ಮನೆ Latest News ಖಾಸಗಿ ಸಂಸ್ಥೆಗಳು ಮೂಲ ಗಂಗಾಜಲ ಎಂದು ಮಾರಾಟ ಮಾಡುತ್ತಿರುವುದು ಎಷ್ಟು ಸರಿ?; : ಸಚಿವ ಪ್ರಿಯಾಂಕ್...

ಖಾಸಗಿ ಸಂಸ್ಥೆಗಳು ಮೂಲ ಗಂಗಾಜಲ ಎಂದು ಮಾರಾಟ ಮಾಡುತ್ತಿರುವುದು ಎಷ್ಟು ಸರಿ?; : ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

0

ಬೆಂಗಳೂರು; ಖಾಸಗಿ ಸಂಸ್ಥೆಗಳು ಮೂಲ ಗಂಗಾಜಲ ಎಂದು ಮಾರಾಟ ಮಾಡುತ್ತಿರುವುದು ಎಷ್ಟು ಸರಿ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು  ಕೇಂದ್ರ ಸರ್ಕಾರದ ಸಂಸ್ಥೆಗಳು ಮಾಲಿನ್ಯದ ಬಗ್ಗೆ ಏನ್ ಹೇಳಿವೆ?. ಯುಪಿಯ ೧೨% ರೋಗಗಳ ಉತ್ಪತ್ತಿ ಗಂಗಾ ಜಲವೇ ಮೂಲ ಎಂದು ಹೇಳುತ್ತಿವೆ. ಕೇಂದ್ರ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿಯೇ ಗಂಗಾ ಜಲ ಮಲಿನದ ಬಗ್ಗೆ ವರದಿ ಕೊಟ್ಟಿದೆ. ಸ್ನಾನ ಮಾಡುವುದಕ್ಕೂ ಯೋಗ್ಯ ಇಲ್ಲ ಎಂದು ಅವರದೇ ಸಂಸ್ಥೆಗಳು ಹೇಳಿವೆ. ಹೀಗಿದ್ದಾಗ ಖಾಸಗಿ ಸಂಸ್ಥೆಗಳು ಮೂಲ ಗಂಗಾಜಲ ಎಂದು ಮಾರಾಟ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಜನರಿಗೆ ದಿಕ್ಕು ತಪ್ಪಿಸಿ ಬ್ಯುಸಿನೆಸ್ ಮಾಡಲಾಗುತ್ತಿದೆ. ನೀರಿದ್ದರೆ ತಾನೇ ಬದುಕುವುದಕ್ಕೆ ಸಾಧ್ಯ.ದೊಡ್ಡ ದೊಡ್ಡ ನಾಗರೀಕತೆ ಶುರು ಆಗಿದ್ದೇ ನದಿಮೂಲಗಳಿಂದ. ಜನರಿಗೆ ದಿಕ್ಕು ತಪ್ಪಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಾರಂಭ ಮಾಡಿದ್ದಾರೆ.ಮಹಾಕುಂಭದ ಬಗ್ಗೆ ವಿರೋಧವಲ್ಲ. ಎಲ್ಲರೂ ಜವಾಬ್ದಾರಿ ತೆಗೆದುಕೊಂಡು ಮುಂದಿನ ಪೀಳಿಗೆ ಕಾಪಾಡಬೇಕು. ೩೮ ಸಾವಿರ ಕೋಟಿ ಗಂಗಾ ಶುದ್ದೀಕರಣಕ್ಕೆ ಬಳಸಲಾಗಿದೆ. ನಮ್ಮ ಸಂಪ್ರದಾಯ ಕಾಪಾಡುವುದು ಮುಖ್ಯ ಆದರೆ ಅದಕ್ಕೆ ಎಷ್ಟು ಬೆಲೆ ತೆರಬೇಕು.ಜನ ಮರುಳೋ ಜಾತ್ರೆ ಮರುಳೋ ಎಂಬಂತಾಗಿದೆ. ಪಾಪವನ್ನು ಪರಿಹಾರ ಮಾಡಲು ಏನಾದರೂ ದಾರಿ ಕಂಡುಕೊಳ್ಳಿ. ಆದರೆ ಜಲಮೂಲಗಳನ್ನು ಕಾಪಾಡಿಕೊಳ್ಳಿ ಎಂದಿದ್ದಾರೆ.

