಾಯಿತು. ರಾಜಣ್ಣ ಅವರು ಹೆಸರು ಹೇಳಲಿಲ್ಲ, ಆದರೆ ಇದರ ಹಿಂದೆ ಮಹಾನಾಯಕ ಮಾಡಿರಬಹುದು. ಬಂದಿರುವ ಚೀಟಿಯಲ್ಲಿ ಏನಿತ್ತು ಎಂದು ಹೇಳಿದ್ರೆ ಎರಡು ಪಕ್ಷದ ನಾಯಕರು ಮನೆಗೆ ಹೋಗ್ತಾರೆ. ನಾನು ಯಾರಿಂದ ಬಳಕೆಯಾಗುವ ವ್ಯಕ್ತಿಯಲ್ಲ. ಅವರು ಕೊಟ್ಟಿದ್ದನ್ನು ಓದಲು ನಾನು ಕಾಂಗ್ರೆಸ್ ಏಜೆಂಟ್ ಅಲ್ಲ ಎಂದಿದ್ದಾರೆ.

ರಾಜ್ಯದ ಹಿತಕ್ಕಾಗಿ ಮಾತನಾಡುತ್ತಿದ್ದೇವೆ. ಎರಡು ಕಂಪನಿ ಫ್ಯಾಕ್ಟರಿ ಗಳಿದೆ.ಆ ಕಡೆ ಹಲೋ ಅಂದರೆ ಈ ಕಡೆ ಹಲೋ ಅಂತಾರೆ. ಜೈಶ್ರೀರಾಮ ಅಂದರೆ ಜೈಶ್ರೀರಾನ ಅಂತಾರೆ.. ಸುಮ್ನೆ ಏನೋ ಮಾತನಾಡಬಾರದು. ಶಾಸಕರ ಮಾನ ಹರಾಜು ಮಾಡುವ ಹಲ್ಕಾ ಕೆಲಸ ಮಾಡಬಾರದು. ಇಂತವರು ರಾಜಕೀಯದಿಂದ ಹೊರ ಹೋಗಬೇಕು, ಮುಖ್ಯಮಂತ್ರಿ ಆಗಬಾರದು. ಹೈಕೋರ್ಟ್ ಜಡ್ಜ್ ಗಳಿದೆ ಇದೆ ಅಂತಾರೆ. ರಾಜಕೀಯ ಭೇಟಿಗೆ ಬಂದಿಲ್ಲ, ಗಡ್ಕರಿ ಭೇಟಿಗೆ ಬಂದಿದ್ದೇನೆ. ರಾಜ್ಯದಲ್ಲಿ ರಾಜ್ಯಧ್ಯಕ್ಷರ ಬದಲಾವಣೆ ಯಾವಾಗ ವಿಜಯೇಂದ್ರ ಅವರನ್ನ ಕೇಳಿ . ಪಕ್ಷ ಅವಕಾಶ ಕೊಟ್ಟರೇ 134 ತರ್ತಿನಿ, ನೋ ಆಪರೇಷನ್ ಎಂದಿದ್ದಾರೆ.

ಬಿಜೆಪಿಯವ್ರು ಸಂವಿಧಾನ ಬದಲಾಯಿಸುತ್ತೇವೆ ಎಂದು ಕಾಂಗ್ರೆಸ್ ನವರು ಹೇಳಿಕೊಂಡು ಬಂದಿದ್ದರು. ಈಗ ಡಿಸಿಎಂ ಡಿ.ಕೆ ಶಿವಕುಮಾರ್ ಸಂವಿಧಾನ ಬದಲಾಯಿಸುವುದಾಗಿ ಹೇಳಿದ್ದಾರೆ. ಸಂವಿಧಾನ ವಿರೋಧಿಯಾಗಿ ಮೀಸಲಾತಿ ನೀಡಿದ್ದರು ಮೀಸಲಾತಿ ನೀಡಿದ್ದಾರೆ. ಕಾಂಗ್ರೆಸ್ ಸಂವಿಧಾನ ಬದಲಿಸಲಿದೆ ಎಂದು ಅವರ ನಾಯಕರ ಹೇಳಿಕೊಂಡಿದ್ದಾರೆ ಎಂದಿದ್ದಾರೆ.