ಬಿಜೆಪಿಗೆ ಸ್ಟೀಲ್ ಬ್ರಿಡ್ಜ್ ಬೇಡ, ಟನಲ್ ರೋಡ್ ಬೇಡ. ಮತ್ತೇನು ಬೇಕು ಇವರಿಗೆ. ಎಲ್ಲವನ್ನೂ ವಿರೋಧ ಮಾಡಿದ್ರೆ ಹೇಗೆ ಎಂದಿದ್ದಾರೆ. ನಮ್ಮಿಂದ ಕೇಂದ್ರಕ್ಕೆ ಹೋಗಿದ್ದರಲ್ಲ ಅವರ ಕೊಡುಗೆ ಏನು. ಮತ್ಯಾವ ರೋಡ್ ಬೇಕು ಇವರಿಗೆ. ಹೋರಾಟ ಯಾವ ಬಣ ಮಾಡುತ್ತೆ. ಅವರ ಯಾವ ಹೋರಾಟ ತಾರ್ಕಿಕ ಅಂತ್ಯ ಕಾಣಲಿಲ್ಲ. ಮೊದಲು ಅವರು ಯಾವ ಬಣ ಅಂತ ಹೇಳಲಿ. ವಿರೋಧ ಪಕ್ಷದ ಜೋಕರ್ ಆಗಿದ್ದಾರೆ ಎಂದು ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ  ಮೋಹನ್ ದಾಸ್ ಪೈ ವಿರುದ್ದ  ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಕೀ ಬೋರ್ಡ್ ವಾರಿಯರ್ಸ್‌ಗೆಲ್ಲಾ ಉತ್ತರ ಯಾಕೆ..? ಎಲ್ಲಾ ನಗರಗಳಲ್ಲಿ ಸಮಸ್ಯೆ ಇದೆ. ಅಲ್ಲಿನ ಮುಖ್ಯಸ್ಥರು ಯಾರಾದ್ರು ಬಂಡವಾಳಕ್ಕೆ ಧಕ್ಕೆಯಾಗುವ ರೀತಿ ಮಾತನಾಡ್ತಾರ?. ಕೀ ಬೋರ್ಡ್ ವಾರಿಯರ್ಸ್ ಇವರು. ಚೆನ್ನಾಗಿರಲಿ ಅಂತ ತಾನೆ ಕಮಿಟಿಯಲ್ಲಿ ಹಾಕಿರೋದು. ಐಟಿ ಇಂಡಸ್ಟ್ರಿಯನ್ನ ಸನ್‌ರೈಸ್ ಮಾಡಬೇಕು. ಇಂಡಸ್ಟ್ರೀ ಅಂತ ತೆರಿಗೆ ಹಾಕಲು ಮುಂದಾಗಿದ್ರೆ ಏನಾಗ್ತಿತ್ತು. ಇವರು ಈ ರೀತಿ ಮಾಡಿದ್ರೆ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಏನಾಗ್ಬೇಕು. ಇವರು ಮಾಡಿದ್ದೆಲ್ಲಾ ನೋಡ್ಕೋಂಡು ಸುಮ್ನೆ ಇರ್ಬೇಕಾ. ಇವರು ಯಾಕೆ ಕೇಂದ್ರ ಸರ್ಕಾರದ ವಿರುದ್ದ ಮಾತನಾಡ್ತಿಲ್ಲ. ನಮ್ಮ‌ಮಾತನಿಂದ ರಾಜ್ಯಕ್ಕೆ ಏನು ನಷ್ಟ ಆಗುತ್ತೆ ಎಂಬ ಅರಿವು ಇರಬೇಕು. ಕೈಗಾರಿಕಾ ವಲಯಕ್ಕೆ ಏನಾಗುತ್ತೆ ಅಂತ ಯೋಚನೆ ಮಾಡಬೇಕಲ್ವ ಎಂದು ಪ್ರಶ್ನಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮಾತ್ರ ಈ ರೀತಿ ಆಗಿರೋದಾ? ಬಿಜೆಪಿ ಸರ್ಕಾರ ಇದ್ದಾಗ ಎಲ್ಲ ನೆಟ್ಟಗೆ ಇತ್ತಾ?. ಸೆಮಿ ಕಂಡಕ್ಟರ್ ಹೋಗಿದ್ದು ಗುಜರಾತ್‌ಗೆ . ಅದರ ಬಗ್ಗೆ ಮಾತನಾಡುದ್ರಾ ಇವರೆಲ್ಲಾ?. ನಮಗೆ ಆಗುವ ಅನ್ಯಾಯದ ಬಗ್ಗೆ ಯಾಕೆ ಮಾತನಾಡಲ್ಲ. ಲಂಡನ್ , ಅಮೇರಿಕಾಗೆ ಹೋಗ್ತಾರೆ ಅಲ್ಲಿ ಟ್ರಾಫಿಕ್ ಇಲ್ವ.ಸ್ಟೀಲ್ ಬ್ರಿಡ್ಜ್ ಬೇಡ, ಟನಲ್‌ನೂ ಬೇಡ ಅಂತಾರೆ. ಹಾಗಾದ್ರೆ ಏನು ಮಾಡಬೇಕು.ಹೈಕಮಾಂಡ್ ಮನವೊಲಿಸಲು ಕರ್ನಾಟಕ, ಕನ್ನಡಿಗರಿಗೆ ಅವಮಾನ ಸರಿಯಲ್ಲ ಎಂದಿದ್ದಾರೆ.

ಇದೇ ವೇಳೆ ಪ್ರಿಯಾಂಕ್ ಖರ್ಗೆ ಎಚ್ಡಿಕೆ ಹಾಗೂ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಸುಪ್ರಿಂ ಕೋರ್ಟ್ ನಲ್ಲಿ ನಿನ್ನೆ ತೀರ್ಪು ಬಂದಿದೆ. ಇದಕ್ಕೆ ಬಿಜೆಪಿಯವರ ಉತ್ತರ ಏನು? . ನಾ ಖಾವೂಂಗಾ ನಾ ಖಾನೇ ದೂಂಗಾ ಎಂಬುದು ಪ್ರಧಾನಿಯವರ ಘೋಷಣೆ ಇತ್ತು. ಅವರ ಸಂಪುಟದಲ್ಲಿಯೇ ಹೀಗಾದರೆ ಹೇಗೆ?. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರ ಲಾಭಕ್ಕೆ ಅವರ ಖುರ್ಚಿಯನ್ನು ಅವರ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇದರ ತನಿಖೆ ಆಗಬೇಕು ಇದಕ್ಕೆ ತಡೆಯಾಜ್ಞೆ ನೀಡಲು ಆಗುವುದಿಲ್ಲ ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಮೂಡಾ ಕೇಸ್ ನಲ್ಲಿ ರಾಜಾರೋಷವಾಗಿ ಮೈಸೂರು ಚಲೋ ಮಾಡಿದ್ರಲ್ಲ.ಈಗ ಬಿಜೆಪಿಯವರು ಮಂಡ್ಯ ಛಲೋ ಮಾಡ್ತಾರಾ?. ಅದರ ಬಗ್ಗೆ ಸ್ಪಷ್ಟವಾಗಿ ನಿಲುವು ಕೊಡಲಿ ಬಿಜೆಪಿಯವರು. ಪ್ರಜ್ವಲ್ ಸೂರಜ್ ಪ್ರಕರಣದಲ್ಲಿ ಗಪ್ ಚುಪ್ ಇದ್ರು. ಸುಪ್ರಿಂ ಕೋರ್ಟ್ ಛೀಮಾರಿ ಹಾಕಿದ್ದಕ್ಕೆ ಏನು ಉತ್ತರ?. ಏನೇ ಮಾಡಿದ್ರೂ ಒಪ್ಪಿಕೊಳ್ತಾರೆ ಬಿಜೆಪಿಯವರು. ಏನೇ ಆದ್ರೂ ಮೋದಿಯವರ ಆಡಳಿತ ಇರಬೇಕು ಅಷ್ಟೇ ಎಂದಿದ್ದಾರೆ.